ಬೆಂಗಳೂರು, ಫೆಬ್ರುವರಿ 25: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎನ್ನುವುದು ಉದ್ಯೋಗ ಕಸಿದುಕೊಳ್ಳುವ ಪರಿಕರ ಅಲ್ಲ, ಅದು ಬದುಕು ಪರಿವರ್ತಿಸುವ, ಉತ್ಪನ್ನಶೀಲತೆ ಹೆಚ್ಚಿಸುವ ಸಾಧನ ಎಂದು ಸಾಕಷ್ಟು ತಜ್ಞರು ಹೇಳುತ್ತಾರೆ. ಎಐ ಟೆಕ್ನಾಲಜಿ ಸಾಮಾನ್ಯ ಜನರಿಗೆ ಹೇಗೆ ಸಹಾಯವಾಗಬಲ್ಲುದು ಎಂಬುದಕ್ಕೆ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಒಂದು ನಿದರ್ಶನ ನೀಡಿದ್ದಾರೆ. ಮಹಾರಾಷ್ಟ್ರದ ಬರಪೀಡಿತ ಬಾರಾಮತಿ ಪ್ರದೇಶದ ರೈತರ ಬದುಕನ್ನು ಈ ಎಐ ಹೇಗೆ ಸುಧಾರಣೆ ಮಾಡುತ್ತಿದೆ ಎಂಬುದನ್ನು ಅವರು ಹಂಚಿಕೊಂಡಿದ್ದಾರೆ. ಸ್ವತಃ ಇಲಾನ್ ಮಸ್ಕ್ ಕೂಡ ಈ ಪೋಸ್ಟ್ಗೆ ಪ್ರತಿಕ್ರಿಯಿಸಿ, ಎಐನಿಂದ ಇನ್ನೂ ಬಹಳಷ್ಟು ಸಾಧ್ಯ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.
ಬಾರಾಮತಿ ಸಹಕಾರಿ ಸಂಸ್ಥೆಗೆ ಜೋಡಿತವಾಗಿರುವ ಸಣ್ಣ ರೈತರು ಮೈಕ್ರೋಸಾಫ್ಟ್ನ ಎಐ ಟೆಕ್ನಾಲಜಿಯ ಪರಿಕರಗಳನ್ನು ಬಳಸಿ ತಮ್ಮ ಜಮೀನಿನಲ್ಲಿ ಹೆಚ್ಚು ಫಸಲು ಪಡೆಯಲು ಯಶಸ್ವಿಯಾಗಿದ್ದನ್ನು ಸತ್ಯ ನಾದೆಲ್ಲ ವಿವರಿಸಿದ್ದಾರೆ.
A fantastic example of AI’s impact on agriculture. pic.twitter.com/nY9o8hHmKJ
— Satya Nadella (@satyanadella) February 24, 2025
ಡ್ರೋನ್ಗಳು, ಸೆಟಿಲೈಟ್ಗಳು, ಮಣ್ಣು ಇತ್ಯಾದಿಯಿಂದ ಡಾಟಾ ಪಡೆಯುವ ಎಐ ಪರಿಕರಗಳು, ರೈತರಿಗೆ ಸ್ಥಳೀಯ ಭಾಷೆಯಲ್ಲಿ ಅರ್ಥವಾಗುವ ರೀತಿಯಲ್ಲಿ ಸಲಹೆ ಸೂಚನೆಗಳನ್ನು ನೀಡುತ್ತವೆ. ಬಾರಾಮತಿಯ ಕೃಷಿ ಅಭಿವೃದ್ಧಿ ಟ್ರಸ್ಟ್ (ಎಡಿಟಿ) 2024ರ ಜನವರಿಯಲ್ಲಿ ಎಐ ಸಾಧನಗಳನ್ನು ಕೃಷಿಗೆ ಬಳಸುವ ಐಡಿಯಾವನ್ನು ಜಾರಿಗೆ ತರಲು ನಿರ್ಧರಿಸಿತ್ತು. ಈ ಪ್ರಯೋಗ ಈಗ ಯಶಸ್ವಿಯಾಗಿದೆ.
ಇದನ್ನೂ ಓದಿ: ಭಾರತಕ್ಕೆ ಸೌರಶಕ್ತಿ: ಸಿಲಿಕಾನ್ ವೇಫರ್, ಇನ್ಗೋಟ್ಗಳ ತಯಾರಿಕೆಗೆ ಉತ್ತೇಜಿಸಲು ಸರ್ಕಾರದಿಂದ ಬಿಲಿಯನ್ ಡಾಲರ್ ಸಬ್ಸಿಡಿ ಸ್ಕೀಮ್
ನೀರಿಗೆ ತತ್ವಾರ ಇರುವ ಬಾರಾಮತಿ ಪ್ರದೇಶದಲ್ಲಿ ಈ ಎಐ ಪ್ರಯೋಗದಿಂದ ಕಬ್ಬಿನ ಇಳುವರಿ ಗಮನಾರ್ಹವಾಗಿ ಹೆಚ್ಚಾಗಿದೆ. ಈ ಪ್ರಯೋಗಕ್ಕಾಗಿ ಬಾರಾಮತಿಯ ಕೆಲ ರೈತರನ್ನು ಆಯ್ದುಕೊಳ್ಳಲಾಗಿತ್ತು. ಮೈಕ್ರೋಸಾಫ್ಟ್ನ ಎಐ ತಂತ್ರಜ್ಞಾನವನ್ನು ಬಳಸಿ ವಿವಿಧ ಪ್ರಯೋಗಗಳನ್ನು ಮಾಡಲು ಈ ರೈತರಿಗೆ ಅನುವು ಮಾಡಿಕೊಡಲಾಗಿತ್ತು.
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ತಮ್ಮ ಪೋಸ್ಟ್ವೊಂದರಲ್ಲಿ ಈ ಪ್ರಯೋಗದ ಬಗ್ಗೆ ಬರೆಯಲಾದ ಬ್ಲಾಗ್ವೊಂದರ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ. ಆ ಲೇಖನದಲ್ಲಿ ಸುರೇಶ್ ಜಗತಾಪ್ ಎನ್ನುವ ರೈತನ ಪ್ರಯೋಗವನ್ನು ಉಲ್ಲೇಖಿಸಲಾಗಿದೆ. ಇವರ ಒಂದು ಎಕರೆಯ ಪ್ರದೇಶದಲ್ಲಿ ಪ್ರಯೋಗ ಮಾಡಲಾಗಿದೆ. ಒಂದು ಸ್ಥಳದಲ್ಲಿ ಉದ್ದದ ಕಂಬ ನೆಡಲಾಗಿದೆ. ಈ ಕಂಬದ ಮೇಲ್ಗಡೆ ಗಾಳಿ, ನೀರು, ಸೌರ, ಉಷ್ಣ, ತೇವಾಂಶ ಇತ್ಯಾದಿ ಡಾಟಾ ಪಡೆಯುವ ಸೆನ್ಸಾರ್ಗಳಿರುವ ಉಪಕರಣಗಳಿವೆ. ಕೆಳಗೆ ಮಣ್ಣಿನಲ್ಲಿ ತೇವಾಂಶ, ಎಲೆಕ್ಟ್ರಿಕಲ್ ಕಂಡಕ್ಟಿವಿಟಿ, ಪಿಎಚ್, ಮಣ್ಣಿನ ಪೋಷಕಾಂಶಗಳು ಇತ್ಯಾದಿಯನ್ನು ಅಳೆಯುವ ಸೆನ್ಸರ್ಗಳನ್ನು ಹಾಕಲಾಗಿದೆ.
ಇದನ್ನೂ ಓದಿ: ಪಿಎಂ ಕಿಸಾನ್; ಬ್ಯಾಂಕ್ ಖಾತೆಗೆ ಹಣ ಬಂದಿಲ್ಲವಾ? ಕಾರಣಗಳೇನು, ಮಾರ್ಗೋಪಾಯಗಳೇನು? ಇಲ್ಲಿದೆ ಡೀಟೇಲ್ಸ್
ಇವುಗಳಿಂದ ಪಡೆದ ದತ್ತಾಂಶ ಹಾಗೂ ಸೆಟಿಲೈಟ್, ಡ್ರೋನ್ ಇತ್ಯಾದಿಯಿಂದ ಪಡೆದ ದತ್ತಾಂಶಗಳನ್ನು ಸೇರಿಸಿ, ರೈತರಿಗೆ ನಿರ್ದಿಷ್ಟ ಮೊಬೈಲ್ ಆ್ಯಪ್ ಮೂಲಕ ಅಲರ್ಟ್ ಮೆಸೇಜ್ಗಳನ್ನು ನೀಡುತ್ತದೆ. ಮಣ್ಣಿನಲ್ಲಿ ಪೋಷಕಾಂಶಗಳ ಕೊರತೆ ಕಂಡು ಬಂದರೆ ಗೊಬ್ಬರ ಹಾಕಬೇಕೆಂದು ಸಂದೇಶ ಬರುತ್ತದೆ. ನೀರಿನ ಕೊರತೆ ಇದ್ದರೆ ಅಲರ್ಟ್ ಬರುತ್ತದೆ. ಅಷ್ಟೇ ಅಲ್ಲ, ಜಮೀನಿನ ಯಾವ ಸ್ಥಳದಲ್ಲಿ ನೀರು ಅಥವಾ ರಸಗೊಬ್ಬರದ ಅವಶ್ಯಕತೆ ಇದೆ, ಯಾವ ಜಾಗದಲ್ಲಿ ಕಿಟಬಾಧೆ ಇದೆ ಎಂಬುದನ್ನು ನಕ್ಷೆ ಮೂಲಕ ತೋರಿಸುತ್ತದೆಯಂತೆ.
ಮೈಕ್ರೋಸಾಫ್ಟ್ ವೆಬ್ಸೈಟ್ನಲ್ಲಿ ಪ್ರಕಟವಾದ ಈ ಲೇಖನದಲ್ಲಿ ಪೂರ್ಣ ವಿವರ ಇದೆ. ಅದರ ಲಿಂಕ್ ಇಲ್ಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ