AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಟೋಬರ್​ನಲ್ಲಿ ಎರಡನೇ ಅತಿಹೆಚ್ಚು ಜಿಎಸ್​ಟಿ ಕಲೆಕ್ಷನ್; ಈ ವರ್ಷ ಯಾವ ರಾಜ್ಯಗಳಿಗೆ ಎಷ್ಟು ತೆರಿಗೆ ಪಾಲು ಕೊಟ್ಟಿದೆ ಕೇಂದ್ರ?

GST Collection In 2023 October: ಈ ಅಕ್ಟೋಬರ್ ತಿಂಗಳಲ್ಲಿ 1,72,003 ಕೋಟಿ ರೂನಷ್ಟು ಜಿಎಸ್​ಟಿ ಕಲೆಕ್ಷನ್ ಆಗಿದೆ. ಕಳೆದ ವರ್ಷದ ಅಕ್ಟೋಬರ್​ಗೆ ಹೋಲಿಸಿದರೆ ಜಿಎಸ್​ಟಿ ಸಂಗ್ರಹದಲ್ಲಿ ಶೇ. 13ರಷ್ಟು ಹೆಚ್ಚಳವಾಗಿದೆ. ಅಷ್ಟೇ ಅಲ್ಲ,ಏಪ್ರಿಲ್ ತಿಂಗಳು ಬಿಟ್ಟರೆ ಅಕ್ಟೋಬರ್​ನಲ್ಲೇ ಅತಿಹೆಚ್ಚು ಜಿಎಸ್​ಟಿ ಸಂಗ್ರಹವಾಗಿರುವುದು. 2023ರ ಏಪ್ರಿಲ್​ನಲ್ಲಿ 1.87 ಲಕ್ಷ ಕೋಟಿ ರೂ ಜಿಎಸ್​ಟಿ ಸಿಕ್ಕಿತ್ತು. ಇದರೊಂದಿಗೆ 2023-24ರ ಹಣಕಾಸು ವರ್ಷದಲ್ಲಿ ಸರಾಸರಿ ಜಿಎಸ್​ಟಿ ಸಂಗ್ರಹ ಒಂದು ತಿಂಗಳಿಗೆ 1.66 ಲಕ್ಷಕೋಟಿ ರೂ ಆದಂತಾಗಿದೆ.

ಅಕ್ಟೋಬರ್​ನಲ್ಲಿ ಎರಡನೇ ಅತಿಹೆಚ್ಚು ಜಿಎಸ್​ಟಿ ಕಲೆಕ್ಷನ್; ಈ ವರ್ಷ ಯಾವ ರಾಜ್ಯಗಳಿಗೆ ಎಷ್ಟು ತೆರಿಗೆ ಪಾಲು ಕೊಟ್ಟಿದೆ ಕೇಂದ್ರ?
ಜಿಎಸ್​ಟಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 01, 2023 | 4:07 PM

ನವೆಂಬರ್ 1: ಈ ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ ಜಿಎಸ್​ಟಿ ಸಂಗ್ರಹ (GST collection) ಗಣನೀಯವಾಗಿ ಹೆಚ್ಚಾಗಿದೆ. ಸರ್ಕಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಅಕ್ಟೋಬರ್​ನಲ್ಲಿ 1,72,003 ಕೋಟಿ ರೂನಷ್ಟು ಜಿಎಸ್​ಟಿ ಕಲೆಕ್ಷನ್ ಆಗಿದೆ. ಕಳೆದ ವರ್ಷದ ಅಕ್ಟೋಬರ್​ಗೆ ಹೋಲಿಸಿದರೆ ಜಿಎಸ್​ಟಿ ಸಂಗ್ರಹದಲ್ಲಿ ಶೇ. 13ರಷ್ಟು ಹೆಚ್ಚಳವಾಗಿದೆ. ಅಷ್ಟೇ ಅಲ್ಲ,ಏಪ್ರಿಲ್ ತಿಂಗಳು ಬಿಟ್ಟರೆ ಅಕ್ಟೋಬರ್​ನಲ್ಲೇ ಅತಿಹೆಚ್ಚು ಜಿಎಸ್​ಟಿ ಸಂಗ್ರಹವಾಗಿರುವುದು. 2023ರ ಏಪ್ರಿಲ್​ನಲ್ಲಿ 1.87 ಲಕ್ಷ ಕೋಟಿ ರೂ ಜಿಎಸ್​ಟಿ ಸಿಕ್ಕಿತ್ತು. ಇದರೊಂದಿಗೆ 2023-24ರ ಹಣಕಾಸು ವರ್ಷದಲ್ಲಿ ಸರಾಸರಿ ಜಿಎಸ್​ಟಿ ಸಂಗ್ರಹ ಒಂದು ತಿಂಗಳಿಗೆ 1.66 ಲಕ್ಷಕೋಟಿ ರೂ ಆದಂತಾಗಿದೆ. ಹಿಂದಿನ ವರ್ಷದ ಸರಾಸರಿಗೆ ಹೋಲಿಸಿದರೆ ಶೇ. 11ರಷ್ಟು ಹೆಚ್ಚಾಗಿದೆ. ಹಾಗೆಯೇ, ಈ ವರ್ಷ ಐಜಿಎಸ್​ಟಿಯನ್ನು ಸರ್ಕಾರ ರಾಜ್ಯಗಳಿಗೆ ಹಂಚಿಕೆ ಮಾಡಿದ್ದು, ಮಧ್ಯಪ್ರದೇಶ, ಉತ್ತರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಿಗೆ ಹೆಚ್ಚಿನ ಪಾಲು ಸಿಕ್ಕಿದೆ.

2023-24ರಲ್ಲಿ ಸಂಗ್ರಹವಾದ ಜಿಎಸ್​ಟಿ ತೆರಿಗೆ

  • ಏಪ್ರಿಲ್: 1.87 ಲಕ್ಷ ಕೋಟಿ ರೂ
  • ಮೇ: 1.57 ಲಕ್ಷ ಕೋಟಿ ರೂ
  • ಜೂನ್: 1.61 ಲಕ್ಷ ಕೋಟಿ ರೂ
  • ಜುಲೈ: 1.65 ಲಕ್ಷ ಕೋಟಿ ರೂ
  • ಆಗಸ್ಟ್: 1.59 ಲಕ್ಷ ಕೋಟಿ ರೂ
  • ಸೆಪ್ಟೆಂಬರ್: 1.63 ಲಕ್ಷ ಕೋಟಿ ರೂ
  • ಅಕ್ಟೋಬರ್: 1.72 ಲಕ್ಷ ಕೋಟಿ ರೂ

ಒಟ್ಟು ಏಳು ತಿಂಗಳಲ್ಲಿ 11.65 ಲಕ್ಷಕೋಟಿ ರೂನಷ್ಟು ಜಿಎಸ್​ಟಿ ಬಂದಿದೆ.

ಇದನ್ನೂ ಓದಿ: ಸುಕನ್ಯಾ ಸಮೃದ್ಧಿ ಯೋಜನೆ: ತಿಂಗಳಿಗೆ 1,000 ರೂ ಕಟ್ಟಿದರೆ ಎಷ್ಟು ರಿಟರ್ನ್ ಸಿಗುತ್ತದೆ? ಇಲ್ಲಿದೆ ಡೀಟೇಲ್ಸ್

ಅಕ್ಟೋಬರ್​ನಲ್ಲಿ ಬಂದಿರುವ 1.72 ಲಕ್ಷ ಕೋಟಿ ರೂ ಜಿಎಸ್​ಟಿಯಲ್ಲಿ ಸೆಂಟ್ರಲ್ ಜಿಎಸ್​ಟಿ 30,062 ಕೋಟಿ ರೂ, ಸ್ಟೇಟ್ ಜಿಎಸ್​ಟಿ 38,171 ಕೋಟಿ ರೂ, ಐಜಿಎಸ್​ಟಿ 91,315 ಕೋಟಿ ರೂ, ಹಾಗೂ ಸೆಸ್ 12,456 ಕೋಟಿ ರೂನಷ್ಟಿದೆ.

ಐಜಿಎಸ್​ಟಿಯನ್ನು ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಹಂಚಲಾಗಿದೆ. ಕೇಂದ್ರಕ್ಕೆ 42,873 ಕೋಟಿ ರೂ ಸಿಕ್ಕಿದೆ. ರಾಜ್ಯಕ್ಕೆ 36,614 ಕೋಟಿ ರೂ ಪಾಲು ಬಂದಿದೆ. ಇದರೊಂದಿಗೆ ಅಕ್ಟೋಬರ್ ತಿಂಗಳ ಜಿಎಸ್​ಟಿ ಸಂಗ್ರಹದಲ್ಲಿ ಕೇಂದ್ರಕ್ಕೆ 72,934 ಕೋಟಿ ರೂ, ರಾಜ್ಯ ಸರ್ಕಾರಗಳಿಗೆ 74,785 ಕೋಟಿ ರೂ ಸಿಕ್ಕಂತಾಗಿದೆ.

ಇದನ್ನೂ ಓದಿ: LPG Cylinder Price: ದೀಪಾವಳಿ ಹೊಸ್ತಿಲಲ್ಲಿ ಗ್ರಾಹಕರಿಗೆ ಶಾಕ್, ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ

ಕಳೆದ ಏಳು ತಿಂಗಳಲ್ಲಿ ರಾಜ್ಯಗಳಿಗೆ ಸಿಕ್ಕ ತೆರಿಗೆ ಪಾಲು

ಈ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ (2023ರ ಏಪ್ರಿಲ್​ನಿಂದ ಅಕ್ಟೋಬರ್​ವರೆಗೆ) ಐಜಿಎಸ್​ಟಿಯಲ್ಲಿ ರಾಜ್ಯಗಳಿಗೆ ಅವುಗಳ ಪಾಲನ್ನು ಹಂಚಲಾಗಿದೆ. ಎಸ್​ಜಿಎಸ್​ಟಿ ಮತ್ತು ಐಜಿಎಸ್​ಟಿ ಪಾಲು ಎರಡೂ ಸೇರಿ ವಿವಿಧ ರಾಜ್ಯಗಳಿಗೆ ಎಷ್ಟು ತೆರಿಗೆ ಸಿಕ್ಕಿದೆ ಎಂಬ ವಿವರ ಈ ಟಾಪ್ 10 ಪಟ್ಟಿಯಲ್ಲಿದೆ…

  1. ಮಹಾರಾಷ್ಟ್ರ: 84,712 ಕೋಟಿ ರೂ
  2. ಉತ್ತರಪ್ರದೇಶ: 42,482 ಕೋಟಿ ರೂ
  3. ಕರ್ನಾಟಕ: 42,657 ಕೋಟಿ ರು
  4. ತಮಿಳುನಾಡು: 37,476 ಕೋಟಿ ರೂ
  5. ಗುಜರಾತ್: 36,322 ಕೋಟಿ ರೂ
  6. ಪಶ್ಚಿಮ ಬಂಗಾಳ: 24,607 ಕೋಟಿ ರೂ
  7. ತೆಲಂಗಾಣ: 23,478 ಕೋಟಿ ರೂ
  8. ರಾಜಸ್ಥಾನ: 22,571 ಕೋಟಿ ರೂ
  9. ಹರ್ಯಾಣ: 20,358 ಕೋಟಿ ರೂ
  10. ದೆಹಲಿ: 18,598 ಕೋಟಿ ರೂ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಾಧು ಕೋಕಿಲ ಸಿನಿಮಾ ಕಡಿಮೆ ಆಗಿದ್ದು ಯಾಕೆ? ಕಾರಣ ತಿಳಿಸಿದ ಕಾಮಿಡಿ ಕಿಂಗ್
ಸಾಧು ಕೋಕಿಲ ಸಿನಿಮಾ ಕಡಿಮೆ ಆಗಿದ್ದು ಯಾಕೆ? ಕಾರಣ ತಿಳಿಸಿದ ಕಾಮಿಡಿ ಕಿಂಗ್
ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ
ಜಾನಪದವೇ ಎಲ್ಲ ಕಲೆಗಳ ಮೂಲ, ಅದು ಜಾನಪದವಲ್ಲ ಜ್ಞಾನಪದ: ವೆಂಕಪ್ಪ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ಐಪಿಎಲ್‌ನಲ್ಲಿ 7 ಸಾವಿರ ರನ್ ಪೂರೈಸಿದ ರೋಹಿತ್
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
ನೈಜೀರಿಯಾದ ಮೊಕ್ವಾ ನಗರದಲ್ಲಿ ಡ್ಯಾಂ ಕುಸಿದು ಭಾರೀ ಪ್ರವಾಹ; 111 ಜನ ಸಾವು
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಹಂಚಿಕೆದಾರರಿಗೆ ನಷ್ಟವಾದರೆ ಕಮಲ್ ಹಾಸನ್​ನಿಂದ ವಸೂಲಿ ಮಾಡಲಿ: ನಾರಾಯಣಗೌಡ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ಶಿವಣ್ಣ ಆರೋಗ್ಯದಲ್ಲಿ ಏರುಪೇರಾಗಿದೆ, ಅವರನ್ನು ದಶಕಗಳಿಂದ ಬಲ್ಲೆ: ಸೋಮಣ್ಣ
ದುಬೈನಲ್ಲಿ ಪಾಕ್ ಕ್ರಿಕೆಟಗರಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ
ದುಬೈನಲ್ಲಿ ಪಾಕ್ ಕ್ರಿಕೆಟಗರಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ
ಕಮಲ್ ಹಾಸನ್​ಗೆ ಈಗಲೂ ಕಾಲ ಮಿಂಚಿಲ್ಲ, ಕ್ಷಮೆ ಯಾಚಿಸಲಿ: ನಾರಾಯಣಗೌಡ