AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲ ಮರುಪಾವತಿ ವಿಫಲ: ಚೇತರಿಕೆ ಹಾದಿಯಲ್ಲಿದ್ದ ಕಾಫಿ ಡೇ ಷೇರು ಮೌಲ್ಯ ಶೇ 9ರಷ್ಟು ಕುಸಿತ

ಕಾಫಿ ಬೀಜಗಳ ಖರೀದಿ, ಸಂಸ್ಕರಣೆ ಮತ್ತು ಮಾರಾಟ ಕಾಫಿ ಡೇ ಎಂಟರ್​ಪ್ರೈಸಸ್​ನ ಮುಖ್ಯ ವಹಿವಾಟಿನ ಅಂಶ. ಭಾರತದ ವಿವಿಧ ನಗರಗಳಲ್ಲಿ ಮತ್ತು ವಿಶ್ವದ ಹಲವೆಡೆ ಕಾಫಿ ಡೇ ಸ್ವಂತ ಮಳಿಗೆಗಳನ್ನು ಹೊಂದಿದೆ.

ಸಾಲ ಮರುಪಾವತಿ ವಿಫಲ: ಚೇತರಿಕೆ ಹಾದಿಯಲ್ಲಿದ್ದ ಕಾಫಿ ಡೇ ಷೇರು ಮೌಲ್ಯ ಶೇ 9ರಷ್ಟು ಕುಸಿತ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 08, 2022 | 7:52 AM

ಬೆಂಗಳೂರು: ಕಾಫಿ ಡೇ ಎಂಟರ್​ಪ್ರೈಸಸ್​ ಕಂಪನಿಯ (Coffee Day Enterprises) ಷೇರು ಮೌಲ್ಯವು ಗುರುವಾರ (ಏಪ್ರಿಲ್ 8) ಒಂದೇ ದಿನ ಶೇ 9.4ರಷ್ಟು ಕುಸಿದಿದೆ. ಮಾರ್ಚ್​ 31, 2022ಕ್ಕೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಸಾಲ ಮತ್ತು ಸಾಲಪತ್ರಗಳ ಮೇಲೆ ಪಡೆದಿರುವ ₹ 479.68 ಕೋಟಿಯಷ್ಟು ಹಣ ಮರುಪಾವತಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಷೇರುದಾರರು ಆತಂಕದಿಂದ ತಮ್ಮ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಕಳೆದ ದಿನದ (ಬುಧವಾರ) ವಹಿವಾಟು ಅಂತ್ಯಗೊಂಡಾಗ ಷೇರು ಮೌಲ್ಯವು ₹ 59.60 ಇತ್ತು. ಸತತವಾಗಿ ಇಳಿಕೆ ಕಂಡಿರುವ ಷೇರು ಮೌಲ್ಯವು ಶೇ 6ರಷ್ಟು ಕಡಿಮೆ ಬೆಲೆಯಲ್ಲಿ ವಹಿವಾಟಾಗುತ್ತಿತ್ತು. ಷೇರು ವಿನಿಮಯ ಕೇಂದ್ರಗಳಿಗೆ ಸಲ್ಲಿಸಿರುವ ಮಾಹಿತಿ ಪ್ರಕಾರ ಕಾಫಿ ಡೇ ಕಂಪೆನಿಯು ವಿವಿಧ ಹಣಕಾಸು ಸಂಸ್ಥೆಗಳಿಂದ ಪಡೆದಿರುವ ₹ 22.88 ಕೋಟಿ ಸಾಲ ಮರುಪಾವತಿ ಸಾಧ್ಯವಾಗಿಲ್ಲ ಎಂದು ಹೇಳಿತ್ತು. ಇದೇ ಮೊತ್ತಕ್ಕೆ ಕಟ್ಟಬೇಕಿದ್ದ ₹ 5.78ರ ಬಡ್ಡಿಯನ್ನೂ ಕಟ್ಟಲು ಸಾಧ್ಯವಾಗಿಲ್ಲ ಎಂದು ಘೋಷಿಸಿತ್ತು. ಲಿಸ್ಟ್ ಆಗದ ಸೆಕ್ಯುರಿಟಿ ಮತ್ತು ನಾನ್ ಕನ್​ವರ್ಟಿಬಲ್ ಡಿಬೆಂಚರ್, ನಾನ್ ಕನ್​ವರ್ಟಿಬಲ್ ರಿಡೀಮಬಲ್ ಆದ್ಯತೆಯ ಷೇರುಗಳಿಗಾಗಿ ಪಾವತಿಸಬೇಕಿದ್ದ ₹ 200 ಕೋಟಿ ಮೊತ್ತವನ್ನೂ ಪಾವತಿಸಲು ಸಾಧ್ಯವಾಗಿಲ್ಲ ಎಂದು ಕಾಫಿ ಡೇ ಹೇಳಿತ್ತು.

ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (National Stock Exchange – NSE) ಬುಧವಾರ (ಏಪ್ರಿಲ್ 6) ₹ 59.60ಗೆ ವಹಿವಾಟು ಮುಗಿಸಿದ್ದ ಕಾಫಿ ಡೇ ಎಂಟರ್​ಪ್ರೈಸಸ್ ಲಿಮಿಟೆಡ್ ಗುರುವಾರದ (ಏಪ್ರಿಲ್ 7) ವಹಿವಾಟಿನಲ್ಲಿ ದಿನದ ಕನಿಷ್ಠ ಮಟ್ಟವಾದ ₹ 53.65ಕ್ಕೆ ಇಳಿದಿತ್ತು. ನಂತರ ಚೇತರಿಸಿಕೊಂಡು ₹ 57.50ಯಲ್ಲಿ ದಿನದ ವಹಿವಾಟು ಮುಗಿಸಿತು. ಒಂದು ವರ್ಷದ ಅವಧಿಯ ಅಂಕಿ ಅಂಶಗಳನ್ನು ಪರಿಶೀಲಿಸಿದರೆ, 52 ವಾರಗಳ ಸರಾಸರಿಯಲ್ಲಿ ಕಾಫಿ ಡೇ ಷೇರು ಗರಿಷ್ಠ ₹ 86.80, ಕನಿಷ್ಠ ₹ 20.20 ಮುಟ್ಟಿತ್ತು. ಕಾಫಿ ಡೇ ಕಂಪನಿಯ ಮಾರುಕಟ್ಟೆ ಮೌಲ್ಯವು ₹ 1,171 ಕೋಟಿ ಇದೆ.

ಕಾಫಿ ಡೇ ಪ್ರವರ್ತಕ ವಿ.ಜಿ.ಸಿದ್ಧಾರ್ಥ ಹೆಗ್ಡೆ ನಿಧನದ ನಂತರ ಕಂಪನಿಯ ಭವಿಷ್ಯದ ಬಗ್ಗೆ ಆತಂಕ ವ್ಯಕ್ತವಾಗಿತ್ತು. ಸಿದ್ಧಾರ್ಥ ಅವರ ಪತ್ನಿ ಮಾಳವಿಕಾ ಹೆಗ್ಡೆ ಸಕಾಲಿಕ ಮಧ್ಯಪ್ರವೇಶ ಮತ್ತು ಅವರು ತೆಗೆದುಕೊಂಡ ಕೆಲ ದೃಢ ನಿರ್ಧಾರಗಳಿಂದ ಕಂಪನಿ ದಿವಾಳಿಯಾಗುವುದು ತಪ್ಪಿತು. ಕಳೆದ ಜನವರಿಯಿಂದೀಚೆಗೆ ಕಂಪನಿಯ ಷೇರು ಮೌಲ್ಯವು ಶೇ 31.15ರಷ್ಟು ಹೆಚ್ಚಾಗಿತ್ತು. ಕಳೆದ ಒಂದು ವರ್ಷದ ಅವಧಿಯಲ್ಲಿ ಶೇ 115ರಷ್ಟು ಹೆಚ್ಚಾಗಿತ್ತು. ಹೂಡಿಕೆದಾರರ ವಿಶ್ವಾಸ ಮರಳಿ ಗಳಿಸುವ ಹಾದಿಯಲ್ಲಿ ಕಂಪನಿ ಸಾಕಷ್ಟು ಸಾಧನೆ ಮಾಡಿತ್ತು.

ಇದೀಗ ಕಂಪನಿಯು ಸಾಲ ಮರುಪಾವತಿಸಲು ಸಾಧ್ಯವಿಲ್ಲ ಎಂದು ಘೋಷಿಸಿಕೊಂಡಿದ್ದರೂ ಕಂಪನಿಯ ಆರ್ಥಿಕ ಸ್ಥಿತಿಗತಿ ತಕ್ಕಮಟ್ಟಿಗೆ ಚೆನ್ನಾಗಿಯೇ ಇದೆ. ಡಿಸೆಂಬರ್ 21ಕ್ಕೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು ಶೇ 131ರಷ್ಟು ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ. ಇದೇ ಅವಧಿಯಲ್ಲಿ ಕಂಪನಿಯು ₹ 20.47 ಕೋಟಿ ನಿವ್ವಳ ಲಾಭ ಪಡೆದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು ₹ 66.11 ಕೋಟಿ ನಷ್ಟ ದಾಖಲಿಸಿತ್ತು. ಕಂಪನಿಯ ಉತ್ಪನ್ನಗಳ ಮಾರಾಟ (ಸೇಲ್ಸ್) ಸಹ 2021-22ರ ಆರ್ಥಿಕ ವರ್ಷದ 3ನೇ ತ್ರೈಮಾಸಿಕದಲ್ಲಿ ಶೇ 48.30ಯಷ್ಟು ಹೆಚ್ಚಾಗಿದೆ.

ಕಾಫಿ ಬೀಜಗಳ ಖರೀದಿ, ಸಂಸ್ಕರಣೆ ಮತ್ತು ಮಾರಾಟ ಕಾಫಿ ಡೇ ಎಂಟರ್​ಪ್ರೈಸಸ್​ನ ಮುಖ್ಯ ವಹಿವಾಟಿನ ಅಂಶ. ಭಾರತದ ವಿವಿಧ ನಗರಗಳಲ್ಲಿ ಮತ್ತು ವಿಶ್ವದ ಹಲವೆಡೆ ಕಾಫಿ ಡೇ ಸ್ವಂತ ಮಳಿಗೆಗಳನ್ನು ಹೊಂದಿದೆ. ವಿದೇಶಗಳಿಗೂ ಕಾಫಿ ಬೀಜ ಮತ್ತು ಸಂಬಂಧಿತ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಇದರ ಜೊತೆಗೆ ರೆಸಾರ್ಟ್ ಒಂದರ ಮಾಲೀಕತ್ವ ಹೊಂದಿರುವ ಕಂಪನಿಯು ಪ್ರವಾಸೋದ್ಯಮದಲ್ಲಿಯೂ ತೊಡಗಿಸಿಕೊಂಡಿದೆ. ಕನ್ಸಲ್​ಟೆನ್ಸಿ ಸರ್ವೀಸ್​ಗಳನ್ನೂ ಒದಗಿಸುತ್ತಿದೆ.

ಇದನ್ನೂ ಓದಿ: ಕೆಫೆ ಕಾಫಿ ಡೇ ಸಂಸ್ಥಾಪಕ ದಿ ಸಿದ್ದಾರ್ಥ​ರನ್ನು ಆದರ್ಶವಾಗಿಟ್ಟುಕೊಂಡ ಯುವಕ ಮದುವೆಗೆ ಮೊದಲು ಕಾಫಿದೊರೆಗೆ ಪುಷ್ಪನಮನ ಸಲ್ಲಿಸಿದರು

ಇದನ್ನೂ ಓದಿ: ಸಂಕಷ್ಟದಿಂದ ಮತ್ತೆ ಸ್ವಾವಲಂಬನೆಯತ್ತ ಕೆಫೆ ಕಾಫಿ ಡೇ: ಕೊಟ್ಟಿದ್ದ ಮಾತಿನೊಂದಿಗೆ ಕಂಪನಿಯನ್ನೂ ಉಳಿಸಿಕೊಂಡ ಮಾಳವಿಕಾ ಹೆಗ್ಡೆ

ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ