AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cyber Insurance: ಸೈಬರ್ ವಿಮೆ ಎಂದರೇನು? ಪರಿಹಾರ ಪಡೆಯುವುದು ಹೇಗೆ?

Cyber ​​insurance: ಸೈಬರ್ ವಿಮೆಯು ಜೀವ ವಿಮೆ ಮಾದರಿಯನ್ನೇ ಹೋಲುತ್ತದೆ. ಸೈಬರ್ ವಂಚನೆಯ ಸಂದರ್ಭದಲ್ಲಿ ಈ ವಿಮೆ ಉಪಯುಕ್ತವಾಗಿದೆ. ಅಂತಹ ಸಮಯದಲ್ಲಿ ಸಂಬಂಧಪಟ್ಟವರು ಪರಿಹಾರಕ್ಕಾಗಿ ಮನವಿ ಮಾಡುತ್ತಾರೆ. ಖಂಡಿತವಾಗಿಯೂ ಅದಕ್ಕೆ ನಿಯಮಗಳು ಮತ್ತು ಷರತ್ತುಗಳಿವೆ. ಅದರ ಆಧಾರದ ಮೇಲೆ ಹಾನಿಯನ್ನು ಕೇಳಬಹುದು.

Cyber Insurance: ಸೈಬರ್ ವಿಮೆ ಎಂದರೇನು? ಪರಿಹಾರ ಪಡೆಯುವುದು ಹೇಗೆ?
ಸೈಬರ್ ವಿಮೆ ಎಂದರೇನು?
ಸಾಧು ಶ್ರೀನಾಥ್​
|

Updated on: Aug 31, 2023 | 6:06 AM

Share

ಈಗ ಡಿಜಿಟಲ್ ಯುಗ ನಡೆಯುತ್ತಿದೆ. ಇಂಟರ್ನೆಟ್ ಸಹಾಯದಿಂದ ನೀವು ಕೆಲವೇ ನಿಮಿಷಗಳಲ್ಲಿ ಮನೆಯಲ್ಲಿ ಅನೇಕ ಕೆಲಸಗಳನ್ನು ಮಾಡಬಹುದು. ಈಗ ಯಾರ ಖಾತೆಗೆ ಆಗಲಿ ಹಣ ಕಳುಹಿಸಲು ಬ್ಯಾಂಕ್ ಗೆ ಹೋಗಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಕೆಲವೇ ಹಂತಗಳಲ್ಲಿ ಹಣವನ್ನು ಬೇರೆಯವರ ಖಾತೆಗೆ ವರ್ಗಾಯಿಸಬಹುದು. ಇಂಟರ್ನೆಟ್ ಕ್ರಾಂತಿಯೊಂದಿಗೆ ಈ ಬದಲಾವಣೆ ಸಾಧ್ಯವಾಗಿದೆ. ಆದರೆ ಸೈಬರ್ ವಂಚಕರು ಈ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ವಂಚನೆ ಮಾಡುತ್ತಿದ್ದಾರೆ. ಆನ್‌ಲೈನ್ ವಂಚನೆಯ (online fraud) ಪ್ರಕರಣಗಳು ನಡೆಯುತ್ತಲೇ ಇವೆ. ಸೈಬರ್ ಅಪರಾಧಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಬ್ಯಾಂಕ್ ನ ವೆಬ್ ಸೈಟ್ ನಂತೆಯೇ ಮತ್ತೊಂದು ನಕಲಿ ಸೈಟ್ ಸೃಷ್ಟಿಸಿ ವಂಚನೆ ಮಾಡುತ್ತಿದ್ದಾರೆ. ಬ್ಯಾಂಕ್ ಸಂದೇಶದಂತೆಯೇ ಅಚ್ಚುಕಟ್ಟಾಗಿ ನಕಲಿ ಸಂದೇಶವನ್ನು ಕಳುಹಿಸಲಾಗಿದೆ. ಅವರು ಖುದ್ದಾಗಿ ಬ್ಯಾಂಕಿನ ಕಸ್ಟಮರ್ ಕೇರ್‌ಗೆ ಮಾತನಾಡುವಂತೆ ನಟಿಸುತ್ತಾರೆ (cyber crime) . ನೀವು ಕಷ್ಟಪಟ್ಟು ಗಳಿಸಿದ ಹಣವನ್ನು ಸೆಕೆಂಡುಗಳಲ್ಲಿ ಕಳೆದುಕೊಳ್ಳುತ್ತೀರಿ. ಈಗ ಹಳ್ಳಿಗಳಲ್ಲೂ ಇಂತಹದ್ದೇ ಘಟನೆಗಳು ನಡೆಯುತ್ತಿವೆ. ಬ್ಯಾಂಕ್ ಗಳು ಆಗಾಗ ಈ ಬಗ್ಗೆ ಎಚ್ಚರಿಕೆಯ ಸಂದೇಶಗಳನ್ನು ಕಳುಹಿಸುತ್ತವೆ. ಆದರೂ ನಾವು ಇನ್ನೂ ನಾನಾ ರೀತಿಯ ವಂಚನೆಗಳಿಗೆ ಒಳಗಾಗಯತ್ತಲೇ ಇದ್ದೇವೆ. ಅಂತಹ ಸಂದರ್ಭಗಳಲ್ಲಿ ಗ್ರಾಹಕರಿಗೆ ಸೈಬರ್ ವಿಮೆ ಮುಖ್ಯವಾಗಿದೆ (Cyber ​​insurance protection). ಈ ವಿಮೆ ಹಣ ನಷ್ಟಕ್ಕೆ ಪರಿಹಾರ ನೀಡುತ್ತದೆ.

ಸೈಬರ್ ವಿಮೆ ಎಂದರೇನು?

ಸೈಬರ್ ವಿಮೆಯು ಜೀವ ವಿಮೆ ಮಾದರಿಯನ್ನೇ ಹೋಲುತ್ತದೆ. ಸೈಬರ್ ವಂಚನೆಯ ಸಂದರ್ಭದಲ್ಲಿ ಈ ವಿಮೆ ಉಪಯುಕ್ತವಾಗಿದೆ. ಅಂತಹ ಸಮಯದಲ್ಲಿ ಸಂಬಂಧಪಟ್ಟವರು ಪರಿಹಾರಕ್ಕಾಗಿ ಮನವಿ ಮಾಡುತ್ತಾರೆ. ಖಂಡಿತವಾಗಿಯೂ ಅದಕ್ಕೆ ನಿಯಮಗಳು ಮತ್ತು ಷರತ್ತುಗಳಿವೆ. ಆದರೆ ಅದರ ಆಧಾರದ ಮೇಲೆ ಹಾನಿಯನ್ನು ಕೇಳಬಹುದು. ನಿಮ್ಮ ನಷ್ಟವನ್ನು ಸರಿದೂಗಿಸಲು ಈ ವಿಮೆ ಪ್ರಯೋಜನಕಾರಿಯಾಗಿದೆ.

ಸೈಬರ್ ವಿಮೆ ಅನೇಕ ವಂಚನೆಗಳ ವಿರುದ್ಧ ರಕ್ಷಣೆ ನೀಡುತ್ತದೆ. ಇದು ಆನ್‌ಲೈನ್ ಕಳ್ಳತನ, ಸೈಬರ್ ಬೆದರಿಸುವಿಕೆ, ಅನಧಿಕೃತ ಡಿಜಿಟಲ್ ವಂಚನೆ, ಡೇಟಾ ಉಲ್ಲಂಘನೆ ಮುಂತಾದ ವಿವಿಧ ವಂಚನೆಗಳಿಂದ ಗ್ರಾಹಕರಿಗೆ ರಕ್ಷಣೆ ನೀಡುತ್ತದೆ. ಆನ್​​ಲೈನ್​​ ವಹಿವಾಟುಗಳು, ಸಾಮಾಜಿಕ ಮಾಧ್ಯಮ ಹೊಣೆಗಾರಿಕೆ, ವೈರಸ್ ದಾಳಿ, ಆನ್‌ಲೈನ್ ಶಾಪಿಂಗ್ ವಂಚನೆಗಳ ವಿರುದ್ಧ ರಕ್ಷಣೆ ನೀಡುತ್ತದೆ. ವಿಮಾ ಮೊತ್ತ, ಪ್ರೀಮಿಯಂ ಆಧಾರದಲ್ಲಿ ವಿಮೆ ಪರಿಹಾರವನ್ನು ಪಡೆಯಬಹುದು.

ಸೈಬರ್ ವಿಮೆಯನ್ನು ನೀಡುವ ಕಂಪನಿಗಳು:

1. ಎಸ್‌ಬಿಐ ಜನರಲ್ ಸೈಬರ್ ವಾಲ್ಟ್ ಎಡ್ಜ್ 2. ಬಜಾಜ್ ಅಲೈಯನ್ಸ್ ವೈಯಕ್ತಿಕ ಸೈಬರ್ ಸೇಫ್ ವಿಮಾ ಪಾಲಿಸಿ 3. ಎಚ್‌ಎಫ್‌ಸಿ ಎರ್ಗೊ ಸೈಬರ್ ಸ್ಯಾಚೆಟ್ ವಿಮೆ

ಸೈಬರ್ ವಿಮಾ ಆಯ್ಕೆಗಳು:

ಹೊಸ ವಿಮಾ ಪಾಲಿಸಿಗಳು ಮಾರುಕಟ್ಟೆಗೆ ಬಂದಿವೆ. ಇದು ಮನಿ ಬ್ಯಾಕ್​​ ಖಾತರಿಯೊಂದಿಗೆ ಬರುತ್ತದೆ. ಈ ಪಾಲಿಸಿಗಳು ಶೇಕಡಾ 7 ರಿಂದ 7.5 ರಷ್ಟು ಆದಾಯವನ್ನು ನೀಡುತ್ತವೆ. ಈ ಆದಾಯವು ಸಾಂಪ್ರದಾಯಿಕ ಹೂಡಿಕೆ ಯೋಜನೆಗಳಿಗಿಂತ ಹೆಚ್ಚು. ಈ ಯೋಜನೆಗಳಲ್ಲಿ ರೂ. 5 ಲಕ್ಷದವರೆಗಿನ ವಾರ್ಷಿಕ ಪ್ರೀಮಿಯಂ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ. ಒಬ್ಬ ವ್ಯಕ್ತಿ ತಿಂಗಳಿಗೆ 20,000 ರೂ. ಹೂಡಿಕೆ ಮಾಡಿ, 5 ವರ್ಷಗಳ ಕಾಲ ತೊಡಗಿಸಿದರೆ, ಅವರು ಈ ಯೋಜನೆಯಲ್ಲಿ ರೂ. 12 ಲಕ್ಷ ಆದಾಯ ಪಡೆಯಬಹುದು. ಈ ಮೊತ್ತವು ಹತ್ತು ವರ್ಷಗಳಲ್ಲಿ ಇದೇ ಯೋಜನೆಯಡಿ 20.5 ಲಕ್ಷ ರೂ. ಗಳಾಗುತ್ತದೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ