AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಮನೆ ಖರೀದಿಸುವಾಗ ಈ ದಾಖಲೆಗಳು ನಿಮ್ಮ ಕೈ ಸೇರಿದ್ಯಾ ಒಮ್ಮೆ ನೋಡ್ಕೊಳ್ಳಿ

ಮನೆ ಎನ್ನುವುದು ಪ್ರತಿಯೊಬ್ಬರ ಕನಸು. ನೀವೇನಾದ್ರೂ ಹೊಸ ಮನೆ ಖರೀದಿ ಮಾಡ್ತಾ ಇದ್ರೆ ರೆಜಿಸ್ಟ್ರಿ ಜತೆಗೆ ಶೀರ್ಷಿಕೆ ಪತ್ರ, ಖಾತಾ ಪ್ರಮಾಣಪತ್ರ ಮತ್ತು ತೆರಿಗೆ ರಸೀದಿ ಸರಪಳಿ ಪತ್ರ ಸೇರಿದಂತೆ ಇನ್ನಿತ್ತರ ದಾಖಲೆಗಳು ಇದೆಯೇ ಎಂದು ನೋಡಿಕೊಳ್ಳುವುದು ಬಹಳ ಮುಖ್ಯ. ಇದರಿಂದ ನೀವು ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಯಿಂದ ಪಾರಾಗಬಹುದು. ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ

ಹೊಸ ಮನೆ ಖರೀದಿಸುವಾಗ ಈ ದಾಖಲೆಗಳು ನಿಮ್ಮ ಕೈ ಸೇರಿದ್ಯಾ ಒಮ್ಮೆ ನೋಡ್ಕೊಳ್ಳಿ
ಸಾಂದರ್ಭಿಕ ಚಿತ್ರImage Credit source: Getty Images
ಸಾಯಿನಂದಾ
|

Updated on: Jul 13, 2026 | 7:11 PM

Share

ಮುಖ್ಯಾಂಶಗಳು

  • ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬರ ಕನಸು
  • ಮನೆ ಖರೀದಿ ಮಾಡುವಾಗ ಖರೀದಿದಾರರಿಂದ ಈ ದಾಖಲೆಗಳನ್ನು ಪಡೆದುಕೊಳ್ಳುವುದು ಮುಖ್ಯ
  • ಹೊಸ ಮನೆ ಖರೀದಿ ಮಾಡುವಾಗ ಕನಿಷ್ಠ 15 ರಿಂದ 30 ವರ್ಷಗಳ ಇಸಿ ಪಡೆದುಕೊಳ್ಳುವುದು ಉತ್ತಮ

ಪ್ರತಿಯೊಬ್ಬರ ಕನಸು ಸ್ವಂತ ಮನೆ (Own Home). ತಾವಂದುಕೊಂಡಂತೆ ಮನೆ ಕಟ್ಟಬೇಕೆಂಬ ಆಸೆಯಿರುತ್ತದೆ. ಮನೆ ಖರೀದಿಸಲು ತಾವು ದುಡಿದ ಅಷ್ಟು ಹಣವನ್ನು ಹೂಡಿಕೆ ಮಾಡುತ್ತಾರೆ. ನೀವು ಕೂಡ ದುಡಿದ ದುಡ್ಡನ್ನೆಲ್ಲಾ ಹೊಸ ಮನೆ ಖರೀದಿಗೆ ಹೂಡಿಕೆ ಮಾಡೋಕೆ ಯೋಜನೆ ಹಾಕಿಕೊಂಡಿದ್ದೀರಾ. ನೀವು ಬೇರೆಯವರು ಕಟ್ಟಿದ ಮನೆಯನ್ನು ಖರೀದಿ ಮಾಡ್ತೀರಾ ಅಂತಾದ್ರೆ ರಿಜಿಸ್ಟ್ರಿ ಜತೆಗೆ ಶೀರ್ಷಿಕೆ ಪತ್ರ, ಸಾಲಮನ್ನಾ ಪ್ರಮಾಣಪತ್ರ, ಸರಪಳಿ ಪತ್ರ, ಸಂಪೂರ್ಣ ಪ್ರಮಾಣಪತ್ರ ಹಾಗೂ ಸ್ವಾಧೀನ ಪ್ರಮಾಣಪತ್ರ ಹೀಗೆ ಇನ್ನಿತರ ಅವಶ್ಯ ದಾಖಲೆಗಳನ್ನು ಒಮ್ಮೆ ಪರೀಕ್ಷಿಸುವುದು ಉತ್ತಮ.

ಮನೆ ಖರೀದಿ ಮಾಡುವಾಗ ಯಾವೆಲ್ಲಾ ದಾಖಲೆಗಳನ್ನು ನೋಡ್ಬೇಕು?

  • ಶೀರ್ಷಿಕೆ ಪತ್ರ
  • ಸರಪಳಿ ಪತ್ರ
  • ಭಾರಮುಕ್ತ ಪ್ರಮಾಣಪತ್ರ
  • ಬಿಲ್ಡರ್ ಅನುಮೋದಿತ ನಕ್ಷೆ
  • ಖಾತಾ ಪ್ರಮಾಣಪತ್ರ ಮತ್ತು ತೆರಿಗೆ ರಸೀದಿ
  • ಸಂಪೂರ್ಣ ಪ್ರಮಾಣಪತ್ರ ಹಾಗೂ ಸ್ವಾಧೀನ ಪ್ರಮಾಣಪತ್ರ

ಶೀರ್ಷಿಕೆ ಪತ್ರ: ಆಸ್ತಿ ಯಾರಿಂದ ಖರೀದಿ ಮಾಡುತ್ತೀರೋ ಅಂದರೆ (ಮಾರಾಟ ಮಾಡುವವರು) ನಿಜವಾದ ಮಾಲೀಕ ಎನ್ನುವುದನ್ನು ಇದು ಶೀರ್ಷಿಕೆ ಪತ್ರ ವಿವರಿಸುತ್ತದೆ. ಹೀಗಾಗಿ ಈ ದಾಖಲೆ ಇದ್ಯಾ  ನಿಮ್ಮ ಕೈ ಸೇರಿದ್ಯಾ ಎಂದು ನೋಡಿಕೊಳ್ಳಿ.

ಸರಪಳಿ ಪತ್ರ: ಹಲವಾರು ವರ್ಷಗಳಿಂದ ಆಸ್ತಿ ಯಾರ ಹೆಸರಲ್ಲಿದೆ ಹಾಗೂ ಯಾರಿಂದ ಯಾರಿಗೆ ಆಸ್ತಿ ಬಂದಿದೆ ಎನ್ನುವುದರ ಸಂಪೂರ್ಣ ಮಾಹಿತಿಯನ್ನು ತೋರಿಸುವ ದಾಖಲೆ ಈ ಸರಪಳಿ ಪತ್ರಯಾಗಿದೆ.

ಭಾರಮುಕ್ತ ಪ್ರಮಾಣಪತ್ರ: ಈ ದಾಖಲೆಯು ಆಸ್ತಿಯ ಮೇಲೆ ಯಾವುದೇ ಸಾಲ, ಬ್ಯಾಂಕ್ ಸಾಲ, ಕಾನೂನು ವಿವಾದಗಳ ಬಗ್ಗೆ ಇದರಲ್ಲಿ ಮಾಹಿತಿಯಿರುತ್ತದೆ. ಹೀಗಾಗಿ ನೀವು ಮನೆ ಖರೀದಿಸುವಾಗ ಕನಿಷ್ಠ 15 ರಿಂದ 30 ವರ್ಷಗಳ ಇಸಿ ಪಡೆಯುವುದು ನಿಮ್ಮ ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದು.

ಸಂಪೂರ್ಣ ಪ್ರಮಾಣಪತ್ರ ಮತ್ತು ಸ್ವಾಧೀನ ಪ್ರಮಾಣಪತ್ರ: ನೀವು ಮನೆ ಖರೀದಿಸುತ್ತಿದ್ದರೆ, ಆ ಕಟ್ಟಡ ಹಾಗೂ ಮನೆ ಪೂರ್ಣಗೊಂಡಿದೆ ಹಾಗೂ ವಾಸಿಸಲು ಯೋಗ್ಯವಾಗಿದೆ ಎಂದು ಸ್ಥಳೀಯ ಸಂಸ್ಥೆಯು ನೀಡುವ ಈ ಪ್ರಮಾಣಪತ್ರಗಳು ಇದಾಗಿದ್ದು, ಇದನ್ನು ಕಡ್ಡಾಯವಾಗಿ ಪರಿಶೀಲಿಸುವುದು ಮುಖ್ಯ.

ಖಾತಾ ಪ್ರಮಾಣಪತ್ರ ಮತ್ತು ತೆರಿಗೆ ರಸೀದಿ: ಆಸ್ತಿಯನ್ನು ಸ್ಥಳೀಯ ಪುರಸಭೆ ಹಾಗೂ ಕಾರ್ಪೊರೇಷನ್‌ನಲ್ಲಿ ನೋಂದಾಯಿಸಲಾಗಿದೆ ಎನ್ನುವುದನ್ನು ಈ ಖಾತಾ ಪ್ರಮಾಣ ಪತ್ರ ತೋರಿಸುತ್ತದೆ. ಈಗಿನವರೆಗೆ ಎಲ್ಲಾ ಆಸ್ತಿ ತೆರಿಗೆಗಳನ್ನು ಪಾವತಿಸಲಾಗಿದೆ ಎಂಬುದನ್ನು ಈ ತೆರಿಗೆ ರಸೀದಿ ಮೂಲಕ ಪರೀಕ್ಷಿಸಿಕೊಳ್ಳಿ.

ಇದನ್ನೂ ಓದಿ: ಗೃಹಸಾಲ ಪಡೆಯುತ್ತಿದ್ದೀರಾ? 50 ಲಕ್ಷ ರೂ ಸಾಲ ಪಡೆಯಲು ನಿಮ್ಮ ಸಂಬಳ ಎಷ್ಟಿರಬೇಕು ಗೊತ್ತಾ? ಇಲ್ಲಿದೆ ಲೆಕ್ಕಾಚಾರ

ಬಿಲ್ಡರ್ ಅನುಮೋದಿತ ನಕ್ಷೆ: ಸ್ಥಳೀಯ ಪ್ರಾಧಿಕಾರವು ಬಿಲ್ಡಿಂಗ್‌ಗೆ ಅನುಮೋದನೆ ನೀಡಿದ ನಕ್ಷೆಯನ್ನೇ ಹೊಸ ಮನೆ ಖರೀದಿಸುವಾಗ ಪರಿಶೀಲಿಸಿಕೊಳ್ಳಬೇಕು.

ಸಾಮಾನ್ಯವಾಗಿ ಕೇಳುವ ಪ್ರಶ್ನೆ ಹಾಗೂ ಉತ್ತರ (FAQs)

ಪ್ರಶ್ನೆ: ಹೊಸ ಮನೆ ಖರೀದಿಸುವಾಗ ಈ ದಾಖಲೆಗಳು ಪರಿಶೀಲಿಸಬೇಕು?

ಉತ್ತರ: ಶೀರ್ಷಿಕೆ ಪತ್ರ, ಸರಪಳಿ ಪತ್ರ, ಭಾರಮುಕ್ತ ಪ್ರಮಾಣಪತ್ರ, ಬಿಲ್ಡರ್ ಅನುಮೋದಿತ ನಕ್ಷೆ, ಖಾತಾ ಪ್ರಮಾಣಪತ್ರ ಮತ್ತು ತೆರಿಗೆ ರಸೀದಿ, ಸಂಪೂರ್ಣ ಪ್ರಮಾಣಪತ್ರ ಹಾಗೂ ಸ್ವಾಧೀನ ಪ್ರಮಾಣಪತ್ರ ಈ ಎಲ್ಲಾ ದಾಖಲೆಗಳನ್ನು ಪರಿಶೀಲಿಸಬೇಕು.

ಪ್ರಶ್ನೆ: ಮನೆ ಖರೀದಿಸುವಾಗ ಎಷ್ಟು ವರ್ಷದ ಭಾರಮುಕ್ತ ಪ್ರಮಾಣಪತ್ರ ಪಡೆಯುವುದು ಸುರಕ್ಷಿತ?

ಉತ್ತರ: ಕನಿಷ್ಠ 15 ರಿಂದ 30 ವರ್ಷಗಳ ಇಸಿ ಪಡೆದುಕೊಳ್ಳುವುದು ಉತ್ತಮ.

ಪ್ರಶ್ನೆ: ಸರಪಳಿ ಪತ್ರ ಏನನ್ನೆಲ್ಲಾ ಒಳಗೊಂಡಿರುತ್ತದೆ?

ಹಲವಾರು ವರ್ಷಗಳಿಂದ ಆಸ್ತಿ ಯಾರ ಹೆಸರಲ್ಲಿದೆ ಹಾಗೂ ಯಾರಿಂದ ಯಾರಿಗೆ ಆಸ್ತಿ ಬಂದಿದೆ ಎನ್ನುವ ಸಂಪೂರ್ಣ ಮಾಹಿತಿ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ