Stock Market Updates: ಇದು ಪಕ್ಕಾ ಬಿಸಿನೆಸ್; ಬೆಳಗಿನ ಮೊದಲ 5 ನಿಮಿಷದಲ್ಲಿ ಷೇರುಪೇಟೆ ಪ್ರಪಾತಕ್ಕೆ ಬೀಳಲು ಏನು ಕಾರಣ?

Stock Market Falling, Know the reasons: ನಿನ್ನೆ ಸೋಮವಾರ ಸಿಕ್ಕಾಪಟ್ಟೆ ಏರಿದ್ದ ಷೇರು ಮಾರುಕಟ್ಟೆ ಇಂದು ಮಂಗಳವಾರ ಬೆಳಗಿನ ವಹಿವಾಟಿನಲ್ಲಿ ರಭಸವಾಗಿ ಕುಸಿತ ಕಂಡಿದೆ. ವ್ಯವಹಾರ ಆರಂಭವಾದ ಮೊದಲ 15 ನಿಮಿಷದಲ್ಲಿ ಹೆಚ್ಚಿನ ಡ್ಯಾಮೇಜ್ ಆಗಿದೆ. 9 ಲಕ್ಷ ಕೋಟಿ ರೂನಷ್ಟು ನಷ್ಟವಾಗಿದೆ. ಅನುಭವಿಗಳು ಹೇಳುವ ಪ್ರಕಾರ ಇದಕ್ಕೆ ಕಾರಣ ಪ್ರಾಫಿಟ್ ಬುಕಿಂಗ್. ಷೇರುಬೆಲೆ ದಿಢೀರ್ ಉಬ್ಬಿದಾಗ ಅದು ಕಡಿಮೆಗೊಳ್ಳುವ ಮುನ್ನ ಲಾಭಕ್ಕೆ ಮಾರುವುದು ಸಹಜ ತಂತ್ರ.

Stock Market Updates: ಇದು ಪಕ್ಕಾ ಬಿಸಿನೆಸ್; ಬೆಳಗಿನ ಮೊದಲ 5 ನಿಮಿಷದಲ್ಲಿ ಷೇರುಪೇಟೆ ಪ್ರಪಾತಕ್ಕೆ ಬೀಳಲು ಏನು ಕಾರಣ?
ಷೇರು ಮಾರುಕಟ್ಟೆ
Follow us
| Updated By: Digi Tech Desk

Updated on:Jun 04, 2024 | 11:37 AM

ಮುಂಬೈ, ಜೂನ್ 4: ಷೇರು ಮಾರುಕಟ್ಟೆ ಇಂದು ಮಂಗಳವಾರ ಬೆಳಗಿನ ವಹಿವಾಟಿನಲ್ಲಿ ಅಕ್ಷರಶಃ ರಕ್ತದೋಕುಳಿ (Share market blood bath) ಕಂಡಿತು. ಸೆನ್ಸೆಕ್ಸ್, ನಿಫ್ಟಿ ಇತ್ಯಾದಿ ಎಲ್ಲಾ ಸೂಚ್ಯಂಕಗಳು ಪ್ರಪಾತಕ್ಕೆ ಬಿದ್ದವು. ಕೇವಲ 15 ನಿಮಿಷದಲ್ಲಿ ಹೂಡಿಕೆದಾರರಿಗೆ (investors’ money) 9 ಲಕ್ಷ ಕೋಟಿ ರೂ ನಷ್ಟವಾಯಿತು. ಅದಾದ ಬಳಿಕ ಕ್ರಮೇಣವಾಗಿ ಷೇರು ಮಾರುಕಟ್ಟೆ ಮತ್ತೆ ಸಕಾರಾತ್ಮಕವಾಗಿ ವರ್ತಿಸಲು ಆರಂಭಿಸಿದೆ. ಒಂದೊಂದೇ ಷೇರುಗಳು ಹಸಿರು ಬಣ್ಣಕ್ಕೆ ತಿರುಗುತ್ತಿವೆ. ಆದರೆ, ಆರಂಭದ 15 ನಿಮಿಷದಲ್ಲಿ ಮಾರುಕಟ್ಟೆ ಆಗಿದ್ದಾದರೂ ಏನು?

ಪ್ರಾಫಿಟ್ ಬುಕಿಂಗ್ ಎಂಬ ತಂತ್ರ; ಇದು ಪಕ್ಕಾ ಬಿಸಿನೆಸ್

ಷೇರು ಮಾರುಕಟ್ಟೆ ಎಂಬುದು ಜನರು ಲಾಭಕ್ಕೆ ವ್ಯವಹರಿಸುವ ಒಂದು ಅಡ್ಡೆ. ಇಲ್ಲಿ ರೀಟೇಲ್ ಹೂಡಿಕೆದಾರರು (ಜನಸಾಮಾನ್ಯರು), ದೊಡ್ಡ ಹೂಡಿಕೆದಾರರು, ಮ್ಯೂಚುವಲ್ ಫಂಡ್ಸ್ ಹೂಡಿಕೆದಾರರು ಹೀಗೆ ಇರುತ್ತಾರೆ. ಎಲ್ಲರೂ ಕೂಡ ಲಾಭದ ಅವಕಾಶಕ್ಕೆ ಕಾಯುತ್ತಿರುತ್ತಾರೆ. ಶನಿವಾರ ಎಕ್ಸಿಟ್ ಪೋಲ್ ರಿಸಲ್ಟ್ ಬಂದಿತು. ಷೇರು ಮಾರುಕಟ್ಟೆ ಏರುತ್ತದೆ ಎಂಬುದು ಖಾತ್ರಿಯಾಯಿತು. ನಿರೀಕ್ಷೆಯಂತೆ ಸೋಮವಾರ ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹರಿದುಬರತೊಡಗಿದವು. ಪರಿಣಾಮವಾಗಿ ಮಾರುಕಟ್ಟೆ ಉಬ್ಬಿತು.

ಇದನ್ನೂ ಓದಿ: ನಿನ್ನೆ ಉಬ್ಬಿದ್ದ ಷೇರುಪೇಟೆ ಇವತ್ತು ಪ್ರಪಾತಕ್ಕೆ; ಸೆನ್ಸೆಕ್ಸ್, ನಿಫ್ಟಿ ಸೇರಿ ಪ್ರಮುಖ ಸೂಚ್ಯಂಕಗಳ ಕುಸಿತ

ಬಹಳಷ್ಟು ಹೂಡಿಕೆದಾರರಿಗೆ ಇದು ಲಾಭದ ಸಮಯ. ಕೃತಕವಾಗಿ ಮತ್ತು ಭಾವನಾತ್ಮಕವಾಗಿ ಉಬ್ಬಿದ ಷೇರುಪೇಟೆಯಿಂದ ಲಾಭ ಪಡೆಯಬೇಕಾದರೆ ಷೇರು ಮಾರಬೇಕು. ಈಗ ಮಂಗಳವಾರ ಬೆಳಗಿನ ಅವಧಿಯಲ್ಲಿ ಆಗಿದ್ದೂ ಅದೇ. ಅದುವೇ ಪ್ರಾಫಿಟ್ ಬುಕಿಂಗ್. ಒಂದೇ ದಿನದಲ್ಲಿ ಸಖತ್ತಾಗಿ ಏರಿದ್ದ ಷೇರುಗಳನ್ನು ಮಾರಿ ಬಹಳಷ್ಟು ಜನರು ಲಾಭ ಮಾಡಿಕೊಂಡಿದ್ದಾರೆ.

ಮಾರಾಟ ಹೆಚ್ಚಾದಾಗ ಮತ್ತು ಅದನ್ನು ಖರೀದಿಸಲು ಜನರ ಸಂಖ್ಯೆ ಕಡಿಮೆ ಇದ್ದಾಗ ಷೇರುಮೌಲ್ಯ ಕಡಿಮೆ ಆಗುತ್ತದೆ. ಇದು ಯಾವುದೇ ಬಿಸಿನೆಸ್​ನಲ್ಲೂ ಇರುವ ಸ್ವಾಭಾವಿಕ ಅಂಶ. ಮೊದಲ 15 ನಿಮಿಷದಲ್ಲಿ ಇದೇ ಆಗಿದ್ದು. ಸಾಕಷ್ಟು ಜನರು ಲಾಭದ ಆಸೆಗೆ ಷೇರು ಮಾರಲು ಹೋಗಿದ್ದಾರೆ. ಪರಿಣಾಮವಾಗಿ ಪೇಟೆ ಕುಸಿತ ಕಂಡಿದೆ. ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಹೆಚ್ಚಾಗಿ ಮಾರಾಟ ಮಾಡಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಐಪಿಒದಲ್ಲಿ ಷೇರು ಖರೀದಿಸಿ ಲಿಸ್ಟಿಂಗ್​ನಲ್ಲಿ ಮಾರಿದಾಗ ಎಷ್ಟು ತೆರಿಗೆ ಕಟ್ಟಬೇಕು?

ಷೇರು ಕುಸಿತ ಆಗುತ್ತಿರುವಂತೆಯೇ ತಳದಿಂದ ಷೇರುಗಳ ಖರೀದಿ ಆರಂಭವಾಗಿದೆ. ಪರಿಣಾಮವಾಗಿ ಕ್ರಮೇಣವಾಗಿ ಷೇರುಮೌಲ್ಯ ಹೆಚ್ಚಾಗತೊಡಗಿದೆ. ದಿನಾಂತ್ಯದೊಳಗೆ ಸೂಚ್ಯಂಕಗಳು ಒಂದಷ್ಟು ಚೇತರಿಕೆ ಕಾಣಬಹುದು. 2019ರಲ್ಲೂ ಲೋಕಸಭೆ ಚುನಾವಣೆಯ ಫಲಿತಾಂಶದ ದಿನ ಇದೇ ರೀತಿ ಪೇಟೆ ಕುಸಿತ ಕಂಡಿತ್ತು. ಬಳಿಕ ಚೇರಿಕೆ ಕಂಡಿತ್ತು. ಷೇರು ಮಾರುಕಟ್ಟೆ ಅಕ್ಷರಶಃ ಬಿಸಿನೆಸ್ ಅಡ್ಡೆ ಎನ್ನುವುದು ಇದಕ್ಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:28 am, Tue, 4 June 24

ತಾಜಾ ಸುದ್ದಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ