AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜುಲೈ 17, ಮೊಹರಂ ಹಬ್ಬಕ್ಕೆ ಬ್ಯಾಂಕ್ ಮತ್ತು ಷೇರುಮಾರುಕಟ್ಟೆಗೆ ರಜೆ ಇದೆಯಾ? ಇಲ್ಲಿದೆ ಪಟ್ಟಿ

Muharram fetival holiday: ಜುಲೈ 17, ಬುಧವಾರದಂದು ಮೊಹರಂ ಹಬ್ಬ ಇದ್ದು ರಾಷ್ಟ್ರೀಯ ರಜೆ ಎಂದು ಪರಿಗಣಿತವಾಗಿದೆ. ಕರ್ನಾಟಕವೂ ಸೇರಿದಂತೆ ಹೆಚ್ಚಿನ ರಾಜ್ಯಗಳಲ್ಲಿ ಮೊಹರಂ ಹಬ್ಬಕ್ಕೆ ರಜೆ ಇದೆ. ಬಿಎಸ್​ಇ ಮತ್ತು ಎನ್​ಎಸ್​ಇ ಷೇರುವಿನಿಯಮ ಕೇಂದ್ರಗಳಿಗೆ ಯಾವ್ಯಾವತ್ತು ರಜೆ ಇರುತ್ತದೆ ಅದರ ಪಟ್ಟಿ ಇಲ್ಲಿದೆ....

ಜುಲೈ 17, ಮೊಹರಂ ಹಬ್ಬಕ್ಕೆ ಬ್ಯಾಂಕ್ ಮತ್ತು ಷೇರುಮಾರುಕಟ್ಟೆಗೆ ರಜೆ ಇದೆಯಾ? ಇಲ್ಲಿದೆ ಪಟ್ಟಿ
ಮುಹರಂ ಹಬ್ಬ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 16, 2024 | 3:24 PM

Share

ನವದೆಹಲಿ, ಜುಲೈ 16: ನಾಳೆ ಬುಧವಾರ ಮುಸ್ಲಿಮರ ಮೊಹರಂ ಹಬ್ಬ ಇದ್ದು ರಾಷ್ಟ್ರೀಯ ರಜೆಗಳಲ್ಲಿ ಅದೂ ಒಂದಿದೆ. ಮೊಹರಂ ಎಂಬುದು ಇಸ್ಲಾಮಿಕ್ ಕ್ಯಾಲಂಡರ್​ನಲ್ಲಿ ಒಂದು ಮಾಸದ ಹೆಸರು. ಕ್ಯಾಲಂಡರ್​ನ ಮೊದಲ ತಿಂಗಳೂ ಹೌದು. ನಾಲ್ಕು ಪವಿತ್ರ ಮಾಸಗಳಲ್ಲಿ ಮೊಹರಂ ಕೂಡ ಒಂದು. ಮೊಹರಂಗೆ ಭಾರತದಲ್ಲಿ ಸರ್ಕಾರ ರಜೆ ಇದೆ. ಅಂತೆಯೇ ಕರ್ನಾಟಕವೂ ಒಳಗೊಂಡಂತೆ ಬಹುತೇಕ ಕಡೆ ಬ್ಯಾಂಕುಗಳಿಗೆ ಜುಲೈ 17ರಂದು ರಜೆ ಇರುತ್ತದೆ. ಷೇರು ಮಾರುಕಟ್ಟೆಯೂ ನಾಳೆ ಬಂದ್ ಆಗಿರುತ್ತದೆ.

ಮೊಹರಂ ಹಬ್ಬಕ್ಕೆ ಯಾವ್ಯಾವ ರಾಜ್ಯಗಳಲ್ಲಿ ಬ್ಯಾಂಕ್ ರಜೆ ಇದೆ, ಪಟ್ಟಿ

  • ಕರ್ನಾಟಕ
  • ಮಧ್ಯಪ್ರದೇಶ
  • ತಮಿಳುನಾಡು
  • ಆಂಧ್ರಪ್ರದೇಶ
  • ತೆಲಂಗಾಣ
  • ರಾಜಸ್ತಾನ
  • ಜಮ್ಮು
  • ಉತ್ತರಪ್ರದೇಶ
  • ಬಂಗಾಳ
  • ದೆಹಲಿ
  • ಬಿಹಾರ
  • ಛತ್ತೀಸ್​ಗಡ
  • ಜಾರ್ಖಂಡ್
  • ಹಿಮಾಚಲಪ್ರದೇಶ
  • ಮೇಘಾಲಯ
  • ತ್ರಿಪುರಾ
  • ಮಿಜೋರಾಂ

ಉತ್ತರಾಖಂಡ್​ನಲ್ಲಿ ಹರೇಲಾ ದಿನದ ಹಬ್ಬಕ್ಕೆ ಇಂದು ಜುಲೈ 16ರಂದು ಬ್ಯಾಂಕ್ ರಜೆ ಇರುತ್ತದೆ. ಇದೇ ಹಬ್ಬಕ್ಕೆ ಹಿಮಾಚಲಪ್ರದೇಶದ ಕೆಲ ಭಾಗಗಳಲ್ಲಿ ರಜೆ ಇದೆ.

ಇದನ್ನೂ ಓದಿ: ಎಸ್​ಬಿಐನಿಂದ ಒಂದು ತಿಂಗಳ ಅಂತರದಲ್ಲಿ ಎರಡನೇ ಬಾರಿ ಎಂಸಿಎಲ್​ಆರ್ ದರ ಹೆಚ್ಚಳ; ಏರಿಕೆ ಆಗಲಿದೆ ಬಡ್ಡಿ

ಷೇರು ಮಾರುಕಟ್ಟೆ ಮೊಹರಂಗೆ ಬಂದ್

ಜುಲೈ 17, ಬುಧವಾರದಂದು ಮುಹರಂ ಹಬ್ಬಕ್ಕೆ ಷೇರು ಮಾರುಕಟ್ಟೆಗೆ ರಜೆ ಇದೆ. ಈಕ್ವಿಟಿ ಸೆಗ್ಮೆಂಟ್ ಮಾತ್ರವಲ್ಲ, ಕರೆನ್ಸಿ ಡಿರೈವೇಟಿವ್ಸ್, ಕಮಾಡಿಟಿ ಡಿರೈವೇಟಿವ್ಸ್ ಸೆಗ್ಮೆಂಟ್ ಕೂಡ ಬುಧವಾರ ಮುಚ್ಚಿರುತ್ತದೆ. ಈ ವರ್ಷಾಂತ್ಯದವರೆಗೂ ಮೊಹರಂ ಅನ್ನೂ ಒಳಗೊಂಡಂತೆ ಆರು ದಿನಗಳಿಗೆ ಷೇರು ಮಾರುಕಟ್ಟೆ ರಜೆ ಹೊಂದಿರುತ್ತದೆ. ದೀಪಾವಳಿ, ಸ್ವಾತಂತ್ರ್ಯೋತ್ಸವ ಮೊದಲಾದ ದಿನಗಳೂ ಈ ರಜಾ ಪಟ್ಟಿಯಲ್ಲಿವೆ. ಷೇರು ಮಾರುಕಟ್ಟೆ ಈ ಕೆಳಗಿನ ದಿನಗಳಲ್ಲಿ ಬಂದ್ ಆಗಿರುತ್ತದೆ:

  • ಜುಲೈ 17: ಮೊಹರಂ
  • ಆಗಸ್ಟ್ 15: ಸ್ವಾತಂತ್ರ್ಯೋತ್ಸವ
  • ಅಕ್ಟೋಬರ್ 2: ಗಾಂಧಿ ಜಯಂತಿ
  • ನವೆಂಬರ್ 1: ದೀಪಾವಳಿ
  • ನವೆಂಬರ್ 15: ಗುರುನಾನಕ್ ಜಯಂತಿ
  • ಡಿಸೆಂಬರ್ 25: ಕ್ರಿಸ್ಮಸ್

ಇಲ್ಲಿ ಭಾರತದ ಷೇರು ಮಾರುಕಟ್ಟೆ ಎಂದರೆ, ನ್ಯಾಷನಲ್ ಸ್ಟಾಕ್ ಎಕ್ಸ್ ಎಕ್ಸ್​ಚೇಂಜ್ (ಎನ್​ಎಸ್​ಇ) ಮತ್ತು ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (ಬಿಎಸ್​ಇ). ಈ ಎರಡೂ ಷೇರು ವಿನಿಮಯ ಕೇಂದ್ರಗಳು ಮೊಹರಂಗೆ ಬಂದ್ ಆಗಿರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:06 am, Tue, 16 July 24

Follow Us
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ