AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರದಿಂದ ಎಸ್​​ಯುಸಿ ದರ ಮನ್ನಾ ಸಾಧ್ಯತೆ; ಏರ್​​ಟೆಲ್, ಜಿಯೋ, ವೊಡಾಫೋನ್​​ಗೆ ಸಾವಿರಾರು ಕೋಟಿ ರೂ ಉಳಿತಾಯ

Possibility of waiver of Spectrum Usage Charges: 2021ರ ಸೆಪ್ಟೆಂಬರ್ 15 ಬಳಿಕ ಹರಾಜಾದ ಸ್ಪೆಕ್ಟ್ರಂಗಳಿಗೆ ಸರ್ಕಾರ ಎಸ್​​ಯುಸಿ ರದ್ದು ಮಾಡಿತ್ತು. ಈಗ 2021ರ ಸೆಪ್ಟೆಂಬರ್​​ಗೆ ಮುಂಚಿನ ಸ್ಪೆಕ್ಟ್ರಂ ಹರಾಜುಗಳಿಗೂ ಎಸ್​​ಯುಸಿ ಮನ್ನಾ ಮಾಡಲು ಯೋಜಿಸಿದೆ ಎಂದು ವರದಿಯಾಗಿದೆ. ಸರ್ಕಾರದ ಈ ಕ್ರಮದಿಂದ ಏರ್​​ಟೆಲ್, ಜಿಯೋ, ವಿಐ ಇತ್ಯಾದಿ ಟೆಲಿಕಾಂ ಕಂಪನಿಗಳಿಗೆ ಸಾವಿರಾರು ಕೋಟಿ ರೂ ಉಳಿತಾಯವಾಗಲಿದೆ.

ಸರ್ಕಾರದಿಂದ ಎಸ್​​ಯುಸಿ ದರ ಮನ್ನಾ ಸಾಧ್ಯತೆ; ಏರ್​​ಟೆಲ್, ಜಿಯೋ, ವೊಡಾಫೋನ್​​ಗೆ ಸಾವಿರಾರು ಕೋಟಿ ರೂ ಉಳಿತಾಯ
ಸ್ಪೆಕ್ಟ್ರಮ್ ಬಳಕೆ ಶುಲ್ಕ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 25, 2025 | 11:05 AM

Share

ನವದೆಹಲಿ, ಮಾರ್ಚ್ 25: ಟೆಲಿಕಾಂ ಕಂಪನಿಗಳಿಗೆ ಹೊರೆಯಾಗುತ್ತಿದ್ದ ಎಸ್​​ಯುಸಿ ಅಥವಾ ಸ್ಪೆಕ್ಟ್ರಮ್ ಬಳಕೆ ಶುಲ್ಕವನ್ನು (SUC- Spectrum Usage Charge) ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಕ್ರಮವೇನಾದರೂ ಜಾರಿಯಾದಲ್ಲಿ ವೊಡಾಫೋನ್ ಐಡಿಯಾ, ಏರ್​​ಟೆಲ್ ಮತ್ತು ರಿಲಾಯನ್ಸ್ ಜಿಯೋ ಸಂಸ್ಥೆಗಳಿಗೆ ಸಾವಿರಾರು ಕೋಟಿ ರೂ ಹಣ ಉಳಿತಾಯ ಆಗಲಿದೆ. 2021ರ ಸೆಪ್ಟೆಂಬರ್​ಗೆ ಮುಂಚೆ ಸ್ಪೆಕ್ಟ್ರಂ ಹರಾಜುಗಳ ಮೂಲಕ ಈ ಕಂಪನಿಗಳು ಖರೀದಿಸಿದ ಸ್ಪೆಕ್ಟ್ರಂಗಳಿಗೆ ಸರ್ಕಾರ ಎಸ್​​ಯುಸಿ ಶುಲ್ಕ ಹಿಂಪಡೆದುಕೊಳ್ಳಲು ಯೋಜಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಅಧಿಕೃತ ಮೂಲ ಉಲ್ಲೇಖಿಸಿ ವರದಿ ಮಾಡಿದೆ.

2021ರ ಸೆಪ್ಟೆಂಬರ್ 15ರ ಬಳಿಕ ಹರಾಜಾದ ಸ್ಪೆಕ್ಟ್ರಂಗೆ ಸರ್ಕಾರ 2022ರ ಜೂನ್​​ನಲ್ಲಿ ಎಸ್​​ಯುಸಿ ಶುಲ್ಕವನ್ನು ತೆಗೆದುಹಾಕಿತ್ತು. ಆದರೆ, ಅದಕ್ಕೂ ಮುಂಚೆ ಖರೀದಿಸಲಾದ ಸ್ಪೆಕ್ಟ್ರಂ ಬಗ್ಗೆ ಯಾವ ನಿರ್ಧಾರವೂ ಬಂದಿರಲಿಲ್ಲ. ಇದು ಟೆಲಿಕಾಂ ಕಂಪನಿಗಳನ್ನು ಗೊಂದಲಕ್ಕೆ ಕೆಡವಿತ್ತು. ಈಗ ಸರ್ಕಾರ 2021ಕ್ಕೆ ಮುಂಚೆ ಖರೀದಿಯಾದ ಸ್ಪೆಕ್ಟ್ರಂಗೂ ಎಸ್​​ಯುಸಿ ಶುಲ್ಕ ರದ್ದುಗೊಳಿಸಲು ಮುಂದಾಗಿರುವುದು ಟೆಲಿಕಾಂ ಕಂಪನಿಗಳನ್ನು ನಿರಾಳಗೊಳ್ಳುವಂತೆ ಮಾಡಬಹುದು.

ಇದನ್ನೂ ಓದಿ: ಸೆಬಿ ನಿರ್ಧಾರಗಳು… ಎಫ್​​ಪಿಐ ವಿವರ ಸಲ್ಲಿಕೆ ಮಿತಿ ಹೆಚ್ಚಳ; ಮುಂಗಡ ಶುಲ್ಕ ಮಿತಿ ಹೆಚ್ಚಳ; ಉನ್ನತ ಮಟ್ಟದ ಸಮಿತಿ ರಚನೆ

ಇದನ್ನೂ ಓದಿ
Image
ಬೆಂಗಳೂರಿನಲ್ಲಿ ಟೊಯೋಟಾ ಆರ್ ಅಂಡ್ ಡಿ ಘಟಕ
Image
ಭಾರತದಲ್ಲಿ ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆ ಮೈಲಿಗಲ್ಲು
Image
ರುಪೇ ಸಬ್ಸಿಡಿ ಖತಂ; ಪೇಮೆಂಟ್ಸ್ ಉದ್ಯಮಕ್ಕೆ 600 ಕೋಟಿ ನಷ್ಟಭೀತಿ
Image
ಭಾರತ ಸರ್ಕಾರ ವಿರುದ್ಧ ಎಕ್ಸ್​ನಿಂದ ಕಾನೂನು ಮೊಕದ್ದಮೆ

ಏನಿದು ಎಸ್​​ಯುಸಿ ಶುಲ್ಕ?

ಸ್ಪೆಕ್ಟ್ರಂ ಖರೀದಿ ಬಳಿಕ ಆ ನಿರ್ದಿಷ್ಟ ರೇಡಿಯೋ ತರಂಗಾಂತರ ಅಥವಾ ಏರ್​ವೇವ್ಸ್ ಅಥವಾ ಸ್ಪೆಕ್ಟ್ರಂ ಅನ್ನು ಬಳಸಲು ಟೆಲಿಕಾಂ ಕಂಪನಿಗಳು ಸರ್ಕಾರಕ್ಕೆ ನಿರ್ದಿಷ್ಟ ಶುಲ್ಕ ನೀಡಬೇಕು. ಮೊದಲಿಗೆ ಶೇ. 8ರಷ್ಟು ಲೈಸೆನ್ಸ್ ಶುಲ್ಕ ನೀಡಬೇಕು. ಬಳಿಕ ತಮ್ಮ ಒಟ್ಟು ಆದಾಯದಲ್ಲಿ (ಎಜಿಆರ್) ಶೇ. 3-4ರಷ್ಟು ಮೊತ್ತವನ್ನು ಸ್ಪೆಕ್ಟ್ರಂ ಬಳಕೆ ಶುಲ್ಕವಾಗಿ ಸರ್ಕಾರಕ್ಕೆ ನೀಡಬೇಕು. ಇವು ಹರಾಜಿನಲ್ಲಿ ಸ್ಪೆಕ್ಟ್ರಂ ಕೊಳ್ಳಲು ವ್ಯಯಿಸಿದ ಹಣಕ್ಕೆ ಹೊರತಾದ ಶುಲ್ಕಗಳು.

ಎಸ್​​ಯುಸಿ ಮನ್ನಾದಿಂದ ಟೆಲಿಕಾಂ ಕಂಪನಿಗಳಿಗೆ ಆನೆ ಬಲ

ಭಾರತೀಯ ಟೆಲಿಕಾಂ ಕಂಪನಿಗಳು ದೇಶಾದ್ಯಂತ 5ಜಿ ನೆಟ್ವರ್ಕ್ ಅಳವಡಿಕೆ ನಡೆಸುತ್ತಿವೆ. ಹಾಗೆಯೇ, 6ಜಿ ನೆಟ್ವರ್ಕ್​​ಗೂ ಅಣಿಗೊಳ್ಳುತ್ತಿವೆ. ಈ ಹಂತದಲ್ಲಿ ಸಾಕಷ್ಟು ಬಂಡವಾಳದ ಅವಶ್ಯಕತೆ ಇದೆ. ಸರ್ಕಾರವು ಸ್ಪೆಕ್ಟ್ರಂ ಬಳಕೆಗೆ ಎಸ್​​ಯುಸಿ ಶುಲ್ಕವನ್ನು ಮನ್ನಾ ಮಾಡಿರುವುದರಿಂದ ಈ ಕಂಪನಿಗಳಿಗೆ ಸಾವಿರಾರು ಕೋಟಿ ರೂ ಉಳಿತಾಯವಾಗುತ್ತದೆ. ಈ ಹಣವನ್ನು ಇನ್​​ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಬಳಸಬಹುದು.

ಇದನ್ನೂ ಓದಿ: 2,000 ರೂ ಒಳಗಿನ ಯುಪಿಐ ಪಾವತಿ: 1,500 ಕೋಟಿ ರೂ ಇನ್ಸೆಂಟಿವ್ ಸ್ಕೀಮ್​​ಗೆ ಸಂಪುಟ ಅನುಮೋದನೆ; ಏನಿದು ಯೋಜನೆ? ಯಾರಿಗೆ ಅನುಕೂಲ?

ಇಲಾನ್ ಮಸ್ಕ್ ಅವರ ಸ್ಟಾರ್​​ಲಿಂಕ್ ಸರ್ವಿಸ್ ಭಾರತದಲ್ಲಿ ಆರಂಭವಾಗುತ್ತಿದೆ. ಈ ಸ್ಪರ್ಧೆಯನ್ನು ಎದುರಿಸಲು ಭಾರತೀಯ ಕಂಪನಿಗಳಿಗೆ ಸರ್ಕಾರದ ಈ ಕ್ರಮ ಹೊಸ ಭರವಸೆ ಮೂಡಿಸಿದಂತಾಗಿದೆ.

ಸರ್ಕಾರ ಯಾಕೆ ಎಸ್​​ಯುಸಿ ಮನ್ನಾ ಮಾಡಿದೆ?

ಸರ್ಕಾರ ಸ್ಪೆಕ್ಟ್ರಂ ಹರಾಜುಗಳನ್ನು ನಡೆಸಿದಾಗ ನಿರೀಕ್ಷೆಮೀರಿದ ಪೈಪೋಟಿ ಸೃಷ್ಟಿಯಾಗಿತ್ತು. ಅದರ ಪರಿಣಾಮವಾಗಿ ಸರ್ಕಾರ ಎಣಿಸಿದ್ದಕ್ಕಿಂತ ಹೆಚ್ಚು ಮೊತ್ತಕ್ಕೆ ಸ್ಪೆಕ್ಟ್ರಂ ಮಾರಾಟವಾಗಿದೆ. ಸ್ಪೆಕ್ಟ್ರಂ ಬಳಕೆ ಶುಲ್ಕದಿಂದ ಬರಬಹುದಾದ ಆದಾಯವು ಸರ್ಕಾರಕ್ಕೆ ಹರಾಜಿನಲ್ಲೇ ಸಿಕ್ಕಿತ್ತು. ಈ ಕಾರಣಕ್ಕೆ ಎಸ್​​ಯುಸಿಯನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:59 am, Tue, 25 March 25

Follow Us
ಟಿಪ್ಪರ್​ ಅಡಿಗೆ ಬಿದ್ದು ಯುವಕ ಆತ್ಮಹತ್ಯೆ: ಭಯಾನಕ ದೃಶ್ಯ ಇಲ್ಲಿದೆ
ಟಿಪ್ಪರ್​ ಅಡಿಗೆ ಬಿದ್ದು ಯುವಕ ಆತ್ಮಹತ್ಯೆ: ಭಯಾನಕ ದೃಶ್ಯ ಇಲ್ಲಿದೆ
HDK ಜತೆ ರಹಸ್ಯ ಮಾತುಕತೆ, ಜೆಡಿಎಸ್ ಸೇರ್ಪಡೆ ಬಗ್ಗೆ ಜಮೀರ್ ಹೇಳಿದ್ದೇನು?
HDK ಜತೆ ರಹಸ್ಯ ಮಾತುಕತೆ, ಜೆಡಿಎಸ್ ಸೇರ್ಪಡೆ ಬಗ್ಗೆ ಜಮೀರ್ ಹೇಳಿದ್ದೇನು?
ಜೋಧ್​ಪುರದ ಪಾರ್ಕ್​​ನಲ್ಲಿ ಜೇನು ನೊಣಗಳ ದಾಳಿ
ಜೋಧ್​ಪುರದ ಪಾರ್ಕ್​​ನಲ್ಲಿ ಜೇನು ನೊಣಗಳ ದಾಳಿ
ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು?
ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು?
KSRTC ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ, 40 ಪ್ರಯಾಣಿಕರು ಪಾರು!
KSRTC ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ, 40 ಪ್ರಯಾಣಿಕರು ಪಾರು!
ದೇವನಹಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ RTO ಅಧಿಕಾರಿಗಳ ಕಾರ್ಯಾಚರಣೆ
ದೇವನಹಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ RTO ಅಧಿಕಾರಿಗಳ ಕಾರ್ಯಾಚರಣೆ
ಲೆನ್ಸ್‌ಕಾರ್ಟ್ ಉದ್ಯೋಗಿಗಳಿಗೆ ತಿಲಕವಿಟ್ಟ ಬಿಜೆಪಿ ನಾಯಕಿ ನಾಜಿಯಾ ಇಲಾಹಿ
ಲೆನ್ಸ್‌ಕಾರ್ಟ್ ಉದ್ಯೋಗಿಗಳಿಗೆ ತಿಲಕವಿಟ್ಟ ಬಿಜೆಪಿ ನಾಯಕಿ ನಾಜಿಯಾ ಇಲಾಹಿ
‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ವಿಶೇಷ ಅನಿಸಿದ್ದೇಕೆ? ವಿವರಿಸಿದ ತಾರಾ
‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾ ವಿಶೇಷ ಅನಿಸಿದ್ದೇಕೆ? ವಿವರಿಸಿದ ತಾರಾ
ಶ್ರೀಕಿಯ ಐಷಾರಾಮಿ ಜೀವನದಿಂದಲೇ ನಲಪಾಡ್​ಗೆ ಕುತ್ತು! ಹೇಗೆ ಗೊತ್ತಾ?
ಶ್ರೀಕಿಯ ಐಷಾರಾಮಿ ಜೀವನದಿಂದಲೇ ನಲಪಾಡ್​ಗೆ ಕುತ್ತು! ಹೇಗೆ ಗೊತ್ತಾ?
ದಾವಣಗೆರೆ ಜನರಿಗೆ ತಂಪೆರೆದ ಮಳೆರಾಯ: ಹಲವೆಡೆ ಅಕಾಲಿಕ ಮಳೆ
ದಾವಣಗೆರೆ ಜನರಿಗೆ ತಂಪೆರೆದ ಮಳೆರಾಯ: ಹಲವೆಡೆ ಅಕಾಲಿಕ ಮಳೆ