Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಶಾಸಕರಿರಲಿ, ಕೇರಳ ಶಾಸಕರ ಬೇಸಿಕ್ ಸ್ಯಾಲರಿ ಕೇವಲ 2,000 ರೂ; ಬೇರೆ ರಾಜ್ಯಗಳಲ್ಲಿ ಹೇಗಿದೆ ಸಂಬಳ? ಇಲ್ಲಿದೆ ಪಟ್ಟಿ

MLAs' salaries in India: ದೆಹಲಿಯಲ್ಲಿ ಶಾಸಕರಿಗೆ ಸಂಬಳ ಕೇವಲ 90,000 ರೂ ಇದೆ. ಸಂಬಳ ಪರಿಷ್ಕರಣೆಗೆ ಪ್ರಯತ್ನಗಳಾಗುತ್ತಿವೆ. ಆದರೆ, ಕೇರಳ ಶಾಸಕರಿಗೆ ಇನ್ನೂ ಕಡಿಮೆ ಸಂಬಳ ಇದೆ. ಅಲ್ಲಿಯ ಎಂಎಲ್​​ಎಗಳ ಮೂಲವೇತನ ಕೇವಲ 2,000 ರೂ ಎಂದರೆ ನಂಬಲು ಕಷ್ಟ. ಆದರೂ ನಿಜ. ಶಾಸಕರಿಗೆ ಅತಿಹೆಚ್ಚು ಸಂಬಳ ನೀಡುವ ಟಾಪ್-5 ರಾಜ್ಯಗಳಲ್ಲಿ ಕರ್ನಾಟಕ ಇದೆ.

ದೆಹಲಿ ಶಾಸಕರಿರಲಿ, ಕೇರಳ ಶಾಸಕರ ಬೇಸಿಕ್ ಸ್ಯಾಲರಿ ಕೇವಲ 2,000 ರೂ; ಬೇರೆ ರಾಜ್ಯಗಳಲ್ಲಿ ಹೇಗಿದೆ ಸಂಬಳ? ಇಲ್ಲಿದೆ ಪಟ್ಟಿ
ಕೇರಳ ವಿಧಾನಸಭೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 27, 2025 | 12:10 PM

ನವದೆಹಲಿ, ಮಾರ್ಚ್ 27: ದೆಹಲಿಯಲ್ಲಿ ಶಾಸಕರ ಸಂಬಳ ಅತಿ ಕಡಿಮೆ ಇದೆ ಎನ್ನುವ ವಿಚಾರ ಅಲ್ಲಿನ ವಿಧಾನಸಭೆಯಲ್ಲಿ ಸದ್ದು ಮಾಡುತ್ತಿದೆ. ಶಾಸಕರಿಗೆ ಅತಿ ಕಡಿಮೆ ಸಂಬಳ ನೀಡುವ ರಾಜ್ಯಗಳಲ್ಲಿ ದೆಹಲಿಯೂ ಒಂದು. ಶಾಸಕರ ಮೂಲವೇತನ ಕೇವಲ 30,000 ರೂ ಮಾತ್ರವೇ. ಒಟ್ಟು ಮಾಸಿಕ ಸಂಬಳ ಒಂದು ಲಕ್ಷ ರೂಗಿಂತಲೂ ಕಡಿಮೆ. ಕೇರಳ ರಾಜ್ಯದ ಶಾಸಕರದ್ದು ಇನ್ನೂ ಕಡಿಮೆ ಸಂಬಳ. ಇವರ ಮೂಲವೇತನ ಕೇವಲ 2,000 ರೂ ಎಂದರೆ ಯಾರಿಗಾದರೂ ಅಚ್ಚರಿ ಎನಿಸುತ್ತದೆ. ಶಾಸಕರಿಗೆ ಅತ್ಯಂತ ಕಡಿಮೆ ಸಂಬಳ ಹೊಂದಿರುವ ರಾಜ್ಯಗಳಲ್ಲಿ ಕೇರಳ ಇದೆ. ಈ ದಕ್ಷಿಣ ತುದಿಯ ರಾಜ್ಯದ ಎಂಎಲ್​​ಎಗಳಿಗೆ ಮೂಲವೇತನ ಕೇವಲ 2,000 ರೂ ಅಂತೆ. ಇದು ಅಚ್ಚರಿ ಎನಿಸಿದರೂ ನಿಜ. ಬೇಸಿಕ್ ಸ್ಯಾಲರಿ ಎರಡು ಸಾವಿರ ರೂ ಮಾತ್ರವೇ ಇದ್ದರೂ ಬೇರೆ ಬೇರೆ ಭತ್ಯೆಗಳನ್ನು ಸೇರಿಸಿದರೆ ಕೇರಳ ಶಾಸಕರ ಒಟ್ಟು ಸಂಬಳ 70,000 ರೂ ಆಗುತ್ತದೆ. ಆದರೂ ಕೂಡ ಬೇರೆ ಹೆಚ್ಚಿನ ರಾಜ್ಯಗಳಿಗೆ ಹೋಲಿಸಿದರೆ ಇವರ ಸಂಬಳ ಕಡಿಮೆ ಎನಿಸುವುದು.

ದೆಹಲಿ ರಾಜ್ಯದಲ್ಲಿ ಶಾಸಕರಿಗೆ ಸಿಗುವ ಸಂಬಳ ತಿಂಗಳಿಗೆ 90,000 ರೂ ಮಾತ್ರ. ರಾಷ್ಟ್ರ ರಾಜಧಾನಿಯ ಜನಪ್ರತಿನಿಧಿಗಳಿಗೆ ಇಷ್ಟು ಕಡಿಮೆ ಸಂಬಳ ಇರುವುದು ಅಚ್ಚರಿಯ ಸಂಗತಿ. ದೆಹಲಿ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, ವೇತನ ಪರಿಷ್ಕರಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.

ದೆಹಲಿ ಶಾಸಕರ ವೇತನ ವಿವರ

ದೆಹಲಿ ಶಾಸಕರ ಒಟ್ಟು ಮಾಸಿಕ ಸಂಬಳ: 90,000 ರೂ

ಇದನ್ನೂ ಓದಿ
Image
ಆಸ್ತಿ ನೋಂದಣಿ ಸಂದರ್ಭದಲ್ಲಿ ಯಾರನ್ನು ಸಾಕ್ಷಿದಾರರನ್ನಾಗಿ ಮಾಡಬಹುದು?
Image
ಮಾರ್ಚ್ 31ರೊಳಗೆ ರೇಷನ್ ಕಾರ್ಡ್​​ಗೆ ಇ-ಕೆವೈಸಿ ಸಲ್ಲಿಸಿ
Image
ಜಾಗತಿಕವಾಗಿ ಬೆಳಗುತ್ತಿರುವ ಪತಂಜಲಿ; ಏನು ಕಾರಣ?
Image
ಮೊದಲ ಮೇಡ್ ಇನ್ ಇಂಡಿಯಾ ಎಂಆರ್​​ಐ ಸ್ಕ್ಯಾನರ್
  • ಮೂಲವೇತನ: 30,000 ರೂ
  • ಕ್ಷೇತ್ರ ಭತ್ಯೆ: 25,000 ರೂ
  • ಕಾರ್ಯದರ್ಶಿ ಭತ್ಯೆ: 15,000 ರೂ
  • ದೂರವಾಣಿ ಮತ್ತಿತರ ಭತ್ಯೆ: 10,000 ರೂ

ಇವುಗಳ ಜೊತೆಗೆ, ದಿನಕ್ಕೆ 1,500 ರೂ ಭತ್ಯೆಯೂ ಸಿಗುತ್ತದೆ. ಇದು ತಿಂಗಳಿಗೆ 45,000 ರೂ ಆಗುತ್ತದೆ. ಇದನ್ನು ಸೇರಿಸಿದರೆ ದೆಹಲಿ ಶಾಸಕರು ತಿಂಗಳಿಗೆ ಸುಮಾರು 1,35,000 ರೂ ಗಳಿಸುತ್ತಾರೆ.

ಇದನ್ನೂ ಓದಿ: ಆಸ್ತಿ ನೋಂದಣಿ ಸಂದರ್ಭದಲ್ಲಿ ಯಾರನ್ನು ಸಾಕ್ಷಿದಾರರನ್ನಾಗಿ ಮಾಡಬಹುದು, ಕಾನೂನು ಏನು ಹೇಳುತ್ತೆ?

ಶಾಸಕರಿಗೆ ಅಧಿಕ ಸಂಬಳ ನೀಡುವ ರಾಜ್ಯಗಳಲ್ಲಿ ಕರ್ನಾಟಕ

ಶಾಸಕರಿಗೆ ಮೂಲವೇತನ ಕಡಿಮೆ ಇರುವ ರಾಜ್ಯಗಳಲ್ಲಿ ಕೇರಳದ ಜೊತೆಗೆ ಕರ್ನಾಟಕವೂ ಇದೆ. ಕರ್ನಾಟಕದ ಎಂಎಲ್​​ಎಗಳ ಬೇಸಿಕ್ ಸ್ಯಾಲರಿ 25,000 ರೂ ಮಾತ್ರವೇ. ಆದರೆ, ಭತ್ಯೆ ಸೇರಿ ಒಟ್ಟು ಸಂಬಳ ಎರಡು ಲಕ್ಷ ರೂಗಿಂತಲೂ ಹೆಚ್ಚಿದೆ. ಶಾಸಕರಿಗೆ ಅತಿಹೆಚ್ಚು ಸಂಬಳ ನೀಡುವ ಟಾಪ್-5 ರಾಜ್ಯಗಳಲ್ಲಿ ಕರ್ನಾಟಕವೂ ಇದೆ.

ಹಿಂದುಳಿದ ರಾಜ್ಯಗಳಲ್ಲಿ ಒಂದೆಂದು ಪರಿಗಣಿಸಲಾದ ಜಾರ್ಖಂಡ್​​ನಲ್ಲಿ ಶಾಸಕರಿಗೆ ಅತಿಹೆಚ್ಚು ಸಂಬಳ ನೀಡಲಾಗುತ್ತದೆ. ಇಲ್ಲಿ ತಿಂಗಳಿಗೆ ಒಟ್ಟು 2,90,000 ರೂ ಸಂಬಳ ನಿಗದಿ ಮಾಡಲಾಗಿದೆ. ಮಣಿಪುರ ರಾಜ್ಯದ ಶಾಸಕರೂ ಕೂಡ ಎರಡೂವರೆ ಲಕ್ಷ ರೂ ಸಂಬಳ ಪಡೆಯುತ್ತಾರೆ.

ರಾಜ್ಯವಾರು ಶಾಸಕರ ಮಾಸಿಕ ಸಂಬಳ

  1. ಜಾರ್ಖಂಡ್: 2,90,000 ರೂ
  2. ಮಹಾರಾಷ್ಟ್ರ: 2,60,000 ರೂ
  3. ತೆಲಂಗಾಣ: 2,50,000 ರೂ
  4. ಮಣಿಪುರ: 2,50,000 ರೂ
  5. ಕರ್ನಾಟಕ: 2,05,000 ರೂ
  6. ಉತ್ತರಪ್ರದೇಶ: 1,87,000 ರೂ
  7. ಉತ್ತರಾಖಂಡ್: 1,60,000 ರೂ
  8. ಆಂಧ್ರಪ್ರದೇಶ: 1,25,000 ರೂ
  9. ಹಿಮಾಚಲಪ್ರದೇಶ: 1,25,000 ರೂ
  10. ರಾಜಸ್ಥಾನ್: 1,25,000 ರೂ
  11. ಗೋವಾ: 1,00,000 ರೂ
  12. ದೆಹಲಿ: 90,000 ರೂ
  13. ಕೇರಳ: 70,000 ರೂ

ರಾಷ್ಟ್ರಪತಿ, ಪ್ರಧಾನಮಂತ್ರಿಗಳ ಮಾಸಿಕ ಸಂಬಳ ಎಷ್ಟು?

  • ರಾಷ್ಟ್ರಪತಿ: 4,00,000 ರೂ
  • ಪ್ರಧಾನಿ: 2,80,000 ರೂ
  • ಸಂಸದರು: 1,00,000 ರೂ

ಇದನ್ನೂ ಓದಿ: ಗೋಲ್ಡ್ ಮಾನಿಟೈಸೇಶನ್ ಸ್ಕೀಮ್, 2 ಪ್ಲಾನ್ ನಿಲ್ಲಿಸಿದ ಸರ್ಕಾರ; ಏನಿದು ಚಿನ್ನ ನಗದೀಕರಣ ಯೋಜನೆ?

ತೆಲಂಗಾಣ ಸಿಎಂ ಸಂಬಳ ರಾಷ್ಟ್ರಪತಿಗಳದ್ದಕ್ಕೆ ಸಮ

ರಾಷ್ಟ್ರಪತಿಗಳಿಗೆ ತಿಂಗಳಿಗೆ ನಾಲ್ಕು ಲಕ್ಷ ರೂ ಸಂಬಳ ಸಿಗುತ್ತದೆ. ತೆಲಂಗಾಣ ಮುಖ್ಯಮಂತ್ರಿಯ ಮಾಸಿಕ ವೇತನವೂ ಇಷ್ಟೇ ಇದೆ. ದೆಹಲಿ ಶಾಸಕರಿಗೆ ಸಂಬಳ ಕಡಿಮೆ ಆದರೂ ಅಲ್ಲಿನ ಮುಖ್ಯಮಂತ್ರಿಗೆ 3,90,000 ರೂ ಸಂಬಳ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:04 pm, Thu, 27 March 25

ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್
ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಗೆ ಹರಿಬಿಟ್ಟರೆ ಸರಿಯಿರಲ್ಲ: ನಡಹಳ್ಳಿ
ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಗೆ ಹರಿಬಿಟ್ಟರೆ ಸರಿಯಿರಲ್ಲ: ನಡಹಳ್ಳಿ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ