AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

China GDP: ರಿಯಾಲ್ಟಿ, ವಿದ್ಯುತ್ ಬಿಕ್ಕಟ್ಟಿನ ಮಧ್ಯೆ ಕುಸಿದ ಚೀನಾ ಬೆಳವಣಿಗೆ ದರ; ಸೆಪ್ಟೆಂಬರ್​ ತ್ರೈಮಾಸಿಕದಲ್ಲಿ ಶೇ 4.9ಕ್ಕೆ

ರಿಯಾಲ್ಟಿ ಹಾಗೂ ವಿದ್ಯುತ್ ಬಿಕ್ಕಟ್ಟು ಮತ್ತಿತರ ಕಾರಣಗಳಿಂದಾಗಿ ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಚೀನಾದ ಬೆಳವಣಿಗೆ ದರವು ವಿಶ್ಲೇಷಕರ ಅಂದಾಜಿಗಿಂತ ಕಡಿಮೆಯಾಗಿ ಶೇ 4.9 ಮುಟ್ಟಿದೆ.

China GDP: ರಿಯಾಲ್ಟಿ, ವಿದ್ಯುತ್ ಬಿಕ್ಕಟ್ಟಿನ ಮಧ್ಯೆ ಕುಸಿದ ಚೀನಾ ಬೆಳವಣಿಗೆ ದರ; ಸೆಪ್ಟೆಂಬರ್​ ತ್ರೈಮಾಸಿಕದಲ್ಲಿ ಶೇ 4.9ಕ್ಕೆ
ಚೀನಾ ಧ್ವಜ
Follow us
TV9 Web
| Updated By: Srinivas Mata

Updated on: Oct 18, 2021 | 12:41 PM

ಚೀನಾದ ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್ (NBS) ಅಕ್ಟೋಬರ್ 18ರ ಸೋಮವಾರದಂದು ತಿಳಿಸಿರುವಂತೆ, ದೇಶದ ಜಿಡಿಪಿ ಬೆಳವಣಿಗೆಯ ದರವು ಮೂರನೇ ತ್ರೈಮಾಸಿಕದಲ್ಲಿ (ಜುಲೈನಿಂದ ಸೆಪ್ಟೆಂಬರ್ 2021) ಶೇ 4.9 ಎಂದು ಹೇಳಿದೆ. ಇದು ಶೇ 5ರ ಸರಾಸರಿ ಮುನ್ಸೂಚನೆಗಿಂತ ಕಡಿಮೆಯಾಗಿದೆ ಮತ್ತು ಒಂದು ವರ್ಷದ ಹಿಂದೆ ದಾಖಲಾಗಿದ್ದ ಶೇ 7.9ಕ್ಕಿಂತ ಬಹಳ ಕಡಿಮೆ ಇದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಎವರ್‌ಗ್ರ್ಯಾಂಡ್ ಸಮೂಹದ ಸಾಲ ಬಿಕ್ಕಟ್ಟು ಪ್ರಾಪರ್ಟಿ ಮಾರುಕಟ್ಟೆಗೆ ಹರಡಿ, ನಿರ್ಮಾಣ ಚಟುವಟಿಕೆ, ಭೂಮಿ ಮಾರಾಟ ಮತ್ತು ವಲಯದ ಹಣಕಾಸು ಸ್ಥಗಿತಗೊಂಡಿತು. ಇನ್ನೊಂದು ಅಂಶವೆಂದರೆ, ಸೆಪ್ಟೆಂಬರ್‌ನಲ್ಲಿ ವಿದ್ಯುತ್ ಕಡಿತದಿಂದಾಗಿ ಕಾರ್ಖಾನೆಗಳು ಉತ್ಪಾದನೆಯನ್ನು ಕಡಿಮೆ ಮಾಡಿದವು ಅಥವಾ ಸಂಪೂರ್ಣ ಸ್ಥಗಿತಗೊಳಿಸುವಂತಾಯಿತು.

ಈ ಎರಡೂ ಬಿಕ್ಕಟ್ಟು ಉಕ್ಕು ಮತ್ತು ಸಿಮೆಂಟ್ ವಲಯಗಳ ಮೇಲೆ ಹೆಚ್ಚು ಪರಿಣಾಮ ಬೀರಿವೆ. ಅಲ್ಲದೆ, ಕೊವಿಡ್ -19 ನಿರ್ಬಂಧಗಳು ಗ್ರಾಹಕರ ವೆಚ್ಚವನ್ನು ಹೆಚ್ಚಿಸಿದ್ದು, ಇದು ಬೆಳವಣಿಗೆಯ ಸಂಖ್ಯೆ ಮೇಲೆ ಪ್ರಭಾವ ಬೀರಿದೆ. ಆರ್ಥಿಕ ಚೇತರಿಕೆ “ಅಸಮತೋಲಿತ ಆಗಿರುತ್ತದೆ, ಆದರೂ ಚೀನಾ ತನ್ನ ವಾರ್ಷಿಕ ಗುರಿಗಳನ್ನು ಸಾಧಿಸುವುದನ್ನು ಖಾತ್ರಿಪಡಿಸುತ್ತದೆ,” ಎಂದು NBS ಹೇಳಿದೆ. ಬ್ಯಾಂಕ್ ಆಫ್ ಅಮೆರಿಕಾ ಕಾರ್ಪೊರೇಷನ್​ನ ಮುಖ್ಯ ಗ್ರೇಟರ್ ಚೀನಾದ ಅರ್ಥಶಾಸ್ತ್ರಜ್ಞರಾದ ಹೆಲೆನ್ ಕಿಯಾವೊ ಬ್ಲೂಮ್‌ಬರ್ಗ್ ಟಿವಿಗೆ ಹೇಳಿದ್ದು, ಹೂಡಿಕೆಯ ಬದಿ ಬೇಡಿಕೆಯು “ಬಹಳ ದುರ್ಬಲವಾಗಿದೆ”, ಆದರೆ ಪೂರೈಕೆ ಭಾಗದಲ್ಲಿ ವಿದ್ಯುತ್ ಸಮಸ್ಯೆಗಳ ಪರಿಣಾಮವೂ ತೀವ್ರವಾಗಿತ್ತು. ನಾಲ್ಕನೇ ತ್ರೈಮಾಸಿಕ ಬೆಳವಣಿಗೆ ಶೇ 3-4 ಇಳಿಯುತ್ತದೆ ಎಂದಿದ್ದಾರೆ.

ವಿದ್ಯುತ್ ಮತ್ತು ರಿಯಲ್ ಎಸ್ಟೇಟ್ ಕುಸಿತಕ್ಕೆ ಮುಂಚೆಯೇ ಬೆಳವಣಿಗೆಯ ನಿರೀಕ್ಷೆಗಳು ನಿಧಾನವಾಗಿದ್ದವು. ಆದರೆ ವಾಸ್ತವಿಕ ಕುಸಿತವು “ಅರ್ಥಶಾಸ್ತ್ರಜ್ಞರನ್ನು ಅಚ್ಚರಿಗೊಳಿಸಿದೆ” ಮತ್ತು ಪೂರ್ಣ ವರ್ಷದ GDP ಡೌನ್​ಗ್ರೇಡ್​ ಮಾಡಲು ಪ್ರೇರೇಪಿಸಿತು. ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಗವರ್ನರ್ ಯಿ ಗ್ಯಾಂಗ್, ಈ ವರ್ಷ ಆರ್ಥಿಕತೆಯು ಶೇ 8ರಷ್ಟು ವಿಸ್ತರಿಸಲಿದೆ ಎಂದಿರುವುದು “ಮಧ್ಯಮ” ಬೆಳವಣಿಗೆಯೊಂದಿಗೆ ಮುನ್ಸೂಚನೆ ನೀಡಿದೆ. ಕೇಂದ್ರೀಯ ಬ್ಯಾಂಕ್​ನ ಮೀಸಲು ಅನುಪಾತದ ಅಗತ್ಯಗಳಲ್ಲಿ ಸಣ್ಣ ಕಡಿತದೊಂದಿಗೆ ಉದ್ದೇಶಿತ ವಿತ್ತೀಯ ಮತ್ತು ಹಣಕಾಸಿನ ಬೆಂಬಲವನ್ನು ಆರ್ಥಿಕ ತಜ್ಞರು ನಿರೀಕ್ಷಿಸುತ್ತಾರೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: China Economy: ಕೊರೊನಾಗೆ ಮುಂಚಿನ 2020ರ ಫೆಬ್ರವರಿಗಿಂತ ಕೆಳಗಿಳಿಯಿತು ಚೀನಾದ ಕೈಗಾರಿಕೆ ಚಟುವಟಿಕೆ

Evergrande: ಚೀನಾದ ಪೋಸ್ಟರ್​ಬಾಯ್​ ಎವರ್​ಗ್ರ್ಯಾಂಡ್​ ದಬ್ಬಾಕಿಕೊಂಡರೆ 171 ಬ್ಯಾಂಕ್​, 121 ಹಣಕಾಸು ಸಂಸ್ಥೆ ಅಡ್ಡಡ್ಡ

ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
ಪ್ರಕೃತಿಯ ಶಕ್ತಿ ಮುಂದೆ ನಾವೇನೂ ಅಲ್ಲ!; ಈ ವಿಡಿಯೋ ನೋಡಿ
ಕನ್ನಡ ಸಿನಿಮಾಗೆ ಬೆಳಗ್ಗೆ 9.30ರ ಶೋ ಕೊಟ್ಟರೆ ಜನ ಬರಲ್ಲ: ಶ್ರೀನಗರ ಕಿಟ್ಟಿ
ಕನ್ನಡ ಸಿನಿಮಾಗೆ ಬೆಳಗ್ಗೆ 9.30ರ ಶೋ ಕೊಟ್ಟರೆ ಜನ ಬರಲ್ಲ: ಶ್ರೀನಗರ ಕಿಟ್ಟಿ
ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು
ಬಿಹಾರದಲ್ಲಿ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಣೆ;  14 ಜನರು ಸಾವು
ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು
ಮಧ್ಯಾಹ್ನ ಬೆಂಗಳೂರಿಂದ ಲಂಡನ್​ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು
ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ
ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವುದು ಕಷ್ಟವಾಗಿದೆ: ಸತೀಶ್ ಜಾರಕಿಹೊಳಿ
‘ಥಗ್ ಲೈಫ್’ ರಿಲೀಸ್ ಆದರೂ ನೋಡಬೇಡಿ: ಶ್ರೀನಗರ ಕಿಟ್ಟಿ
‘ಥಗ್ ಲೈಫ್’ ರಿಲೀಸ್ ಆದರೂ ನೋಡಬೇಡಿ: ಶ್ರೀನಗರ ಕಿಟ್ಟಿ
ಗುಡ್ಡ ಕುಸಿತ: ಮನೆಗೆ ನುಗ್ಗಿದ ನೀರು,ಮಣ್ಣು:ಮನೆಯವರ ಪ್ರಾಣ ಉಳಿಸಿತು ಮದ್ವೆ!
ಗುಡ್ಡ ಕುಸಿತ: ಮನೆಗೆ ನುಗ್ಗಿದ ನೀರು,ಮಣ್ಣು:ಮನೆಯವರ ಪ್ರಾಣ ಉಳಿಸಿತು ಮದ್ವೆ!
ರಾಜ್ಯ ಬಿಜೆಪಿ ಶುದ್ಧೀಕರಣಯಾಗದ ಹೊರತು ವಾಪಸ್ಸು ಹೋಗಲ್ಲ: ಈಶ್ವರಪ್ಪ
ರಾಜ್ಯ ಬಿಜೆಪಿ ಶುದ್ಧೀಕರಣಯಾಗದ ಹೊರತು ವಾಪಸ್ಸು ಹೋಗಲ್ಲ: ಈಶ್ವರಪ್ಪ
ಮೃತ ರೇಣುಕಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು
ಮೃತ ರೇಣುಕಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು
ಮಹಿಳೆಯ ಚಿಕಿತ್ಸೆಗೆ ಹಣ ನೀಡಿರುವ ಯುವ ರಾಜ್​ಕುಮಾರ್ ತಂಡ
ಮಹಿಳೆಯ ಚಿಕಿತ್ಸೆಗೆ ಹಣ ನೀಡಿರುವ ಯುವ ರಾಜ್​ಕುಮಾರ್ ತಂಡ