AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

JioPhone Next: ಗಣೇಶ ಚತುರ್ಥಿಗೆ ಇದ್ದ ಜಿಯೋಫೋನ್​ ನೆಕ್ಸ್ಟ್ ಬಿಡುಗಡೆ ದೀಪಾವಳಿಗೆ ಮುಂದಕ್ಕೆ

ಜಿಯೋಫೋನ್ ನೆಕ್ಸ್ಟ್ ಕೈಗೆಟುಕುವ ಸ್ಮಾರ್ಟ್​ಫೋನ್​ ಬಿಡುಗಡೆ ದೀಪಾವಳಿಗೆ ಮುಂದೂಡಲಾಗಿದೆ ಎಂದು ಗೂಗಲ್- ಜಿಯೋದಿಂದ ತಿಳಿಸಲಾಗಿದೆ.

JioPhone Next: ಗಣೇಶ ಚತುರ್ಥಿಗೆ ಇದ್ದ ಜಿಯೋಫೋನ್​ ನೆಕ್ಸ್ಟ್ ಬಿಡುಗಡೆ ದೀಪಾವಳಿಗೆ ಮುಂದಕ್ಕೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Sep 10, 2021 | 1:29 PM

Share

ಜಿಯೋ ಮತ್ತು ಗೂಗಲ್​ನಿಂದ ಸೆಪ್ಟೆಂಬರ್​ 10ನೇ ತಾರೀಕಿನಿಂದ ಹೇಳಿರುವ ಪ್ರಕಾರ, ಜಿಯೋಫೋನ್​ ನೆಕ್ಸ್ಟ್ ಅನ್ನು ದೀಪಾವಳಿ ಹಬ್ಬದ ಸಂದರ್ಭಕ್ಕೆ ಬಿಡುಗಡೆ ಮಾಡುವುದಾಗಿ ಹೇಳಿದೆ. ಕೈಗೆಟುಕುವ ಬೆಲೆಯ ಸ್ಮಾರ್ಟ್​ಫೋನ್ ಆರಂಭದಲ್ಲಿ ಗಣೇಶ ಚತುರ್ಥಿಗೆ ಬಿಡುಗಡೆ ಆಗಬೇಕಿತ್ತು. ಜಿಯೋ ಮತ್ತು ಗೂಗಲ್ ಹೇಳಿರುವಂತೆ, ಕಂಪೆನಿಯು ಸ್ಮಾರ್ಟ್​ಫೋನ್ ಬಿಡುಗಡೆ ವಿಚಾರವಾಗಿ “ಸಾಕಷ್ಟು ಪ್ರಗತಿ” ಆಗಿದೆ. “ಎರಡೂ ಕಂಪೆನಿಗಳು ಜಿಯೋಫೋನ್​ ನೆಕ್ಸ್ಟ್​ ಅನ್ನು ಇನ್ನಷ್ಟು ಸುಧಾರಣೆ ತರುವುದಕ್ಕೆ ಸೀಮಿತ ಸಂಖ್ಯೆಯ ಬಳಕೆದಾರರೊಂದಿಗೆ ಪರೀಕ್ಷೆ ಆರಂಭಿಸಿವೆ ಮತ್ತು ದೀಪಾವಳಿ ಹಬ್ಬದ ಹೊತ್ತಿಗೆ ವ್ಯಾಪಕವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲು ಕೆಲಸ ಮಾಡಲಾಗುತ್ತಿದೆ. ಈಗಿನ ಹೆಚ್ಚುವರಿ ಸಮಯವು ಸದ್ಯಕ್ಕೆ ಈ ವಲಯದಲ್ಲಿ ಕಾಣಿಸಿಕೊಂಡಿರುವ ಜಾಗತಿಕ ಸೆಮಿಕಂಡಕ್ಟರ್ ಕೊರತೆಯಿಂದ ಹೊರಬರುವುದಕ್ಕೆ ಸಹಾಯ ಮಾಡುತ್ತದೆ,” ಎಂದು ಜಿಯೋ ಮತ್ತು ಗೂಗಲ್ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಜಿಯೋಫೋನ್ ನೆಕ್ಸ್ಟ್ ಆಂಡ್ರಾಯಿಡ್​ ಆಪರೇಟಿಂಗ್ ಸಿಸ್ಟಮ್​ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಅದರಲ್ಲಿ ಗೂಗಲ್ ಅಸಿಸ್ಟೆಂಟ್, ಆಟೋಮೆಟಿಕ್ ಜೋರಾದ-ಓದು, ಆನ್​ಸ್ಕ್ರೀನ್ ಟೆಕ್ಸ್ಟ್​​ಗೆ ಭಾಷಾನುವಾದ, ಸ್ಮಾರ್ಟ್​ ಕ್ಯಾಮೆರಾ ಜತೆಗೆ ಇಂಡಿಯಾ ಸೆಂಟ್ರಿಕ್ ಫಿಲ್ಟರ್ಸ್​ಗಳನ್ನು ಒಳಗೊಂಡಿದೆ.

ಬಳಕೆದಾರರು ಈಚೆಗಿನ ಕ್ರಿಕೆಟ್​ ಸ್ಕೋರ್​ಗಳು ಮತ್ತು ಹವಾಮಾನ ಅಪ್​ಡೇಟ್ಸ್​ ಪರಿಶೀಲಿಸಬಹುದು. ಗೂಗಲ್ ಅಸಿಸ್ಟೆಂಟ್​​ಗೆ ಜಿಯೋ ಸಾವನ್​ನಲ್ಲಿ ಸಂಗೀತ ಪ್ಲೇ ಮಾಡುವಂತೆ ಅಥವಾ ಮೈ ಜಿಯೋದಲ್ಲಿ ಬ್ಯಾಲೆನ್ಸ್ ಪರಿಶೀಲಿಸುವಂತೆ ಕೇಳಬಹುದು. ಅಂದಹಾಗೆ 4G ಸ್ಮಾರ್ಟ್​ಫೋನ್ ದರ ಇನ್ನೂ ಬಹಿರಂಗ ಮಾಡಿಲ್ಲ.

ಇದನ್ನೂ ಓದಿ: ರೂ. 4,000 ದೊಳಗೆ ಸ್ಮಾರ್ಟ್ ಪೋನ್ ಬೇಕೇ? ಸ್ವಲ್ಪ ದಿನ ಕಾಯಿರಿ, ಮುಕೇಶ್ ಅಂಬಾನಿ ಅದನ್ನು ನೀಡಲಿದ್ದಾರೆ!

(JioPhone Next Affordable Smart Phone Release Postponed To Deepavali Here Is The Details)

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್