AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಗ್ರಿ ಪಾಸಾದವರಿಗೆ ಬ್ಯಾಂಕ್​ಗಳಲ್ಲಿ ಅಪ್ರೆಂಟಿಸ್​ಶಿಪ್; ಒಂದು ವರ್ಷ ಸ್ಟೈಪೆಂಡ್; ಇನ್ನೊಂದು ತಿಂಗಳಲ್ಲಿ ಸ್ಕೀಮ್ ಜಾರಿ ಸಾಧ್ಯತೆ

Bank apprenticeship with stipend: ಕೇಂದ್ರ ಸರ್ಕಾರ ಇನ್ನೊಂದು ತಿಂಗಳಲ್ಲಿ ಅಪ್ರೆಂಟಿಸ್​ಶಿಪ್ ಸ್ಕೀಮ್ ಅನ್ನು ಜಾರಿಗೆ ತರಲು ಹೊರಟಿದೆ. ಈ ನಿಟ್ಟಿನಲ್ಲಿ ಭಾರತದ ಬ್ಯಾಂಕುಗಳು 25 ವರ್ಷದೊಳಗಿನ ಪದವೀಧರರಿಗೆ ಒಂದು ವರ್ಷ ಕಾಲ ತರಬೇತಿ ಕೊಡಲಿದೆ. ಮಾರ್ಕೆಟಿಂಗ್, ರಿಕವರಿ ಇತ್ಯಾದಿ ಬ್ಯಾಂಕಿಂಗ್ ವಿಭಾಗಗಳಲ್ಲಿ ಯುವ ಅಭ್ಯರ್ಥಿಗಳಿಗೆ ತರಬೇತಿ ಸಿಗಲಿದ್ದು ಒಂದು ವರ್ಷ ಕಾಲ 5,000 ರೂ ಮಾಸಿಕ ಸ್ಟೈಪೆಂಡ್ ಕೂಡ ನೀಡಲಾಗುತ್ತದೆ.

ಡಿಗ್ರಿ ಪಾಸಾದವರಿಗೆ ಬ್ಯಾಂಕ್​ಗಳಲ್ಲಿ ಅಪ್ರೆಂಟಿಸ್​ಶಿಪ್; ಒಂದು ವರ್ಷ ಸ್ಟೈಪೆಂಡ್; ಇನ್ನೊಂದು ತಿಂಗಳಲ್ಲಿ ಸ್ಕೀಮ್ ಜಾರಿ ಸಾಧ್ಯತೆ
ಬ್ಯಾಂಕು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 08, 2024 | 5:05 PM

Share

ನವದೆಹಲಿ, ಸೆಪ್ಟೆಂಬರ್ 8: ಇತ್ತೀಚಿನ ಕೇಂದ್ರ ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಮುಂದಿನ ಐದು ವರ್ಷದಲ್ಲಿ ಒಂದು ಕೋಟಿ ಯುವಕರಿಗೆ ಟಾಪ್-500 ಕಂಪನಿಗಳಲ್ಲಿ ಇಂಟರ್ನ್​ಶಿಪ್ ಅವಕಾಶ ತೆರೆಯುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಬ್ಯಾಂಕುಗಳು ಮೊದಲ ಹೆಜ್ಜೆ ಇಟ್ಟಿವೆ. 25 ವರ್ಷದೊಳಗಿನ ಪದವೀಧರರನ್ನು ವಿವಿಧ ಬ್ಯಾಂಕುಗಳು ತರಬೇತಿಗೆ ನೇಮಕ ಮಾಡಲಿರುವ ವಿಚಾರವನ್ನು ಇಂಡಿಯನ್ ಬ್ಯಾಂಕ್ ಅಸೋಷಿಯೇಶನ್​ನ ಮುಖ್ಯಸ್ಥ ಸುನೀಲ್ ಮೆಹ್ತಾ ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮುಂದಿನ ಒಂದು ತಿಂಗಳಲ್ಲಿ ಕೇಂದ್ರ ಸರ್ಕಾರದ ಅಪ್ರೆಂಟಿಸ್​ಶಿಪ್ ಸ್ಕೀಮ್ ಜಾರಿಗೆ ಬರಬಹುದು. ಅಷ್ಟರಲ್ಲಿ ಬ್ಯಾಂಕುಗಳು ಯುವ ಪದವೀಧರರನ್ನು ಅಪ್ರೆಂಟಿಸ್​ಗಳಾಗಿ ನೇಮಕ ಮಾಡಿಕೊಳ್ಳಬಹುದು. ತಿಂಗಳಿಗೆ 5,000 ರೂ ಸ್ಟೈಪೆಂಡ್ ಕೊಡಲಾಗುತ್ತದೆ. ನಿರ್ದಿಷ್ಟ ಕೌಶಲ್ಯದ ತರಬೇತಿಯನ್ನೂ ಕೊಡಲಾಗುತ್ತದೆ.

ಇದನ್ನೂ ಓದಿ: ಭಾರತದ ಜವಳಿ ಉದ್ಯಮಕ್ಕೆ ನೆರವಾದ ಬಾಂಗ್ಲಾದೇಶ ಬಿಕ್ಕಟ್ಟು; ಹೊಸ ಆರ್ಡರ್ಸ್ ಪ್ರಮಾಣ ಹೆಚ್ಚಳ

ಬ್ಯಾಂಕುಗಳಲ್ಲಿ ಅಪ್ರೆಂಟಿಸ್ ಆಗಬಯಸುವ ಅಭ್ಯರ್ಥಿಗಳು ಯಾವುದೇ ಪದವಿ ಪ್ರಾಪ್ತ ಮಾಡಿರಬೇಕು. 21ರಿಂದ 25 ವರ್ಷದ ವಯಸ್ಸಿನವರಾಗಿರಬೇಕು. ಐಐಟಿ, ಅಥವಾ ಐಐಎಂ ಇತ್ಯಾದಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದಿದವರಾಗಿಬಾರದು. ತೆರಿಗೆ ಪಾವತಿದಾರ ಕೂಡ ಆಗಿರಬಾರದು. ಇಂಥ ಅಭ್ಯರ್ಥಿಗಳು ಅಪ್ರೆಂಟಿಸ್​ಶಿಪ್​ಗೆ ಅರ್ಜಿ ಹಾಕಬಹುದು.

ಬ್ಯಾಂಕುಗಳಲ್ಲಿ ಕೌಶಲ್ಯ ಬೇಡುವ ಕೆಲಸದ ಅವಶ್ಯಕತೆ ಇಲ್ಲದ ಹಲವು ಕ್ಷೇತ್ರಗಳಿವೆ. ಮಾರ್ಕೆಟಿಂಗ್, ರಿಕವರಿ ಇತ್ಯಾದಿ ಕೆಲಸಗಳಿವೆ. ಈ ಕ್ಷೇತ್ರಗಳಲ್ಲಿ ಅಪ್ರೆಂಟಿಸ್​ಗಳನ್ನು ಆಯ್ದು ಅವರಿಗೆ ತರಬೇತಿ ಕೊಡಲಾಗುತ್ತದೆ. 12 ತಿಂಗಳ ಕಾಲ ಈ ತರಬೇತಿ ಅವಧಿ ಇರುತ್ತದೆ ಎನ್ನುವ ಮಾಹಿತಿಯನ್ನು ಸುನೀಲ್ ಮೆಹ್ತಾ ನೀಡಿದ್ದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: ಪಾಶ್ಚಿಮಾತ್ಯ ಕಂಪನಿಗಳಿಗೆ ಚೀನಾ ಯಾಕೆ ಫೇವರಿಟ್ ಗೊತ್ತಾ? ಕಡಿಮೆ ಕೂಲಿವೆಚ್ಚ ಅಲ್ಲ; ಮತ್ತೇನು ಕಾರಣ? ಆ್ಯಪಲ್ ಸಿಇಒ ಮಾತಿಗೆ ಹೌದೆಂದ ಇಲಾನ್ ಮಸ್ಕ್

ಅಪ್ರೆಂಟಿಸ್ ಆಗಿ ಕೆಲಸ ಮಾಡಿದವರಲ್ಲಿ ಕೆಲವರನ್ನು ಬ್ಯಾಂಕುಗಳಲ್ಲಿ ರೆಗ್ಯುಲರ್ ನೇಮಕಾತಿ ಮಾಡಿಕೊಂಡು ಮುಂದುವರಿಸಬಹುದು. ಇತರರು ಇಲ್ಲಿ ಪಡೆದ ತರಬೇತಿ ಸಹಾಯದಿಂದ ಉದ್ಯೋಗಾವಕಾಶ ಹೆಚ್ಚಿಸಿಕೊಳ್ಳಬಹುದು. ಸದ್ಯಕ್ಕೆ ಒಂದು ವರ್ಷದಲ್ಲಿ ಬ್ಯಾಂಕುಗಳಲ್ಲಿ ಎಷ್ಟು ಅಪ್ರೆಂಟಿಸ್​ಗಳನ್ನು ನೇಮಕ ಮಾಡಲಾಗುತ್ತದೆ ಎನ್ನುವ ಮಾಹಿತಿ ಗೊತ್ತಾಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!