SCSS Scheme: ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆ; ಎಸ್​ಸಿಎಸ್​ಎಸ್​ನಲ್ಲಿ ಹಿರಿಯ ನಾಗರಿಕರ ಠೇವಣಿಗೆ ಸಿಗುತ್ತೆ ಶೇ 8ರ ಬಡ್ಡಿ

ಹಿರಿಯ ನಾಗರಿಕರ ಉಳಿತಾಯ ಯೋಜನೆ ಠೇವಣಿ ಅಥವಾ ಎಸ್​ಸಿಎಸ್​ಎಸ್ ಬಡ್ಡಿ ದರ ಈಗ ಶೇ 8 ಆಗಿದೆ. ಇದು ಬ್ಯಾಂಕ್​ಗಳು ಹಿರಿಯ ನಾಗರಿಕರ ಠೇವಣಿಗೆ ನೀಡುವ ಬಡ್ಡಿಗಿಂತಲೂ 50ರಿಂದ 75 ಮೂಲಾಂಶದಷ್ಟು ಹೆಚ್ಚಾಗಿದೆ.

SCSS Scheme: ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆ; ಎಸ್​ಸಿಎಸ್​ಎಸ್​ನಲ್ಲಿ ಹಿರಿಯ ನಾಗರಿಕರ ಠೇವಣಿಗೆ ಸಿಗುತ್ತೆ ಶೇ 8ರ ಬಡ್ಡಿ
ಸಾಂದರ್ಭಿಕ ಚಿತ್ರ
Follow us
| Updated By: ಗಣಪತಿ ಶರ್ಮ

Updated on: Jan 09, 2023 | 1:40 PM

ಹೊಸ ವರ್ಷದ ಆರಂಭದಲ್ಲಿ ಕೇಂದ್ರ ಸರ್ಕಾರವು ವಿವಿಧ ಸಣ್ಣ ಉಳಿತಾಯ ಯೋಜನೆಗಳ (Small Savings Scheme) ಬಡ್ಡಿ ದರ ಹೆಚ್ಚಳ (Interest Rate Hike) ಘೋಷಿಸಿತ್ತು. ಇದೀಗ ಪರಿಷ್ಕೃತ ಬಡ್ಡಿ ದರ ಚಾಲ್ತಿಗೆ ಬಂದಿದ್ದು, ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ (senior citizen savings scheme) ಹೂಡಿಕೆ ಮಾಡುವ ಮೂಲಕ ಶೇಕಡಾ 8ರ ವರೆಗೆ ಬಡ್ಡಿ ಪಡೆಯಬಹುದಾಗಿದೆ. ಒಂದು ವರ್ಷದ ಟೈಮ್ ಡಿಪಾಸಿಟ್ (time deposit) ಬಡ್ಡಿ ದರವನ್ನು ಶೇ 5.5ರಿಂದ ಶೇ 6.6ಕ್ಕೆ ಹೆಚ್ಚಿಸಲಾಗಿದೆ. ಇದು ಎಸ್​ಬಿಐ ಒಂದು ವರ್ಷದ ಟೈಮ್ ಡಿಪಾಸಿಟ್ ಬಡ್ಡಿಗಿಂತಲೂ (ಶೇ 5.75) ಹೆಚ್ಚಾಗಿದೆ.

ಎರಡು ವರ್ಷ ಅವಧಿಯ ಅಂಚೆ ಕಚೇರಿ ಡಿಪಾಸಿಟ್ ಯೋಜನೆ ಬಡ್ಡಿಯನ್ನು ಶೇ 5.7ರಿಂದ ಶೇ 6.8ಕ್ಕೆ ಹೆಚ್ಚಿಸಲಾಗಿದೆ. ಎಸ್​ಬಿಐನಲ್ಲಿ ಇದು ಶೇ 6.75ರಷ್ಟಿದೆ. ದೀರ್ಘಾವಧಿಗೆ, 5 ವರ್ಷಗಳ ಅಂಚೆ ಕಚೇರಿ ಉಳಿತಾಯ ಯೋಜನೆಯ ಬಡ್ಡಿಯನ್ನು ಶೇ 7ಕ್ಕೆ ಹೆಚ್ಚಿಸಲಾಗಿದೆ. ಎಸ್​​ಬಿಐನಲ್ಲಿ 5ರಿಂದ 10 ವರ್ಷ ಅವಧಿಯ ಠೇವಣಿಗೆ ಶೇ 6.25ರ ಬಡ್ಡಿಯಷ್ಟೇ ಇದೆ.

ಇದನ್ನೂ ಓದಿ: New Year Gift: ಹೊಸ ವರ್ಷಕ್ಕೆ ಗಿಫ್ಟ್; ಅಂಚೆ ಸೇರಿದಂತೆ ಹಲವು ಠೇವಣಿಗಳ ಬಡ್ಡಿ ದರ ಜನವರಿ 1ರಿಂದ ಹೆಚ್ಚಳ

ಹಿರಿಯ ನಾಗರಿಕರ ಉಳಿತಾಯ ಯೋಜನೆ ಠೇವಣಿ ಬಡ್ಡಿ ವಿವರ

ಹಿರಿಯ ನಾಗರಿಕರ ಉಳಿತಾಯ ಯೋಜನೆ ಠೇವಣಿ ಅಥವಾ ಎಸ್​ಸಿಎಸ್​ಎಸ್ ಬಡ್ಡಿ ದರ ಈಗ ಶೇ 8 ಆಗಿದೆ. ಇದು ಬ್ಯಾಂಕ್​ಗಳು ಹಿರಿಯ ನಾಗರಿಕರ ಠೇವಣಿಗೆ ನೀಡುವ ಬಡ್ಡಿಗಿಂತಲೂ 50ರಿಂದ 75 ಮೂಲಾಂಶದಷ್ಟು ಹೆಚ್ಚಾಗಿದೆ. 60 ವರ್ಷ ಮೇಲ್ಪಟ್ಟವರು ಈ ಠೇವಣಿ ಇಡಬಹುದಾಗಿದೆ. 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, 55 ವರ್ಷ ಮೇಲ್ಪಟ್ಟವರಾದರೆ ಸ್ವಯಂ ನಿವೃತ್ತಿ ಯೋಜನೆಯಡಿ ಠೇವಣಿ ಇಡಬಹುದಾಗಿದೆ. ನಿವೃತ್ತಿ ಸೌಲಭ್ಯ ದೊರೆತ ಒಂದು ತಿಂಗಳ ಒಳಗಾಗಿ ಠೇವಣಿ ಇಡದಿದ್ದರೆ ನಂತರ ಅವಕಾಶ ಸಿಗಲಾರದು ಎಂಬುದನ್ನು ಗಮನಿಸಬೇಕು.

ಈ ಠೇವಣಿಗೆ ಐದು ವರ್ಷಗಳ ಲಾಕ್​ ಇನ್ ಅವಧಿ ಇದೆ. ಠೇವಣಿ ಆರಂಭಿಸಿದ 3 ವರ್ಷಗಳ ನಂತರವಷ್ಟೇ ಲಾಕ್ ಇನ್ ಅವಧಿ ವಿಸ್ತರಣೆಗೆ ಮನವಿ ಸಲ್ಲಿಸಲು ಅವಕಾಶವಿದೆ. ಕನಿಷ್ಠ 1,000 ರೂ.ನಿಂದ 15 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ