AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರವಾರ ಕೇಣಿ ಬೇಲೆಕೇರಿ ಬಂದರು; ಅದಾನಿ ಕಂಪನಿ ಹಿಂದಿಕ್ಕಿದ ಜೆಎಸ್​ಡಬ್ಲ್ಯುಗೆ ಪೋರ್ಟ್ ಪ್ರಾಜೆಕ್ಟ್

Keni Belekeri Port Development Project: ಕೇಣಿ ಬೇಲೆಕೇರಿ ಬಂದರು ಯೋಜನೆಯ ಗುತ್ತಿಗೆ ಜೆಎಎಸ್​ಡಬ್ಲ್ಯು ಇನ್​ಫ್ರಾಸ್ಟ್ರಕ್ಚರ್ ಪಾಲಾಗಿದೆ. 4,119 ಕೋಟಿ ರೂ ಮೊತ್ತದ ಈ ಯೋಜನೆ ತನಗೆ ಸಿಕ್ಕಿರುವ ವಿಚಾರವನ್ನು ಜೆಎಸ್​ಡಬ್ಲ್ಯು ಇನ್​ಫ್ರಾಸ್ಟ್ರಕ್ಚರ್ ಸಂಸ್ಥೆ ಬಹಿರಂಗಪಡಿಸಿದೆ. ಕೇಣಿ ಬೇಲೆಕೇರಿ ಪೋರ್ಟ್​ಗಾಗಿ ಜೆಎಸ್​ಡಬ್ಲ್ಯು ಜೊತೆ ಅದಾನಿ ಪೋರ್ಟ್ಸ್ ಸಂಸ್ಥೆ ತೀವ್ರ ಪೈಪೋಟಿ ನೀಡಿತ್ತು. ಅಂತಿಮವಾಗಿ, ಜೆಎಸ್​ಡಬ್ಲ್ಯುಗೆ ಈ ಪೋರ್ಟ್ ಗುತ್ತಿಗೆ ಸಿಕ್ಕಿದೆ.

ಕಾರವಾರ ಕೇಣಿ ಬೇಲೆಕೇರಿ ಬಂದರು; ಅದಾನಿ ಕಂಪನಿ ಹಿಂದಿಕ್ಕಿದ ಜೆಎಸ್​ಡಬ್ಲ್ಯುಗೆ ಪೋರ್ಟ್ ಪ್ರಾಜೆಕ್ಟ್
ಜೆಎಸ್​ಡಬ್ಲ್ಯು
Follow us
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Nov 17, 2023 | 1:50 PM

ನವದೆಹಲಿ, ನವೆಂಬರ್ 17: ಕಾರವಾರದ ಅಂಕೋಲದಲ್ಲಿ ಪ್ರಸ್ತಾಪಿತ ಕೇಣಿ ಬೇಲೆಕೇರಿ ಬಂದರು (Keni Port) ಯೋಜನೆಯ ಗುತ್ತಿಗೆ ಜೆಎಎಸ್​ಡಬ್ಲ್ಯು ಇನ್​ಫ್ರಾಸ್ಟ್ರಕ್ಚರ್ ಪಾಲಾಗಿದೆ. 4,119 ಕೋಟಿ ರೂ ಮೊತ್ತದ ಈ ಯೋಜನೆ ತನಗೆ ಸಿಕ್ಕಿರುವ ವಿಚಾರವನ್ನು ಜೆಎಸ್​ಡಬ್ಲ್ಯು ಇನ್​ಫ್ರಾಸ್ಟ್ರಕ್ಚರ್ ಸಂಸ್ಥೆ ಬಹಿರಂಗಪಡಿಸಿದೆ. ವರ್ಷಕ್ಕೆ 3 ಕೋಟಿ ಟನ್​ಗಳ (30 ಮಿಲಿಯನ್ ಟನ್) ಸರಕು ಸಾಗಣೆ ಸಾಮರ್ಥ್ಯ ಇರುವಷ್ಟು ಬಂದರು ಅಭಿವೃದ್ಧಿಗೆ ಈ ಗುತ್ತಿಗೆ ಸಿಕ್ಕಿದೆ. ಮುಂದೆ ಈ ಪೋರ್ಟ್ ಸಾಮರ್ಥ್ಯ ಇನ್ನಷ್ಟು ಏರಿಸುವ ಇರಾದೆ ಇದೆ.

ಕೇಣಿ ಬೇಲೆಕೇರಿ ಪೋರ್ಟ್​ಗಾಗಿ ಜೆಎಸ್​ಡಬ್ಲ್ಯು ಜೊತೆ ಅದಾನಿ ಪೋರ್ಟ್ಸ್ ಸಂಸ್ಥೆ ತೀವ್ರ ಪೈಪೋಟಿ ನೀಡಿತ್ತು. ಮೊದಲಿಗೆ ಬಿಡ್​ಗೆ ಪೂರ್ವಭಾವಿಯಾಗಿ ಈ ಯೋಜನೆಗೆ ಜೆಎಸ್​ಡಬ್ಲ್ಯು ಇನ್​ಫ್ರಾಸ್ಟ್ರಕ್ಚರ್ ಮತ್ತು ಅದಾನಿ ಪೋರ್ಟ್ಸ್ ಜೊತೆಗೆ ನವಯುಗ ಎಂಜಿನಿಯರಿಂಗ್ ಮತ್ತು ವಿಶ್ವ ಸಮುದ್ರ ಕಂಪನಿಗಳೂ ಆಸಕ್ತಿ ತೋರಿದ್ದವು. ಬಳಿಕ ಜೆಎಸ್​ಡಬ್ಲ್ಯು ಮತ್ತು ಅದಾನಿ ಪೋರ್ಟ್ಸ್ ಸಂಸ್ಥೆಗಳಿಂದ ಮಾತ್ರ ಬಿಡ್ ಸಲ್ಲಿಕೆ ಆಗಿತ್ತು. ಅಂತಿಮವಾಗಿ, ಜೆಎಸ್​ಡಬ್ಲ್ಯು ಇನ್​ಫ್ರಾಸ್ಟ್ರಕ್ಚರ್ ಸಂಸ್ಥೆಗೆ ಈ ಪೋರ್ಟ್ ಅಭಿವೃದ್ಧಿ ಗುತ್ತಿಗೆ ಸಿಕ್ಕಿತು.

ಇದನ್ನೂ ಓದಿ: LPG Cylinder Price: ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ; ಬೆಂಗಳೂರಿನಲ್ಲಿ ಈಗೆಷ್ಟಿದೆ ಗ್ಯಾಸ್ ಬೆಲೆ?

ಜೆಎಸ್​ಡಬ್ಲ್ಯು ಇನ್​ಫ್ರಾಸ್ಟ್ರಕ್ಚರ್ ಸಂಸ್ಥೆ ಬಂದರು ಕ್ಷೇತ್ರಕ್ಕೆ ಹೊಸದೇನಲ್ಲ. ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಗಳಲ್ಲಿ ಒಟ್ಟು 9 ಬಂದುರಗಳನ್ನು ಅದು ನಿರ್ವಹಿಸುತ್ತಿದೆ. ಅಷ್ಟೂ ಕಡೆಯಿಂದ ಒಟ್ಟು 153 ಮಿಲಿಯನ್ ಟನ್ (ಎಂಟಿಪಿಎ) ಸಾಮರ್ಥ್ಯ ಹೊಂದಿದೆ. 2030ರಷ್ಟರಲ್ಲಿ ಇದು 300 ಎಂಟಿಪಿಎಗೆ ಹೆಚ್ಚಿಸುವ ಗುರಿ ಅದರದ್ದು.

ಕರ್ನಾಟಕದ ವಾಣಿಜ್ಯ ಚಟುವಟಿಕೆಗೆ ಪುಷ್ಟಿ

ಕೇಣಿ ಬೇಲಕೇರಿ ಬಂದರು ಕಾರವಾರದ ಅಂಕೋಲದಲ್ಲಿ ನಿರ್ಮಾಣ ಆಗಲಿದೆ. ಇದರ ಉತ್ತರಕ್ಕೆ ಗೋವಾದ ಮರ್ಮುಗೋವಾ ಪೋರ್ಟ್ ಇದೆ. ದಕ್ಷಿಣಕ್ಕೆ ನ್ಯೂ ಮಂಗಳೂರು ಪೋರ್ಟ್ ಇದೆ. ಕೇಣಿ ಬಂದರಿಗೆ ರೈಲು ಸಂಪರ್ಕ ಕೂಡ ನಡೆಯಲಿದೆ. ಕೊಂಕಣ ರೈಲು ಮಾರ್ಗದಿಂದ ಕೇಣಿ ಬಂದರಿಗೆ 8 ಕಿಮೀ ಉದ್ದದ ರೈಲು ಸಂಪರ್ಕ ಮಾರ್ಗ ಸಿದ್ಧವಾಗಲಿದೆ.

ಇದನ್ನೂ ಓದಿ: RBI: ಬಿಗಿಗೊಂಡ ಆರ್​ಬಿಐ ನಿಯಮಗಳು; ಸಾಲಕ್ಕೆ ಬಡ್ಡಿದರ ಹೆಚ್ಚಳವಾಗುವ ಸಾಧ್ಯತೆ

ಕೇಣಿ ಬೇಲೆಕೇರಿ ಬಂದರು ಅಭಿವೃದ್ಧಿಯಿಂದ ಬಳ್ಳಾರಿ, ಹೊಸಪೇಟೆ, ಹುಬ್ಬಳ್ಳಿ, ಕಲಬುರ್ಗಿ ಮೊದಲಾದ ಪ್ರದೇಶಗಳಲ್ಲಿರುವ ಕೈಗಾರಿಕೆಗಳಿಗೆ ಪುಷ್ಟಿ ಸಿಗುತ್ತದೆ. ಕಲ್ಲಿದ್ದಲು, ಅದಿರು ಮತ್ತಿತರ ಕಚ್ಛಾ ವಸ್ತುಗಳ ಸಾಗಾಣಿಕೆಗೆ ಕೇಣಿ ಬಂದರು ಸಹಾಯವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು
ಆರ್​ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್​ ಶೆಟ್ಟಿಗೂ ಪೊಲೀಸರ ಲಾಠಿ ಏಟು
ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?
ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ
ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ
ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?
ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?