Migraine Killer: ಮೈಗ್ರೇನ್ ಇದೆಯಾ? ಕೈಗೆ ಈ ಪಟ್ಟಿ ಕಟ್ಟಿಕೊಳ್ಳಿ ಸಾಕು; ಭಾರತದಲ್ಲಿ ನೆರಿವಿಯೋ ಸಾಧನ ಬಿಡುಗಡೆ

Dr Reddy's Lab Releases Migraine Device: ಮೈಗ್ರೇನ್ ತಲೆನೋವು ಶಮನಕ್ಕೆ ಸಹಾಯವಾಗುವ ನೆರಿವಿಯೋ ಸಾಧನವನ್ನು ಡಾಕ್ಟರ್ ರೆಡ್ಡೀಸ್ ಲ್ಯಾಬೊರೇಟರೀಸ್ ಸಂಸ್ಥೆ ಇಂದು ಗುರುವಾರ ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಔಷಧರಹಿತವಾಗಿ ಮೈಗ್ರೇನ್​ಗೆ ಚಿಕಿತ್ಸೆ ನೀಡುವ ಸಾಧನವಾಗಿದ್ದು, ಅಮೆರಿಕದ ಔಷಧ ಆಡಳಿತ ಪ್ರಾಧಿಕಾರವಾದ ಯುಎಸ್​ಎಫ್​ಡಿಎಯಿಂದ ಅನುಮೋದನೆ ಪಡೆದಿದೆ. ನೆರಿವಿಯೋವನ್ನು ಮೈಗ್ರೇನ್ ನಿಯಂತ್ರಣಕ್ಕೂ ಬಳಸಬಹುದು, ಮೈಗ್ರೇನ್ ನೋವು ಶಮನಕ್ಕೂ ಬಳಸಬಹುದು. 12 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಈ ಸಾಧನ ಇದೆ.

Migraine Killer: ಮೈಗ್ರೇನ್ ಇದೆಯಾ? ಕೈಗೆ ಈ ಪಟ್ಟಿ ಕಟ್ಟಿಕೊಳ್ಳಿ ಸಾಕು; ಭಾರತದಲ್ಲಿ ನೆರಿವಿಯೋ ಸಾಧನ ಬಿಡುಗಡೆ
ನೆರಿವಿಯೋ ಸಾಧನ

Updated on: Nov 16, 2023 | 7:06 PM

ನವದೆಹಲಿ, ನವೆಂಬರ್ 16: ಮೈಗ್ರೇನ್ ತಲೆನೋವು ಶಮನಕ್ಕೆ ಸಹಾಯವಾಗುವ ನೆರಿವಿಯೋ ಸಾಧನವನ್ನು ಡಾಕ್ಟರ್ ರೆಡ್ಡೀಸ್ ಲ್ಯಾಬೊರೇಟರೀಸ್ ಸಂಸ್ಥೆ (Dr Reddy’s Laboratories) ಇಂದು ಗುರುವಾರ ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಔಷಧರಹಿತವಾಗಿ ಮೈಗ್ರೇನ್​ಗೆ ಚಿಕಿತ್ಸೆ ನೀಡುವ ಸಾಧನವಾಗಿದ್ದು, ಅಮೆರಿಕದ ಔಷಧ ಆಡಳಿತ ಪ್ರಾಧಿಕಾರವಾದ ಯುಎಸ್​ಎಫ್​ಡಿಎಯಿಂದ ಅನುಮೋದನೆ ಪಡೆದಿದೆ. ನೆರಿವಿಯೋವನ್ನು (Nerivio device) ಮೈಗ್ರೇನ್ ನಿಯಂತ್ರಣಕ್ಕೂ (Migrane Management) ಬಳಸಬಹುದು, ಮೈಗ್ರೇನ್ ನೋವು ಶಮನಕ್ಕೂ ಬಳಸಬಹುದು. 12 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಿಗೆ ಈ ಸಾಧನ ಇದೆ.

ಮೈಗ್ರೇನ್ ಸಮಸ್ಯೆ ಇರುವವರು ತಮ್ಮ ತೋಳಿಗೆ ಈ ಪಟ್ಟಿಯನ್ನು ಕಟ್ಟಿಕೊಳ್ಳಬಹುದು. ಮೈಗ್ರೇನ್ ಬಂದು ಒಂದು ಗಂಟೆಯೊಳಗೆ ಇದನ್ನು ಧರಿಸಬೇಕು. ಮೈಗ್ರೇನ್ ಬರದಂತೆ ತಡೆಯಲೂ ಇದನ್ನು ಬಳಕೆ ಮಾಡಬಹುದು. ಅದಕ್ಕಾಗಿ ದಿನ ಬಿಟ್ಟು ದಿನ ಇದನ್ನು 45 ನಿಮಿಷ ಕಾಲ ಧರಿಸಬೇಕಾಗುತ್ತದೆ.

ಈ ಸಾಧನವು ರಿಮೋಟ್ ಎಲೆಕ್ಟ್ರಿಕಲ್ ನ್ಯೂರೋ ಮಾಡ್ಯುಲೇಶನ್ ತಂತ್ರವನ್ನು ಬಳಸುತ್ತದೆ. ನಿರ್ದಿಷ್ಟವಾಗಿ ನರವನ್ನು ಉದ್ದೀಪನಗೊಳಿಸಿ ಸಹಜ ನೋವು ನಿವಾರಕ ಪ್ರಕ್ರಿಯೆ ಆರಂಭಿಸುತ್ತದೆ. ಇದರಿಂದ ಮೈಗ್ರೇನ್ ನೋವಿನ ಸಿಗ್ನಲ್ ಮಿದುಳಿಗೆ ರವಾನೆಯಾಗುವುದಿಲ್ಲ. ಈ ಸಾಧನದಿಂದ ಯಾವ ಅಡ್ಡ ಪರಿಣಾಮ ಇರುವುದು ಕಂಡುಬಂದಿಲ್ಲ. ಈ ಸಾಧನವನ್ನು ಸ್ಮಾರ್ಟ್​ಫೋನ್​ಗೆ ಲಿಂಕ್ ಕೂಡ ಮಾಡಬಹುದು. ಸ್ಮಾರ್ಟ್​ಫೋನ್ ಮೂಲಕವೇ ಇದನ್ನು ನಿಯಂತ್ರಿಸಬಹುದು.

ಇದನ್ನೂ ಓದಿ: ಸಫಾರಿಯಲ್ಲಿ ಸರ್ಚ್​ನಿಂದ ಆದಾಯ; ಆ್ಯಪಲ್​ಗೆ ಒಂದು ವರ್ಷದಲ್ಲಿ ಗೂಗಲ್ ಕೊಡೋ ಹಣ ಎಷ್ಟು?

ಅಮೆರಿಕದಲ್ಲಿ ನೆರಿವಿಯೋ ಸಾಧನದ 12 ಯೂನಿಟ್​ಗಳ ಒಂದು ಸೆಟ್​ಗೆ 599 ಡಾಲರ್ ಬೆಲೆ ಇದೆ. ಅಂದರೆ 50,000 ರೂ ಇದೆ. ಭಾರತದಲ್ಲಿ ಇದಕ್ಕೆ ಎಷ್ಟು ಬೆಲೆ ನಿಗದಿ ಪಡಿಸಿ ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ಗೊತ್ತಾಗಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us