AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಪೆನ್ನಿನಲ್ಲಿ ಗೀಚಿದ, ತಿದ್ದಿದ ನೋಟು ಚಲಾವಣೆ ಆಗುತ್ತಾ? ಸರ್ಕಾರದ ಸ್ಪಷ್ಟನೆ ಇಲ್ಲಿದೆ

ನೋಟಿನ ಮೇಲೆ ಪೆನ್ನಿನಲ್ಲಿ ಗೀಚುವುದೋ, ಕೊಳಕು ಕೈಗಳಲ್ಲಿ ಮುಟ್ಟಿ ಹಾಳು ಮಾಡುವುದೋ ಮಾಡಿದಲ್ಲಿ ನೋಟಿನ ಆಯಸ್ಸು ಬೇಗ ಮುಗಿಯುತ್ತದೆ. ಆರ್ಬಿಐ ಕೂಡ ಈ ಬಗ್ಗೆ ಜನರಲ್ಲಿ ಆಗಾಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತದೆ. ನೋಟು ಹಾಳಾಗುವಂಥ ಯಾವುದೇ ಅಭ್ಯಾಸವನ್ನೂ ಮಾಡದಿರಿ ಎಂದು ರಿಸರ್ವ್ ಬ್ಯಾಂಕ್ ಮನವಿ ಮಾಡುತ್ತದೆ.

Fact Check: ಪೆನ್ನಿನಲ್ಲಿ ಗೀಚಿದ, ತಿದ್ದಿದ ನೋಟು ಚಲಾವಣೆ ಆಗುತ್ತಾ? ಸರ್ಕಾರದ ಸ್ಪಷ್ಟನೆ ಇಲ್ಲಿದೆ
Converting credit card Bill into EMIs pros and cons here in Kannada
Follow us
TV9 Web
| Updated By: Ganapathi Sharma

Updated on: Jan 09, 2023 | 12:18 PM

ನೋಟುಗಳ ಮೇಲೆ ಇರುವ ತುಸು ಖಾಲಿ ಜಾಗದಲ್ಲಿ ಏನಾದರೂ ಪೆನ್ನಿನಲ್ಲಿ ಗೀಚಿರುವುದನ್ನು (Scribbling on the Currency Note) ನಾವು ನೋಡಿರುತ್ತೇವೆ. ನೋಟುಗಳ ಮೇಲೆ ಗೀಚದಿರಿ, ಹಾಳು ಮಾಡದಿರಿ ಎಂದು ಆರ್​ಬಿಐ (Reserve Bank of India) ಆಗಾಗ ಎಚ್ಚರಿಸುತ್ತಲೇ ಇದ್ದರೂ ಜನರು ಮಾತ್ರ ತಮ್ಮ ಗೀಚು ಪ್ರವೃತ್ತಿ ಬಿಡುವುದೇ ಇಲ್ಲ. ಈ ರೀತಿ ಗೀಚಿದ ಮತ್ತು ಹಾಳಾದ ನೋಟು ಅಸಿಂಧುವಾಗಿದ್ದು ಅದು ಚಲಾವಣೆ ಮಾಡಲು ಬರುವುದಿಲ್ಲ ಎಂಬಂತಹ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ (Social Media) ಹರಿದಾಡುತ್ತಿದೆ. ಸಹಜವಾಗಿಯೇ ಜನರಲ್ಲಿ ಗೊಂದಲ ಏರ್ಪಟ್ಟಿದೆ. ಹಾಗಾದರೆ, ಈ ರೀತಿ ಗೀಚಿದ ನೋಟುಗಳು ನಿಜಕ್ಕೂ ಚಲಾವಣೆಗೆ ಅರ್ಹವಿರುವುದಿಲ್ಲವೇ?

“ಭಾರತೀಯ ರಿಸರ್ವ್ ಬ್ಯಾಂಕಿನ ಹೊಸ ಮಾರ್ಗಸೂಚಿಗಳ ಪ್ರಕಾರ ಹೊಸ ನೋಟಿನ ಮೇಲೆ ಏನಾದರೂ ಗೀಚುವುದಿಂದ ಅದು ಚಲಾವಣೆಗೆ ಅನರ್ಹವಾಗುತ್ತದೆ” ಎಂಬಂತಹ ಮಾಹಿತಿ ಇರುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ಹೌದು. ಸೋಷಿಯಲ್ ಮೀಡಿಯಾದಲ್ಲಿ ಇಂತಹ ಪೋಸ್ಟ್​​ಗಳು ವೈರಲ್ ಆಗುತ್ತಿದ್ದಂತೆಯೇ ಕೇಂದ್ರ ಸರ್ಕಾರದ ಫ್ಯಾಕ್ಟ್ ಚೆಕ್ ವಿಭಾಗ ಸ್ಪಷ್ಟೀಕರಣ ಹೊರಡಿಸಿದೆ. ಹೊಸ ನೋಟುಗಳ ಮೇಲೆ ಏನಾದರೂ ಗೀಚುವುದರಿಂದ ಆ ನೋಟಿನ ಮಾನ್ಯತೆ ಸ್ಥಗಿತಗೊಳ್ಳುವುದಿಲ್ಲ ಎಂದು ಹೇಳಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: Indian Rupee: ಏಷ್ಯಾದ ಕಳಪೆ ಕರೆನ್ಸಿಯಾಗಿ ವರ್ಷದ ವಹಿವಾಟು ಮುಗಿಸಿದ ರೂಪಾಯಿ

ನೋಟಿನ ಮೇಲೆ ಬರೆದರೆ ಏನೂ ಆಗಲ್ಲ ಎಂದು ಯಾರಾದರೂ ಭಾವಿಸಿ ದುರುಪಯೋಗಪಡಿಸಿಕೊಳ್ಳುವ ಪ್ರಯತ್ನ ಮಾಡದಿರಿ. ನೋಟನ್ನು ಆದಷ್ಟೂ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ನೋಟಿನ ಮುದ್ರಣಕ್ಕೆ ಸರ್ಕಾರ ಬಹಳಷ್ಟು ದುಡ್ಡು ವ್ಯಯಿಸುತ್ತದೆ. ನೋಟಿನ ಮೇಲೆ ಪೆನ್ನಿನಲ್ಲಿ ಗೀಚುವುದೋ, ಕೊಳಕು ಕೈಗಳಲ್ಲಿ ಮುಟ್ಟಿ ಹಾಳು ಮಾಡುವುದೋ ಮಾಡಿದಲ್ಲಿ ನೋಟಿನ ಆಯಸ್ಸು ಬೇಗ ಮುಗಿಯುತ್ತದೆ. ಆರ್ಬಿಐ ಕೂಡ ಈ ಬಗ್ಗೆ ಜನರಲ್ಲಿ ಆಗಾಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತದೆ.

ಕರೆನ್ಸಿ ನೋಟಿಗೆ ಈ ರೀತಿ ಮಾಡದಿರಿ:

  • ಯಾವುದೇ ಬ್ಯಾಂಕ್ ನೋಟಿಗೆ ಸ್ಟೇಪಲ್ ಪಿನ್ ಅದುಮದಿರಿ
  • ನೋಟುಗಳನ್ನು ಪೋಣಿಸಿ ಹಾರದಂತೆ ಮಾಡದಿರಿ
  • ಡೆಕೋರೇಶನ್ ಮಾಡಲು ನೋಟುಗಳನ್ನು ಬಳಸದಿರಿ
  • ಅಭಿಮಾನ ತೋರಲು ನೋಟುಗಳನ್ನು ಎರಚುವುದೋ, ನೆಲಕ್ಕೆ ಬಿಸುಡುವುದೋ ಇತ್ಯಾದಿ ಮಾಡದಿರಿ
  • ನೋಟುಗಳ ಮೇಲೆ ಬರೆಯದಿರಿ
  • ನೋಟು ಹಾಳಾಗುವಂಥ ಯಾವುದೇ ಅಭ್ಯಾಸವನ್ನೂ ಮಾಡದಿರಿ ಎಂದು ರಿಸರ್ವ್ ಬ್ಯಾಂಕ್ ಮನವಿ ಮಾಡುತ್ತದೆ. ಹಿಂದೆ, ಬ್ಯಾಂಕಿನಲ್ಲಿರುವ ಸಿಬ್ಬಂದಿಯೇ ಸಾಮಾನ್ಯವಾಗಿ ನೋಟುಗಳ ಕಂತೆಗೆ ಸ್ಟೇಪಲ್ ಪಿನ್ ಚುಚ್ಚುವುದುಂಟು ಮತ್ತು ಎಣಿಕೆಗೆ ಸಹಾಯವಾಗಲು ಗುರುತಿಗೆ ನಂಬರ್ ಬರೆಯುತ್ತಿದ್ದುಂಟು. ಈಗ ರಬ್ಬರ ಬ್ಯಾಂಡ್ ಹಾಕಲಾಗುತ್ತದೆ ಮತ್ತು ಎಣಿಕೆಗೆ ಮೆಷೀನ್ ಕೂಡ ಇದೆ.
  • ಹಲವು ಕಾರಣಗಳಿಂದ ಒಂದು ನೋಟು ಕೆಲ ವರ್ಷಗಳ ಬಳಿಕ ಹಾಳಾದ ಸ್ಥಿತಿಗೆ ಬರುವುದುಂಟು. ಹಲವೊಮ್ಮೆ ನೋಟು ಹರಿದುಹೋಗುವುದುಂಟು. ಒಂದು ವೇಳೆ ಆ ರೀತಿ ಆದರೆ ಹೆದರುವ ಅವಶ್ಯಕತೆ ಇರುವುದಿಲ್ಲ. ನೋಟಿನ ನಂಬರ್ ಸರಿಯಾಗಿ ಕಾಣುವಂತಿದ್ದರೆ ಅದನ್ನು ಯಾವುದೇ ಬ್ಯಾಂಕಿಗೆ ಹೋಗಿ ಹೊಸ ನೋಟಿಗೆ ವಿನಿಮಯ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಇಂದು ಒಂದೇ ದಿನದಲ್ಲಿ 103 ಬೈಕ್​ ಟ್ಯಾಕ್ಸಿ ಸೀಜ್!
ಬೆಂಗಳೂರಿನಲ್ಲಿ ಇಂದು ಒಂದೇ ದಿನದಲ್ಲಿ 103 ಬೈಕ್​ ಟ್ಯಾಕ್ಸಿ ಸೀಜ್!
ಕಾಂತಾರ ತಂಡದ ಯಾರಿಗೂ ಗಾಯ ಆಗಿಲ್ಲ: ಶಿವಮೊಗ್ಗ ಜಿಲ್ಲಾಧಿಕಾರಿ ಸ್ಪಷ್ಟನೆ
ಕಾಂತಾರ ತಂಡದ ಯಾರಿಗೂ ಗಾಯ ಆಗಿಲ್ಲ: ಶಿವಮೊಗ್ಗ ಜಿಲ್ಲಾಧಿಕಾರಿ ಸ್ಪಷ್ಟನೆ
ಹ್ಯಾನ್ಲೆಯಲ್ಲಿ ಮಿನಿ ತಾರಾಲಯಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆ
ಹ್ಯಾನ್ಲೆಯಲ್ಲಿ ಮಿನಿ ತಾರಾಲಯಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆ
ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿ ಸ್ವಾಗತಿಸಿದ ಸೈಪ್ರಸ್ ಶಾಸಕಿ
ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಿ ಸ್ವಾಗತಿಸಿದ ಸೈಪ್ರಸ್ ಶಾಸಕಿ
ಧುಮ್ಮುಕ್ಕುತ್ತಿರುವ ವಿಶ್ವ ವಿಖ್ಯಾತ ಜಲಪಾತ, ಜೋಗದ ಸಿರಿಯ ನಯನ ಮನೋಹರ ದೃಶ್ಯ
ಧುಮ್ಮುಕ್ಕುತ್ತಿರುವ ವಿಶ್ವ ವಿಖ್ಯಾತ ಜಲಪಾತ, ಜೋಗದ ಸಿರಿಯ ನಯನ ಮನೋಹರ ದೃಶ್ಯ
ದಾವಣಗೆರೆಗೆ ಕಾರಲ್ಲಿ ಬಂದಿದ್ದಕ್ಕೆ ತಡವಾಯ್ತು ಎಂದ ಸಿಎಂ ಸಿದ್ದರಾಮಯ್ಯ
ದಾವಣಗೆರೆಗೆ ಕಾರಲ್ಲಿ ಬಂದಿದ್ದಕ್ಕೆ ತಡವಾಯ್ತು ಎಂದ ಸಿಎಂ ಸಿದ್ದರಾಮಯ್ಯ
ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಉರುಳಿಸಿದ ನೂರ್ ಅಹ್ಮದ್
ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಉರುಳಿಸಿದ ನೂರ್ ಅಹ್ಮದ್
ಅಕ್ರಮ ಗಣಿಗಾರಿಕೆ ಆರೋಪಗಳಿಂದ ಮುಕ್ತನಾಗಿದ್ದೇನೆ: ಜನಾರ್ಧನ ರೆಡ್ಡಿ
ಅಕ್ರಮ ಗಣಿಗಾರಿಕೆ ಆರೋಪಗಳಿಂದ ಮುಕ್ತನಾಗಿದ್ದೇನೆ: ಜನಾರ್ಧನ ರೆಡ್ಡಿ
ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ
ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ
ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ
ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ