AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

UPI 123Pay: ಇಂಟರ್ನೆಟ್ ಕನೆಕ್ಷನ್ ಇಲ್ಲದೇ ಯುಪಿಐ ಪೇಮೆಂಟ್ ಮಾಡುವುದು ಹೇಗೆ? ಇಲ್ಲಿದೆ 123ಪೇ ಡೀಟೇಲ್ಸ್

Feature Phone and UPI Payment: ಫೀಚರ್ ಫೋನ್​ಗಳಲ್ಲಿ ಯುಪಿಐ ಪೇಮೆಂಟ್ ಸಾಧ್ಯವಾಗಿಸುವ ನಿಟ್ಟಿನಲ್ಲಿ ಯುಪಿಐ 2.0 ವ್ಯವಸ್ಥೆ ತಂದಿದೆ. ಇದರ ವಿಸ್ತೃತ ಭಾಗವಾಗಿ ಯುಪಿಐ 123 ಪೇ ಎಂಬ ಫೀಚರ್ ಅನ್ನು ಜಾರಿ ಮಾಡಲಾಗಿದೆ. ಈ 123ಪೇ ಬಳಸುವ 4 ವಿಧಾನಗಳ ಬಗ್ಗೆ ಮಾಹಿತಿ ಇಲ್ಲಿದೆ.

UPI 123Pay: ಇಂಟರ್ನೆಟ್ ಕನೆಕ್ಷನ್ ಇಲ್ಲದೇ ಯುಪಿಐ ಪೇಮೆಂಟ್ ಮಾಡುವುದು ಹೇಗೆ? ಇಲ್ಲಿದೆ 123ಪೇ ಡೀಟೇಲ್ಸ್
ಫೀಚರ್ ಫೋನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 17, 2023 | 4:59 PM

Share

ನವದೆಹಲಿ: ಭಾರತದಲ್ಲಿ ಪೇಮೆಂಟ್ ಕ್ರಾಂತಿ (e-Payment) ಸಾಧ್ಯವಾಗಲು ಸ್ಮಾರ್ಟ್​ಫೋನ್ ಮಾರುಕಟ್ಟೆ ವಿಸ್ತರಿಸಿದ್ದೂ ಒಂದು ಪ್ರಮುಖ ಕಾರಣ. ಇದೀಗ ಸ್ಮಾರ್ಟ್​ಫೋನ್ ಬಳಸುವ ಅನೇಕ ಕೋಟಿ ಜನರು ಸುಲಭವಾಗಿ ಯುಪಿಐ ಪೇಮೆಂಟ್ ಮಾಡುತ್ತಿದ್ದಾರೆ. ಗುಡಿಸಲಿನಲ್ಲಿ ಇರುವ ಒಬ್ಬ ವ್ಯಕ್ತಿಯೂ ಇಂದು ಯುಪಿಐ ಪೇಮೆಂಟ್ ವ್ಯವಸ್ಥೆ ಅರಿತಿದ್ದಾನೆ. ಆದರೂ ಕೂಡ ಎಲ್ಲರ ಕೈಯಲ್ಲೂ ಸ್ಮಾರ್ಟ್​ಫೋನ್ ಇದೆ, ಎಲ್ಲರೂ ಡಿಜಿಟಲ್ ಪಾವತಿ ಮಾಡುತ್ತಾರೆ ಎನ್ನಲು ಆಗುವುದಿಲ್ಲ. ಒಂದು ಅಂದಾಜು ಪ್ರಕಾರ 40 ಕೋಟಿ ಭಾರತೀಯರು ಈಗಲೂ ಫೀಚರ್ ಫೋನ್​ಗಳನ್ನು ಬಳಸುತ್ತಾರಂತೆ. ಈ ಫೀಚರ್ ಫೋನ್​ಗಳಲ್ಲಿ ಇಂಟರ್ನೆಟ್ ಸೌಲಭ್ಯ ಸಾಮಾನ್ಯವಾಗಿ ಇರುವುದಿಲ್ಲ. ಈ ಫೀಚರ್ ಫೋನ್​ಗಳಲ್ಲಿ ಯುಪಿಐ ಪೇಮೆಂಟ್ ಸಾಧ್ಯವಾಗಿಸುವ ನಿಟ್ಟಿನಲ್ಲಿ ಯುಪಿಐ 2.0 ವ್ಯವಸ್ಥೆ ತಂದಿದೆ. ಇದರ ವಿಸ್ತೃತ ಭಾಗವಾಗಿ ಯುಪಿಐ 123 ಪೇ ಎಂಬ ಫೀಚರ್ ಅನ್ನು ಜಾರಿ ಮಾಡಲಾಗಿದೆ. ಇದು ಫೀಚರ್ ಫೋನ್​ನಲ್ಲೂ ಲಭ್ಯ ಇರುತ್ತದೆ, ಸ್ಮಾರ್ಟ್​ಫೋನ್​ನಲ್ಲೂ ಲಭ್ಯ ಇರುತ್ತದೆ. ಇಂಟರ್ನೆಟ್ ಸೌಲಭ್ಯ ಇಲ್ಲದಿದ್ದರೂ ಈ ಫೀಚರ್ ಬಳಸಿ ಯುಪಿಐ ಪೇಮೆಂಟ್ ಮಾಡಲು ಸಾಧ್ಯವಾಗುತ್ತದೆ. ಅಂತೆಯೇ ಇದು ಫೀಚರ್ ಫೋನ್​ಗೆ ಹೇಳಿ ಮಾಡಿಸಿದ ಫೀಚರ್ ಆಗಿದೆ.

ಯುಪಿಐ 123ಪೇ (123Pay) ಫೀಚರ್ ಮೂಲಕ ನಾಲ್ಕು ವಿಧಾನಗಳಲ್ಲಿ ಯುಪಿಐ ಪೇಮೆಂಟ್ ಮಾಡಲು ಅವಕಾಶ ಇದೆ. ಇದು ಇಂಗ್ಲೀಷ್ ಮತ್ತು ಹಿಂದಿ ಮಾತ್ರವಲ್ಲದೇ ಕನ್ನಡ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ ಇದೆ. ಹೀಗಾಗಿ, ಇಂಗ್ಲೀಷ್ ಭಾಷೆ ಗೊತ್ತಿಲ್ಲದವರೂ ತಮ್ಮದೇ ತಾಯ್ನುಡಿಯಲ್ಲಿ ಈ ಆ್ಯಪ್ ಅನ್ನು ಬಳಸಬಹುದು. ಆದರೆ, ಈ ಯುಪಿಐ 123ಪೇ ಅನ್ನು ಬಳಸಬೇಕಾದರೆ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯನ್ನು ಈ ಸೇವೆಗೆ ಜೋಡಿಕೆ ಮಾಡಬೇಕು. ಇದನ್ನು ಬ್ಯಾಂಕಿನ ಮುಖಾಂತರವೇ ಮಾಡಿಸಬೇಕು. ವೆರಿಫಿಕೇಶನ್ ಆದ ಬಳಿಕ ಗ್ರಾಹಕರು 123 ಪೇ ಆ್ಯಪ್ ಅನ್ನು ಬಳಸಬಹುದು.

ಫೀಚರ್ ಫೋನ್​ನಲ್ಲಿ ಯುಪಿಐ 123 ಪೇ ಬಳಸುವ ನಾಲ್ಕು ವಿಧಾನಗಳು

  1. ಮಿಸ್ಡ್ ಕಾಲ್
  2. ಯುಪಿಐ ಅ್ಯಪ್
  3. ಐವಿಆರ್ (ಇಂಟರಾಕ್ಟಿವ್ ವಾಯ್ಸ್ ರೆಸ್ಪಾನ್ಸ್)
  4. ಪ್ರಾಕ್ಸಿಮಿಟಿ ಸೌಂಡ್ ಪೇಮೆಂಟ್

ಇದನ್ನೂ ಓದಿUnlimited Data: ಜಿಯೋದಲ್ಲಿ 599 ರೂಗೆ ಅನ್​ಲಿಮಿಟೆಡ್ ಡಾಟಾ; ವೊಡಾಫೋನ್, ಏರ್​ಟೆಲ್, ಬಿಎಸ್ಸೆನ್ನೆಲ್​ನಲ್ಲಿ ಯಾವೆಲ್ಲಾ ಬೆಸ್ಟ್ ಪ್ಲಾನ್​ಗಳಿವೆ?

ಇಲ್ಲಿ ಯಾವುದಾದರೂ ಅಂಗಡಿಗೆ ಹೋಗಿ ಫೀಚರ್ ಫೋನ್ ಮೂಲಕ ಹಣ ಪಾವತಿಸಲು ಮಿಸ್ಡ್ ಕಾಲ್ ಸೌಲಭ್ಯ ಬಳಸಿಕೊಳ್ಳಬಹುದು. ಕಾಮನ್ ನಂಬರ್​ಗೆ ಮಿಸ್ಡ್ ಕಾಲ್ ಕೊಟ್ಟರೆ ಕರೆ ಕಟ್ ಆಗಿ ಅತ್ತಲಿಂದ ಕಾಲ್ ಬ್ಯಾಕ್ ಬರುತ್ತದೆ. ಆಗ ಹಣ ಪಾವತಿಯ ವಿವರ ನೀಡಿ ಯುಪಿಐ ಪಿನ್ ಟೈಪಿಸಿದರೆ ಪೇಮೆಂಟ್ ಆಗುತ್ತದೆ.

ಯುಪಿಐ ಆ್ಯಪ್ ಮೂಲಕ ಫೀಚರ್ ಫೋನ್​ನಿಂದ ಪೆಮೆಂಟ್:

ಇದು ಸಾಧ್ಯವಾಗಬೇಕಾದರೆ ಯುಪಿಐ 123ಪೇ ಆ್ಯಪ್ ಅನ್ನು ಫೀಚರ್ ಫೋನ್​ನಲ್ಲಿ ಇನ್​ಸ್ಟಾಲ್ ಮಾಡಿರಬೇಕು. ಸ್ಕ್ಯಾನ್ ಮಾಡಿ ಹಣ ಪಾವತಿಸುವ ಫೀಚರ್ ಹೊರತುಡಪಿಸಿ ಇತರ ಯುಪಿಐ ಆ್ಯಪ್​ಗಳಲ್ಲಿ ಇರುವ ಬಹುತೇಕ ಎಲ್ಲಾ ಫೀಚರ್​ಗಳು 123ಪೇ ಆ್ಯಪ್​ನಲ್ಲೂ ಇರುತ್ತದೆ. ಫಾಸ್​ಟ್ಯಾಗ್, ಎಲ್​ಪಿಜಿ ಪೇಮೆಂಟ್, ಎಲೆಕ್ಟ್ರಿಸಿಟಿ ಬಿಲ್ ಇತ್ಯಾದಿ ಸೇವೆಗೆ ಪೇಮೆಂಟ್ ಮಾಡಬಹುದು.

ಫೀಚರ್ ಫೋನ್​ನಲ್ಲಿ ಐವಿಆರ್ ಮೂಲಕ ಡಿಜಿಟಲ್ ಪೇಮೆಂಟ್

ಈ ವ್ಯವಸ್ಥೆಯಲ್ಲಿ ಗ್ರಾಹಕರು ಐವಿಆರ್​ಗೆ ನಿಗದಿತವಾದ ಫೋನ್ ನಂಬರ್​ಗೆ ಕರೆ ಮಾಡಬೇಕು. ಯುಪಿಐ ಪಿನ್ ದೃಢೀಕರಿಸಿದ ಬಳಿಕ ಫೋನ್​ನಲ್ಲಿ ಬರುವ ಸೂಚನೆಗೆ ಅನುಗುಣವಾಗಿ ಸ್ಪಂದಿಸುತ್ತಾ ಹೋಗಬೇಕು. ಈ ಐವಿಆರ್ ಮೂಲಕ ಯುಟಿಲಿಟಿ ಬಿಲ್, ಫಂಡ್ ಟ್ರಾನ್ಸ್​ಫರ್, ರೀಚಾರ್ಜ್ ಇತ್ಯಾದಿಗೆ ಗ್ರಾಹಕರು ಹಣ ಪಾವತಿಸಬಹುದು.

ಇದನ್ನೂ ಓದಿInfosys: ಭರ್ಜರಿ ಷೇರು ಡಿವಿಡೆಂಡ್ ಕೊಟ್ಟ ಇನ್ಫೋಸಿಸ್​ಗೆ ಸಂಕಷ್ಟ; ಕೆಲವೇ ಗಂಟೆಯಲ್ಲಿ ಷೇರುಪೇಟೆಯಲ್ಲಿ 75,000 ಕೋಟಿ ರೂ ನಷ್ಟ; ಏನು ಕಾರಣ?

ಫೀಚರ್ ಫೋನ್​ನಲ್ಲಿ ಪ್ರಾಕ್ಸಿಮಿಟಿ ಸೌಂಡ್ ಪೇಮೆಂಟ್ ವ್ಯವಸ್ಥೆ

ಯುಪಿಐ 123ಪೇ ಆ್ಯಪ್​ನ ಒಂದು ವೈಶಿಷ್ಟ್ಯ ಎಂದರೆ ಅದರ ಸೌಂಡ್ ವೇವ್ ಟೆಕ್ನಿಕ್. ಟಾಟಾ ಟ್ರಾನ್ಸ್​ಫರ್ ಮಾಡಬೇಕಾದ ಸಾಧನದ ಬಳಿ ಫೋನ್ ಇದ್ದರೆ ಸೌಂಡ್ ವೇವ್ ಟೆಕ್ನಿಕ್ ಮೂಲಕ ಡಾಟಾ ಟ್ರಾನ್ಸ್​ಫರ್ ಸಾಧ್ಯವಾಗುತ್ತದೆ.

ಆದರೆ, ಮೇಲಿನ ಕೆಲ ಫೀಚರ್​ಗಳು ಸ್ಮಾರ್ಟ್​ಫೋನ್​ನಲ್ಲಿರುವ ಸ್ಕ್ಯಾನ್ ಅಂಡ್ ಪೇ ಫೀಚರ್​ನಷ್ಟು ಸರಳವಲ್ಲ ಎಂಬುದೂ ನಿಜ. ಆದರೂ ಕೂಡ ಯುಪಿಐ 123ಪೇ ವ್ಯವಸ್ಥೆ ಬಂದ ಬಳಿಕ ಬಹಳಷ್ಟು ಫೀಚರ್ ಫೋನ್ ಬಳಕೆದಾರರಿಗೆ ಅನುಕೂಲವಾಗಿದೆಯಂತೆ. 124ಪೇ ಮೂಲಕ ಲಕ್ಷಾಂತರ ಮಂದಿ ಗ್ಯಾಸ್ ಬುಕ್ ಮಾಡುವುದು ಇತ್ಯಾದಿ ಸೇವೆ ಬಳಸಿದ್ದಾರೆ ಎನ್ನುವ ಮಾಹಿತಿ ಲಭ್ಯ ಇದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇದ್ರೆ ನೆಮ್ಮದಿಯಾಗ್ ಇರ್ಬೇಕ್: ದರ್ಶನ್ ಪರಿಸ್ಥಿತಿ ಬಗ್ಗೆ ಕೆ. ಮಂಜು ಮಾತು
ಇದ್ರೆ ನೆಮ್ಮದಿಯಾಗ್ ಇರ್ಬೇಕ್: ದರ್ಶನ್ ಪರಿಸ್ಥಿತಿ ಬಗ್ಗೆ ಕೆ. ಮಂಜು ಮಾತು
ವಿಷ್ಣು ಸಮಾಧಿ ಮರು ನಿರ್ಮಾಣಕ್ಕೆ ಬಾಲಣ್ಣ ಪುತ್ರಿ ಗೀತಾ ಜಾಗ ಕೊಡ್ತಾರಾ?
ವಿಷ್ಣು ಸಮಾಧಿ ಮರು ನಿರ್ಮಾಣಕ್ಕೆ ಬಾಲಣ್ಣ ಪುತ್ರಿ ಗೀತಾ ಜಾಗ ಕೊಡ್ತಾರಾ?
ಮೃತ ಮತದಾರರ ಜತ ಟೀ ಕುಡಿಯುವಂತೆ ಮಾಡಿದ ಆಯೋಗಕ್ಕೆ ಧನ್ಯವಾದ:ರಾಹುಲ್​
ಮೃತ ಮತದಾರರ ಜತ ಟೀ ಕುಡಿಯುವಂತೆ ಮಾಡಿದ ಆಯೋಗಕ್ಕೆ ಧನ್ಯವಾದ:ರಾಹುಲ್​
ಶಿವಕುಮಾರ್ ಸಿಎಂ ಆಗ್ತಾರಾ ಅಂತ ಕೇಳಿದರೆ ಇಕ್ಬಾಲ್ ಹುಸ್ಸೇನ್ ಮುಗುಳ್ನಕ್ಕರು
ಶಿವಕುಮಾರ್ ಸಿಎಂ ಆಗ್ತಾರಾ ಅಂತ ಕೇಳಿದರೆ ಇಕ್ಬಾಲ್ ಹುಸ್ಸೇನ್ ಮುಗುಳ್ನಕ್ಕರು
ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ