AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stock Market Updates: ಇದು ಪಕ್ಕಾ ಬಿಸಿನೆಸ್; ಬೆಳಗಿನ ಮೊದಲ 5 ನಿಮಿಷದಲ್ಲಿ ಷೇರುಪೇಟೆ ಪ್ರಪಾತಕ್ಕೆ ಬೀಳಲು ಏನು ಕಾರಣ?

Stock Market Falling, Know the reasons: ನಿನ್ನೆ ಸೋಮವಾರ ಸಿಕ್ಕಾಪಟ್ಟೆ ಏರಿದ್ದ ಷೇರು ಮಾರುಕಟ್ಟೆ ಇಂದು ಮಂಗಳವಾರ ಬೆಳಗಿನ ವಹಿವಾಟಿನಲ್ಲಿ ರಭಸವಾಗಿ ಕುಸಿತ ಕಂಡಿದೆ. ವ್ಯವಹಾರ ಆರಂಭವಾದ ಮೊದಲ 15 ನಿಮಿಷದಲ್ಲಿ ಹೆಚ್ಚಿನ ಡ್ಯಾಮೇಜ್ ಆಗಿದೆ. 9 ಲಕ್ಷ ಕೋಟಿ ರೂನಷ್ಟು ನಷ್ಟವಾಗಿದೆ. ಅನುಭವಿಗಳು ಹೇಳುವ ಪ್ರಕಾರ ಇದಕ್ಕೆ ಕಾರಣ ಪ್ರಾಫಿಟ್ ಬುಕಿಂಗ್. ಷೇರುಬೆಲೆ ದಿಢೀರ್ ಉಬ್ಬಿದಾಗ ಅದು ಕಡಿಮೆಗೊಳ್ಳುವ ಮುನ್ನ ಲಾಭಕ್ಕೆ ಮಾರುವುದು ಸಹಜ ತಂತ್ರ.

Stock Market Updates: ಇದು ಪಕ್ಕಾ ಬಿಸಿನೆಸ್; ಬೆಳಗಿನ ಮೊದಲ 5 ನಿಮಿಷದಲ್ಲಿ ಷೇರುಪೇಟೆ ಪ್ರಪಾತಕ್ಕೆ ಬೀಳಲು ಏನು ಕಾರಣ?
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
| Updated By: Digi Tech Desk|

Updated on:Jun 04, 2024 | 11:37 AM

Share

ಮುಂಬೈ, ಜೂನ್ 4: ಷೇರು ಮಾರುಕಟ್ಟೆ ಇಂದು ಮಂಗಳವಾರ ಬೆಳಗಿನ ವಹಿವಾಟಿನಲ್ಲಿ ಅಕ್ಷರಶಃ ರಕ್ತದೋಕುಳಿ (Share market blood bath) ಕಂಡಿತು. ಸೆನ್ಸೆಕ್ಸ್, ನಿಫ್ಟಿ ಇತ್ಯಾದಿ ಎಲ್ಲಾ ಸೂಚ್ಯಂಕಗಳು ಪ್ರಪಾತಕ್ಕೆ ಬಿದ್ದವು. ಕೇವಲ 15 ನಿಮಿಷದಲ್ಲಿ ಹೂಡಿಕೆದಾರರಿಗೆ (investors’ money) 9 ಲಕ್ಷ ಕೋಟಿ ರೂ ನಷ್ಟವಾಯಿತು. ಅದಾದ ಬಳಿಕ ಕ್ರಮೇಣವಾಗಿ ಷೇರು ಮಾರುಕಟ್ಟೆ ಮತ್ತೆ ಸಕಾರಾತ್ಮಕವಾಗಿ ವರ್ತಿಸಲು ಆರಂಭಿಸಿದೆ. ಒಂದೊಂದೇ ಷೇರುಗಳು ಹಸಿರು ಬಣ್ಣಕ್ಕೆ ತಿರುಗುತ್ತಿವೆ. ಆದರೆ, ಆರಂಭದ 15 ನಿಮಿಷದಲ್ಲಿ ಮಾರುಕಟ್ಟೆ ಆಗಿದ್ದಾದರೂ ಏನು?

ಪ್ರಾಫಿಟ್ ಬುಕಿಂಗ್ ಎಂಬ ತಂತ್ರ; ಇದು ಪಕ್ಕಾ ಬಿಸಿನೆಸ್

ಷೇರು ಮಾರುಕಟ್ಟೆ ಎಂಬುದು ಜನರು ಲಾಭಕ್ಕೆ ವ್ಯವಹರಿಸುವ ಒಂದು ಅಡ್ಡೆ. ಇಲ್ಲಿ ರೀಟೇಲ್ ಹೂಡಿಕೆದಾರರು (ಜನಸಾಮಾನ್ಯರು), ದೊಡ್ಡ ಹೂಡಿಕೆದಾರರು, ಮ್ಯೂಚುವಲ್ ಫಂಡ್ಸ್ ಹೂಡಿಕೆದಾರರು ಹೀಗೆ ಇರುತ್ತಾರೆ. ಎಲ್ಲರೂ ಕೂಡ ಲಾಭದ ಅವಕಾಶಕ್ಕೆ ಕಾಯುತ್ತಿರುತ್ತಾರೆ. ಶನಿವಾರ ಎಕ್ಸಿಟ್ ಪೋಲ್ ರಿಸಲ್ಟ್ ಬಂದಿತು. ಷೇರು ಮಾರುಕಟ್ಟೆ ಏರುತ್ತದೆ ಎಂಬುದು ಖಾತ್ರಿಯಾಯಿತು. ನಿರೀಕ್ಷೆಯಂತೆ ಸೋಮವಾರ ಷೇರು ಮಾರುಕಟ್ಟೆಯಲ್ಲಿ ಬಂಡವಾಳ ಹರಿದುಬರತೊಡಗಿದವು. ಪರಿಣಾಮವಾಗಿ ಮಾರುಕಟ್ಟೆ ಉಬ್ಬಿತು.

ಇದನ್ನೂ ಓದಿ: ನಿನ್ನೆ ಉಬ್ಬಿದ್ದ ಷೇರುಪೇಟೆ ಇವತ್ತು ಪ್ರಪಾತಕ್ಕೆ; ಸೆನ್ಸೆಕ್ಸ್, ನಿಫ್ಟಿ ಸೇರಿ ಪ್ರಮುಖ ಸೂಚ್ಯಂಕಗಳ ಕುಸಿತ

ಬಹಳಷ್ಟು ಹೂಡಿಕೆದಾರರಿಗೆ ಇದು ಲಾಭದ ಸಮಯ. ಕೃತಕವಾಗಿ ಮತ್ತು ಭಾವನಾತ್ಮಕವಾಗಿ ಉಬ್ಬಿದ ಷೇರುಪೇಟೆಯಿಂದ ಲಾಭ ಪಡೆಯಬೇಕಾದರೆ ಷೇರು ಮಾರಬೇಕು. ಈಗ ಮಂಗಳವಾರ ಬೆಳಗಿನ ಅವಧಿಯಲ್ಲಿ ಆಗಿದ್ದೂ ಅದೇ. ಅದುವೇ ಪ್ರಾಫಿಟ್ ಬುಕಿಂಗ್. ಒಂದೇ ದಿನದಲ್ಲಿ ಸಖತ್ತಾಗಿ ಏರಿದ್ದ ಷೇರುಗಳನ್ನು ಮಾರಿ ಬಹಳಷ್ಟು ಜನರು ಲಾಭ ಮಾಡಿಕೊಂಡಿದ್ದಾರೆ.

ಮಾರಾಟ ಹೆಚ್ಚಾದಾಗ ಮತ್ತು ಅದನ್ನು ಖರೀದಿಸಲು ಜನರ ಸಂಖ್ಯೆ ಕಡಿಮೆ ಇದ್ದಾಗ ಷೇರುಮೌಲ್ಯ ಕಡಿಮೆ ಆಗುತ್ತದೆ. ಇದು ಯಾವುದೇ ಬಿಸಿನೆಸ್​ನಲ್ಲೂ ಇರುವ ಸ್ವಾಭಾವಿಕ ಅಂಶ. ಮೊದಲ 15 ನಿಮಿಷದಲ್ಲಿ ಇದೇ ಆಗಿದ್ದು. ಸಾಕಷ್ಟು ಜನರು ಲಾಭದ ಆಸೆಗೆ ಷೇರು ಮಾರಲು ಹೋಗಿದ್ದಾರೆ. ಪರಿಣಾಮವಾಗಿ ಪೇಟೆ ಕುಸಿತ ಕಂಡಿದೆ. ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಹೆಚ್ಚಾಗಿ ಮಾರಾಟ ಮಾಡಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಐಪಿಒದಲ್ಲಿ ಷೇರು ಖರೀದಿಸಿ ಲಿಸ್ಟಿಂಗ್​ನಲ್ಲಿ ಮಾರಿದಾಗ ಎಷ್ಟು ತೆರಿಗೆ ಕಟ್ಟಬೇಕು?

ಷೇರು ಕುಸಿತ ಆಗುತ್ತಿರುವಂತೆಯೇ ತಳದಿಂದ ಷೇರುಗಳ ಖರೀದಿ ಆರಂಭವಾಗಿದೆ. ಪರಿಣಾಮವಾಗಿ ಕ್ರಮೇಣವಾಗಿ ಷೇರುಮೌಲ್ಯ ಹೆಚ್ಚಾಗತೊಡಗಿದೆ. ದಿನಾಂತ್ಯದೊಳಗೆ ಸೂಚ್ಯಂಕಗಳು ಒಂದಷ್ಟು ಚೇತರಿಕೆ ಕಾಣಬಹುದು. 2019ರಲ್ಲೂ ಲೋಕಸಭೆ ಚುನಾವಣೆಯ ಫಲಿತಾಂಶದ ದಿನ ಇದೇ ರೀತಿ ಪೇಟೆ ಕುಸಿತ ಕಂಡಿತ್ತು. ಬಳಿಕ ಚೇರಿಕೆ ಕಂಡಿತ್ತು. ಷೇರು ಮಾರುಕಟ್ಟೆ ಅಕ್ಷರಶಃ ಬಿಸಿನೆಸ್ ಅಡ್ಡೆ ಎನ್ನುವುದು ಇದಕ್ಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:28 am, Tue, 4 June 24

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ