AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1,000 ಕಿಮೀ ಮೈಲಿಗಲ್ಲು; ವಿಶ್ವದ ಮೂರನೇ ಅತಿದೊಡ್ಡ ಮೆಟ್ರೋ ಜಾಲ ಭಾರತದ್ದು

India's metro rail network: ದೆಹಲಿ ಮೆಟ್ರೋದ ನಾಲ್ಕನೇ ಹಂತದ ಯೋಜನೆಯಲ್ಲಿ ಒಂದೆರಡು ಮಾರ್ಗಗಳ ಉದ್ಘಾಟನೆ ಕಳೆದ ಎರಡು ವಾರದಲ್ಲಿ ಆಗಿದೆ. ಇದರೊಂದಿಗೆ ಭಾರತದಲ್ಲಿ ಒಟ್ಟಾರೆ ಮೆಟ್ರೋ ರೈಲು ನೆಟ್ವರ್ಕ್ 1,000 ಕಿಮೀ ದಾಟಿದೆ. ಈ ಮೈಲಿಗಲ್ಲು ದಾಟಿರುವುದು ಚೀನಾ, ಅಮೆರಿಕ ಬಿಟ್ಟರೆ ಭಾರತವೇ. ಭಾರತದಲ್ಲಿ ದೆಹಲಿ, ಬೆಂಗಳೂರು ಸೇರಿದಂತೆ 23 ನಗರಗಳಲ್ಲಿ ಮೆಟ್ರೋ ರೈಲು ನೆಟ್ವರ್ಕ್ ಇದೆ.

1,000 ಕಿಮೀ ಮೈಲಿಗಲ್ಲು; ವಿಶ್ವದ ಮೂರನೇ ಅತಿದೊಡ್ಡ ಮೆಟ್ರೋ ಜಾಲ ಭಾರತದ್ದು
ದೆಹಲಿ ಮೆಟ್ರೋ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 15, 2025 | 3:57 PM

Share

ನವದೆಹಲಿ, ಜನವರಿ 15: ಭಾರತವು ಜಗತ್ತಿನ ಮೂರನೇ ಅತಿದೊಡ್ಡ ಮೆಟ್ರೋ ರೈಲು ನೆಟ್ವರ್ಕ್ ವ್ಯವಸ್ಥೆ ಹೊಂದಿದೆ. 1,000 ಕಿಮೀಯಷ್ಟು ಬೃಹತ್ ಮೆಟ್ರೋ ರೈಲು ನೆಟ್ವರ್ಕ್​ನ ಮೈಲಿಗಲ್ಲನ್ನು ಇತ್ತೀಚೆಗೆ ತಲುಪಲಾಗಿದೆ. ಹತ್ತು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಡೆಲ್ಲಿ ಮೆಟ್ರೋದ ನಾಲ್ಕನೇ ಹಂತದ ಯೋಜನೆಯ ಭಾಗವಾದ 2.8 ಕಿಮೀ ಉದ್ದದ ಜನಕಪುರಿ ಮತ್ತು ಕೃಷ್ಣ ಪಾರ್ಕ್ ಮಾರ್ಗವನ್ನು ಉದ್ಘಾಟನೆ ಮಾಡಿದರು. ಸಾಹಿಬಾಬಾದ್ ಮತ್ತು ನ್ಯೂ ಅಶೋಕ್ ನಗರ್ ನಡುವಿನ ದೆಹಲಿ ಘಾಜಿಯಾಬಾದ್ ಮೀರತ್ ನಮೋ ಭಾರತ್ ಕಾರಿಡಾರ್​ನ 13 ಕಿಮೀ ಉದ್ದದ ಮಾರ್ಗವನ್ನೂ ಮೋದಿ ಚಾಲನೆಗೊಳಿಸಿದರು. ಈ ಮೂಲಕ ಭಾರತದಲ್ಲಿ ಮೆಟ್ರೋ ರೈಲು ನೆಟ್ವರ್ಕ್ 1,000 ಕಿಮೀ ಉದ್ದದ ಮೈಲಿಗಲ್ಲು ದಾಟಿದೆ. ಈ ಸಾಧನೆ ಮಾಡಿದ ಮೂರನೇ ದೇಶ ಭಾರತವಾಗಿದೆ. ಚೀನಾ ಮತ್ತು ಅಮೆರಿಕ ದೇಶದಲ್ಲಿ ಭಾರತದಕ್ಕಿಂತ ಹೆಚ್ಚು ಮೆಟ್ರೋ ರೈಲು ನೆಟ್ವರ್ಕ್ ಇದೆ.

ಭಾರತದಲ್ಲಿ ಮೊದಲ ಮೆಟ್ರೋ ರೈಲು ನೆಟ್ವರ್ಕ್ ಸ್ಥಾಪನೆಯಾಗಿದ್ದು 1984ರಲ್ಲಿ ಕೋಲ್ಕತಾದಲ್ಲಿ. ಆದರೆ, ಆಧುನಿಕ ಮೆಟ್ರೋ ಸಿಸ್ಟಂ ಮೊದಲು ಚಾಲನೆಗೊಂಡಿದ್ದು ದೆಹಲಿಯಲ್ಲಿ. ಜಪಾನೀ ತಂತ್ರಜ್ಞಾನ ನೆರವಿನೊಂದಿಗೆ ದೆಹಲಿಯಲ್ಲಿ ಮೆಟ್ರೋ ನೆಟ್ವರ್ಕ್ ಅಭಿವೃದ್ಧಿಪಡಿಸಲಾಯಿತು. ಈಗ ದೆಹಲಿ ಮೆಟ್ರೋ ವಿಶ್ವದ 16ನೇ ಅತಿದೊಡ್ಡ ಮೆಟ್ರೋ ಸಿಸ್ಟಂ ಎನಿಸಿದೆ.

ಇದನ್ನೂ ಓದಿ: ಅತಿಹೆಚ್ಚು ಮಾರುಕಟ್ಟೆ ಬಂಡವಾಳ: ಜಾಗತಿಕ 25 ಬ್ಯಾಂಕುಗಳ ಪಟ್ಟಿಯಲ್ಲಿ ಭಾರತದ ಮೂರು

ಬೆಂಗಳೂರು ಸೇರಿದಂತೆ ದೇಶದ 23 ನಗರಗಳಲ್ಲಿ ಈಗ ಮೆಟ್ರೋ ರೈಲು ಸಿಸ್ಟಮ್ಸ್ ಶುರುವಾಗಿದೆ. 11 ರಾಜ್ಯಗಳಲ್ಲಿ ಮೆಟ್ರೋ ಸೇವೆ ಇದೆ. 2014ರಲ್ಲಿ ಭಾರತದ ವಿವಿಧ ಮೆಟ್ರೋ ರೈಲುಗಳಲ್ಲಿ ದಿನನಿತ್ಯ 28 ಲಕ್ಷ ಜನರು ಪ್ರಯಾಣಿಸುತ್ತಿದ್ದರು. ಇವತ್ತು ಒಂದು ಕೋಟಿ ಜನರು ನಿತ್ಯ ಪ್ರಯಾಣಿಸುತ್ತಿದ್ದಾರೆ.

ಕಳೆದ ಕೆಲ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಮೆಟ್ರೋ ರೈಲು ಯೋಜನೆಗಳು ಹಾಗೂ ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ದಾರೆ. 13 ಕಿಮೀ ಉದ್ದದ ದೆಹಲಿ ಘಾಜಿಯಾಬಾದ್ ಮೀರತ್ ನಮೋ ಭಾರತ್ ಕಾರಿಡಾರ್ ಅನ್ನು 4,600 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ದೆಹಲಿ ಮತ್ತು ಮೀರತ್ ನಡುವೆ ಉತ್ತಮ ವೇಗದ ಪ್ರಯಾಣ ಹೊಂದುವ ಅವಕಾಶ ಇದೆ.

ಜನಕಪುರಿ ಮತ್ತು ಕೃಷ್ಣ ಪಾರ್ಕ್ ನಡುವಿನ ಮೆಟ್ರೋ ರೈಲು ಮಾರ್ಗವನ್ನು 1,200 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಮಾರ್ಗಕ್ಕೂ ಮೋದಿ ಚಾಲನೆ ನೀಡಿದ್ದಾರೆ. ದೆಹಲಿ ಮೆಟ್ರೋದ ನಾಲ್ಕನೇ ಹಂತದ ಭಾಗವಾಗಿರುವ ರಿತಾಲ ಮತ್ತು ಕುಂಡ್ಲಿ ಸೆಕ್ಷನ್​ನ 26.5 ಕಿಮೀ ಮಾರ್ಗಕ್ಕೆ ಪ್ರಧಾನಿಗಳು ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಇದನ್ನೂ ಓದಿ: ಮೇಡ್ ಇನ್ ಇಂಡಿಯಾ ಸ್ಮಾರ್ಟ್​ಫೋನ್; 2024-25ರಲ್ಲಿ 1.70 ಲಕ್ಷ ಕೋಟಿ ರೂ ರಫ್ತು ಗುರಿ

ಭಾರತದಲ್ಲಿ ದೆಹಲಿ ಮೆಟ್ರೋ ಬಿಟ್ಟರೆ ಅತಿದೊಡ್ಡ ಮೆಟ್ರೋ ರೈಲ ಸಿಸ್ಟಂ ಹೊಂದಿರುವುದು ಬೆಂಗಳೂರು. ಸಿಲಿಕಾನ್ ಸಿಟಿಯಲ್ಲಿ ಇಲ್ಲಿಯವರೆಗೆ ನಿರ್ಮಿಸಲಾಗಿರುವ ಮೆಟ್ರೋ ರೈಲು ಮಾರ್ಗಗಳ ಉದ್ದ 76 ಕಿಮೀಗೂ ಹೆಚ್ಚಿದೆ. ದೆಹಲಿ ಮೆಟ್ರೋ ಸುಮಾರು 350 ಕಿಮೀಯಷ್ಟು ಬೃಹತ್ ಮೆಟ್ರೋ ನೆಟ್ವರ್ಕ್ ಜಾಲ ಹೊಂದಿದೆ. ಅತಿಹೆಚ್ಚು ಮೆಟ್ರೋ ರೈಲು ನೆಟ್ವರ್ಕ್ ಹೊಂದಿರುವ ವಿಚಾರದಲ್ಲಿ ಬೆಂಗಳೂರಿಗೆ ಸಮೀಪವೇ ಹೈದರಾಬಾದ್ ಇದೆ. ಇಲ್ಲಿ 71 ಕಿಮೀಯಷ್ಟು ಉದ್ದದ ಮೆಟ್ರೋ ರೈಲು ಜಾಲ ಇದೆ.

ಕೋಲ್ಕತಾ, ಮುಂಬೈ, ಅಹ್ಮದಾಬಾದ್ ಮತ್ತು ಚೆನ್ನೈ ನಗರಗಳಲ್ಲಿರುವ ಮೆಟ್ರೋ ನೆಟ್ವರ್ಕ್ 50 ಕಿಮೀಗೂ ಹೆಚ್ಚಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ