AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವೇಗದಲ್ಲಿ ಹೋದ್ರೆ ಭಾರತ ಶ್ರೀಮಂತ ದೇಶ ಆಗೋದು ಯಾವಾಗ?: ರಘುರಾಮ್ ರಾಜನ್

Raghuram Rajan speaks: ಭಾರತದ ಜನಸಂಖ್ಯಾ ಬಲ ಕಡಿಮೆ ಆಗುವುದರೊಳಗೆ ಶ್ರೀಮಂತ ದೇಶ ಆಗಲು ಸಾಧ್ಯವಾ ಎಂದು ಮಾಜಿ ಆರ್​ಬಿಐ ಗವರ್ನರ್ ರಘುರಾಮ್ ರಾಜನ್ ಪ್ರಶ್ನಿಸಿದ್ದಾರೆ. ಈಗೇನೂ ಭಾರತಕ್ಕೆ ಜನಸಂಖ್ಯಾ ಬಲ ಇದೆ. ಇದರಿಂದ ಬಹಳ ಬೇಗ ವಿಶ್ವದ ಮೂರನೆ ಅತಿದೊಡ್ಡ ಆರ್ಥಿಕತೆ ಆಗಬಹುದು. 1950ರ ಬಳಿಕ ಭಾರತದ ಹೆಚ್ಚಿನ ಜನರಿಗೆ ವಯಸ್ಸಾಗಿರುತ್ತದೆ. ಅಷ್ಟರೊಳಗೆ ಶ್ರೀಮಂತ ದೇಶವಾಗಬೇಕೆಂದರೆ ಶೇ. 6, ಶೇ. 6.5ರ ದರದ ಬೆಳವಣಿಗೆಯಿಂದ ಸಾಧ್ಯವಾಗುವುದಿಲ್ಲ ಎಂದು ರಾಜನ್ ಹೇಳಿದ್ದಾರೆ.

ಈ ವೇಗದಲ್ಲಿ ಹೋದ್ರೆ ಭಾರತ ಶ್ರೀಮಂತ ದೇಶ ಆಗೋದು ಯಾವಾಗ?: ರಘುರಾಮ್ ರಾಜನ್
ರಘುರಾಮ್ ರಾಜನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 20, 2024 | 6:30 PM

Share

ನವದೆಹಲಿ, ಮೇ 20: ಜನಸಂಖ್ಯಾ ಬಲದಿಂದ (demographic dividend) ಭಾರತದ ಆರ್ಥಿಕತೆ ಬೆಳೆಯುತ್ತಿದೆ. ಸ್ಥಗಿತ ಸ್ಥಿತಿಯಲ್ಲಿರುವ ಜಪಾನ್, ಜರ್ಮನಿಯನ್ನು ಹಿಂದಿಕ್ಕಿ ಭಾರತ ಮೂರನೇ ಅತಿದೊಡ್ಡ ಆರ್ಥಿಕ (Indian economy) ದೇಶವಾಗಬಹುದು. ಆದರೆ, ಭಾರತ ಶ್ರೀಮಂತ ದೇಶವಾಗುತ್ತಿದೆಯಾ (rich country) ಎಂದು ಮಾಜಿ ಆರ್​ಬಿಐ ಗವರ್ನರ್ ರಘುರಾಮ್ ರಾಮನ್ (Raghuram Rajan) ಪ್ರಶ್ನೆ ಮಾಡಿದ್ದಾರೆ. ಭಾರತಕ್ಕೆ ಈಗ ಜನಸಂಖ್ಯಾ ಬಲ ಸಿಕ್ಕಿದೆ. 2047-2050ರಲ್ಲಿ ಭಾರತದ ಹೆಚ್ಚಿನ ಜನಸಂಖ್ಯೆಗೆ ವಯಸ್ಸಾಗಿರುತ್ತದೆ. ಅಷ್ಟರೊಳಗೆ ಭಾರತ ಶ್ರೀಮಂತ ದೇಶವಾಗುತ್ತದಾ ಎಂದು ಅವರು ಕೇಳಿದ್ದಾರೆ.

ಶ್ರೀಮಂತ ದೇಶವಾಗಲು ಏನು ಮಾಡಬೇಕು?

ಶೇ. 6ರಿಂದ 6.5ರಷ್ಟು ದರದಲ್ಲಿ ಬೆಳೆದರೆ ಶ್ರೀಮಂತವಾಗಲು ಸಾಧ್ಯವಿಲ್ಲ. ಯುವ ಜನರಿಗೆ ಹೆಚ್ಚು ಉದ್ಯೋಗಾವಕಾಶ ಸೃಷ್ಟಿಸಿದರೆ ಆರ್ಥಿಕತೆಯ ಲಾಭವನ್ನು ಪಡೆಯಲು ಸಾಧ್ಯ. ಹೆಚ್ಚು ವೇಗದಲ್ಲಿ ಆರ್ಥಿಕತೆ ಬೆಳೆಯಲು ಸಾಧ್ಯ. ಇದರಿಂದ ದೇಶ ಶ್ರೀಮಂತವಾಗಬಹುದು ಎಂದು ರಘುರಾಮ್ ರಾಜನ್ ಹೇಳಿದ್ದಾರೆ.

ಜನಸಂಖ್ಯೆಯ ಒಂದು ಪ್ರಮುಖ ಭಾಗವನ್ನು ನಿರ್ಲಕ್ಷಿಸಬಾರದು

ಜನಸಂಖ್ಯೆಯ ಒಂದು ಪ್ರಮುಖ ಭಾಗವನ್ನು ನಿರ್ಲಕ್ಷಿಸದೇ, ಅದರ ಸಮಸ್ಯೆಯನ್ನು ಆಲಿಸಿ ಪರಿಹಾರ ನೀಡುವ ಅವಶ್ಯಕತೆ ಇದೆ. ಬಹು ಜನರನ್ನು ದ್ವಿತೀಯ ದರ್ಜೆ ನಾಗರಿಕರನ್ನಾಗಿ ಕಾಣುವ ಯಾವ ದೇಶವೂ ಯಶಸ್ಸು ಪಡೆದಿಲ್ಲ ಎಂದು ಮಾಜಿ ಆರ್​ಬಿಐ ಗವರ್ನರ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಬ್ರಿಟನ್​ನಲ್ಲಿ ದಿಕ್ಕಾಪಾಲಾಗುತ್ತಿದೆ ‘ಬೇಬಿ ಬೂಮರ್ಸ್’ ಆಸ್ತಿ; ಇದು ಪಿತ್ರಾರ್ಜಿತ ಆಸ್ತಿ ತೆರಿಗೆ ತಂದ ಫಜೀತಿ

‘ಪರಿಸ್ಥಿತಿ ಉತ್ತಮಗೊಳ್ಳುತ್ತಿದೆ, ಪ್ರಗತಿ ಹೊಂದುತ್ತಿದ್ದೇವೆ ಎಂದು ಅವರಿಗೆ ಅನಿಸಬೇಕು. ಸ್ವಾತಂತ್ರ್ಯ ಬಂದಾಗಿನಿಂದ ಭಾರತದಲ್ಲಿ ಇರುವ ಸಮಾನತೆಯ ವಾತಾವರಣವನ್ನು ನೀವು ನಿಲ್ಲಿಸಲು ಆಗುವುದಿಲ್ಲ,’ ರಾಜನ್ ಅವರು ಕೇಂದ್ರ ಸರ್ಕಾರಕ್ಕೆ ತಿಳಿಹೇಳಿದ್ದಾರೆ. ಇಲ್ಲಿ ಅವರು ಅಲ್ಪಸಂಖ್ಯಾತರ ವಿಚಾರದ ಬಗ್ಗೆ ವ್ಯಕ್ತಪಡಿಸಿದ ಅನಿಸಿಕೆಯೋ ಸ್ಪಷ್ಟವಾಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್