AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಷನ್ ಕಾರ್ಡ್​​ಗೆ ಇ-ಕೆವೈಸಿ ಸಲ್ಲಿಸಲು ಮಾರ್ಚ್ 31 ಡೆಡ್​ಲೈನ್; ತಪ್ಪಿದರೆ ಕೈತಪ್ಪಬಹುದು ಸಬ್ಸಿಡಿ

2025 March 31st deadline to link Ration Card and Aadhaar: ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ರೇಷನ್​ ಕಾರ್ಡ್ದದಾರರು ಆಧಾರ್ ದಾಖಲೆಯ ಮೂಲಕ ಇ ಕೆವೈಸಿ ಮಾಡಬೇಕು. 2025ರ ಮಾರ್ಚ್ 26ರವರೆಗೆ ಕಾಲಾವಕಾಶ ಕೊಡಲಾಗಿದೆ. ಜನರು ತಮ್ಮ ರಾಜ್ಯದ ಪಿಡಿಎಸ್ ಪೋರ್ಟಲ್ ಮೂಲಕ ಇಕೆವೈಸಿ ಸಲ್ಲಿಸಬಹುದು.

ರೇಷನ್ ಕಾರ್ಡ್​​ಗೆ ಇ-ಕೆವೈಸಿ ಸಲ್ಲಿಸಲು ಮಾರ್ಚ್ 31 ಡೆಡ್​ಲೈನ್; ತಪ್ಪಿದರೆ ಕೈತಪ್ಪಬಹುದು ಸಬ್ಸಿಡಿ
ರೇಷನ್ ಕಾರ್ಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 26, 2025 | 5:56 PM

ನವದೆಹಲಿ, ಮಾರ್ಚ್ 26: ರೇಷನ್ ಕಾರ್ಡ್ ಹೊಂದಿರುವವರು ಇ-ಕೆವೈಸಿ (Ration Card e-KYC) ಮಾಡುವುದು ಕಡ್ಡಾಯವಾಗಿದೆ. ಕೇಂದ್ರ ಸರ್ಕಾರ ಮಾರ್ಚ್ 31ಕ್ಕೆ ಡೆಡ್​​ಲೈನ್ ನಿಗದಿ ಮಾಡಿದೆ. ಮುಂದಿನ ಮಂಗಳವಾರದೊಳಗೆ ರೇಷನ್ ಕಾರ್ಡ್​​ಗೆ ಆಧಾರ್ ದಾಖಲೆ ಸಲ್ಲಿಸದಿದ್ದರೆ ನಿಮ್ಮ ಪಡಿತರ ಸೌಲಭ್ಯ ಸ್ಥಗಿತಗೊಳ್ಳಬಹುದು. ರೇಷನ್ ಕಾರ್ಡ್ ದುರ್ಬಳಕೆ ತಡೆಯಲು, ಸರಿಯಾದ ಫಲಾನುಭವಿಗಳನ್ನು ಗುರುತಿಸಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

ರೇಷನ್ ಕಾರ್ಡ್ ಇ ಕೆವೈಸಿ ಸಲ್ಲಿಸುವ ಕ್ರಮ

  • ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ಪ್ರತ್ಯೇಕವಾದ ಅಧಿಕೃತ ಪಿಡಿಎಸ್ ಪೋರ್ಟಲ್ ಇರುತ್ತದೆ. ನಿಮ್ಮ ರಾಜ್ಯದ ಪಿಡಿಎಸ್ ಪೋರ್ಟಲ್ ತೆರೆಯಿರಿ.
  • ಅಲ್ಲಿ ಮುಖ್ಯಪುಟದಲ್ಲಿ ರೇಷನ್ ಕಾರ್ಡ್ ಮೆನು ಅಥವಾ ಸರ್ವಿಸಸ್ ಮೆನು ಅಡಿಯಲ್ಲಿ ಇ ಕೆವೈಸಿ ಇರುತ್ತದೆ. ಅದನ್ನು ಕ್ಲಿಕ್ ಮಾಡಿ.
  • ಇಲ್ಲಿ ರೇಷನ್ ಕಾರ್ಡ್ ನಂಬರ್ ನಮೂದಿಸಿ. ಬಳಿಕ ರೇಷನ್ ಕಾರ್ಡ್ ಯಾರ ಹೆಸರಲ್ಲಿ ಇದೆಯೋ ಅವರ ಆಧಾರ್ ಕಾರ್ಡ್ ನಂಬರ್ ಅನ್ನು ನಮೂದಿಸಬಹುದು. ಅಥವಾ ರೇಷನ್ ಕಾರ್ಡ್​​ನಲ್ಲಿರುವ ಇತರ ಸದಸ್ಯರ ಆಧಾರ್ ನಂಬರ್ ಅನ್ನು ಬೇಕಾದರೂ ನಮೂದಿಸಬಹುದು.
  • ಈಗ ಮೊಬೈಲ್ ನಂಬರ್ ವೆರಿಫಿಕೇಶನ್ ಮಾಡಬೇಕಾಗುತ್ತದೆ. ಆಧಾರ್​​ಗೆ ಲಿಂಕ್ ಆದ ಮೊಬೈಲ್ ನಂಬರ್​​ಗೆ ಬರುವ ಒಟಿಪಿಯನ್ನು ನಮೂದಿಸಿ ಲಾಗಿನ್ ಆಗಬಹುದು.

ಈ ಹಂತಗಳಾದರೆ ಇ ಕೆವೈಸಿ ಪೂರ್ಣವಾಗುತ್ತದೆ.

ಇದನ್ನೂ ಓದಿ: ಗೋಲ್ಡ್ ಮಾನಿಟೈಸೇಶನ್ ಸ್ಕೀಮ್, 2 ಪ್ಲಾನ್ ನಿಲ್ಲಿಸಿದ ಸರ್ಕಾರ; ಏನಿದು ಚಿನ್ನ ನಗದೀಕರಣ ಯೋಜನೆ?

ಕಚೇರಿಗೆ ಹೋಗಿ ಕೆವೈಸಿ ಸಲ್ಲಿಸಬಹುದು

ಆನ್​​​ಲೈನ್​​ನಲ್ಲಿ ಇ-ಕೆವೈಸಿ ಸಲ್ಲಿಸಲು ಕಷ್ಟವಾಗುತ್ತಿದ್ದರೆ ಆಫ್​​ಲೈನ್​ನಲ್ಲೇ ಮಾಡಬಹುದು. ನಿಮ್ಮ ಸ್ಥಳೀಯ ರೇಷನ್ ಕಾರ್ಡ್ ಕಚೇರಿ ಅಥವಾ ಕಾಮನ್ ಸರ್ವಿಸ್ ಸೆಂಟರ್​​ನಲ್ಲಿ (Common Service Centre) ಇಕೆವೈಸಿ ಸಲ್ಲಿಸಬಹುದು.

ನಿಮ್ಮ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ದಾಖಲೆಗಳನ್ನು ಕೊಂಡೊಯ್ಯಬೇಕು. ಫಿಂಗರ್ ಪ್ರಿಂಟ್ ಅಥವಾ ಐರಿಸ್ ಸ್ಕ್ಯಾನ್ ಮೂಲಕ ಬಯೋಮೆಟ್ರಿಕ್ಸ್ ವೆರಿಫೈ ಮಾಡಬಹುದು. ಇದಾದ ಬಳಿಕ ಇ-ಕೆವೈಸಿ ಪೂರ್ಣಗೊಂಡು ನಿಮಗೆ ದೃಢೀಕರಣ ಪತ್ರ ಸಿಗುತ್ತದೆ.

ರೇಷನ್ ಕಾರ್ಡ್​​​ಗೆ ಇಕೆವೈಸಿ ಸಲ್ಲಿಸಲು ಸದ್ಯಕ್ಕೆ ಮಾರ್ಚ್ 31ಕ್ಕೆ ಗಡುವು ಕೊಡಲಾಗಿದೆ. ಕಾಲಾವಕಾಶ ಮತ್ತಷ್ಟು ವಿಸ್ತರಣೆ ಆಗುತ್ತದಾ ಗೊತ್ತಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸೋಮಣ್ಣ
ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸೋಮಣ್ಣ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಕಮಲ್ ಹಾಸನ್ ವಿವಾದ, ಬಂದ್​ಗೆ ಕರೆ ಕೊಡುವುದಾಗಿ ವಾಟಾಳ್ ಎಚ್ಚರಿಕೆ
ಕಮಲ್ ಹಾಸನ್ ವಿವಾದ, ಬಂದ್​ಗೆ ಕರೆ ಕೊಡುವುದಾಗಿ ವಾಟಾಳ್ ಎಚ್ಚರಿಕೆ
ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದ್ರೆ ಏನಾಗುತ್ತೆ??
ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡುವಾಗ ಸ್ವಲ್ಪ ಎಚ್ಚರ ತಪ್ಪಿದ್ರೆ ಏನಾಗುತ್ತೆ??
ಮಾತೃಭಾಷೆ ಮರೆಯಲ್ಲ, ಬೇರೆ ಭಾಷೆ ಬಗ್ಗೆ ಕಮೆಂಟ್ ಮಾಡಲ್ಲ: ರಚಿತಾ ರಾಮ್
ಮಾತೃಭಾಷೆ ಮರೆಯಲ್ಲ, ಬೇರೆ ಭಾಷೆ ಬಗ್ಗೆ ಕಮೆಂಟ್ ಮಾಡಲ್ಲ: ರಚಿತಾ ರಾಮ್
ಮಂಗಳೂರು: ಗುಡ್ಡ ಕುಸಿತ ದುರಂತ ಬೆನ್ನಲ್ಲೇ ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಮಂಗಳೂರು: ಗುಡ್ಡ ಕುಸಿತ ದುರಂತ ಬೆನ್ನಲ್ಲೇ ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಗೃಹ ಸಚಿವ ಪರಮೇಶ್ವರ್ ಪರ ಸೋಮಣ್ಣ ಬ್ಯಾಟಿಂಗ್
ಗೃಹ ಸಚಿವ ಪರಮೇಶ್ವರ್ ಪರ ಸೋಮಣ್ಣ ಬ್ಯಾಟಿಂಗ್
ಉನ್ನಾವೋದಲ್ಲಿ ವ್ಯಕ್ತಿಯನ್ನು ತುಳಿದು ಕೊಂದ ಎತ್ತು
ಉನ್ನಾವೋದಲ್ಲಿ ವ್ಯಕ್ತಿಯನ್ನು ತುಳಿದು ಕೊಂದ ಎತ್ತು
ರಷ್ಯಾದಲ್ಲಿ ರೈಲು ಹಾದುಹೋಗುತ್ತಿದ್ದಂತೆ ಕುಸಿದ ಸೇತುವೆ
ರಷ್ಯಾದಲ್ಲಿ ರೈಲು ಹಾದುಹೋಗುತ್ತಿದ್ದಂತೆ ಕುಸಿದ ಸೇತುವೆ