Fact Check: ಪೆನ್ನಿನಲ್ಲಿ ಗೀಚಿದ, ತಿದ್ದಿದ ನೋಟು ಚಲಾವಣೆ ಆಗುತ್ತಾ? ಸರ್ಕಾರದ ಸ್ಪಷ್ಟನೆ ಇಲ್ಲಿದೆ

ನೋಟಿನ ಮೇಲೆ ಪೆನ್ನಿನಲ್ಲಿ ಗೀಚುವುದೋ, ಕೊಳಕು ಕೈಗಳಲ್ಲಿ ಮುಟ್ಟಿ ಹಾಳು ಮಾಡುವುದೋ ಮಾಡಿದಲ್ಲಿ ನೋಟಿನ ಆಯಸ್ಸು ಬೇಗ ಮುಗಿಯುತ್ತದೆ. ಆರ್ಬಿಐ ಕೂಡ ಈ ಬಗ್ಗೆ ಜನರಲ್ಲಿ ಆಗಾಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತದೆ. ನೋಟು ಹಾಳಾಗುವಂಥ ಯಾವುದೇ ಅಭ್ಯಾಸವನ್ನೂ ಮಾಡದಿರಿ ಎಂದು ರಿಸರ್ವ್ ಬ್ಯಾಂಕ್ ಮನವಿ ಮಾಡುತ್ತದೆ.

Fact Check: ಪೆನ್ನಿನಲ್ಲಿ ಗೀಚಿದ, ತಿದ್ದಿದ ನೋಟು ಚಲಾವಣೆ ಆಗುತ್ತಾ? ಸರ್ಕಾರದ ಸ್ಪಷ್ಟನೆ ಇಲ್ಲಿದೆ
Converting credit card Bill into EMIs pros and cons here in Kannada
Follow us
| Updated By: ಗಣಪತಿ ಶರ್ಮ

Updated on: Jan 09, 2023 | 12:18 PM

ನೋಟುಗಳ ಮೇಲೆ ಇರುವ ತುಸು ಖಾಲಿ ಜಾಗದಲ್ಲಿ ಏನಾದರೂ ಪೆನ್ನಿನಲ್ಲಿ ಗೀಚಿರುವುದನ್ನು (Scribbling on the Currency Note) ನಾವು ನೋಡಿರುತ್ತೇವೆ. ನೋಟುಗಳ ಮೇಲೆ ಗೀಚದಿರಿ, ಹಾಳು ಮಾಡದಿರಿ ಎಂದು ಆರ್​ಬಿಐ (Reserve Bank of India) ಆಗಾಗ ಎಚ್ಚರಿಸುತ್ತಲೇ ಇದ್ದರೂ ಜನರು ಮಾತ್ರ ತಮ್ಮ ಗೀಚು ಪ್ರವೃತ್ತಿ ಬಿಡುವುದೇ ಇಲ್ಲ. ಈ ರೀತಿ ಗೀಚಿದ ಮತ್ತು ಹಾಳಾದ ನೋಟು ಅಸಿಂಧುವಾಗಿದ್ದು ಅದು ಚಲಾವಣೆ ಮಾಡಲು ಬರುವುದಿಲ್ಲ ಎಂಬಂತಹ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ (Social Media) ಹರಿದಾಡುತ್ತಿದೆ. ಸಹಜವಾಗಿಯೇ ಜನರಲ್ಲಿ ಗೊಂದಲ ಏರ್ಪಟ್ಟಿದೆ. ಹಾಗಾದರೆ, ಈ ರೀತಿ ಗೀಚಿದ ನೋಟುಗಳು ನಿಜಕ್ಕೂ ಚಲಾವಣೆಗೆ ಅರ್ಹವಿರುವುದಿಲ್ಲವೇ?

“ಭಾರತೀಯ ರಿಸರ್ವ್ ಬ್ಯಾಂಕಿನ ಹೊಸ ಮಾರ್ಗಸೂಚಿಗಳ ಪ್ರಕಾರ ಹೊಸ ನೋಟಿನ ಮೇಲೆ ಏನಾದರೂ ಗೀಚುವುದಿಂದ ಅದು ಚಲಾವಣೆಗೆ ಅನರ್ಹವಾಗುತ್ತದೆ” ಎಂಬಂತಹ ಮಾಹಿತಿ ಇರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ಹೌದು. ಸೋಷಿಯಲ್ ಮೀಡಿಯಾದಲ್ಲಿ ಇಂತಹ ಪೋಸ್ಟ್​​ಗಳು ವೈರಲ್ ಆಗುತ್ತಿದ್ದಂತೆಯೇ ಕೇಂದ್ರ ಸರ್ಕಾರದ ಫ್ಯಾಕ್ಟ್ ಚೆಕ್ ವಿಭಾಗ ಸ್ಪಷ್ಟೀಕರಣ ಹೊರಡಿಸಿದೆ. ಹೊಸ ನೋಟುಗಳ ಮೇಲೆ ಏನಾದರೂ ಗೀಚುವುದರಿಂದ ಆ ನೋಟಿನ ಮಾನ್ಯತೆ ಸ್ಥಗಿತಗೊಳ್ಳುವುದಿಲ್ಲ ಎಂದು ಹೇಳಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: Indian Rupee: ಏಷ್ಯಾದ ಕಳಪೆ ಕರೆನ್ಸಿಯಾಗಿ ವರ್ಷದ ವಹಿವಾಟು ಮುಗಿಸಿದ ರೂಪಾಯಿ

ನೋಟಿನ ಮೇಲೆ ಬರೆದರೆ ಏನೂ ಆಗಲ್ಲ ಎಂದು ಯಾರಾದರೂ ಭಾವಿಸಿ ದುರುಪಯೋಗಪಡಿಸಿಕೊಳ್ಳುವ ಪ್ರಯತ್ನ ಮಾಡದಿರಿ. ನೋಟನ್ನು ಆದಷ್ಟೂ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ನೋಟಿನ ಮುದ್ರಣಕ್ಕೆ ಸರ್ಕಾರ ಬಹಳಷ್ಟು ದುಡ್ಡು ವ್ಯಯಿಸುತ್ತದೆ. ನೋಟಿನ ಮೇಲೆ ಪೆನ್ನಿನಲ್ಲಿ ಗೀಚುವುದೋ, ಕೊಳಕು ಕೈಗಳಲ್ಲಿ ಮುಟ್ಟಿ ಹಾಳು ಮಾಡುವುದೋ ಮಾಡಿದಲ್ಲಿ ನೋಟಿನ ಆಯಸ್ಸು ಬೇಗ ಮುಗಿಯುತ್ತದೆ. ಆರ್ಬಿಐ ಕೂಡ ಈ ಬಗ್ಗೆ ಜನರಲ್ಲಿ ಆಗಾಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತದೆ.

ಕರೆನ್ಸಿ ನೋಟಿಗೆ ಈ ರೀತಿ ಮಾಡದಿರಿ:

  • ಯಾವುದೇ ಬ್ಯಾಂಕ್ ನೋಟಿಗೆ ಸ್ಟೇಪಲ್ ಪಿನ್ ಅದುಮದಿರಿ
  • ನೋಟುಗಳನ್ನು ಪೋಣಿಸಿ ಹಾರದಂತೆ ಮಾಡದಿರಿ
  • ಡೆಕೋರೇಶನ್ ಮಾಡಲು ನೋಟುಗಳನ್ನು ಬಳಸದಿರಿ
  • ಅಭಿಮಾನ ತೋರಲು ನೋಟುಗಳನ್ನು ಎರಚುವುದೋ, ನೆಲಕ್ಕೆ ಬಿಸುಡುವುದೋ ಇತ್ಯಾದಿ ಮಾಡದಿರಿ
  • ನೋಟುಗಳ ಮೇಲೆ ಬರೆಯದಿರಿ
  • ನೋಟು ಹಾಳಾಗುವಂಥ ಯಾವುದೇ ಅಭ್ಯಾಸವನ್ನೂ ಮಾಡದಿರಿ ಎಂದು ರಿಸರ್ವ್ ಬ್ಯಾಂಕ್ ಮನವಿ ಮಾಡುತ್ತದೆ. ಹಿಂದೆ, ಬ್ಯಾಂಕಿನಲ್ಲಿರುವ ಸಿಬ್ಬಂದಿಯೇ ಸಾಮಾನ್ಯವಾಗಿ ನೋಟುಗಳ ಕಂತೆಗೆ ಸ್ಟೇಪಲ್ ಪಿನ್ ಚುಚ್ಚುವುದುಂಟು ಮತ್ತು ಎಣಿಕೆಗೆ ಸಹಾಯವಾಗಲು ಗುರುತಿಗೆ ನಂಬರ್ ಬರೆಯುತ್ತಿದ್ದುಂಟು. ಈಗ ರಬ್ಬರ ಬ್ಯಾಂಡ್ ಹಾಕಲಾಗುತ್ತದೆ ಮತ್ತು ಎಣಿಕೆಗೆ ಮೆಷೀನ್ ಕೂಡ ಇದೆ.
  • ಹಲವು ಕಾರಣಗಳಿಂದ ಒಂದು ನೋಟು ಕೆಲ ವರ್ಷಗಳ ಬಳಿಕ ಹಾಳಾದ ಸ್ಥಿತಿಗೆ ಬರುವುದುಂಟು. ಹಲವೊಮ್ಮೆ ನೋಟು ಹರಿದುಹೋಗುವುದುಂಟು. ಒಂದು ವೇಳೆ ಆ ರೀತಿ ಆದರೆ ಹೆದರುವ ಅವಶ್ಯಕತೆ ಇರುವುದಿಲ್ಲ. ನೋಟಿನ ನಂಬರ್ ಸರಿಯಾಗಿ ಕಾಣುವಂತಿದ್ದರೆ ಅದನ್ನು ಯಾವುದೇ ಬ್ಯಾಂಕಿಗೆ ಹೋಗಿ ಹೊಸ ನೋಟಿಗೆ ವಿನಿಮಯ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ