AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Digital Rupee: ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಹಣ ವರ್ಗಾವಣೆಗೆ ಇರುಪಾಯಿ ಬಳಕೆ: ಆರ್​ಬಿಐ ಆಲೋಚನೆ

Offline e-Rupee Transactions: ಆರ್​​ಬಿಐ ರೂಪಿಸಿರುವ ಸಿಬಿಡಿಸಿ ಅಥವಾ ಇರುಪೀ ಬಳಕೆ ಸಾಧ್ಯತೆಗಳನ್ನು ಅವಲೋಕಿಸಲಾಗುತ್ತಿದೆ. ಸದ್ಯ ಡಿಜಿಟಲ್ ಕರೆನ್ಸಿಯನ್ನು ಪ್ರಾಯೋಗಿಕವಾಗಿ ಮಾಡಲಾಗುತ್ತಿದ್ದು ವ್ಯಕ್ತಿಯಿಂದ ವ್ಯಕ್ತಿಗೆ ಮತ್ತು ವ್ಯಕ್ತಿಯಿಂದ ವರ್ತಕರಿಗೆ ವಹಿವಾಟು ಸಾಧ್ಯವಿದೆ. ಈಗ ಸರ್ಕಾರಿ ಯೋಜನೆಗಳಿಗೆ ಬಳಸಾಗುತ್ತಿರುವ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್​ಫರ್ ವ್ಯವಸ್ಥೆಯಲ್ಲಿ ಸಿಬಿಡಿಸಿ ಅಳವಡಿಸುವ ಆಲೋಚನೆ ಆರ್​ಬಿಐನದ್ದಾಗಿದೆ.

Digital Rupee: ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಹಣ ವರ್ಗಾವಣೆಗೆ ಇರುಪಾಯಿ ಬಳಕೆ: ಆರ್​ಬಿಐ ಆಲೋಚನೆ
ಇರುಪಾಯಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 08, 2024 | 4:48 PM

Share

ನವದೆಹಲಿ, ಫೆಬ್ರುವರಿ 8: ಸರ್ಕಾರದ ವಿವಿಧ ಯೋಜನೆಗಳಿಗೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸರ್ಕಾರ ಹಣ ಹಾಕುತ್ತದೆ. ಈಗ ಯೋಜನೆಯ ಹಣವನ್ನು ಇರುಪೀ ರೂಪದಲ್ಲಿ ಫಲಾನುಭವಿಗಳಿಗೆ ವರ್ಗಾಯಿಸುವ ಒಂದು ವ್ಯವಸ್ಥೆ ಬರುವ ಸಾಧ್ಯತೆ ಇದೆ. ಇರುಪಾಯಿ ಅಥವಾ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC- Central Bank Digital Currency) ಬಳಕೆಗೆ ಇನ್ನಷ್ಟು ಸಾಧ್ಯತೆಗಳನ್ನು ತರಲು ಆರ್​ಬಿಐ ಪ್ರಸ್ತಾಪಿಸಿದೆ. ಎಂಪಿಸಿ ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಆರ್​ಬಿಐ ಈ ವಿಚಾರವನ್ನ ಮುಂದಿಟ್ಟಿದೆ. ಸದ್ಯ ಆಯ್ದ ಬ್ಯಾಂಕುಗಳು ಆಯ್ದ ಗ್ರಾಹಕರಿಗೆ ಡಿಜಿಟಲ್ ರುಪಾಯಿ ವ್ಯಾಲಟ್​​ಗಳನ್ನು ನೀಡಿದೆ. ಆ ವ್ಯಾಲಟ್ ಹೊಂದಿರುವ ವ್ಯಕ್ತಿಗಳ ಮಧ್ಯೆ ವಹಿವಾಟು ನಡೆಸಬಹುದು. ವ್ಯಕ್ತಿಯಿಂದ ವರ್ತಕರ ಮಧ್ಯೆ ವಹಿವಾಟು ನಡೆಸಬಹುದು. ಇದಿನ್ನೂ ಪ್ರಾಯೋಗಿಕ ಹಂತದಲ್ಲಿದೆ. ಈಗ ಯೂಸ್ ಕೇಸ್ ಅಥವಾ ಬಳಕೆಯ ನಿದರ್ಶನಗಳನ್ನು ಹೆಚ್ಚಿಸುವ ಇರಾದೆಯಲ್ಲಿ ಆರ್​ಬಿಐ ಇದೆ.

ಅಂದರೆ, ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್​ಫರ್, ಅಥವಾ ಡಿಬಿಟಿ ಸ್ಕೀಮ್ ಇತ್ಯಾದಿ ವ್ಯವಸ್ಥೆಗೆ ಇದನ್ನು ಅಳವಡಿಸುವುದೂ ಸೇರಿದಂತೆ ವಿವಿಧ ಮಾರ್ಗಗಳನ್ನು ಆರ್​​ಬಿಐ ಅವಲೋಕಿಸುತ್ತಿದೆ. ಕಾರ್ಪೊರೇಟ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಬಿಸಿನೆಸ್ ಟ್ರಾವಲ್ ವೆಚ್ಚಕ್ಕೆ ಇರುಪಾಯಿ ಒದಗಿಸುವುದು ಇತ್ಯಾದಿ ಸಾಧ್ಯತೆಗಳನ್ನು ಅನ್ವೇಷಿಸಲಾಗುತ್ತಿದೆ.

‘ಪ್ರಾಗ್ರಾಮಿಂಗ್ ಮತ್ತು ಆಫ್​ಲೈನ್ ಫೀಚರ್ ಬಳಸಿ ಹೆಚ್ಚಿನ ಬಳಕೆ ನಿದರ್ಶನಗಳನ್ನು ಅವಲೋಕಿಸುವ ಪ್ರಸ್ತಾಪ ಇದೆ. ಪ್ರಾಗ್ರಾಮಿಂಗ್ ಫೀಚರ್ ಮೂಲಕ ನಿರ್ದಿಷ್ಟ ಉದ್ದೇಶಗಳಿಗೆ ಹಣದ ಬಳಕೆ ಆಗುವಂತೆ ನೋಡಿಕೊಳ್ಳಬಹುದು. ಉದಾಹರಣೆಗೆ ಸರ್ಕಾರಿ ಏಜೆನ್ಸಿಗಳು ತಾವು ನೀಡಿದ ಪೇಮೆಂಟ್ ಆ ನಿರ್ದಿಷ್ಟ ಯೋಜನೆಗೆ ಬಳಕೆ ಆಗಿರುವುದನ್ನು ಖಚಿತಪಡಿಸಿಕೊಳ್ಳಬಹುದು’ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಇದನ್ನೂ ಓದಿ: ಪೇಟಿಎಂ ವಿರುದ್ಧ ಕ್ರಮ; ಮುಂದಿನ ವಾರ ಎಲ್ಲದಕ್ಕೂ ಉತ್ತರ ಕೊಡಲಾಗುವುದು: ಆರ್​ಬಿಐ ಗವರ್ನರ್

ಇಂಟರ್ನೆಟ್ ಕನೆಕ್ಟಿವಿಟಿ ಕಡಿಮೆ ಇರುವ ಪ್ರದೇಶಗಳಲ್ಲಿ ಡಿಜಿಟಲ್ ಹಣದ ವಹಿವಾಟು ಸುಗಮವಾಗಿ ನಡೆಯಲು ಅನುವಾಗುವಂತೆ ಆಫ್​ಲೈನ್ ಫೀಚರ್ ಅನ್ನು ತರಲೂ ಆರ್​ಬಿಐ ಯೋಜಿಸಿದೆ.

ಏನಿದು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ)?

ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಎಂಬುದು ಎಲೆಕ್ಟ್ರಾನಿಕ್ ರೂಪದಲ್ಲಿರುವ ನಗದು ಹಣ. ನಗದು ಹಣದಂತೆಯೇ ಇದನ್ನು ಬಳಕೆ ಮಾಡಬಹುದು. ಕ್ರಿಪ್ಟೋಕರೆನ್ಸಿ ತಂತ್ರಜ್ಞಾನವನ್ನು ಬಳಸಿ ರೂಪಿಸಿರುವ ಇ-ಹಣ ಇದು. ವಿಶ್ವಾದ್ಯಂತ ಎಲ್ಲಾ ದೇಶಗಳೂ ತಮ್ಮದೇ ಸಿಬಿಡಿಸಿ ನಿರ್ಮಿಸುತ್ತಿವೆ. ಇರುಪಾಯಿಯು ಭಾರತದ ಸಿಬಿಡಿಸಿಯಾಗಿದೆ. ಕ್ರಿಪ್ಟೋ ಟೆಕ್ನಾಲಜಿ ಇರುವ ಇದು ಹಲವು ರೀತಿಯ ಬಳಕೆಯ ಸಾಧ್ಯತೆಗಳನ್ನು ನೀಡುತ್ತದೆ.

ಇದನ್ನೂ ಓದಿ: ಪ್ರೋಸಸಿಂಗ್ ಫೀ ಸೇರಿ ಎಲ್ಲಾ ಶುಲ್ಕಗಳೂ ಬಡ್ಡಿದರದಲ್ಲೇ ಒಳಗೊಳ್ಳಲಿ: ಬ್ಯಾಂಕುಗಳಿಗೆ ಆರ್​ಬಿಐ ಸೂಚನೆ

ಸಿಬಿಡಿಸಿಯನ್ನು ಇಟ್ಟುಕೊಳ್ಳಲು ವ್ಯಕ್ತಿಗಳ ಬಳಿ ನಿರ್ದಿಷ್ಟ ವ್ಯಾಲಟ್ ಬೇಕಾಗುತ್ತದೆ. ಅದನ್ನು ಬ್ಯಾಂಕುಗಳು ಒದಗಿಸುತ್ತವೆ. ಇಂಟರ್ನೆಟ್ ಸಂಪರ್ಕ ಇಲ್ಲದ ಕಡೆ ಆಫ್​ಲೈನ್​ನಲ್ಲಿ ಬಳಸಲು ನಿಯರ್ ಫೀಲ್ಡ್ ಕಮ್ಯುನಿಕೇಶನ್ (ಎನ್​ಎಫ್​ಸಿ) ಟೆಕ್ನಾಲಜಿ ಬಳಸಬಹುದು. ವ್ಯಾಲಟ್​ನಿಂದ ವ್ಯಾಲಟ್​ಗೆ ನಡೆಯುವ ವಹಿವಾಟು ಬ್ಯಾಂಕುಗಳಲ್ಲಿ ರಿಜಿಸ್ಟರ್ ಆಗುವುದಿಲ್ಲ. ಹೀಗಾಗಿ, ನಗದು ಹಣದ ವಹಿವಾಟಿನಂತೆ ಇದನ್ನೂ ಕೂಡ ಗೌಪ್ಯವಾಗಿ ಇಟ್ಟುಕೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ