Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೊಗರಿ, ಉದ್ದಿನ ಬೇಳೆ ಸಂಗ್ರಹ ಮಿತಿ; ನಿರ್ಬಂಧ ನಿಯಮದ ಅವಧಿ ಇನ್ನಷ್ಟು ವಿಸ್ತರಿಸಿದ ಸರ್ಕಾರ

Tur and Urad Dal stock limits: ತೊಗರಿ ಬೇಳೆ ಮತ್ತು ಉದ್ದಿನ ಬೇಳೆಗಳ ಸಂಗ್ರಹಕ್ಕೆ ಮಿತಿ ಹಾಕಿರುವ ನಿಯಮವನ್ನು ಡಿಸೆಂಬರ್ 31ರವರೆಗೂ ಮುಂದುವರಿಸಲಾಗಿದೆ. ಅಕ್ಟೋಬರ್ 30ರವರೆಗೆ ವಿವಿಧ ಬೇಳೆ ಕಾಳುಗಳ ಸಂಗ್ರಹಕ್ಕೆ ಮಿತಿ ಹಾಕಲಾಗಿದೆ. ತೊಗರಿ ಮತ್ತು ಉದ್ದಿನಬೇಳೆ ಸಂಗ್ರಹಮಿತಿ ನಿಯಮವನ್ನು ಈ ವರ್ಷದ ಕೊನೆಯವರೆಗೂ ವಿಸ್ತರಿಸಲಾಗಿದೆ. ಅಂದರೆ ಸಗಟು ವ್ಯಾಪಾರಿಗಳು, ದೊಡ್ಡ ರೀಟೇಲ್ ಮಾರಾಟಗಾರರು, ಮಿಲ್ ಮಾಲೀಕರು ಈ ಎರಡು ಧಾನ್ಯಗಳನ್ನು ಡಿಸೆಂಬರ್ 31ರವರೆಗೂ ಹೆಚ್ಚು ಸಂಗ್ರಹ ಮಾಡಿಟ್ಟುಕೊಳ್ಳುವಂತಿಲ್ಲ.

ತೊಗರಿ, ಉದ್ದಿನ ಬೇಳೆ ಸಂಗ್ರಹ ಮಿತಿ; ನಿರ್ಬಂಧ ನಿಯಮದ ಅವಧಿ ಇನ್ನಷ್ಟು ವಿಸ್ತರಿಸಿದ ಸರ್ಕಾರ
ಸಂಗ್ರಹಾಗಾರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 26, 2023 | 11:22 AM

ನವದೆಹಲಿ, ಸೆಪ್ಟೆಂಬರ್ 26: ತೊಗರಿ ಬೇಳೆ ಮತ್ತು ಉದ್ದಿನ ಬೇಳೆಗಳ ಸಂಗ್ರಹಕ್ಕೆ ಮಿತಿ ಹಾಕಿರುವ ನಿಯಮವನ್ನು (stock limit) ಡಿಸೆಂಬರ್ 31ರವರೆಗೂ ಮುಂದುವರಿಸಲಾಗಿದೆ. ಅಕ್ಟೋಬರ್ 30ರವರೆಗೆ ವಿವಿಧ ಬೇಳೆ ಕಾಳುಗಳ ಸಂಗ್ರಹಕ್ಕೆ ಮಿತಿ ಹಾಕಲಾಗಿದೆ. ತೊಗರಿ ಮತ್ತು ಉದ್ದಿನಬೇಳೆ ಸಂಗ್ರಹಮಿತಿ ನಿಯಮವನ್ನು ಈ ವರ್ಷದ ಕೊನೆಯವರೆಗೂ ವಿಸ್ತರಿಸಲಾಗಿದೆ. ಅಂದರೆ ಸಗಟು ವ್ಯಾಪಾರಿಗಳು, ದೊಡ್ಡ ರೀಟೇಲ್ ಮಾರಾಟಗಾರರು, ಮಿಲ್ ಮಾಲೀಕರು ಈ ಎರಡು ಧಾನ್ಯಗಳನ್ನು ಡಿಸೆಂಬರ್ 31ರವರೆಗೂ ಹೆಚ್ಚು ಸಂಗ್ರಹ (Hoarding of stocks) ಮಾಡಿಟ್ಟುಕೊಳ್ಳುವಂತಿಲ್ಲ. ಆಧಾರ ಧಾನ್ಯಗಳನ್ನು ಸಂಗ್ರಹ ಮಾಡಿಕೊಟ್ಟುಕೊಂಡು ಕೃತಕವಾಗಿ ಬೆಲೆ ಹೆಚ್ಚಳ ಮಾಡುವ ಪ್ರಯತ್ನವನ್ನು ತಡೆಯಲು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಆಹಾರ ಧಾನ್ಯಗಳ ಸಂಗ್ರಹ ಮಿತಿ ನಿಯಮಗಳೇನು?

1955ರ ಅಗತ್ಯ ವಸ್ತುಗಳ ಕಾಯ್ದೆ ಪ್ರಕಾರ, ಬೆಲೆ ಏರಿಕೆಗೆ ಎಡೆ ಮಾಡುವಂತೆ ಆಹಾರ ವಸ್ತುಗಳನ್ನು ಸಂಗ್ರಹ ಮಾಡಬಾರದು. ಸರ್ಕಾರ ಈ ಕಾಯ್ದೆ ಅಡಿಯಲ್ಲಿ ಬೇಳೆಕಾಳುಗಳು ಸೇರಿದಂತೆ ವಿವಿಧ ಆಹಾರವಸ್ತುಗಳ ಸಂಗ್ರಹ ಮಾಡದಂತೆ ನಿಯಮಗಳನ್ನು ರೂಪಿಸಿದೆ.

ಇದನ್ನೂ ಓದಿ: ನೂರು ಕೋಟಿ ಜನರ ವಿಶ್ವಾಸ ಗಳಿಸಿರುವ ಆಧಾರ್ ಬಗ್ಗೆ… ಮೂಡೀಸ್ ಆರೋಪಗಳನ್ನು ತಳ್ಳಿಹಾಕಿದ ಸರ್ಕಾರ

ಸಗಟು ಮಾರಾಟಗಾರರು ಮತ್ತು ದೊಡ್ಡ ರೀಟೇಲ್ ಮಾರಾಟಗಾರರು ಸಂಗ್ರಹ ಮಾಡಬಹುದಾದ ಬೇಳೆಕಾಳುಗಳ ಮೊತ್ತವನ್ನು 200 ಮೆಟ್ರಿಕ್ ಟನ್​ನಿಂದ 50 ಮೆಟ್ರಿಕ್ ಟನ್​ಗೆ ಇಳಿಸಲಾಗಿದೆ. ಇನ್ನು, ಮಿಲ್​ಗಳು ತಮ್ಮ ಕಳೆದ ಮೂರು ತಿಂಗಳ ಉತ್ಪಾದನೆ ಅಥವಾ ವಾರ್ಷಿಕ ಉತ್ಪಾದನಾ ಸಾಮರ್ಥ್ಯದ ಶೇ. 25ರಷ್ಟು ಭಾಗದ ಆಧಾರಧಾನ್ಯಗಳನ್ನು ಇಟ್ಟುಕೊಳ್ಳಬಹುದಿತ್ತು. ಹೊಸ ಆದೇಶದ ಪ್ರಕಾರ ಮಿಲ್​ಗಳು ಕಳೆದ ಒಂದು ತಿಂಗಳ ಉತ್ಪಾದನೆ ಅಥವಾ ವಾರ್ಷಿಕ ಉತ್ಪಾದನಾ ಸಾಮರ್ಥ್ಯದ ಶೇ. 10ರಷ್ಟು ಭಾಗವನ್ನು ಮಾತ್ರ ಆಹಾರಧಾನ್ಯ ಸಂಗ್ರಹಿಸಬಹುದು.

ಇನ್ನು, ಆಹಾರವಸ್ತುಗಳನ್ನು ಆಮದು ಮಾಡುವವರು ಅವುಗಳನ್ನು 30 ದಿನಗಳಿಗೂ ಹೆಚ್ಚು ಕಾಲ ಇಟ್ಟುಕೊಳ್ಳುವಂತಿಲ್ಲ ಎಂದೂ ಸರ್ಕಾರ ಇತ್ತೀಚಿನ ಅಧಿಸೂಚನೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಗೃಹಸಾಲಗಳ ಬಡ್ಡಿಗೆ ಸಬ್ಸಿಡಿ; ಕೇಂದ್ರದಿಂದ 60,000 ಕೋಟಿ ರೂ ಮೊತ್ತದ ಯೋಜನೆ ಶೀಘ್ರದಲ್ಲೇ?

ಈ ಆದೇಶ ಅಕ್ಟೋಬರ್ 30ರವರೆಗೂ ಇದೆ. ಇದೀಗ ಉದ್ದಿನಬೇಳೆ, ತೊಗರಿಬೇಳೆಗಳ ವಿಚಾರದಲ್ಲಿ ಈ ಮಿತಿ ಡಿಸೆಂಬರ್ 31ರವರೆಗೂ ಮುಂದುವರಿಯಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ