Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಪಿಐ, ಪೇನೌ ಶೀಘ್ರ ಲಿಂಕ್; ಭಾರತ, ಸಿಂಗಾಪುರ ಮಧ್ಯೆ ಹಣ ವರ್ಗಾವಣೆ ಇನ್ನಷ್ಟು ಸುಲಭ

ಪೇನೌ ಎಂಬುದು ಭಾರತದ ರೂಪೇ ಕಾರ್ಡ್ ಪಾವತಿ ವ್ಯವಸ್ಥೆಗೆ ಸಮನಾಗಿ ಸಿಂಗಾಪುರದಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥೆಯಾಗಿದೆ. ಯುಪಿಐ ಜತೆ ಲಿಂಕ್ ಮಾಡುವುದರಿಂದ ಭಾರತೀಯರನ್ನೂ ಬೆಸೆಯಲಿದೆ ಎಂದು ಹೈಕಮಿಷನರ್​ಗೆ ತಿಳಿಸಿದ್ದಾರೆ.

ಯುಪಿಐ, ಪೇನೌ ಶೀಘ್ರ ಲಿಂಕ್; ಭಾರತ, ಸಿಂಗಾಪುರ ಮಧ್ಯೆ ಹಣ ವರ್ಗಾವಣೆ ಇನ್ನಷ್ಟು ಸುಲಭ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ganapathi Sharma

Updated on:Nov 11, 2022 | 10:24 AM

ನವದೆಹಲಿ: ಭಾರತ ಮತ್ತು ಸಿಂಗಾಪುರದ ಪಾವತಿ ವ್ಯವಸ್ಥೆ ಯುಪಿಐ (UPI) ಮತ್ತು ಪೇನೌ (PayNow) ಅನ್ನು ಲಿಂಕ್ ಮಾಡಲು ಉಭಯ ದೇಶಗಳು ಮುಂದಾಗಿವೆ. ಇದರಿಂದಾಗಿ ಎರಡೂ ದೇಶಗಳ ನಡುವಣ ಹಣ ವರ್ಗಾವಣೆ ಇನ್ನಷ್ಟು ಸುಲಭ ಮತ್ತು ಸರಳವಾಗಲಿವೆ. ಜತೆಗೆ, ಅತಿ ಕಡಿಮೆ ವೆಚ್ಚದಲ್ಲಿ ಹಣ ವರ್ಗಾವಣೆ ಮಾಡಬಹುದಾಗಿದೆ ಎಂದು ಸಿಂಗಾಪುರದಲ್ಲಿರುವ ಭಾರತದ ಹೈಕಮಿಷನರ್ ಪಿ. ಕುಮಾರನ್ ತಿಳಿಸಿದ್ದಾರೆ. ಮೊಬೈಲ್ ಫೋನ್ ಸಂಖ್ಯೆ ಮೂಲಕ ಭಾರತದಿಂದ ಸಿಂಗಾಪುರಕ್ಕೆ ಹಾಗೂ ಸಿಂಗಾಪುರದಿಂದ ಭಾರತಕ್ಕೆ ಯುಪಿಐ ಪಾವತಿ ವ್ಯವಸ್ಥೆ ಮೂಲಕ ಹಣ ವರ್ಗಾವಣೆ ಮಾಡಬಹುದಾಗಿದೆ. ಉಭಯ ಪಾವತಿ ವ್ಯವಸ್ಥೆಗಳ ಲಿಂಕಿಂಗ್​ಗೆ ವಿಪಿಎ (VPA) ಎಂದು ಹೆಸರಿಸಲಾಗಿದೆ ಎಂಬುದಾಗಿ ‘ಎಎನ್​ಐ’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆರ್​ಬಿಐ ಮತ್ತು ಮಾನಿಟರಿ ಅಥಾರಿಟಿ ಆಫ್ ಸಿಂಗಾಪುರ (ಎಂಎಎಸ್) ಸಹಯೋಗದಲ್ಲಿ ಪಾವತಿ ವ್ಯವಸ್ಥೆಗಳನ್ನು ಲಿಂಕ್ ಮಾಡುವ ಪ್ರಕ್ರಿಯೆ ನಡೆಯಲಿದೆ ಎಂದು ವರದಿ ತಿಳಿಸಿದೆ.

ಕೆಲವೇ ತಿಂಗಳುಗಳಲ್ಲಿನ ಚಾಲನೆ

ಇದನ್ನೂ ಓದಿ
Image
Rs 2000 Currency Notes: ಚಲಾವಣೆಗೆ ಸಿಗುತ್ತಿಲ್ಲ 2,000 ರೂ. ನೋಟು! ಕಾರಣ ಇಲ್ಲಿದೆ ನೋಡಿ
Image
ಎನ್​ಆರ್​ಐಗಳೂ ಆಧಾರ್ ಕಾರ್ಡ್ ಹೊಂದಬಹುದು; ಇಲ್ಲಿದೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ವಿವರವಾದ ಮಾಹಿತಿ
Image
ರಿಸೆಷನ್ ಪ್ರೂಫ್ ಜಾಬ್ ಇದೆಯೇ? ಆರ್ಥಿಕ ಹಿಂಜರಿತದ ವೇಳೆ ಉದ್ಯೋಗ ಉಳಿಸಿಕೊಳ್ಳಲು ಇಲ್ಲಿದೆ ಟಿಪ್ಸ್
Image
Online Financial Frauds: ಆನ್​ಲೈನ್ ಹಣಕಾಸು ವಂಚನೆಗಳಿಂದ ರಕ್ಷಣೆಗೆ ಈ ವಿಚಾರಗಳನ್ನು ಗಮನಿಸಿ…

‘ಭಾರತದ ಯುಪಿಐ ಜತೆ ಪೇನೌ ಅನ್ನು ಲಿಂಕ್ ಮಾಡಲು ಸಿಂಗಾಪುರ ಬಯಸಿದೆ. ಮುಂದಿನ ಕೆಲವೇ ತಿಂಗಳುಗಳಲ್ಲಿ ಈ ಯೋಜನೆ ಸಾಕಾರಗೊಳ್ಳಲಿದೆ. ಈ ಮೂಲಕ ಸಿಂಗಾಪುರದಲ್ಲಿ ಕುಳಿತುಕೊಂಡು ಭಾರತದಲ್ಲಿರುವ ತಮ್ಮ ಕುಟುಂಬದವರಿಗೆ ಹಣ ಕಳುಹಿಸುವುದು ಭಾರತೀಯರಿಗೆ ಸುಲಭವಾಗಲಿದೆ’ ಎಂದು ಹೈಕಮಿಷನರ್ ಪಿ. ಕುಮಾರನ್ ಹೇಳಿದ್ದಾರೆ.

ಏನಿದು ಪೇನೌ?

ಪೇನೌ ಎಂಬುದು ಭಾರತದ ರೂಪೇ ಕಾರ್ಡ್ ಪಾವತಿ ವ್ಯವಸ್ಥೆಗೆ ಸಮನಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆಯಾಗಿದೆ. ಇದು ಏಷ್ಯಾದ ದೇಶಗಳ ಜತೆ ಲಿಂಕ್ ಆಗಿದೆ. ಯುಪಿಐ ಜತೆ ಲಿಂಕ್ ಮಾಡುವುದರಿಂದ ಭಾರತೀಯರನ್ನೂ ಬೆಸೆಯಲಿದೆ ಎಂದು ಹೈಕಮಿಷನರ್​ಗೆ ತಿಳಿಸಿದ್ದಾರೆ.

ಭಾರತೀಯರಿಗೆ ಈಗೇಕೆ ಸಮಸ್ಯೆ?

ಸಿಂಗಾಪುರಕ್ಕೆ ಬರುವ ಅನೇಕ ಭಾರತೀಯರು ರುಪೇ ಕಾರ್ಡ್ ಹೊಂದಿರುವುದಿಲ್ಲ. ಒಂದು ವೇಳೆ ಹೊಂದಿದ್ದರೂ ದೇಶೀಯ ಕಾರ್ಡ್ ಮಾತ್ರ ಇರುತ್ತದೆ. ಡಿಜಿಟಲೈಸೇಷನ್ ಪರಿಣಾಮವಾಗಿ ಭವಿಷ್ಯದಲ್ಲಿ ಹೆಚ್ಚಿನ ಪ್ರವಾಸಿಗರು ನಗದಿಗಿಂತ ಡಿಜಿಟಲ್ ರೂಪದಲ್ಲಿಯೇ ಹಣ ಇಟ್ಟುಕೊಳ್ಳಲಿದ್ದಾರೆ. ಆಗ ಅವರು ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಬಳಸಿದರೆ ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ. ಯುಪಿಐ ಹಾಗೂ ಪೇನೌ ಲಿಂಕ್ ಮಾಡುವುದರಿಂದ ಅತಿ ಕಡಿಮೆ ಶುಲ್ಕದಲ್ಲಿ ಹಣ ವರ್ಗಾವಣೆ ಸಾಧ್ಯ ಎಂದು ಹೈಕಮಿಷನರ್ ತಿಳಿಸಿದ್ದಾರೆ.

ವಲಸೆ ಕಾರ್ಮಿಕರಿಗೆ ಪ್ರಯೋಜನ

ಸದ್ಯ ಸಿಂಗಾಪುರಕ್ಕೆ ಬರುವ ಭಾರತದ ವಲಸೆ ಕಾರ್ಮಿಕರು ಹಣ ಕಳುಹಿಸಲು ಸುಮಾರು ಶೇಕಡಾ 10ರ ವರೆಗೆ ಬ್ಯಾಂಕ್​ಗಳಿಗೆ ಶುಲ್ಕ ಪಾವತಿಸಬೇಕಾಗುತ್ತದೆ. ಯುಪಿಐ-ಪೇನೌ ಲಿಂಕ್ ಮಾಡುವುದರಿಂದ ಅವರಿಗೆ ಪ್ರಯೋಜನವಾಗಲಿದೆ. ಬಹು ಕಡಿಮೆ ವೆಚ್ಚದಲ್ಲಿ ಹಣ ವರ್ಗಾವಣೆ ಮಾಡಬಹುದಾಗಿದೆ ಎಂದು ಪಿ. ಕುಮಾರನ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:22 am, Fri, 11 November 22

ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ