AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC Jeevan Tarun: 8 ವರ್ಷ ಹೂಡಿಕೆ ಮಾಡಿದರೆ 7 ಲಕ್ಷ ರೂ ರಿಟರ್ನ್ ಕೊಡುವ ಜೀವನ್ ತರುಣ್ ಸ್ಕೀಮ್

Children's Policy From LIC: ಎಲ್​ಐಸಿ ಜೀವನ್ ತರುಣ್ ಪಾಲಿಸಿ ಮಾಡಿಸಲು ಮಗುವಿನ ವಯಸ್ಸು ಕನಿಷ್ಠ 3 ತಿಂಗಳು ಆಗಿರಬೇಕು. ಗರಿಷ್ಠ ವಯೋಮಿತಿ 12 ವರ್ಷ. ಅಂದರೆ 12 ವರ್ಷದೊಳಗಿನ ಮಕ್ಕಳ ಹೆಸರಿನಲ್ಲಿ ಎಲ್​ಐಸಿ ಜೀವನ್ ತರುಣ್ ಪ್ಲಾನ್ ಮಾಡಿಸಬಹುದು.

LIC Jeevan Tarun: 8 ವರ್ಷ ಹೂಡಿಕೆ ಮಾಡಿದರೆ 7 ಲಕ್ಷ ರೂ ರಿಟರ್ನ್ ಕೊಡುವ ಜೀವನ್ ತರುಣ್ ಸ್ಕೀಮ್
ಹೂಡಿಕೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 17, 2023 | 2:57 PM

Share

ಮುಖ್ಯಾಂಶಗಳು

  • 3 ತಿಂಗಳಿಂದ 12 ವರ್ಷದೊಳಗಿನ ಮಕ್ಕಳ ಹೆಸರಿನಲ್ಲಿ ಎಲ್​ಐಸಿ ಜೀವನ್ ತರುಣ್ ಪಾಲಿಸಿ ಮಾಡಿಸಬಹುದು. ಯೌವ್ವನಾವಸ್ಥೆಯಲ್ಲಿ ಮಗುವಿನ ಭದ್ರತೆಗಾಗಿ ಇರುವ ಸ್ಕೀಮ್ ಇದು.
  • ಗರಿಷ್ಠ 20 ವರ್ಷದವರೆಗೆ ಪ್ರೀಮಿಯಮ್ ಕಟ್ಟಬಹುದು. 12 ವರ್ಷಕ್ಕೆ ಪಾಲಿಸಿ ಮಾಡಿಸಿದರೆ 8 ವರ್ಷ ಪ್ರೀಮಿಯಮ್ ಕಟ್ಟಬೇಕು.
  • ಮಗುವಿನ ವಯಸ್ಸು 20 ವರ್ಷ ಆದಾಗ ಪ್ರೀಮಿಯಮ್ ಕಟ್ಟುವಂತಿಲ್ಲ. 25 ನೇ ವಯಸ್ಸು ಬಂದಾಗ ಮಗು ಈ ಪಾಲಿಸಿ ಮೊತ್ತ ಹಿಂಪಡೆಯಬಹುದು.

ಬೆಂಗಳೂರು: ದೇಶದಲ್ಲಿ ಈಗ ತರಹಾವೇರಿ ಹೂಡಿಕೆ (Savings) ಆಯ್ಕೆಗಳಿವೆ. ರಿಸ್ಕ್ ತೆಗೆದುಕೊಳ್ಳುವವರಿಗೆ ಹೂಡಿಕೆಯ ಬೇರೆ ಲೋಕವೇ ಇದೆ. ರಿಸ್ಕ್ ಬೇಡ, ಹಣ ಸೇಫ್ ಆಗಿರುವುದು ಮುಖ್ಯ ಎನ್ನುವವರಿಗೂ ಬಹಳ ಹೂಡಿಕೆ ಯೋಜನೆಗಳಿವೆ. ಹೆಚ್ಚಿನ ಜನರು ಈಗಲೂ ಅಂಚೆ ಕಚೇರಿ, ಎಲ್​ಐಸಿ, ಬ್ಯಾಂಕ್ ಎಫ್​ಡಿ ಯೋಜನೆಗಳಲ್ಲೇ ಹೆಚ್ಚಿನ ಉಳಿತಾಯ ಹಣ ನಿಯೋಜಿಸುತ್ತಾರೆ. ಎಲ್​ಐಸಿ ಸ್ಕೀಮ್​ಗಳು (LIC Plans) ಈಗಲೂ ಜನರಿಗೆ ನೆಚ್ಚಿನ ಹೂಡಿಕೆ ಯೋಜನೆಗಳೆನಿಸಿವೆ. ಎಲ್​ಐಸಿಯಲ್ಲಿ ಬಹಳ ವ್ಯಾಪಕವಾದ ಸ್ಕೀಮ್​ಗಳಿವೆ. ಪಿಂಚಣಿ, ಮಕ್ಕಳ ಭವಿಷ್ಯ, ಜೀವ ವಿಮೆ, ಹಣ ವೃದ್ಧಿ ಇತ್ಯಾದಿ ಅಗತ್ಯಗಳಿಗೆ ತಕ್ಕಂತಹ ಸ್ಕೀಮ್​ಗಳಿವೆ. ಹೀಗಾಗಿ, ಭಾರತೀಯ ಜೀವ ವಿಮಾ ನಿಗಮದ ಪಾಲಿಸಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಮಕ್ಕಳ ಭವಿಷ್ಯಕ್ಕೆ ಎಲ್​ಐಸಿಯಲ್ಲಿ ಕೆಲವಾರು ಪ್ರಮುಖ ಪ್ಲಾನ್​ಗಳಿವೆ. ಇದರಲ್ಲಿ ಪ್ರಮುಖವಾಗಿ ಗಮನ ಸೆಳೆಯುವುದು ಜೀವನ್ ತರುಣ್ ಪಾಲಿಸಿ.

ಎಲ್​ಐಸಿ ಜೀವನ್ ತರುಣ್ ಪಾಲಿಸಿ ವಿವರ

ಇದು ನಾನ್ಲಿಂಕ್ಡ್ ಎಲ್​ಐಸಿ ಪ್ಲಾನ್. ನಾನ್ ಲಿಂಕ್ಡ್ ಎಂದರೆ ಷೇರು ಮಾರುಕಟ್ಟೆಗೆ ಜೋಡಿತವಾಗದ ನಿರ್ದಿಷ್ಟ ರಿಟರ್ನ್ ಕೊಡುವ ಸ್ಕೀಮ್, ಎಲ್​ಐಸಿ ಜೀವನ್ ತರುಣ್ ಪ್ಲಾನ್ (LIC Jeevan Tarun) ಮಕ್ಕಳಿಗೆಂದು ರೂಪಿಸಲಾಗಿರುವ ಸ್ಕೀಮ್ ಆಗಿದೆ. ಮಗುವಿನ ಭವಿಷ್ಯ, ಅವರ ಶಿಕ್ಷಣ ವೆಚ್ಚ, ಮದುವೆ ಖರ್ಚು ಇತ್ಯಾದಿ ಗಮನದಲ್ಲಿಟ್ಟುಕೊಂಡು ಈ ಸ್ಕೀಮ್ ತರಲಾಗಿದೆ.

ಇದನ್ನೂ ಓದಿGold at Home: ಚಿನ್ನ ಪ್ರಿಯರೇ ಇಲ್ನೋಡಿ..! ಮನೆಯಲ್ಲಿ ನೀವು ಎಷ್ಟು ಚಿನ್ನ ಇಟ್ಟುಕೊಳ್ಳಬಹುದು ಗೊತ್ತಾ? ಸರ್ಕಾರದ ನಿಯಮ ತಿಳಿದಿರಿ

ಎಲ್​ಐಸಿ ಜೀವನ್ ತರುಣ್ ಪಾಲಿಸಿ ಮಾಡಿಸಲು ಮಗುವಿನ ವಯಸ್ಸು ಕನಿಷ್ಠ 3 ತಿಂಗಳು ಆಗಿರಬೇಕು. ಗರಿಷ್ಠ ವಯೋಮಿತಿ 12 ವರ್ಷ. ಅಂದರೆ 12 ವರ್ಷದೊಳಗಿನ ಮಕ್ಕಳ ಹೆಸರಿನಲ್ಲಿ ಎಲ್​ಐಸಿ ಜೀವನ್ ತರುಣ್ ಪ್ಲಾನ್ ಮಾಡಿಸಬಹುದು. ಮಗು 20 ವರ್ಷ ವಯಸ್ಸು ಆಗುವವರೆಗೂ ಪ್ರತೀ ವರ್ಷ ಪ್ರೀಮಿಯಮ್ ಕಟ್ಟಬೇಕು. ಮಗುವಿನ ವಯಸ್ಸು 25 ವರ್ಷ ಆದಾಗ ಎಲ್ಲಾ ಹಣವನ್ನೂ ಹಿಂಪಡೆಯಬಹುದು. ಸರ್ವೈವಲ್ ಬೆನಿಫಿಟ್ ಆಯ್ಕೆ ಪ್ರಕಾರ ಮಗು 20ರಿಂದ 24ನೇ ವಯಸ್ಸಿನಲ್ಲಿ ಪ್ರತೀ ವರ್ಷ ನಿರ್ದಿಷ್ಟ ಮೊತ್ತದ ಹಣವನ್ನೂ ಪಡೆಯಲು ಸಾಧ್ಯ. ಸರ್ವೈವಲ್ ಬೆನಿಫಿಟ್ ಮೊತ್ತ ಎಷ್ಟು ಎಂಬುದನ್ನು ಪಾಲಿಸಿ ಮಾಡಿಸುವಾಗಲೇ ನಿರ್ದಿಷ್ಟಪಡಿಸಬೇಕು. ಶೇ. 5ರಿಂದ ಶೇ. 15ರಷ್ಟನ್ನು ಸರ್ವೈವಲ್ ಬೆನಿಫಿಟ್ ಮೊತ್ತವನ್ನು ಮಗು ಪಡೆಯಬಹುದು.

ಎಲ್​ಐಸಿ ಜೀವನ್ ತರುಣ್ ಪಾಲಿಸಿ ಉದಾಹರಣೆ

  • ಪಾಲಿಸಿ ಮಾಡಿಸುವ ಮಗುವಿನ ವಯಸ್ಸು: 5ನೇ ವರ್ಷ
  • ಪಾಲಿಸಿ ಅವಧಿ: 20 ವರ್ಷ
  • ಪ್ರೀಮಿಯಮ್ ಪಾವತಿಸುವ ವರ್ಷಗಳು: 15 ವರ್ಷ
  • ಪ್ರೀಮಿಯಮ್ ಕಟ್ಟುವುದು: ವರ್ಷಕ್ಕೆ
  • ಪ್ರೀಮಿಯಮ್ ಮೊತ್ತ: 6,375 + ತೆರಿಗೆ
  • ಪಾಲಿಸಿ ಮೊತ್ತ: 1,00,000 ರೂ

ಇದನ್ನೂ ಓದಿUnlimited Data: ಜಿಯೋದಲ್ಲಿ 599 ರೂಗೆ ಅನ್​ಲಿಮಿಟೆಡ್ ಡಾಟಾ; ವೊಡಾಫೋನ್, ಏರ್​ಟೆಲ್, ಬಿಎಸ್ಸೆನ್ನೆಲ್​ನಲ್ಲಿ ಯಾವೆಲ್ಲಾ ಬೆಸ್ಟ್ ಪ್ಲಾನ್​ಗಳಿವೆ?

ಪ್ರೀಮಿಯಮ್ ಅನ್ನು ನೀವು ವರ್ಷಕ್ಕೆ ಬೇಕಾದರೂ ಕಟ್ಟಬಹುದು. ತಿಂಗಳಿಗೆ, ಮೂರು ತಿಂಗಳಿಗೆ ಅಥವಾ ಆರು ತಿಂಗಳಿಗೊಮ್ಮೆಯೂ ಕಟ್ಟಡಬಹುದು. ಪ್ರೀಮಿಯಮ್ ಮೊತ್ತ ಹೆಚ್ಚಿದಷ್ಟೂ ಪಾಲಿಸಿ ಮೊತ್ತವೂ ಹೆಚ್ಚುತ್ತದೆ.

ಎಂಟು ವರ್ಷ ಕಟ್ಟಿದರೆ 7 ಲಕ್ಷ ರೂ ಪಡೆಯುವುದು ಹೇಗೆ?

ಇನ್ನು, ಮಗು 12ನೇ ವರ್ಷದ ವಯಸ್ಸಿಗೆ ಬಂದಾಗ ನೀವು ಎಲ್​ಐಸಿ ಜೀವನ್ ತರುಣ್ ಪಾಲಿಸಿ ಮಾಡಿಸುತ್ತಿದ್ದೀರೆಂದು ಇಟ್ಟುಕೊಳ್ಳಿ. ಆಗ ನೀವು ಪ್ರೀಮಿಯಮ್ ಕಟ್ಟುವ ಅವಧಿ 8 ವರ್ಷದ್ದಾಗಿರುತ್ತದೆ. ವರ್ಷಕ್ಕೆ 54,000 ರೂನಷ್ಟು ವಾರ್ಷಿಕ ಪ್ರೀಮಿಯಮ್ ಇರುತ್ತದೆ. ಅಂದರೆ ಪ್ರತೀ ದಿನ 150 ರೂ ಸೇರಿಸುತ್ತಾ ಹೋದರೆ ವರ್ಷಕ್ಕೆ 54,000 ರೂ ಆಗುತ್ತದೆ. ಈ ರೀತಿ ಮಗುವಿನ ವಯಸ್ಸು 20 ಆಗುವವರೆಗೂ, ಅಂದರೆ 8 ವರ್ಷದವರೆಗೂ ಕಟ್ಟಬೇಕು. ಒಟ್ಟು 4.32 ಲಕ್ಷ ರುಪಾಯಿ ಜಮೆ ಆಗುತ್ತದೆ. ಇಲ್ಲಿಗೆ ಪ್ರೀಮಿಯಮ್ ಕಟ್ಟುವುದನ್ನು ನಿಲ್ಲಿಸಬೇಕು. ಇದಾಗಿ ಐದು ವರ್ಷದ ಬಳಿಕ 2.47 ಲಕ್ಷ ರೂ ಹೆಚ್ಚುವರಿ ಅಥವಾ ಬೋನಸ್ ಹಣ ಜಮೆ ಆಗುತ್ತದೆ. ಮಗುವಿನ ವಯಸ್ಸು 25 ವರ್ಷ ಆದಾಗ ಪಾಲಿಸಿಯಿಂದ ಒಟ್ಟು 7 ಲಕ್ಷ ರೂನಷ್ಟು ಪಾಲಿಸಿ ಹಣ ರಿಟರ್ನ್ ಬರುತ್ತದೆ.

ಬಹುತೇಕ ಎಲ್​ಐಸಿ ಸ್ಕೀಮ್​ಗಳಲ್ಲಿರುವಂತೆ ಇದರಲ್ಲೂ ಕೂಡ ಸಾಲ ಸೌಲಭ್ಯ ಇರುತ್ತದೆ. ಪಾಲಿಸಿ ಸರ್ಟಿಫಿಕೇಟ್ ಅಡವಿಟ್ಟು ಸಾಲ ಪಡೆಯಬಹುದು. ಈ ಸೌಲಭ್ಯ ಪಡೆಯಲು ಕನಿಷ್ಠ 2 ವರ್ಷಗಳಾದರೂ ಪ್ರೀಮಿಯಮ್ ಕಟ್ಟಿದ್ದಿರಬೇಕು. ಆವರೆಗೂ ಕಟ್ಟಲಾದ ಪ್ರೀಮಿಯಮ್ ಮೊತ್ತಕ್ಕೆ ಸಮೀಪದಷ್ಟು ಹಣವನ್ನು ಸಾಲವಾಗಿ ಪಡೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:57 pm, Mon, 17 April 23

Follow Us
ಪತ್ನಿ, ತಮ್ಮನ ಜತೆ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ತೆರಳಿ ಡಿಕೆಶಿ ಮಾತುಕತೆ
ಪತ್ನಿ, ತಮ್ಮನ ಜತೆ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ತೆರಳಿ ಡಿಕೆಶಿ ಮಾತುಕತೆ
ರಾಮನಗರದ ಕಲ್ಯಾಣ ಮಂಟಪದಲ್ಲಿ SIR ಆರೋಪಕ್ಕೆ ಗೃಹ ಸಚಿವ ಖರ್ಗೆ ಏನಂದ್ರು ನೋಡಿ
ರಾಮನಗರದ ಕಲ್ಯಾಣ ಮಂಟಪದಲ್ಲಿ SIR ಆರೋಪಕ್ಕೆ ಗೃಹ ಸಚಿವ ಖರ್ಗೆ ಏನಂದ್ರು ನೋಡಿ
ಮಳೆಗಾಗಿ ವಿಭಿನ್ನ ಹರಕೆ: ದೇವಿ ದೇಗುಲದಲ್ಲಿ ರಾತ್ರಿಪೂರ್ತಿ ಭಜನೆ
ಮಳೆಗಾಗಿ ವಿಭಿನ್ನ ಹರಕೆ: ದೇವಿ ದೇಗುಲದಲ್ಲಿ ರಾತ್ರಿಪೂರ್ತಿ ಭಜನೆ
ಗೃಹಜ್ಯೋತಿ ಪರಿಷ್ಕರಣೆ ಅಲ್ಲ; ಇದು ಮಾಹಿತಿ ಸಂಗ್ರಹ ಅಷ್ಟೇ ಎಂದ ಚೆಸ್ಕಾಂ MD
ಗೃಹಜ್ಯೋತಿ ಪರಿಷ್ಕರಣೆ ಅಲ್ಲ; ಇದು ಮಾಹಿತಿ ಸಂಗ್ರಹ ಅಷ್ಟೇ ಎಂದ ಚೆಸ್ಕಾಂ MD
ಗೃಹ ಸಚಿವರ ತವರಲ್ಲೇ ಪೊಲೀಸ್ ಠಾಣೆಯಿಂದಲೇ ಪೋಕ್ಸೋ ಕೇಸ್ ಆರೋಪಿ ಪರಾರಿ!
ಗೃಹ ಸಚಿವರ ತವರಲ್ಲೇ ಪೊಲೀಸ್ ಠಾಣೆಯಿಂದಲೇ ಪೋಕ್ಸೋ ಕೇಸ್ ಆರೋಪಿ ಪರಾರಿ!
ಫುಟ್​ಪಾತ್ ವ್ಯಾಪಾರಿಗಳಿಗೆ ಮತ್ತೆ ಸಚಿವರ ಖಡಕ್ ವಾರ್ನಿಂಗ್
ಫುಟ್​ಪಾತ್ ವ್ಯಾಪಾರಿಗಳಿಗೆ ಮತ್ತೆ ಸಚಿವರ ಖಡಕ್ ವಾರ್ನಿಂಗ್
ಇಂದು ಈ ರಾಶಿಯವರು ಕೋಪ, ಆವೇಶಗಳನ್ನು ಬದಿಗಿಟ್ಟರೆ ಕೆಲಸ ಕಾರ್ಯಗಳಲ್ಲಿ ಶುಭ
ಇಂದು ಈ ರಾಶಿಯವರು ಕೋಪ, ಆವೇಶಗಳನ್ನು ಬದಿಗಿಟ್ಟರೆ ಕೆಲಸ ಕಾರ್ಯಗಳಲ್ಲಿ ಶುಭ
1800 ಕಿ.ಮೀ ಸೈಕಲ್ ಜರ್ನಿ; ಅಭಿಮಾನಿಯ ಅಭಿಮಾನಕ್ಕೆ ಹಾರ್ದಿಕ್ ಫಿದಾ
1800 ಕಿ.ಮೀ ಸೈಕಲ್ ಜರ್ನಿ; ಅಭಿಮಾನಿಯ ಅಭಿಮಾನಕ್ಕೆ ಹಾರ್ದಿಕ್ ಫಿದಾ
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್
ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್