AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವಸ್ಥಾನಗಳ ಚಿನ್ನದ ನಗದೀಕರಣದ ಯಾವ ಯೋಜನೆಯೂ ಇಲ್ಲ; ವೈರಲ್ ಸುದ್ದಿ ಕೇವಲ ವದಂತಿ: ಕೇಂದ್ರ ಸರ್ಕಾರ ಸ್ಪಷ್ಟನೆ

Temple Gold Monetization Rumor Debunked: ಸೋಷಿಯಲ್ ಮೀಡಿಯಾದಲ್ಲಿ ದೇವಸ್ಥಾನಗಳ ಚಿನ್ನ ನಗದೀಕರಣಕ್ಕೆ ಸರ್ಕಾರ ಹೊಸ ಯೋಜನೆ ಜಾರಿಗೊಳಿಸುತ್ತಿದೆ ಎಂಬ ವದಂತಿ ಹಬ್ಬಿತ್ತು. ಆದರೆ, ಭಾರತ ಸರ್ಕಾರ ಇದನ್ನು ಸ್ಪಷ್ಟವಾಗಿ ನಿರಾಕರಿಸಿದೆ. ಪಿಐಬಿ ಫ್ಯಾಕ್ಟ್ ಚೆಕ್ ಮೂಲಕ, ಇದು ಸಂಪೂರ್ಣ ಸುಳ್ಳು ಸುದ್ದಿ ಎಂದು ತಿಳಿಸಿದೆ. ದೇವಸ್ಥಾನದ ಚಿನ್ನದ ಮೇಲೆ ನಿಯಂತ್ರಣ ಹೊಂದುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಸಾರ್ವಜನಿಕರು ಇಂತಹ ಅನಧಿಕೃತ ಸುದ್ದಿಗಳನ್ನು ನಂಬದಂತೆ ಎಚ್ಚರಿಕೆ ನೀಡಲಾಗಿದೆ.

ದೇವಸ್ಥಾನಗಳ ಚಿನ್ನದ ನಗದೀಕರಣದ ಯಾವ ಯೋಜನೆಯೂ ಇಲ್ಲ; ವೈರಲ್ ಸುದ್ದಿ ಕೇವಲ ವದಂತಿ: ಕೇಂದ್ರ ಸರ್ಕಾರ ಸ್ಪಷ್ಟನೆ
ಚಿನ್ನImage Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 19, 2026 | 2:57 PM

Share

ನವದೆಹಲಿ, ಮೇ 19: ದೇವಸ್ಥಾನದಲ್ಲಿರುವ ಚಿನ್ನವನ್ನು ನಗದೀಕರಣಗೊಳಿಸಲು (Gold Monetisation scheme) ಸರ್ಕಾರ ಯೋಜಿಸುತ್ತಿದೆ ಎಂಬಂತಹ ಕೆಲ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. “ಕೇಂದ್ರ ಸರ್ಕಾರವು ದೇಶದ ದೇವಸ್ಥಾನಗಳಿಗಾಗಿ ಹೊಸ ‘ಚಿನ್ನದ ಬಾಂಡ್ ಯೋಜನೆ’ (Gold Bond Scheme) ಯನ್ನು ಜಾರಿಗೊಳಿಸಲು ಮತ್ತು ದೇವಸ್ಥಾನದ ಗೋಪುರ ಇತ್ಯಾದಿ ಕಟ್ಟಡಗಳಲ್ಲಿ ಹಾಕಲಾಗಿರುವ ಗೋಲ್ಡ್ ಪ್ಲೇಟ್ ಇತ್ಯಾದಿ ಚಿನ್ನವನ್ನು ದೇಶದ ಸ್ಟ್ರಾಟಿಜಿಕ್ ರಿಸರ್ವ್ ಎಂದು ಪರಿಗಣಿಸಲು ಯೋಜಿಸುತ್ತಿದೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿಯನ್ನು ಭಾರತ ಸರ್ಕಾರ ಅಧಿಕೃತವಾಗಿ ನಿರಾಕರಿಸಿದೆ ಮತ್ತು ಇದು ಸಂಪೂರ್ಣವಾಗಿ ಸುಳ್ಳು ಎಂದು ಸ್ಪಷ್ಟಪಡಿಸಿದೆ.

ಸುದ್ದಿಯ ಮುಖ್ಯಾಂಶಗಳು

  • ದೇವಸ್ಥಾನಗಳ ಚಿನ್ನದ ಮೇಲೆ ಸರ್ಕಾರ ನಿಯಂತ್ರಣ ಪಡೆದು ಅದರ ನಗದೀಕರಣ ಮಾಡಲು ಯೋಜಿಸಿದೆ ಎನ್ನುವಂತಹ ವದಂತಿಗಳು ಹರಿದಾಡುತ್ತಿವೆ.
  • ಈ ಸುದ್ದಿಯನ್ನು ಸರ್ಕಾರ ಅಲ್ಲಗಳೆದಿದೆ. ದೇವಸ್ಥಾನದ ಚಿನ್ನದ ಮೇಲೆ ನಿಯಂತ್ರಣ ಹೊಂದುವ ಯಾವ ಉದ್ದೇಶ ಇಲ್ಲ ಎಂದು ಪಿಐಬಿ ಹೇಳಿದೆ.
  • ದೇಶದಲ್ಲಿ ಚಿನ್ನಕ್ಕೆ ಬಹಳ ಬೇಡಿಕೆ ಇದ್ದು, ಹೆಚ್ಚಿನ ಚಿನ್ನವನ್ನು ಆಮದು ಮಾಡಬೇಕಿದೆ. ಚಿನ್ನದ ಖರೀದಿ ಕಡಿಮೆ ಮಾಡಿ ಎಂದು ಮೊನ್ನೆ ಪಿಎಂ ಹೇಳಿದ್ದರು.

ಇದನ್ನೂ ಓದಿ: ಮೇ 20ಕ್ಕೆ ರಾಷ್ಟ್ರವ್ಯಾಪಿ ಔಷಧ ವ್ಯಾಪಾರಿಗಳ ಮುಷ್ಕರ; ಬಂದ್ ಆಗಲಿವೆ ಮೆಡಿಕಲ್ ಸ್ಟೋರ್​ಗಳು; ಯಾಕಿದು ಪ್ರತಿಭಟನೆ?

ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದುದು ವದಂತಿ…

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಕೆಲವು ವರದಿಗಳಲ್ಲಿ ಕೇಂದ್ರ ಸರ್ಕಾರವು ದೇವಸ್ಥಾನಗಳ ಬಳಿ ಇರುವ ಹೆಚ್ಚುವರಿ ಚಿನ್ನವನ್ನು ಬ್ಯಾಂಕುಗಳಲ್ಲಿ ಇಟ್ಟು ಅದರ ಮೂಲಕ ಬಾಂಡ್‌ಗಳನ್ನು ವಿತರಿಸುವ ಹೊಸ ಚಿನ್ನದ ನಗದೀಕರಣ ಯೋಜನೆಯನ್ನು (Gold Monetisation Scheme) ಜಾರಿಗೆ ತರುತ್ತಿದೆ ಎಂದು ವ್ಯಾಪಕವಾಗಿ ಪ್ರಚಾರ ಮಾಡಲಾಗಿತ್ತು. ಇದರಿಂದಾಗಿ ದೇವಸ್ಥಾನಗಳ ಒಡೆತನದ ಚಿನ್ನದ ಮೇಲೆ ಸರ್ಕಾರದ ನಿಯಂತ್ರಣ ಬರಲಿದೆ ಎಂಬಂತಹ ಚರ್ಚೆಗಳು ಶುರುವಾಗಿದ್ದವು.

ಈ ಸುದ್ದಿ ತೀವ್ರವಾಗಿ ಹರಡುತ್ತಿದ್ದಂತೆ, ಸರ್ಕಾರದ ಅಧಿಕೃತ ಮಾಹಿತಿ ಸಂಸ್ಥೆಯಾದ ಪಿಐಬಿ ಫ್ಯಾಕ್ಟ್ ಚೆಕ್ (PIB Fact Check) ಈ ಬಗ್ಗೆ ತನಿಖೆ ನಡೆಸಿ ಸ್ಪಷ್ಟನೆ ನೀಡಿದೆ. ಸರ್ಕಾರವು ದೇವಸ್ಥಾನಗಳಿಗಾಗಿ ಇಂತಹ ಯಾವುದೇ ಹೊಸ ಚಿನ್ನದ ಬಾಂಡ್ ಯೋಜನೆಯನ್ನು ಘೋಷಿಸಿಲ್ಲ ಅಥವಾ ಜಾರಿಗೆ ತರುತ್ತಿಲ್ಲ ಎಂದು ಪಿಐಬಿ ಖಚಿತಪಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆ ಸುದ್ಧಿ ಕೇವಲ ವದಂತಿ ಮತ್ತು ಸುಳ್ಳು (Fake News) ಎಂದು ಸರ್ಕಾರ ಹೇಳಿದೆ.

ಈಗ ಜಾರಿಯಲ್ಲಿರುವ ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ ಏನು?

ಸರ್ಕಾರ ಚಿನ್ನಕ್ಕೆ ಸಂಬಂಧಿಸಿದ ಕೆಲ ಯೋಜನೆಗಳನ್ನು ಮತ್ತು ಸ್ಕೀಮ್​ಗಳನ್ನು ಜಾರಿಗೊಳಿಸಿದೆ. ಸಾವರೀನ್ ಗೋಲ್ಡ್ ಬಾಂಡ್ ಮತ್ತು ಗೋಲ್ಡ್ ಮಾನಿಟೈಸೇಶನ್ ಸ್ಕೀಮ್, ಇವು ಪ್ರಮುಖವಾದುವು. ಸಾವರಿನ್ ಗೋಲ್ಡ್ ಬಾಂಡ್ 2015ರಲ್ಲಿ ಆರಂಭವಾಗಿದೆ. ಆದರೆ, ಕಳೆದ ಒಂದು ವರ್ಷದಿಂದ ಹೊಸ ಸರಣಿಯ ಬಾಂಡ್​ಗಳನ್ನು ಬಿಡುಗಡೆ ಮಾಡಲಾಗಿಲ್ಲ. ಇನ್ನು, ಗೋಲ್ಡ್ ಮಾನಿಟೈಸೇಶನ್ ಸ್ಕೀಮ್​ನಲ್ಲಿ ಅಲ್ಪಾವಧಿ ಪ್ಲಾನ್ ಅನ್ನು ಮಾತ್ರ ಮುಂದುವರಿಸಲಾಗಿದೆ. 3 ವರ್ಷ ಮೇಲ್ಪಟ್ಟ ಅವಧಿಯ ಪ್ಲಾನ್​ಗಳನ್ನು ನಿಲ್ಲಿಸಲಾಗಿದೆ. ಗೋಲ್ಡ್ ಮಾನಿಟೈಸೇಶನ್​ನಲ್ಲಿ ನೀವು ಬಳಸದೇ ಇರುವ ಚಿನ್ನವನ್ನು ಡೆಪಾಸಿಟ್ ಆಗಿ ಇಟ್ಟು ಅದರಿಂದ ಬಡ್ಡಿ ಪಡೆಯುವ ಅವಕಾಶ ಇರುತ್ತದೆ. 1ರಿಂದ 3 ವರ್ಷದ ಡೆಪಾಸಿಟ್​ಗೆ ಅವಕಾಶ ಇದೆ. ಬಡ್ಡಿ ಶೇ. 1ಕ್ಕಿಂತಲೂ ಕಡಿಮೆ ಇರುವುದರಿಂದ ಈ ಸ್ಕೀಮ್ ಹೆಚ್ಚು ಜನಪ್ರಿಯತೆ ಪಡೆದಿಲ್ಲ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮೈಕ್ರೋಸಾಫ್ಟ್ ಎಐ ಮುಖ್ಯಸ್ಥರ ಎಚ್ಚರಿಕೆ; ಇನ್ನು, 12-18 ತಿಂಗಳಲ್ಲಿ ಇನ್ನಿಲ್ಲವಾಗುತ್ತವಂತೆ ವೈಟ್ ಕಾಲರ್ ಜಾಬ್​ಗಳು

ಇದೇ ಮಾದರಿಯ ಮಾನಿಟೈಸೇಶನ್ ಸ್ಕೀಮ್ ಅನ್ನು ದೇವಸ್ಥಾನಗಳಿಗೆ ತರಲು ಹೊರಟಿದೆ ಎನ್ನುವಂತಹ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಸರ್ಕಾರ ಈ ಸುದ್ದಿಯನ್ನು ಅಲ್ಲಗಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ (WhatsApp, Facebook, X) ಇಂತಹ ಸೂಕ್ಷ್ಮ ವಿಷಯಗಳ ಕುರಿತು ಬರುವ ಅನಧಿಕೃತ ಸುದ್ದಿಗಳನ್ನು ನಂಬಬೇಡಿ ಮತ್ತು ಅವುಗಳನ್ನು ಇತರರಿಗೆ ಶೇರ್ ಮಾಡುವ ಮುನ್ನ ಸರ್ಕಾರದ ಅಧಿಕೃತ ಮೂಲಗಳಿಂದ ಪರಿಶೀಲಿಸಿಕೊಳ್ಳಿ ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB) ಜನರಲ್ಲಿ ಮನವಿ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More