AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

JioPhone Next: ಗಣೇಶ ಚತುರ್ಥಿಗೆ ಇದ್ದ ಜಿಯೋಫೋನ್​ ನೆಕ್ಸ್ಟ್ ಬಿಡುಗಡೆ ದೀಪಾವಳಿಗೆ ಮುಂದಕ್ಕೆ

ಜಿಯೋಫೋನ್ ನೆಕ್ಸ್ಟ್ ಕೈಗೆಟುಕುವ ಸ್ಮಾರ್ಟ್​ಫೋನ್​ ಬಿಡುಗಡೆ ದೀಪಾವಳಿಗೆ ಮುಂದೂಡಲಾಗಿದೆ ಎಂದು ಗೂಗಲ್- ಜಿಯೋದಿಂದ ತಿಳಿಸಲಾಗಿದೆ.

JioPhone Next: ಗಣೇಶ ಚತುರ್ಥಿಗೆ ಇದ್ದ ಜಿಯೋಫೋನ್​ ನೆಕ್ಸ್ಟ್ ಬಿಡುಗಡೆ ದೀಪಾವಳಿಗೆ ಮುಂದಕ್ಕೆ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Sep 10, 2021 | 1:29 PM

Share

ಜಿಯೋ ಮತ್ತು ಗೂಗಲ್​ನಿಂದ ಸೆಪ್ಟೆಂಬರ್​ 10ನೇ ತಾರೀಕಿನಿಂದ ಹೇಳಿರುವ ಪ್ರಕಾರ, ಜಿಯೋಫೋನ್​ ನೆಕ್ಸ್ಟ್ ಅನ್ನು ದೀಪಾವಳಿ ಹಬ್ಬದ ಸಂದರ್ಭಕ್ಕೆ ಬಿಡುಗಡೆ ಮಾಡುವುದಾಗಿ ಹೇಳಿದೆ. ಕೈಗೆಟುಕುವ ಬೆಲೆಯ ಸ್ಮಾರ್ಟ್​ಫೋನ್ ಆರಂಭದಲ್ಲಿ ಗಣೇಶ ಚತುರ್ಥಿಗೆ ಬಿಡುಗಡೆ ಆಗಬೇಕಿತ್ತು. ಜಿಯೋ ಮತ್ತು ಗೂಗಲ್ ಹೇಳಿರುವಂತೆ, ಕಂಪೆನಿಯು ಸ್ಮಾರ್ಟ್​ಫೋನ್ ಬಿಡುಗಡೆ ವಿಚಾರವಾಗಿ “ಸಾಕಷ್ಟು ಪ್ರಗತಿ” ಆಗಿದೆ. “ಎರಡೂ ಕಂಪೆನಿಗಳು ಜಿಯೋಫೋನ್​ ನೆಕ್ಸ್ಟ್​ ಅನ್ನು ಇನ್ನಷ್ಟು ಸುಧಾರಣೆ ತರುವುದಕ್ಕೆ ಸೀಮಿತ ಸಂಖ್ಯೆಯ ಬಳಕೆದಾರರೊಂದಿಗೆ ಪರೀಕ್ಷೆ ಆರಂಭಿಸಿವೆ ಮತ್ತು ದೀಪಾವಳಿ ಹಬ್ಬದ ಹೊತ್ತಿಗೆ ವ್ಯಾಪಕವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲು ಕೆಲಸ ಮಾಡಲಾಗುತ್ತಿದೆ. ಈಗಿನ ಹೆಚ್ಚುವರಿ ಸಮಯವು ಸದ್ಯಕ್ಕೆ ಈ ವಲಯದಲ್ಲಿ ಕಾಣಿಸಿಕೊಂಡಿರುವ ಜಾಗತಿಕ ಸೆಮಿಕಂಡಕ್ಟರ್ ಕೊರತೆಯಿಂದ ಹೊರಬರುವುದಕ್ಕೆ ಸಹಾಯ ಮಾಡುತ್ತದೆ,” ಎಂದು ಜಿಯೋ ಮತ್ತು ಗೂಗಲ್ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಜಿಯೋಫೋನ್ ನೆಕ್ಸ್ಟ್ ಆಂಡ್ರಾಯಿಡ್​ ಆಪರೇಟಿಂಗ್ ಸಿಸ್ಟಮ್​ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಅದರಲ್ಲಿ ಗೂಗಲ್ ಅಸಿಸ್ಟೆಂಟ್, ಆಟೋಮೆಟಿಕ್ ಜೋರಾದ-ಓದು, ಆನ್​ಸ್ಕ್ರೀನ್ ಟೆಕ್ಸ್ಟ್​​ಗೆ ಭಾಷಾನುವಾದ, ಸ್ಮಾರ್ಟ್​ ಕ್ಯಾಮೆರಾ ಜತೆಗೆ ಇಂಡಿಯಾ ಸೆಂಟ್ರಿಕ್ ಫಿಲ್ಟರ್ಸ್​ಗಳನ್ನು ಒಳಗೊಂಡಿದೆ.

ಬಳಕೆದಾರರು ಈಚೆಗಿನ ಕ್ರಿಕೆಟ್​ ಸ್ಕೋರ್​ಗಳು ಮತ್ತು ಹವಾಮಾನ ಅಪ್​ಡೇಟ್ಸ್​ ಪರಿಶೀಲಿಸಬಹುದು. ಗೂಗಲ್ ಅಸಿಸ್ಟೆಂಟ್​​ಗೆ ಜಿಯೋ ಸಾವನ್​ನಲ್ಲಿ ಸಂಗೀತ ಪ್ಲೇ ಮಾಡುವಂತೆ ಅಥವಾ ಮೈ ಜಿಯೋದಲ್ಲಿ ಬ್ಯಾಲೆನ್ಸ್ ಪರಿಶೀಲಿಸುವಂತೆ ಕೇಳಬಹುದು. ಅಂದಹಾಗೆ 4G ಸ್ಮಾರ್ಟ್​ಫೋನ್ ದರ ಇನ್ನೂ ಬಹಿರಂಗ ಮಾಡಿಲ್ಲ.

ಇದನ್ನೂ ಓದಿ: ರೂ. 4,000 ದೊಳಗೆ ಸ್ಮಾರ್ಟ್ ಪೋನ್ ಬೇಕೇ? ಸ್ವಲ್ಪ ದಿನ ಕಾಯಿರಿ, ಮುಕೇಶ್ ಅಂಬಾನಿ ಅದನ್ನು ನೀಡಲಿದ್ದಾರೆ!

(JioPhone Next Affordable Smart Phone Release Postponed To Deepavali Here Is The Details)

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ