AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Foxconn: ದಕ್ಷಿಣ ಆಯ್ತು, ಉತ್ತರಕ್ಕೆ ಕಾಲಿಡುತ್ತಿರುವ ಐಫೋನ್ ಫ್ಯಾಕ್ಟರಿ; ಬೆಂಗಳೂರಿನದಕ್ಕಿಂತಲೂ ದೊಡ್ಡ ಘಟಕ ನಿರ್ಮಿಸಲಿದೆ ಫಾಕ್ಸ್​​ಕಾನ್

300 acre iPhone manufacturing unit of Foxconn at Greater Noida: ಭಾರತದಲ್ಲಿ ಆ್ಯಪಲ್ ಕಂಪನಿಯ ಉತ್ಪನ್ನಗಳ ತಯಾರಿಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಆಗಲಿದೆ. ತಮಿಳುನಾಡು, ಕರ್ನಾಟಕ, ತೆಲಂಗಾಣ ಬಳಿಕ ಉತ್ತರಪ್ರದೇಶದಲ್ಲೂ ಐಫೋನ್ ಫ್ಯಾಕ್ಟರಿ ಶುರುವಾಗುವ ಸಾಧ್ಯತೆ ಇದೆ. ಆ್ಯಪಲ್​​ಗೆ ಐಫೋನ್ ತಯಾರಿಸಿಕೊಡುವ ಫಾಕ್ಸ್​​ಕಾನ್ ಗ್ರೇಟರ್ ನೋಯ್ಡಾದಲ್ಲಿ ಘಟಕ ತಯಾರಿಸಲು 300 ಎಕರೆ ಜಾಗ ಹುಡುಕುತ್ತಿದೆ.

Foxconn: ದಕ್ಷಿಣ ಆಯ್ತು, ಉತ್ತರಕ್ಕೆ ಕಾಲಿಡುತ್ತಿರುವ ಐಫೋನ್ ಫ್ಯಾಕ್ಟರಿ; ಬೆಂಗಳೂರಿನದಕ್ಕಿಂತಲೂ ದೊಡ್ಡ ಘಟಕ ನಿರ್ಮಿಸಲಿದೆ ಫಾಕ್ಸ್​​ಕಾನ್
ಫಾಕ್ಸ್​​ಕಾನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 14, 2025 | 7:51 PM

ನವದೆಹಲಿ, ಏಪ್ರಿಲ್ 14: ಆ್ಯಪಲ್ ಕಂಪನಿಯ ಅತಿದೊಡ್ಡ ತಯಾರಿಕಾ ಸಂಸ್ಥೆಯಾದ ಫಾಕ್ಸ್​​ಕಾನ್ (Foxconn) ಭಾರತದಲ್ಲಿ ತನ್ನ ಉತ್ಪಾದನಾ ಸಾಮರ್ಥ್ಯ (Manufacturing capacity) ಮತ್ತಷ್ಟು ಹೆಚ್ಚಿಸುತ್ತಿದೆ. ತಮಿಳುನಾಡಿನಲ್ಲಿ ಬೃಹತ್ ಫ್ಯಾಕ್ಟರಿ ಹೊಂದಿರುವ ಫಾಕ್ಸ್​​ಕಾನ್, ಕರ್ನಾಟಕ ಹಾಗೂ ತೆಲಂಗಾಣದಲ್ಲೂ ಘಟಕಗಳನ್ನು ತೆರೆಯುತ್ತಿದೆ. ಇದೇ ವೇಳೆ, ಮೊದಲ ಬಾರಿಗೆ ಉತ್ತರ ಭಾರತಕ್ಕೂ ಅದು ಅಡಿ ಇಡುತ್ತಿದೆ. ರಾಷ್ಟ್ರರಾಜಧಾನಿ ದೆಹಲಿಗೆ ಸಮೀಪದಲ್ಲಿರುವ, ಉತ್ತರಪ್ರದೇಶದ ವ್ಯಾಪ್ತಿಗೆ ಬರುವ ಗ್ರೇಟರ್ ನೋಯ್ಡಾದಲ್ಲಿ ಫಾಕ್ಸ್​​ಕಾನ್ ಒಂದು ಘಟಕ ಸ್ಥಾಪಿಸಲು ಪ್ರಯತ್ನಿಸುತ್ತಿದೆ.

ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಬಂದ ವರದಿ ಪ್ರಕಾರ ಯಮುನಾ ಎಕ್ಸ್​​ಪ್ರೆಸ್​​ವೇ ಬಳಿ 300 ಎಕರೆಗಿಂತ ದೊಡ್ಡ ಜಾಗವನ್ನು ಫಾಕ್ಸ್​​ಕಾನ್ ಹುಡುಕುತ್ತಿದೆ. ಅಷ್ಟು ದೊಡ್ಡ ಎಕರೆ ಜಾಗ ಸಿಕ್ಕರೆ ಭಾರತದಲ್ಲಿ ಫಾಕ್ಸ್​​ಕಾನ್​​ನ ಅತಿದೊಡ್ಡ ಫ್ಯಾಕ್ಟರಿ ಸ್ಥಳ ಎನಿಸಲಿದೆ. ಚೆನ್ನೈ ಬಳಿ ಇರುವ ಅದರ ಫ್ಯಾಕ್ಟರಿ ದೊಡ್ಡದಿದೆ.

ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿ 300 ಎಕರೆ ಜಮೀನನ್ನು ಫಾಕ್ಸ್​​ಕಾನ್​​ಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಚೀನಾದಲ್ಲಿರುವ ತನ್ನ ಘಟಕ ಬಿಟ್ಟರೆ ಬೆಂಗಳೂರಿನದ್ದು ಸದ್ಯ ಫಾಕ್ಸ್​​ಕಾನ್​​ಗೆ ಅತಿದೊಡ್ಡ ಮ್ಯಾನುಫ್ಯಾಕ್ಚರಿಂಗ್ ಯುನಿಟ್ ಎನಿಸಿದೆ. ಈಗ ನೋಯ್ಡಾದಲ್ಲಿ ಬೆಂಗಳೂರಿನದಕ್ಕಿಂತಲೂ ದೊಡ್ಡ ಘಟಕ ನಿರ್ಮಾಣವಾಗಬಹುದು.

ಇದನ್ನೂ ಓದಿ
Image
ಭಾರತದಲ್ಲಿ ಶೇ. 20 ಐಫೋನ್ ಉತ್ಪಾದನೆ?
Image
ಭಾರತದಲ್ಲಿ ಸ್ವಂತವಾಗಿ 25 ಚಿಪ್​ಸೆಟ್​ಗಳ ಅಭಿವೃದ್ಧಿ
Image
ಶೇ. 15ರ ವೇಗದಲ್ಲಿ ಬೆಳೆಯುತ್ತಿರುವ ಸೆಮಿಕಂಡಕ್ಟರ್ ಮಾರುಕಟ್ಟೆ
Image
ಅಕ್ಕೋರ್, ಇಂಟರ್​​ಗ್ಲೋಬ್​​ನಿಂದ ಬೃಹತ್ ಹಾಸ್ಪಿಟಾಲಿಟಿ ಪ್ಲಾಟ್​​ಫಾರ್ಮ್

ಇದನ್ನೂ ಓದಿ: ಮೆಹುಲ್ ಚೋಕ್ಸಿ, ನೀರವ್ ಮೋದಿ 13,000 ಕೋಟಿ ರೂ ಪಂಗನಾಮ ಹಾಕಿ ದೇಶ ಬಿಟ್ಟುಹೋದ ಕಥೆ

ಫಾಕ್ಸ್​​ಕಾನ್​​ನ ಸೆಮಿಕಂಡಕ್ಟರ್ ಅಸೆಂಬ್ಲಿ ಘಟಕವೂ ಇಲ್ಲೇ

ಎಚ್​​ಸಿಎಲ್ ಮತ್ತು ಫಾಕ್ಸ್​​ಕಾನ್ ಸಂಸ್ಥೆಗಳು ಜಂಟಿಯಾಗಿ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ ಯುನಿಟ್ ಸ್ಥಾಪಿಸುತ್ತಿವೆ. ಇದಕ್ಕಾಗಿ ಇದೇ ಯಮುನಾ ಎಕ್ಸ್​​ಪ್ರೆಸ್​ವೇ ವಲಯದಲ್ಲಿ 50 ಎಕರೆ ಜಾಗ ಪಡೆಯಲಾಗಿದೆ. ಈ ಸೆಮಿಕಂಡಕ್ಟರ್ ಯೋಜನೆಗೆ ಸದ್ಯ ಸರ್ಕಾರದಿಂದ ಅನುಮೋದನೆಯಷ್ಟೇ ಬಾಕಿ ಇದೆ.

ಈಗ ಅದೇ ವಲಯದಲ್ಲಿ ಐಫೋನ್ ಅಸೆಂಬ್ಲಿಂಗ್ ಯುನಿಟ್ ಅನ್ನು ಫಾಕ್ಸ್​​ಕಾನ್ ತೆರೆಯಲು ಹೊರಟಿದೆ. ಈ ಮೂಲಕ ಭಾರತದಲ್ಲಿ ಫಾಕ್ಸ್​​ಕಾನ್​​ನ ಮ್ಯಾನುಫ್ಯಾಕ್ಚರಿಂಗ್ ಸಾಮರ್ಥ್ಯ ಮತ್ತಷ್ಟು ಹೆಚ್ಚಲಿದೆ.

ಇದನ್ನೂ ಓದಿ: ಕ್ಷಣಮಾತ್ರದಲ್ಲಿ ಹಲವು ಡ್ರೋನ್ ಹೊಡೆದುರುಳಿಸಬಲ್ಲ ಲೇಸರ್ ವೆಪನ್ ಸಿಸ್ಟಂ ಭಾರತದ ಬತ್ತಳಿಕೆಯಲ್ಲಿ

ಆ್ಯಪಲ್ ಕಂಪನಿಯ ಗುರಿ ಸಾಧನೆಯತ್ತ ಮತ್ತೊಂದು ಹೆಜ್ಜೆ

ಆ್ಯಪಲ್ ಕಂಪನಿ ತನ್ನ ಕಂಪನಿಯ ಉತ್ಪನ್ನಗಳನ್ನು ಭಾರತದಲ್ಲಿ ಹೆಚ್ಚೆಚ್ಚು ತಯಾರಿಸುವ ಗುರಿ ಹೊಂದಿದೆ. ಚೀನಾದಲ್ಲಿ ಈಗಲೂ ಕೂಡ ಅತಿಹೆಚ್ಚು ಐಫೋನ್​​ಗಳು ತಯಾರಾಗುತ್ತಿವೆಯಾದರೂ, ಭಾರತದಲ್ಲಿ ಶೇ. 20ರಷ್ಟು ಐಫೋನ್​​ಗಳು ತಯಾರಾಗುವ ಮಟ್ಟಕ್ಕೆ ಇಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿದೆ. ನೋಯ್ಡಾದಲ್ಲೂ ಫಾಕ್ಸ್​​ಕಾನ್ ಘಟಕ ಕಾರ್ಯನಿರ್ವಹಣೆ ಆರಂಭಗೊಂಡ ಬಳಿಕ ಭಾರತದಲ್ಲಿ ಐಫೋನ್ ತಯಾರಿಕೆ ಶೇ. 25ಕ್ಕೆ ಏರುವುದರಲ್ಲಿ ಅಚ್ಚರಿ ಇಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ