AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಪಿಎಫ್​ಒ ಅಪ್​ಡೇಟ್; ಸದಸ್ಯ ಸತ್ತಾಗ ಕ್ಲೇಮ್ ಮಾಡುವ ಪ್ರಕ್ರಿಯೆ ಈಗ ಸರಳ

EPF death claim simplified: ಆಧಾರ್​ನಲ್ಲಿರುವ ಮಾಹಿತಿ ಈಗ ಬಹಳಷ್ಟು ದಾಖಲೆಗೆ ಆಧಾರವಾಗಿರುತ್ತದೆ. ಆಧಾರ್​ನಲ್ಲಿರುವ ಹೆಸರು ನಿಖರವಾಗಿರಬೇಕು. ಅದರಂತೆಯೇ ಯುಎಎನ್​ನಲ್ಲೂ ಇರಬೇಕು. ವ್ಯತ್ಯಾಸ ಇದ್ದರೆ ಕ್ಲೇಮ್ ಮಾಡುವುದು ಕಷ್ಟ. ಸದಸ್ಯ ಸತ್ತ ಬಳಿಕ ಅವರ ಪಿಎಫ್ ಹಣಕ್ಕೆ ಕ್ಲೇಮ್ ಮಾಡುವಾಗ, ಆಧಾರ್ ಮತ್ತು ಯುಎಎನ್ ಮಾಹಿತಿ ತಾಳೆಯಾಗದಿದ್ದರೆ ಕಷ್ಟವಾಗುತ್ತದೆ. ಇಂಥ ಸಂದರ್ಭದಲ್ಲಿ ಇಪಿಎಫ್​ಒ ಸಂಸ್ಥೆ ಒಂದಷ್ಟು ವಿನಾಯಿತಿ ಕೊಟ್ಟಿದೆ.

ಇಪಿಎಫ್​ಒ ಅಪ್​ಡೇಟ್; ಸದಸ್ಯ ಸತ್ತಾಗ ಕ್ಲೇಮ್ ಮಾಡುವ ಪ್ರಕ್ರಿಯೆ ಈಗ ಸರಳ
ಇಪಿಎಫ್​
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 20, 2024 | 12:37 PM

Share

ಇಪಿಎಫ್ ಖಾತೆ ರಚಿಸುವಾಗ ಆಧಾರ್ ಮತ್ತು ಯುಎಎನ್ ಮಾಹಿತಿ ಒಂದಕ್ಕೊಂದು ತಾಳೆಯಾಗಬೇಕು. ಇಲ್ಲದಿದ್ದರೆ ಹಣ ಹಿಂಪಡೆಯುವಾಗ (epf claim) ಕಷ್ಟವಾಗುತ್ತದೆ. ಬಹಳಷ್ಟು ಇಪಿಎಫ್ ಸದಸ್ಯರ ಯುಎಎನ್ ಮತ್ತು ಆಧಾರ್ ವಿವರದಲ್ಲಿ ಹೊಂದಿಕೆ ಆಗಿರುವುದಿಲ್ಲ. ಒಂದೋ ಆಧಾರ್​ನಲ್ಲಿರುವ ಮಾಹಿತಿಯನ್ನು ಬದಲಿಸಬೇಕು. ಅಥವಾ ಯುಎಎನ್ ಮಾಹಿತಿ ಬದಲಿಸಬೇಕು. ಆದರೆ, ಆಧಾರ್ ಮತ್ತು ಯುಎಎನ್ ಹೊಂದಿಕೆಯಾಗದೇ ಇರುವ ಇಪಿಎಫ್ ಖಾತೆದಾರ ಆಕಸ್ಮಿಕವಾಗಿ ಮೃತಪಟ್ಟಾಗ ನಾಮಿನಿ ಹಣ ಕ್ಲೇಮ್ ಮಾಡುವಾಗ ತೊಂದರೆ ಆಗುತ್ತದೆ. ಸಾವನ್ನಪ್ಪಿದ ವ್ಯಕ್ತಿಯ ಆಧಾರ್ ದಾಖಲೆಯನ್ನು ತಿದ್ದಲು ಅಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಇಪಿಎಫ್​ಒ ಸಂಸ್ಥೆ ಹೊಸ ನಿಯಮವೊಂದನ್ನು ತಂದಿದ್ದು, ಇಂಥ ಪ್ರಸಂಗಗಳಲ್ಲಿ ಇಪಿಎಫ್ ಡೆತ್ ಕ್ಲೇಮ್ ಪ್ರಕ್ರಿಯೆಯನ್ನು ಸರಳಗೊಳಿಸಿದೆ.

ಇಪಿಎಫ್ ಸದಸ್ಯ ಸತ್ತ ಬಳಿಕ, ಅವರ ಆಧಾರ್ ವಿವರ ತಾಳೆಯಾಗದೇ ಇದ್ದರೂ ನಾಮಿನಿಯು ಪಿಎಫ್ ಹಣ ಕ್ಲೇಮ್ ಮಾಡಲು ಈಗ ಅವಕಾಶ ಇದೆ. ಇಲ್ಲಿ ಯುಎಎನ್​ನಲ್ಲಿರುವ ವಿವರ ಸರಿ ಇದ್ದು, ಆಧಾರ್​ನಲ್ಲಿ ಮಾತ್ರವೇ ವ್ಯತ್ಯಾಸ ಇದ್ದಂತಹ ಪ್ರಕರಣಗಳಿಗೆ ಮಾತ್ರ ಈ ಹೊಸ ನಿಯಮವು ಸಹಾಯಕ್ಕೆ ಬರುತ್ತದೆ.

ಇದನ್ನೂ ಓದಿ: ಹೊಸ ಇಪಿಎಫ್​ಒ ಆಟೊ ಸೆಟಲ್ಮೆಂಟ್ ನಿಯಮ; ಸುಲಭವಾಗಿ ಹಣ ಹಿಂಪಡೆಯಿರಿ

ಯುಎಎನ್ ಮಾಹಿತಿ ತಪ್ಪಾಗಿದ್ದರೆ?

‘ಒಂದು ವೇಳೆ ಆಧಾರ್ ಡಾಟಾ ಸರಿಯಾಗಿದ್ದು ಯುಎಎನ್​ನಲ್ಲಿ ತಪ್ಪಾಗಿದ್ದರೆ, 2024ರ ಮಾರ್ಚ್ 26ರಂದು ಹೊರಡಿಸಲಾದ ಮಾರ್ಗಸೂಚಿಯ ಪ್ಯಾರಾ 6.9 ಮತ್ತು 6.10ರಲ್ಲಿನ ನಿಯಮಗಳನ್ನು ಅನುಸರಿಸಬೆಕು. ಆಧಾರ್ ಮೂಲಕ ಯುಎಎನ್​ನಲ್ಲಿರುವ ದತ್ತಾಂಶವನ್ನು ಬದಲಾಯಿಸಬೇಕಾಗುತ್ತದೆ,’ ಎಂದು ಇಪಿಎಫ್​ಒ ಸಂಸ್ಥೆ ಇತ್ತೀಚೆಗೆ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದೆ.

ಸತ್ತ ಪಿಎಫ್ ಸದಸ್ಯರ ಆಧಾರ್ ಖಾತೆಗಳು ಡೀ ಆ್ಯಕ್ಟಿವೇಟ್ ಆಗಿರುವುದು, ತಾಂತ್ರಿಕ ಸಮಸ್ಯೆಗಳು ಎದುರಾಗುವುದು ಇತ್ಯಾದಿ ಕಾರಣಗಳಿಂದ ಆಧಾರ್ ಅಥೆಂಟಿಕೇಶನ್ ಪಡೆಯಲು ಸಾಧ್ಯವಾಗದೇ ಹೋಗಬಹುದು. ಇಂಥ ಸನ್ನಿವೇಶದಲ್ಲಿ ಇಪಿಎಫ್​ಒ ಈ ಕೆಳಗಿನ ಕ್ರಮಗಳನ್ನು ಅನುಸರಿಸಲು ತಿಳಿಸಿದೆ.

ಇದನ್ನೂ ಓದಿ: ಇಪಿಎಫ್​ಒ ಹೊಸ ಆದೇಶ: ವೈದ್ಯಕೀಯ ಚಿಕಿತ್ಸೆಗೆ 1 ಲಕ್ಷ ರೂವರೆಗೆ ಪಿಎಫ್ ಹಣ ಪಡೆಯುವ ಅವಕಾಶ

  • ಸಾವಿನ ಪ್ರಕರಣಗಳಲ್ಲಿ ಆಧಾರ್ ಸೀಡಿಂಗ್ ಇಲ್ಲದೇ ಕ್ಲೈಮ್ ಪಡೆಯಲು ತಾತ್ಕಾಲಿಕವಾಗಿ ಅನುಮತಿಸಬಹುದು.
  • ಇ-ಆಫೀಸ್ ಫೈಲ್ ಮೂಲಕ ಆಫೀಸರ್ ಇನ್​ಚಾರ್ಜ್ ಅವರಿಂದ ಅನುಮೋದನೆ ಪಡೆಯಬೇಕು.
  • ಸಾವನ್ನಪ್ಪಿದ ಇಪಿಎಫ್ ಸದಸ್ಯನ ಪಿಎಫ್ ಹಣಕ್ಕೆ ಕ್ಲೇಮ್ ಮಾಡುವ ವ್ಯಕ್ತಿಯ ವಿವರಗಳನ್ನು ಸೂಕ್ತವಾಗಿ ಪರಿಶೀಲಿಸಬೇಕು

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ
ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ
ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ
ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ