AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಿಂದ ಮಹತ್ವಾಕಾಂಕ್ಷಿ ಹೆಜ್ಜೆ; ಮುಂದಿನ 5 ವರ್ಷದಲ್ಲಿ 25,000 ಸ್ಟಾರ್ಟಪ್​ಗಳ ಸ್ಥಾಪನೆಗೆ ಗುರಿ

Karnataka to create 25,000 startups in next 5 years: 18,000 ಸ್ಟಾರ್ಟಪ್​ಗಳಿರುವ ಕರ್ನಾಟಕದಲ್ಲಿ ಮುಂದಿನ 5 ವರ್ಷದಲ್ಲಿ ಮತ್ತಷ್ಟು 25,000 ಸ್ಟಾರ್ಟಪ್​ಗಳು ಆರಂಭಗೊಳ್ಳುವ ನಿರೀಕ್ಷೆ ಇದೆ. ರಾಜ್ಯ ಸರ್ಕಾರ 2025-2030 ಸ್ಟಾರ್ಟಪ್ ನೀತಿಯನ್ನು ರೂಪಿಸಿದ್ದು, ಇದಕ್ಕೆ ನ. 6ರಂದು ರಾಜ್ಯ ಸಂಪುಟ ಅನುಮೋದನೆಯನ್ನೂ ಮಾಡಿದೆ. ಈ ಯೋಜನೆಗೆ ಸರ್ಕಾರ ಸದ್ಯಕ್ಕೆ 518.27 ಕೋಟಿ ರೂ ಬಜೆಟ್ ಮೀಸಲಿರಿಸಿದೆ. ಸ್ಟಾರ್ಟಪ್ ಇಕೋಸಿಸ್ಟಂ ಬಲಪಡಿಸುವ ಯೋಜನೆ ಹಮ್ಮಿಕೊಂಡಿದೆ.

ಕರ್ನಾಟಕದಿಂದ ಮಹತ್ವಾಕಾಂಕ್ಷಿ ಹೆಜ್ಜೆ; ಮುಂದಿನ 5 ವರ್ಷದಲ್ಲಿ 25,000 ಸ್ಟಾರ್ಟಪ್​ಗಳ ಸ್ಥಾಪನೆಗೆ ಗುರಿ
ಸ್ಟಾರ್ಟಪ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 07, 2025 | 2:01 PM

Share

ಬೆಂಗಳೂರು, ನವೆಂಬರ್ 7: ದೇಶದ ಸ್ಟಾರ್ಟಪ್ ನಗರಿ ಎನ್ನುವ ಗರಿಮೆ ಹೊಂದಿರುವ ಬೆಂಗಳೂರು ನಗರದಲ್ಲಿ ಇರುವ ಸ್ಟಾರ್ಟಪ್​ಗಳ ಸಂಖ್ಯೆ ಮುಂದಿನ ಐದು ವರ್ಷದಲ್ಲಿ ಬಹುತೇಕ ದ್ವಿಗುಣಗೊಳ್ಳುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ (Karnataka) ಮಹತ್ವಾಕಾಂಕ್ಷಿ ಯೋಜನೆ ಹಮ್ಮಿಕೊಂಡಿದೆ. ರಾಜ್ಯಾದ್ಯಂತ ಮುಂದಿನ ಐದು ವರ್ಷದಲ್ಲಿ 25,000 ಸ್ಟಾರ್ಟಪ್​ಗಳನ್ನು ಸ್ಥಾಪಿಸಲು ಉತ್ತೇಜಿಸವಂತಹ ನೀತಿಯನ್ನು ಸರ್ಕಾರ ರೂಪಿಸಿದ್ದು, ಇದಕ್ಕೆ ರಾಜ್ಯ ಸಂಪುಟದ ಅನುಮೋದನೆ ಸಿಕ್ಕಿದೆ.

ಈ 25,000 ಸ್ಟಾರ್ಟಪ್​ಗಳಲ್ಲಿ 15,000 ಸ್ಟಾರ್ಟಪ್​ಗಳು ಬೆಂಗಳೂರಿನಲ್ಲಿ ಇರಲಿದ್ದರೆ, ಉಳಿದ 10,000 ಸ್ಟಾರ್ಟಪ್​ಗಳು ಬೆಂಗಳೂರಿನ ಹೊರಗೆ ಇರುವಂತೆ ನೋಡಿಕೊಳ್ಳಲಾಗುತ್ತದೆ. ಈ ನೀತಿಯ ಜಾರಿಗೆ ರಾಜ್ಯ ಸರ್ಕಾರ ಸದ್ಯ 518 ಕೋಟಿ ರೂ ಬಜೆಟ್ ಇಟ್ಟಿದೆ.

ಇದನ್ನೂ ಓದಿ: ಪಿಎಂ ಕೌಶಲ್ ವಿಕಾಸ್ ಯೋಜನೆಯ ದುರುಪಯೋಗ; 178 ಟ್ರೈನಿಂಗ್ ಪಾರ್ಟ್ನರ್​ಗಳನ್ನು ಕಪ್ಪುಪಟ್ಟಿಗೆ ಸೇರಿಸಿದ ಸರ್ಕಾರ

ಡೀಪ್ ಟೆಕ್ ಕ್ಷೇತ್ರದಲ್ಲಿ ಹೆಚ್ಚಿನ ಸ್ಟಾರ್ಟಪ್​ಗಳಿಗೆ ಉತ್ತೇಜನ

ಕರ್ನಾಟಕದ ಸ್ಟಾರ್ಟಪ್ ನೀತಿಯು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಬ್ಲಾಕ್​ಚೈನ್, ಕ್ವಾಂಟಂ ಕಂಪ್ಯೂಟಿಂಗ್ ಮತ್ತಿತರ ಡೀಪ್ ಟೆಕ್ ಕ್ಷೇತ್ರಗಳಿಗೆ ಒತ್ತು ಕೊಡುವಂತೆ ರೂಪಿತವಾಗಿದೆ. ಇನ್ಕುಬೇಶನ್ ಸೆಂಟರ್​ಗಳು, ಎಕ್ಸಲೆನ್ಸ್ ಸೆಂಟರ್​ಗಳು, ಆರ್ ಅಂಡ್ ಡಿ ಸೆಂಟರ್​ಗಳು ಇತ್ಯಾದಿಯನ್ನು ಪ್ರೋತ್ಸಾಹಿಸಲಾಗುತ್ತದೆ. ಹೊಸದಾಗಿ ಶುರುವಾಗುವ ಸ್ಟಾರ್ಟಪ್​ಗಳಿಗೆ ಆರಂಭಿಕ ಹಂತದಲ್ಲಿ ಸರ್ಕಾರವು ಹಣಕಾಸು ನೆರವು ಒದಗಿಸುವ ವ್ಯವಸ್ಥೆ ಮಾಡಲಿದೆ.

ವಿಶೇಷ ತರಬೇತಿ ಯೋಜನೆಗಳು, ಇಂಡಸ್ಟ್ರಿ ಸರ್ಟಿಫಿಕೇಶನ್ ಸಬ್ಸಿಡಿ, ಸ್ಟಾರ್ಟಪ್ ಕೇಂದ್ರಿತ ಕೌಶಲ್ಯಾಭಿವೃದ್ದಿ ಯೋಜನೆಗಳಿಗೆ ದೇಣಿಗೆ, ಮೆಂಟರ್​ಶಿಪ್ ಕೇಂದ್ರಿತ ಹಣಕಾಸು ನೆರವು ಇತ್ಯಾದಿಯನ್ನು ರಾಜ್ಯ ಸರ್ಕಾರ ತನ್ನ ನೀತಿಯಲ್ಲಿ ಸೇರಿಸಿಕೊಂಡಿದೆ.

ಮಹಿಳೆಯರಿಂದ ಮುನ್ನಡೆಸುವ ಹಾಗೂ ಗ್ರಾಮೀಣ ಭಾಗಗಳನ್ನು ಕೇಂದ್ರಿತವಾಗಿಸುವ ಉದ್ದಿಮೆಗಳಿಗೆ ಸರ್ಕಾರದಿಂದ ದೇಣಿಗೆ ಕೊಡುವ ಯೋಜನೆಗಳೂ ಈ ಹೊಸ ನೀತಿಯಲ್ಲಿವೆ. ಉದ್ದಿಮೆಗಳಿಗೆ ಕಾನೂನು ನಿಯಮಾವಳಿಗಳನ್ನು ಸರಳಗೊಳಿಸುವುದಕ್ಕೆ ಒತ್ತು ಕೊಡಲಾಗುತ್ತದೆ.

ಇದನ್ನೂ ಓದಿ: ದಸರಾ ವೇಳೆ GST ಸಂಗ್ರಹದಲ್ಲಿ ಕರ್ನಾಟಕ ಟಾಪ್​: ಗ್ಯಾರಂಟಿ ಯೋಜನೆ ಎಫೆಕ್ಟ್​ ಎಂದ ಸಿಎಂ ಸಿದ್ದರಾಮಯ್ಯ

ಬೆಂಗಳೂರಿನಲ್ಲಿ ಭಾರತದ ಶೇ. 18ರಷ್ಟು ಸ್ಟಾರ್ಟಪ್​ಗಳು

ವಿಶ್ವದಲ್ಲೇ ಭಾರತ ಮೂರನೇ ಅತಿದೊಡ್ಡ ಸ್ಟಾರ್ಟಪ್ ಇಕೋಸಿಸ್ಟಂ ಹೊಂದಿದೆ. ಇಲ್ಲಿ 1.59 ಲಕ್ಷ ಸ್ಟಾರ್ಟಪ್​ಗಳಿವೆ. ಈ ಪೈಕಿ ಹತ್ತಿರಹತ್ತಿರ ಅರ್ಧದಷ್ಟು ಸ್ಟಾರ್ಟಪ್​ಗಳು ಮಹಿಳೆಯರಿಂದ ಮುನ್ನಡೆಸಲ್ಪಡುತ್ತಿವೆ. ಈ ಒಂದೂವರೆ ಲಕ್ಷಕ್ಕೂ ಹೆಚ್ಚು ಸ್ಟಾರ್ಟಪ್​ಗಳಲ್ಲಿ ಕರ್ನಾಟಕದಲ್ಲಿ 18,000ದಷ್ಟಿವೆ. ಡಿಪಿಐಐಟಿಯಿಂದ ಮಾನ್ಯಗೊಳಿಸಲಾಗಿರುವ ಸ್ಟಾರ್ಟಪ್​ಗಳಲ್ಲಿ ಕರ್ನಾಟಕದಲ್ಲೇ ಶೇ. 15ರಷ್ಟಿವೆ.

ಇನ್ನು, ಫಂಡಿಂಗ್ ಪಡೆದ ಸ್ಟಾರ್ಟಪ್​ಗಳಲ್ಲಿ ಅರ್ಧದಷ್ಟವು ಬೆಂಗಳೂರಿನಲ್ಲಿ ನೆಲೆ ಹೊಂದಿರುವುದು ಗಮನಾರ್ಹ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದಿನದ ಪಂಚಾಂಗ ಮತ್ತು ಸಂಕಷ್ಟಿ ಚತುರ್ಥಿಯ ಮಹತ್ವ
ದಿನದ ಪಂಚಾಂಗ ಮತ್ತು ಸಂಕಷ್ಟಿ ಚತುರ್ಥಿಯ ಮಹತ್ವ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ರಾಸಾಯನಿಕ ಟ್ಯಾಂಕರ್ ಪಲ್ಟಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ರಾಸಾಯನಿಕ ಟ್ಯಾಂಕರ್ ಪಲ್ಟಿ
ಲಕ್ಕುಂಡಿಯಲ್ಲಿ ನಿಧಿ, ಕಪ್ಪತ್ತಗುಡ್ಡದ ಗುಹೆಯೊಳಗೆ ಬಂಗಾರದ ಗಣಿ
ಲಕ್ಕುಂಡಿಯಲ್ಲಿ ನಿಧಿ, ಕಪ್ಪತ್ತಗುಡ್ಡದ ಗುಹೆಯೊಳಗೆ ಬಂಗಾರದ ಗಣಿ
ಅಪಾರ್ಟ್​ಮೆಂಟ್​ ಲಿಫ್ಟ್​ನೊಳಗೆ ಬಲೂನ್​ಗಳ ಸ್ಫೋಟ; ಕಂಗಾಲಾದ ನಿವಾಸಿಗಳು
ಅಪಾರ್ಟ್​ಮೆಂಟ್​ ಲಿಫ್ಟ್​ನೊಳಗೆ ಬಲೂನ್​ಗಳ ಸ್ಫೋಟ; ಕಂಗಾಲಾದ ನಿವಾಸಿಗಳು
ಸಾಯಿ ಕುಮಾರ್ ಎದುರು ನಿಂತು ಸೈಲೆಂಟ್ ಆದ ಹೊಸ ಹೀರೋ; ಆಮೇಲೆ ಏನಾಯ್ತು?
ಸಾಯಿ ಕುಮಾರ್ ಎದುರು ನಿಂತು ಸೈಲೆಂಟ್ ಆದ ಹೊಸ ಹೀರೋ; ಆಮೇಲೆ ಏನಾಯ್ತು?
ನಿವೃತ್ತಿ ಘೋಷಿಸಿದ ಬಳಿಕ ಅರಿಜಿತ್ ಸಿಂಗ್ ಮನವೊಲಿಸಲು ಆಮಿರ್ ಖಾನ್ ಪ್ರಯತ್ನ?
ನಿವೃತ್ತಿ ಘೋಷಿಸಿದ ಬಳಿಕ ಅರಿಜಿತ್ ಸಿಂಗ್ ಮನವೊಲಿಸಲು ಆಮಿರ್ ಖಾನ್ ಪ್ರಯತ್ನ?
ಸಿಟಿ ರವಿ ಅಮಾನತು: ಬಂದರೆ ಹೊರಗೆ ನಿಲ್ಲಿಸಿ ಎಂದು ಸಭಾಪತಿ ಖಡಕ್ ಸೂಚನೆ
ಸಿಟಿ ರವಿ ಅಮಾನತು: ಬಂದರೆ ಹೊರಗೆ ನಿಲ್ಲಿಸಿ ಎಂದು ಸಭಾಪತಿ ಖಡಕ್ ಸೂಚನೆ
ಮೈಲಾರಲಿಂಗ ಕಾರ್ಣಿಕ: ಸಂಪಾಯಿತಲೇ ಪರಾಕ್
ಮೈಲಾರಲಿಂಗ ಕಾರ್ಣಿಕ: ಸಂಪಾಯಿತಲೇ ಪರಾಕ್
ಈಗ ಕಾಲ ಬದಲಾಗಿದೆ: ‘ಜೋಗಿ’ ನಿರ್ಮಾಪಕರ ‘ಘಾರ್ಗಾ’ ಚಿತ್ರ ಬಿಡುಗಡೆಗೆ ರೆಡಿ
ಈಗ ಕಾಲ ಬದಲಾಗಿದೆ: ‘ಜೋಗಿ’ ನಿರ್ಮಾಪಕರ ‘ಘಾರ್ಗಾ’ ಚಿತ್ರ ಬಿಡುಗಡೆಗೆ ರೆಡಿ
ರೋಹಿತ್, ಕೊಹ್ಲಿ ಏಕದಿನ ವಿಶ್ವಕಪ್ ಆಡುವ ಬಗ್ಗೆ ಮೌನ ಮುರಿದ ಧೋನಿ
ರೋಹಿತ್, ಕೊಹ್ಲಿ ಏಕದಿನ ವಿಶ್ವಕಪ್ ಆಡುವ ಬಗ್ಗೆ ಮೌನ ಮುರಿದ ಧೋನಿ