AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

HDFC Overdraft: ಸಣ್ಣ ಉದ್ಯಮಿಗಳು, ವರ್ತಕರಿಗೆ ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ಸಾಲ “ದುಕಾನ್​ದಾರ್ ಓವರ್​ಡ್ರಾಫ್ಟ್ ಸ್ಕೀಮ್”

ದೇಶದ ಪ್ರಮುಖ ಖಾಸಗಿ ಬ್ಯಾಂಕ್​ಗಳ ಪೈಕಿ ಒಂದಾದ ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ಸಣ್ಣ ಉದ್ಯಮಿಗಳು, ವರ್ತಕರಿಗೆ ದುಕಾನ್​ದಾರ್ ಓವರ್​ಡ್ರಾಫ್ಟ್​ ಯೋಜನೆ ಘೋಷಣೆ ಮಾಡಲಾಗಿದೆ.

HDFC Overdraft: ಸಣ್ಣ ಉದ್ಯಮಿಗಳು, ವರ್ತಕರಿಗೆ ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ಸಾಲ ದುಕಾನ್​ದಾರ್ ಓವರ್​ಡ್ರಾಫ್ಟ್ ಸ್ಕೀಮ್
ಎಚ್‌ಡಿಎಫ್‌ಸಿ ಬ್ಯಾಂಕ್‌
TV9 Web
| Edited By: |

Updated on:Jul 27, 2021 | 6:19 PM

Share

ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್​ ಆದ ಎಚ್​ಡಿಎಫ್​ಸಿ ಬ್ಯಾಂಕ್​ನಿಂದ (HDFC Bank) ಸೋಮವಾರ ಸಣ್ಣ ರೀಟೇಲರ್​ಗಳಿಗಾಗಿ ಓವರ್​ಡ್ರಾಫ್ಟ್​  (Overdraft) ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಸರ್ಕಾರದ ಆಡಳಿತ ಸೇವೆ ಡೆಲಿವರಿ ಅಂಗಸಂಸ್ಥೆಯಾದ ಸಿಎಸ್​ಸಿ ಎಸ್​ಪಿವಿ ಸಹಭಾಗಿತ್ವದಲ್ಲಿ, ಸರ್ಕಾರಿ ಯೋಜನೆ ಮತ್ತು ಸೇವೆಗಳನ್ನು ಕಾಮನ್ ಸರ್ವೀಸ್ ಸೆಂಟರ್​ (ಸಿಎಸ್​ಸಿ) ಮೂಲಕ ಸಾಧ್ಯ ಆಗುತ್ತದೆ. ಎಚ್​ಡಿಎಫ್​ಸಿ ಬ್ಯಾಂಕ್​ನಿಂದ “ದುಕಾನ್​ದಾರ್ ಓವರ್​ಡ್ರಾಫ್ಟ್ ಸ್ಕೀಮ್” ಅನ್ನು ತಂದಿದ್ದು, ಅಂಗಡಿ ಮಾಲೀಕರಿಗೆ ಮತ್ತು ವರ್ತಕರಿಗೆ ನಗದು ಕೊರತೆಯನ್ನು ನೀಗಿಸಲು ನೆರವು ನೀಡುತ್ತದೆ. ಬ್ಯಾಂಕ್​ ನೀಡಿದ ಮಾಹಿತಿಯಂತೆ, ಕನಿಷ್ಠ 3 ವರ್ಷಗಳಿಂದ ಕಾರ್ಯ ನಿರ್ವಹಣೆ ಮಾಡಿದ ರೀಟೇಲರ್​ಗಳು ಈ ಯೋಜನೆ ಅರ್ಹರು. ಇದಕ್ಕಾಗಿ ಯಾವುದಾದರೂ ಬ್ಯಾಂಕ್​ನಿಂದ 6 ತಿಂಗಳ ಸ್ಟೇಟ್​ಮಂಟ್ ನೀಡಬೇಕಾಗುತ್ತದೆ. ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ತಿಳಿಸಿರುವ ಹೇಳಿಕೆಯಲ್ಲಿ, ಕನಿಷ್ಠ 50 ಸಾವಿರ ರೂಪಾಯಿಯಿಂದ ಗರಿಷ್ಠ 10 ಲಕ್ಷ ರೂಪಾಯಿ ತನಕ ನೀಡಲಾಗುತ್ತದೆ.

ಈ ಹೊಸ ಯೋಜನೆಯು ಸಣ್ಣ ವರ್ತಕರನ್ನು ಗಮನದಲ್ಲಿ ಇಟ್ಟುಕೊಂಡು ಸೃಷ್ಟಿಸಲಾಗಿದೆ. ಮಳಿಗೆ ಆರಂಭವಾಗಿ 6 ವರ್ಷಕ್ಕಿಂತ ಕಡಿಮೆ ಇದ್ದಲ್ಲಿ 7.5 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿ ದೊರೆಯುತ್ತದೆ. 6 ವರ್ಷಕ್ಕಿಂತ ಮೇಲ್ಪಟ್ಟು ಉದ್ಯಮ ನಡೆಸುತ್ತಿದ್ದಲ್ಲಿ 10 ಲಕ್ಷ ರೂಪಾಯಿ ಸಾಲ ಸಿಗುತ್ತದೆ. 5 ಲಕ್ಷ ರೂಪಾಯಿ ಮೇಲ್ಪಟ್ಟ ಮೊತ್ತದ ಸಾಲಕ್ಕೆ ಶೇ 0.40ರಿಂದ ಶೇ 0.80 ಕಮಿಷನ್ ಹಳ್ಳಿ ಮಟ್ಟದ ಉದ್ಯಮಿಗಳಿಗೆ ದೊರೆಯುತ್ತದೆ. 600 ಶಾಖೆಗಳು ಮತ್ತು ವರ್ಚುವಲ್ ರಿಲೇಷನ್​ಶಿಪ್ ಮ್ಯಾನೇಜ್​ಮೆಂಟ್ ಸಪೋರ್ಟ್​ನೊಂದಿಗೆ ನೀಡುತ್ತದೆ. ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ECLGS) ಭಾಗವಾಗಿ ಸಾಲ ನೀಡುವ ಸಂಸ್ಥೆಯಾಗಿ ಎಚ್​ಡಿಎಫ್​ಸಿ ಬ್ಯಾಂಕ್​ ಡಿಸೆಂಬರ್ 31, 2020ರ ತನಕ ರೂ. 23,200 ಕೋಟಿ ವಿತರಿಸಿದೆ.

ಪಿಟಿಐ ವರದಿ ಮಾಡಿರುವ ಪ್ರಕಾರ, ಬ್ಯಾಂಕ್​ನಿಂದ ತಿಳಿಸಿರುವಂತೆ, ಮೂರು ಪ್ರಮುಖ ಖಾಸಗಿ ಬ್ಯಾಂಕ್​ಗಳ ಪೈಕಿ 2020- 21ರ ನಿವೃತ್ತಿ ವರ್ಷದಲ್ಲಿ ಅತಿ ಹೆಚ್ಚು ಮೊತ್ತವಾದ 13.82 ಕೋಟಿ ರೂಪಾಯಿ ಪಡೆದ ಬ್ಯಾಂಕರ್ ಎನಿಸಿಕೊಂಡಿದ್ದರು ಆದಿತ್ಯ ಪುರಿ. ದೇಶದ ಪ್ರಮುಖ ಖಾಸಗಿ ಬ್ಯಾಂಕ್​ಗಳ ಪೈಕಿ ಎಚ್​ಡಿಎಫ್​ಸಿ ಬ್ಯಾಂಕ್ ಪ್ರಮುಖ ಎನಿಸಿಕೊಂಡಿದೆ. ಕೊವಿಡ್ 19 ಬಿಕ್ಕಟ್ಟು ಕಾಣಿಸಿಕೊಂಡ ಮೇಲೆ ದೇಶದ ಸಣ್ಣ ಉದ್ಯಮಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇದರಿಂದಾಗಿ ವರ್ಕಿಂಗ್​ ಕ್ಯಾಪಿಟಲ್​ ಅಗತ್ಯಗಳಿಗೆ ಬ್ಯಾಂಕ್​ಗಳಿಂದ ಸಾಲ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Covid 19 loan: ಕೆನರಾ ಬ್ಯಾಂಕ್​ನಿಂದ ರೂ. 25 ಸಾವಿರದಿಂದ 2 ಕೋಟಿಯ ತನಕ 3 ಬಗೆಯ ಸಾಲ ಯೋಜನೆ ಘೋಷಣೆ

(HDFC Bank Announced Dukandar Overdraft Scheme For Small Traders For Business Purpose )

Published On - 6:17 pm, Tue, 27 July 21

Follow Us
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್