AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರೆಂಡಿಂಗ್​ನಲ್ಲಿದೆ ಎಚ್​ಎಂಟಿ ಗಂಡಬೇರುಂಡ ವಾಚು; ಕನ್ನಡಿಗರ ಈ ಅಚ್ಚುಮೆಚ್ಚಿನ ಕೈಗಡಿಯಾರದ ವಿಶೇಷತೆ ಏನು ಗೊತ್ತಾ?

Kannadigas' nostalgia HMT Gandaberunda watches in the trending: ಗಂಡಬೇರುಂಡ ವಾಚುಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿವೆ. ಬಹಳಷ್ಟು ಕನ್ನಡಿಗರು ಈ ವಾಚುಗಳ ಬಗ್ಗೆ ಮಾತನಾಡುತ್ತಿದ್ದಾರೆ. ಎಚ್​ಎಂಟಿ ತಯಾರಿಸುವ ಗಂಡಬೇರುಂಡ ವಾಚು ಕನ್ನಡಿಗರ ಮೆಚ್ಚಿನದ್ದಾಗಿದೆ. ಎಪ್ಪತ್ತರ ದಶಕದಲ್ಲಿ ತಯಾರಿಕೆಯಾಗತೊಡಗಿದ ಗಂಡಬೇರುಂಡ ವಾಚಿನ ಬಗ್ಗೆ ಮಾಹಿತಿ...

ಟ್ರೆಂಡಿಂಗ್​ನಲ್ಲಿದೆ ಎಚ್​ಎಂಟಿ ಗಂಡಬೇರುಂಡ ವಾಚು; ಕನ್ನಡಿಗರ ಈ ಅಚ್ಚುಮೆಚ್ಚಿನ ಕೈಗಡಿಯಾರದ ವಿಶೇಷತೆ ಏನು ಗೊತ್ತಾ?
ಎಚ್​ಎಂಟಿ ಗಂಡಬೇರುಂಡ ವಾಚು
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 28, 2025 | 2:26 PM

Share

ಬೆಂಗಳೂರು, ಜುಲೈ 28: ಎಚ್​ಎಂಟಿಯ ಗಂಡಬೇರುಂಡ ವಾಚುಗಳು (HMT Gandaberunda watch) ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿವೆ. ಹಲವು ಕನ್ನಡಿಗರು ಈ ವಾಚುಗಳ ಫೋಟೋ ಪೋಸ್ಟ್ ಮಾಡಿ ಗರ್ವ ಪಡುತ್ತಿದ್ದಾರೆ. ತಮ್ಮಲ್ಲಿರುವ ಗಂಡಬೇರುಂಡ ವಾಚುಗಳನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಿದ್ದಾರೆ. ಅಂದಹಾಗೆ ಎಚ್​ಎಂಟಿಯ ಗಂಡಬೇರುಂಡ ವಾಚುಗಳ ವಿಶೇಷತೆ ಏನು, ಕನ್ನಡಿಗರಿಗೆ ಈ ವಾಚು ಮೇಲಿನ ಪ್ರೀತಿಗೆ ಕಾರಣ ಏನು ಎನ್ನುವ ವಿವರ ಇಲ್ಲಿದೆ.

ಬೆಂಗಳೂರಿನ ಎಚ್​ಎಂಟಿ ಕಂಪನಿ ಒಂದು ಕಾಲದಲ್ಲಿ ಕೈಗಡಿಯಾರ ತಯಾರಿಕೆಯಲ್ಲಿ ಭಾರತದ ನಂಬರ್ ಒನ್ ಎನಿಸಿತ್ತು. ಅದರ ವಾಚು ತುಸು ದುಬಾರಿಯಾದರೂ ಜನರಿಗೆ ಅದು ಪ್ರತಿಷ್ಠೆಯ ಸಂಕೇತ. ಎಪ್ಪತ್ತರ ದಶಕದಲ್ಲಿ ಎಚ್​ಎಂಟಿ ಬಿಡುಗಡೆ ಮಾಡಿದ ವಾಚುಗಳಲ್ಲಿ ಗಂಡಬೇರುಂಡ ಬ್ರ್ಯಾಂಡ್​ನದ್ದೂ ಒಂದು. ಹಲವು ವಿಶೇಷತೆಗಳು ಈ ಗಂಡಬೇರುಂಡ ವಾಚಿನಲ್ಲಿವೆ.

ಗಂಡಬೇರುಂಡ ವಾಚಿನ ವಿಶೇಷತೆಗಳು..

ಗಂಡಬೇರುಂಡ ಎಂಬುದು ಹಿಂದೂ ಪುರಾಣಗಳಲ್ಲಿ ಕೇಳಿಬರುವ ಎರಡು ಮುಖದ ಭಾರೀ ಗಾತ್ರದ ಪಕ್ಷಿ. ನರಸಿಂಹನ ಒಂದು ರೂಪ ಎಂದು ಪರಿಗಣಿಸಲಾಗುತ್ತದೆ. ಪುರಾಣದಲ್ಲಿ ಬಣ್ಣಿಸಿರುವ ಪ್ರಕಾರ ಗಂಡಬೇರುಂಡವು ಎರಡು ಆನೆಗಳನ್ನು ಹಿಡಿದಿಟ್ಟುಕೊಳ್ಳಬಲ್ಲಷ್ಟು ಶಕ್ತಿಶಾಲಿಯಂತೆ.

ಇದನ್ನೂ ಓದಿ: ಮನುಷ್ಯರ ಮಲ, ಮೂತ್ರ ಖರೀದಿಸುತ್ತಿದೆ ಮೈಕ್ರೋಸಾಫ್ಟ್; ಒಂದು ಟನ್​ಗೆ 30 ಸಾವಿರ ರೂ; ಯಾಕೆ ಗೊತ್ತಾ?

ಹಿಂದಿನ ಅನೇಕ ಸಾಮ್ರಾಜ್ಯಗಳು ಗಂಡಬೇರುಂಡವನ್ನು ತಮ್ಮ ಲಾಂಛನವನ್ನಾಗಿ ಮಾಡಿಕೊಂಡಿದ್ದುವು. ಅದರಲ್ಲೂ ಕನ್ನಡಿಗ ರಾಜವಂಶಗಳಾದ ಚಾಳುಕ್ಯರು, ಕದಂಬರು, ವಿಜಯನಗರ, ಮೈಸೂರು ಒಡೆಯರರ ಸಾಮ್ರಾಜ್ಯಗಳಿಗೆ ಗಂಡಬೇರುಂಡವೇ ಲಾಂಛನವಾಗಿತ್ತು. ಈಗ ಕರ್ನಾಟಕ ರಾಜ್ಯದ ಲಾಂಛನದಲ್ಲೂ ಗಂಡಬೇರುಂಡವನ್ನು ಉಳಿಸಿಕೊಳ್ಳಲಾಗಿದೆ.

ಎಚ್​ಎಂಟಿ ಸಂಸ್ಥೆಯ ಗಂಡಬೇರುಂಡ ವಾಚಿನಲ್ಲಿ ಹಲವು ವಿಶೇಷತೆಗಳಿವೆ. ಗಂಡಬೇರುಂಡ ಲಾಂಛನದ ಚಿತ್ರ ಇರುವುದು ಮಾತ್ರವಲ್ಲ, ಕನ್ನಡ ಅಂಕಿಗಳನ್ನು ಒಳಗೊಂಡಿದೆ. ಅದರಲ್ಲೂ ವೈನ್ ಬಣ್ಣದ ಗಂಡಬೇರುಂಡ ವಾಚುಗಳಿಗೆ ಆಗಲೇ ಬಹಳ ಡಿಮ್ಯಾಂಡ್ ಇತ್ತು. ಈಗ ವರ್ಷಕ್ಕೆ ಒಮ್ಮೆ ಎಚ್​ಎಂಟಿ ಸಂಸ್ಥೆ ಸೀಮಿತ ಸಂಖ್ಯೆಯಲ್ಲಿ ಇಂಥ ವಾಚುಗಳನ್ನು ಬಿಡುಗಡೆ ಮಾಡುತ್ತದೆ. ಕೆಲವೇ ದಿನಗಳಲ್ಲಿ ಎಲ್ಲವೂ ಖಾಲಿಯಾಗುವಷ್ಟು ಬೇಡಿಕೆ ಇದಕ್ಕಿದೆ.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹಲವು ವ್ಯಕ್ತಿಗಳು ತಾವು ಹೊಂದಿರುವ ಎಚ್​ಎಂಟಿಯ ಗಂಡಬೇರುಂಡ ವಾಚುಗಳನ್ನು ಪ್ರದರ್ಶಿಸುತ್ತಿದ್ದಾರೆ. ಒಬ್ಬರಂತೂ, ಗಂಡಬೇರುಂಡ, ಜನತಾ ಮೊದಲಾದ ವಾಚುಗಳನ್ನು ಮತ್ತೆ ತಯಾರಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಗಂಡಬೇರುಂಡ ವಾಚಿನ ಬಗ್ಗೆ ಪೋಸ್ಟ್

ಮತ್ತೊಂದು ಪೋಸ್ಟು

ಇದನ್ನೂ ಓದಿ: ಜನಸಂಖ್ಯೆಗಿಂತ ಕಂಪನಿಗಳ ಸಂಖ್ಯೆಯೇ ಹೆಚ್ಚು; ಏರ್​ಪೋರ್ಟ್ ಇಲ್ಲ; ಜನರು ಭಾರೀ ಶ್ರೀಮಂತರು; ಇದು ಲಿಕ್ಟನ್​ಸ್ಟೈನ್ ದೇಶದ ಕಥೆ

ಗಂಡಬೇರುಂಡ ವಾಚು ಎಲ್ಲಿ ಸಿಗುತ್ತೆ?

ಎಚ್​ಎಂಟಿ ತಯಾರಿಸುವ ಗಂಡಬೇರುಂಡ ವಾಚುಗಳು ಬೆಂಗಳೂರಿನಲ್ಲಿ ನಾಲ್ಕು ಕಡೆ ಸಿಗುತ್ತವೆ. ಎಂಜಿ ರಸ್ತೆಯಲ್ಲಿರುವ ಬಾರ್ಟಾನ್ ಸೆಂಟರ್, ಜಾಲಹಳ್ಳಿಯಲ್ಲಿರುವ ಎಬಿಡಿ ಶೋರೂಮ್, ಇದೇ ಜಾಲಹಳ್ಳಿಯಲ್ಲಿರುವ ಎಚ್​ಎಂಟಿ ಮ್ಯೂಸಿಯಂ ಸೋವನಿರ್ ಶಾಪ್, ಹಾಗೂ ಮೇಖ್​ರಿ ಸರ್ಕಲ್​ನಲ್ಲಿರುವ ಎಚ್​ಎಂಟಿ ಭವನ, ಈ ನಾಲ್ಕು ಕಡೆ ಗಂಡಬೇರುಂಡ ವಾಚುಗಳು ಲಭ್ಯ ಇರಬಹುದು.

ಸೀಮಿತ ಸಂಖ್ಯೆಯಲ್ಲಿ ಮಾತ್ರವೇ ಇವುಗಳನ್ನು ತಯಾರಿಸಲಾಗುವುದರಿಂದ ಬಹಳ ಬೇಗ ಮಾರಾಟವಾಗಿ ಹೋಗುತ್ತವೆ. ಎಚ್​ಎಂಟಿ ಈ ವಾಚುಗಳನ್ನು ಬಿಡುಗಡೆ ಮಾಡಿದ ಕೂಡಲೇ ಹೋದರೆ ಲಭ್ಯ ಇರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:18 pm, Mon, 28 July 25

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್