AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Foxconn: ದಕ್ಷಿಣ ಆಯ್ತು, ಉತ್ತರಕ್ಕೆ ಕಾಲಿಡುತ್ತಿರುವ ಐಫೋನ್ ಫ್ಯಾಕ್ಟರಿ; ಬೆಂಗಳೂರಿನದಕ್ಕಿಂತಲೂ ದೊಡ್ಡ ಘಟಕ ನಿರ್ಮಿಸಲಿದೆ ಫಾಕ್ಸ್​​ಕಾನ್

300 acre iPhone manufacturing unit of Foxconn at Greater Noida: ಭಾರತದಲ್ಲಿ ಆ್ಯಪಲ್ ಕಂಪನಿಯ ಉತ್ಪನ್ನಗಳ ತಯಾರಿಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಆಗಲಿದೆ. ತಮಿಳುನಾಡು, ಕರ್ನಾಟಕ, ತೆಲಂಗಾಣ ಬಳಿಕ ಉತ್ತರಪ್ರದೇಶದಲ್ಲೂ ಐಫೋನ್ ಫ್ಯಾಕ್ಟರಿ ಶುರುವಾಗುವ ಸಾಧ್ಯತೆ ಇದೆ. ಆ್ಯಪಲ್​​ಗೆ ಐಫೋನ್ ತಯಾರಿಸಿಕೊಡುವ ಫಾಕ್ಸ್​​ಕಾನ್ ಗ್ರೇಟರ್ ನೋಯ್ಡಾದಲ್ಲಿ ಘಟಕ ತಯಾರಿಸಲು 300 ಎಕರೆ ಜಾಗ ಹುಡುಕುತ್ತಿದೆ.

Foxconn: ದಕ್ಷಿಣ ಆಯ್ತು, ಉತ್ತರಕ್ಕೆ ಕಾಲಿಡುತ್ತಿರುವ ಐಫೋನ್ ಫ್ಯಾಕ್ಟರಿ; ಬೆಂಗಳೂರಿನದಕ್ಕಿಂತಲೂ ದೊಡ್ಡ ಘಟಕ ನಿರ್ಮಿಸಲಿದೆ ಫಾಕ್ಸ್​​ಕಾನ್
ಫಾಕ್ಸ್​​ಕಾನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 14, 2025 | 7:51 PM

ನವದೆಹಲಿ, ಏಪ್ರಿಲ್ 14: ಆ್ಯಪಲ್ ಕಂಪನಿಯ ಅತಿದೊಡ್ಡ ತಯಾರಿಕಾ ಸಂಸ್ಥೆಯಾದ ಫಾಕ್ಸ್​​ಕಾನ್ (Foxconn) ಭಾರತದಲ್ಲಿ ತನ್ನ ಉತ್ಪಾದನಾ ಸಾಮರ್ಥ್ಯ (Manufacturing capacity) ಮತ್ತಷ್ಟು ಹೆಚ್ಚಿಸುತ್ತಿದೆ. ತಮಿಳುನಾಡಿನಲ್ಲಿ ಬೃಹತ್ ಫ್ಯಾಕ್ಟರಿ ಹೊಂದಿರುವ ಫಾಕ್ಸ್​​ಕಾನ್, ಕರ್ನಾಟಕ ಹಾಗೂ ತೆಲಂಗಾಣದಲ್ಲೂ ಘಟಕಗಳನ್ನು ತೆರೆಯುತ್ತಿದೆ. ಇದೇ ವೇಳೆ, ಮೊದಲ ಬಾರಿಗೆ ಉತ್ತರ ಭಾರತಕ್ಕೂ ಅದು ಅಡಿ ಇಡುತ್ತಿದೆ. ರಾಷ್ಟ್ರರಾಜಧಾನಿ ದೆಹಲಿಗೆ ಸಮೀಪದಲ್ಲಿರುವ, ಉತ್ತರಪ್ರದೇಶದ ವ್ಯಾಪ್ತಿಗೆ ಬರುವ ಗ್ರೇಟರ್ ನೋಯ್ಡಾದಲ್ಲಿ ಫಾಕ್ಸ್​​ಕಾನ್ ಒಂದು ಘಟಕ ಸ್ಥಾಪಿಸಲು ಪ್ರಯತ್ನಿಸುತ್ತಿದೆ.

ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಬಂದ ವರದಿ ಪ್ರಕಾರ ಯಮುನಾ ಎಕ್ಸ್​​ಪ್ರೆಸ್​​ವೇ ಬಳಿ 300 ಎಕರೆಗಿಂತ ದೊಡ್ಡ ಜಾಗವನ್ನು ಫಾಕ್ಸ್​​ಕಾನ್ ಹುಡುಕುತ್ತಿದೆ. ಅಷ್ಟು ದೊಡ್ಡ ಎಕರೆ ಜಾಗ ಸಿಕ್ಕರೆ ಭಾರತದಲ್ಲಿ ಫಾಕ್ಸ್​​ಕಾನ್​​ನ ಅತಿದೊಡ್ಡ ಫ್ಯಾಕ್ಟರಿ ಸ್ಥಳ ಎನಿಸಲಿದೆ. ಚೆನ್ನೈ ಬಳಿ ಇರುವ ಅದರ ಫ್ಯಾಕ್ಟರಿ ದೊಡ್ಡದಿದೆ.

ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ 300 ಎಕರೆ ಜಮೀನನ್ನು ಫಾಕ್ಸ್​​ಕಾನ್​​ಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಚೀನಾದಲ್ಲಿರುವ ತನ್ನ ಘಟಕ ಬಿಟ್ಟರೆ ಬೆಂಗಳೂರಿನದ್ದು ಸದ್ಯ ಫಾಕ್ಸ್​​ಕಾನ್​​ಗೆ ಅತಿದೊಡ್ಡ ಮ್ಯಾನುಫ್ಯಾಕ್ಚರಿಂಗ್ ಯುನಿಟ್ ಎನಿಸಿದೆ. ಈಗ ನೋಯ್ಡಾದಲ್ಲಿ ಬೆಂಗಳೂರಿನದಕ್ಕಿಂತಲೂ ದೊಡ್ಡ ಘಟಕ ನಿರ್ಮಾಣವಾಗಬಹುದು.

ಇದನ್ನೂ ಓದಿ
Image
ಭಾರತದಲ್ಲಿ ಶೇ. 20 ಐಫೋನ್ ಉತ್ಪಾದನೆ?
Image
ಭಾರತದಲ್ಲಿ ಸ್ವಂತವಾಗಿ 25 ಚಿಪ್​ಸೆಟ್​ಗಳ ಅಭಿವೃದ್ಧಿ
Image
ಶೇ. 15ರ ವೇಗದಲ್ಲಿ ಬೆಳೆಯುತ್ತಿರುವ ಸೆಮಿಕಂಡಕ್ಟರ್ ಮಾರುಕಟ್ಟೆ
Image
ಅಕ್ಕೋರ್, ಇಂಟರ್​​ಗ್ಲೋಬ್​​ನಿಂದ ಬೃಹತ್ ಹಾಸ್ಪಿಟಾಲಿಟಿ ಪ್ಲಾಟ್​​ಫಾರ್ಮ್

ಇದನ್ನೂ ಓದಿ: ಮೆಹುಲ್ ಚೋಕ್ಸಿ, ನೀರವ್ ಮೋದಿ 13,000 ಕೋಟಿ ರೂ ಪಂಗನಾಮ ಹಾಕಿ ದೇಶ ಬಿಟ್ಟುಹೋದ ಕಥೆ

ಫಾಕ್ಸ್​​ಕಾನ್​​ನ ಸೆಮಿಕಂಡಕ್ಟರ್ ಅಸೆಂಬ್ಲಿ ಘಟಕವೂ ಇಲ್ಲೇ

ಎಚ್​​ಸಿಎಲ್ ಮತ್ತು ಫಾಕ್ಸ್​​ಕಾನ್ ಸಂಸ್ಥೆಗಳು ಜಂಟಿಯಾಗಿ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ ಯುನಿಟ್ ಸ್ಥಾಪಿಸುತ್ತಿವೆ. ಇದಕ್ಕಾಗಿ ಇದೇ ಯಮುನಾ ಎಕ್ಸ್​​ಪ್ರೆಸ್​ವೇ ವಲಯದಲ್ಲಿ 50 ಎಕರೆ ಜಾಗ ಪಡೆಯಲಾಗಿದೆ. ಈ ಸೆಮಿಕಂಡಕ್ಟರ್ ಯೋಜನೆಗೆ ಸದ್ಯ ಸರ್ಕಾರದಿಂದ ಅನುಮೋದನೆಯಷ್ಟೇ ಬಾಕಿ ಇದೆ.

ಈಗ ಅದೇ ವಲಯದಲ್ಲಿ ಐಫೋನ್ ಅಸೆಂಬ್ಲಿಂಗ್ ಯುನಿಟ್ ಅನ್ನು ಫಾಕ್ಸ್​​ಕಾನ್ ತೆರೆಯಲು ಹೊರಟಿದೆ. ಈ ಮೂಲಕ ಭಾರತದಲ್ಲಿ ಫಾಕ್ಸ್​​ಕಾನ್​​ನ ಮ್ಯಾನುಫ್ಯಾಕ್ಚರಿಂಗ್ ಸಾಮರ್ಥ್ಯ ಮತ್ತಷ್ಟು ಹೆಚ್ಚಲಿದೆ.

ಇದನ್ನೂ ಓದಿ: ಕ್ಷಣಮಾತ್ರದಲ್ಲಿ ಹಲವು ಡ್ರೋನ್ ಹೊಡೆದುರುಳಿಸಬಲ್ಲ ಲೇಸರ್ ವೆಪನ್ ಸಿಸ್ಟಂ ಭಾರತದ ಬತ್ತಳಿಕೆಯಲ್ಲಿ

ಆ್ಯಪಲ್ ಕಂಪನಿಯ ಗುರಿ ಸಾಧನೆಯತ್ತ ಮತ್ತೊಂದು ಹೆಜ್ಜೆ

ಆ್ಯಪಲ್ ಕಂಪನಿ ತನ್ನ ಕಂಪನಿಯ ಉತ್ಪನ್ನಗಳನ್ನು ಭಾರತದಲ್ಲಿ ಹೆಚ್ಚೆಚ್ಚು ತಯಾರಿಸುವ ಗುರಿ ಹೊಂದಿದೆ. ಚೀನಾದಲ್ಲಿ ಈಗಲೂ ಕೂಡ ಅತಿಹೆಚ್ಚು ಐಫೋನ್​​ಗಳು ತಯಾರಾಗುತ್ತಿವೆಯಾದರೂ, ಭಾರತದಲ್ಲಿ ಶೇ. 20ರಷ್ಟು ಐಫೋನ್​​ಗಳು ತಯಾರಾಗುವ ಮಟ್ಟಕ್ಕೆ ಇಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿದೆ. ನೋಯ್ಡಾದಲ್ಲೂ ಫಾಕ್ಸ್​​ಕಾನ್ ಘಟಕ ಕಾರ್ಯನಿರ್ವಹಣೆ ಆರಂಭಗೊಂಡ ಬಳಿಕ ಭಾರತದಲ್ಲಿ ಐಫೋನ್ ತಯಾರಿಕೆ ಶೇ. 25ಕ್ಕೆ ಏರುವುದರಲ್ಲಿ ಅಚ್ಚರಿ ಇಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ