AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎನ್​ಆರ್​ಐಗಳೂ ಆಧಾರ್ ಕಾರ್ಡ್ ಹೊಂದಬಹುದು; ಇಲ್ಲಿದೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ವಿವರವಾದ ಮಾಹಿತಿ

ಆಧಾರ್ ಪಡೆಯಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಾಮಾನ್ಯ ಭಾರತೀಯರಿಗೂ ಅನಿವಾಸಿ ಭಾರತೀಯರಿಗೂ ಸಾಮಾನ್ಯವಾಗಿ ಒಂದೇ ರೀತಿ ಇದೆ. ಅನಿವಾಸಿ ಭಾರತೀಯರು ಆಧಾರ್​ಗೆ ಅರ್ಜಿ ಸಲ್ಲಿಸುವುದು ಹೇಗೆಂಬ ಹಂತ-ಹಂತದ ವಿವರ ಇಲ್ಲಿದೆ.

ಎನ್​ಆರ್​ಐಗಳೂ ಆಧಾರ್ ಕಾರ್ಡ್ ಹೊಂದಬಹುದು; ಇಲ್ಲಿದೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ವಿವರವಾದ ಮಾಹಿತಿ
ಸಾಂದರ್ಭಿಕ ಚಿತ್ರ
TV9 Web
| Updated By: Ganapathi Sharma|

Updated on: Nov 10, 2022 | 4:19 PM

Share

ಪಾನ್ ಕಾರ್ಡ್​ನಿಂದ ತೊಡಗಿ ಎಲ್ಲ ದಾಖಲೆಗಳನ್ನೂ ಈಗ ಆಧಾರ್​ ಕಾರ್ಡ್​ನೊಂದಿಗೆ (Aadhaar) ಜೋಡಣೆ ಅಥವಾ ಸಂಯೋಜನೆ ಮಾಡಲಾಗುತ್ತಿದೆ. ಸರ್ಕಾರಿ ಪ್ರಾಯೋಜಿತ ಬಹುತೇಕ ಎಲ್ಲ ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್ ಕಡ್ಡಾಯಗೊಳಿಸಲಾಗಿದೆ. ಅನಿವಾಸಿ ಭಾರತೀಯರಿಗೂ (NRI) ಕೆಲವೊಂದು ದಾಖಲೆಗಳು ಅಗತ್ಯವಾಗಿದ್ದು, ಆಧಾರ್ ಕಾರ್ಡ್ ಅನ್ನೂ ಹೊಂದಬಹುದೇ ಎಂಬ ಸಂದೇಹ ಮೂಡಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಯುಐಡಿಎಐ (UIDAI) ಅನಿವಾಸಿ ಭಾರತೀಯರೂ ಆಧಾರ್ ಕಾರ್ಡ್ ಹೊಂದಬಹುದು ಎಂದು ತಿಳಿಸಿದೆ. ಭಾರತದ ಅಧಿಕೃತ ಪಾಸ್​ಪೋರ್ಟ್ ಹೊಂದಿರುವವರು ಆಧಾರ್​ಗಾಗಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.

ಆಧಾರ್ ಪಡೆಯಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಾಮಾನ್ಯ ಭಾರತೀಯರಿಗೂ ಅನಿವಾಸಿ ಭಾರತೀಯರಿಗೂ ಸಾಮಾನ್ಯವಾಗಿ ಒಂದೇ ರೀತಿ ಇದೆ.

ಅನಿವಾಸಿ ಭಾರತೀಯರು ಆಧಾರ್​ಗೆ ಅರ್ಜಿ ಸಲ್ಲಿಸುವುದು ಹೇಗೆ?

ಇದನ್ನೂ ಓದಿ
Image
Gold Price Today: ಚಿನ್ನ, ಬೆಳ್ಳಿ ಬೆಲೆ ಏರಿಕೆ; ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಧಾರಣೆ ಇಲ್ಲಿದೆ
Image
Meta Layoffs: ನನ್ನನ್ನು ಕ್ಷಮಿಸಿ; 11,000 ಉದ್ಯೋಗಿಗಳ ವಜಾಕ್ಕೆ ಮಾರ್ಕ್ ಝುಕರ್​ಬರ್ಗ್ ವಿಷಾದ
Image
2027ಕ್ಕೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಭಾರತ: ವರದಿ
Image
Mutual Funds: ಉತ್ತಮ ರಿಟರ್ನ್ಸ್ ತಂದುಕೊಡುತ್ತಿರುವ ಮಿಡ್​ಕ್ಯಾಪ್ ಮ್ಯೂಚುವಲ್ ಫಂಡ್​ಗಳಿವು

ಅನಿವಾಸಿ ಭಾರತೀಯರು ಆಧಾರ್ ಕಾರ್ಡ್​ಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಬಗ್ಗೆ ಯುಐಡಿಎಐ ಹಂತ ಹಂತದ ಮಾಹಿತಿ ನೀಡಿದೆ.

ಹಂತ 1: ಸಮೀಪದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ

ಹಂತ 2: ಅಧಿಕೃತ ಭಾರತೀಯ ಪಾಸ್​ಪೋರ್ಟ್​ ನಿಮ್ಮೊಂದಿಗಿರಲಿ.

ಹಂತ 3: ಎನ್​ರೋಲ್​ಮೆಂಟ್ ಅಥವಾ ದಾಖಲಾತಿ ಅರ್ಜಿ ಪಡೆದು ಎಲ್ಲ ವಿವರಗಳನ್ನು ಭರ್ತಿ ಮಾಡಿ. ನೀವು ಅರ್ಜಿಯಲ್ಲಿ ನಮೂದಿಸುವ ವಿಷಯಗಳು ಪಾಸ್​ಪೋರ್ಟ್​ನಲ್ಲಿರುವ ವಿವರಗಳೊಂದಿಗೆ ತಾಳೆಯಾಗಬೇಕು.

ಹಂತ 4: ಅರ್ಜಿದಾರನು ಕಡ್ಡಾಯವಾಗಿ ಇ-ಮೇಲ್ ಐಡಿಯನ್ನು ನಮೂದಿಸಬೇಕು.

ಹಂತ 5: ಅನಿವಾಸಿ ಭಾರತೀಯನೆಂದು ನಿಮ್ಮನ್ನು ದಾಖಲಿಸಿಕೊಳ್ಳಲು ಆಧಾರ್ ಸೇವಾ ಕೇಂದ್ರದ ಕಾರ್ಯನಿರ್ವಾಹಕರಿಗೆ ತಿಳಿಸಿ.

ಹಂತ 6: ಅನಿವಾಸಿ ಭಾರತೀಯರು ಆಧಾರ್ ಕಾರ್ಡ್​ಗೆ ಅರ್ಜಿ ಸಲ್ಲಿಸುವಾಗ ಡಿಕ್ಲರೇಷನ್​ಗೂ ಸಹಿ ಮಾಡಬೇಕಾಗುತ್ತದೆ. ಅನಿವಾಸಿ ಭಾರತೀಯರಿಗೆ ನಿಗದಿಪಡಿಸಿರುವ ಡಿಕ್ಲರೇಷನ್ ತುಸು ವ್ಯತ್ಯಾಸವಿರುತ್ತದೆ. ಹೀಗಾಗಿ ಜಾಗರೂಕತೆಯಿಂದ ಓದಿಯೇ ಭರ್ತಿ ಮಾಡಿ ಹಾಗೂ ಸಹಿ ಮಾಡಿ.

ಹಂತ 7: ನೀವು ಅನಿವಾಸಿ ಭಾರತೀಯ ಎಂಬುದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಭರ್ತಿ ಮಾಡಲು ಕಾರ್ಯನಿರ್ವಾಹಕರಿಗೆ ಸಹಾಯ ಮಾಡಿ.

ಹಂತ 8: ನಿಮ್ಮ ಪಾಸ್​ಪೋರ್ಟ್​ ಅನ್ನು ಸ್ಕ್ಯಾನ್ ಮಾಡಿ ಅರ್ಜಿಯೊಂದಿಗೆ ಗುರುತಿನ ಪ್ರಮಾಣವಾಗಿ ಸಲ್ಲಿಸಲಾಗುತ್ತದೆ.

ಹಂತ 9: ಬಯೋಮೆಟ್ರಿಕ್ ಪ್ರಕ್ರಿಯೆಗಾಗಿ ನಿಮ್ಮ ಬೆರಳುಗಳು ಮತ್ತು ಕಣ್ಣುಗಳ ಸ್ಕ್ಯಾನ್​ ಮಾಡಲಾಗುತ್ತದೆ.

ಹಂತ 10: ಅರ್ಜಿಯಲ್ಲಿ ತುಂಬಿದ ವಿವರಗಳನ್ನೆಲ್ಲ ಮತ್ತೊಮ್ಮೆ ಪರಿಶೀಲಿಸಬೇಕಾಗುತ್ತದೆ.

ಹಂತ 11: ಅರ್ಜಿ ತುಂಬುವಿಕೆ ಪ್ರಕ್ರಿಯೆಗಳೆಲ್ಲ ಮುಗಿದ ಮೇಲೆ, ಸ್ವೀಕೃತಿ ರಶೀದಿಯನ್ನು ಪಡೆದುಕೊಳ್ಳಿ. ಅದರಲ್ಲಿ 14 ಅಂಕೆಯ ದಾಖಲಾತಿ ಐಡಿ (enrollment ID), ದಿನಾಂಕ ಹಾಗೂ ಸಮಯದ ವಿವರ ಇರುತ್ತದೆ.

ಅರ್ಜಿಯ ಸ್ಟೇಟಸ್ ಪರಿಶೀಲಿಸುವುದು ಹೀಗೆ…

3-4 ದಿನಗಳ ಒಳಗಾಗಿ ನಿಮ್ಮ ಆಧಾರ್ ದಾಖಲೆ ಜನರೇಟ್ ಆಗುತ್ತದೆ. ಕೆಲವೊಮ್ಮೆ ದಾಖಲೆ ಜನರೇಟ್ ಆಗಲು ಹೆಚ್ಚು ದಿನಗಳು ಬೇಕಾಗಿಯೂ ಬರಹುದು. ಅರ್ಜಿದಾರರು ಆಧಾರ್​ ವೆಬ್​ಸೈಟ್​ನ ‘ಚೆಕ್ ಆಧಾರ್ ಸ್ಟೇಟಸ್ (https://myaadhaar.uidai.gov.in/CheckAadhaarStatus)’ ವಿಭಾಗವನ್ನು ಕ್ಲಿಕ್ ಮಾಡಿ ಸ್ಥಿತಿಗತಿ ಪರಿಶೀಲಿಸಬಹುದು.

ಎನ್​ರೋಲ್​ಮೆಂಟ್ ಐಡಿಯನ್ನು ಕಳೆದುಕೊಂಡಿದ್ದಲ್ಲಿ ನೋಂದಾಯಿತ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಬಳಸಿಕೊಂಡು ಸ್ಥಿಗತಿ ಪರಿಶೀಲಿಸಬಹುದು. ಈ ಮೂಲಕ ಎನ್​ರೋಲ್​ಮೆಂಟ್ ಐಡಿಯನ್ನು ಮರಳಿ ಪಡೆಯಲೂ ಅವಕಾಶವಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!