AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸ್​ಬಿಐನಿಂದ ಒಂದು ತಿಂಗಳ ಅಂತರದಲ್ಲಿ ಎರಡನೇ ಬಾರಿ ಎಂಸಿಎಲ್​ಆರ್ ದರ ಹೆಚ್ಚಳ

SBI raises MCLR rates: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವಿವಿಧ ಅವಧಿಯ ಸಾಲದ ಮೇಲೆ ಎಂಸಿಎಲ್​ಆರ್ ದರಗಳನ್ನು 10 ಮೂಲಾಂಕಗಳಷ್ಟು ಹೆಚ್ಚಳ ಮಾಡಿದೆ. ಒಂದು ವರ್ಷ, ಎರಡು ವರ್ಷ, ಮೂರು ತಿಂಗಳು ಮತ್ತು ಆರು ತಿಂಗಳ ಅವಧಿ ಸಾಲದ ಮೇಲೆ ಅದರ ಎಂಸಿಎಲ್​ಆರ್ ದರ ಏರಿಕೆ ಆಗಿದೆ. ಎಂಸಿಎಲ್​ಆರ್ ಎಂಬುದು ಬೆಂಚ್​ಮಾರ್ಕ್ ರೇಟ್ ಆಗಿದ್ದು, ಅದರ ಆಧಾರದ ಮೇಲೆ ಸಾಲದ ಮೇಲೆ ಬಡ್ಡಿ ನಿಗದಿ ಮಾಡಲಾಗುತ್ತದೆ.

ಎಸ್​ಬಿಐನಿಂದ ಒಂದು ತಿಂಗಳ ಅಂತರದಲ್ಲಿ ಎರಡನೇ ಬಾರಿ ಎಂಸಿಎಲ್​ಆರ್ ದರ ಹೆಚ್ಚಳ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 15, 2024 | 11:13 AM

Share

ನವದೆಹಲಿ, ಜುಲೈ 15: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಂಸಿಎಲ್​ಆರ್ ದರವನ್ನು ಇಂದು ಸೋಮವಾರ ಶೇ. 5ರಿಂದ 10 ಮೂಲಾಂಕಗಳಷ್ಟು ಏರಿಕೆ ಮಾಡಿದೆ. ವಿವಿಧ ಅವಧಿಯ ಎಂಸಿಎಲ್​ಆರ್ ದರಗಳನ್ನು ಹೆಚ್ಚಿಸಿದೆ. ಇದರೊಂದಿಗೆ ಎಸ್​ಬಿಐನ ಎಲ್ಲಾ ರೀತಿಯ ಸಾಲಗಳಿಗೆ ಬಡ್ಡಿದರವೂ ಹೆಚ್ಚಳವಾಗಲಿದೆ. ಸಾಲಕ್ಕೆ ಕಟ್ಟಲಾಗುತ್ತಿರುವ ಇಎಂಐಗೂ ಸಹಜವಾಗಿ ಹೆಚ್ಚಾಗಲಿದೆ. ಒಂದು ತಿಂಗಳ ಅವಧಿಯಲ್ಲಿ ಎಸ್​ಬಿಐ ತನ್ನ ಎಂಸಿಎಲ್​ಆರ್ ದರಗಳನ್ನು ಹೆಚ್ಚಿಸುತ್ತಿರುವುದು ಇದು ಎರಡನೇ ಬಾರಿ. ಜೂನ್ ತಿಂಗಳ ಮಧ್ಯಭಾಗದಲ್ಲಿ ಎಸ್​ಬಿಐ ಒಂದು ವರ್ಷದ ಸಾಲದ ಅವಧಿಗೆ ಎಂಸಿಎಲ್​ಆರ್ ದರಗಳನ್ನು ಶೇ. 8.65ರಿಂದ ಶೇ. 8.75ಕ್ಕೆ ಹೆಚ್ಚಿಸಿತ್ತು. ಅಂದರೆ ಹತ್ತು ಬೇಸಿಸ್ ಪಾಯಿಂಟ್​ಗಳಷ್ಟು ಹೆಚ್ಚಿಸಿತ್ತು.

  • ಒಂದು ವರ್ಷದ ಸಾಲ ಅವಧಿಯ ಮೇಲೆ ಎಂಸಿಎಲ್​ಆರ್ ದರವನ್ನು 10 ಮೂಲಾಂಕಗಳಷ್ಟು ಹೆಚ್ಚಿಸಿದೆ. ಶೇ. 8.75ರಷ್ಟಿದ್ದ ಎಂಸಿಎಲ್​ಆರ್ ದರ ಶೇ. 8.85ಕ್ಕೆ ಏರಿಕೆ ಆಗಿದೆ.
  • ಎರಡು ವರ್ಷದ ಅವಧಿಯ ಸಾಲದ ಮೇಲೆ ಎಂಸಿಎಲ್​ಆರ್ ದರವನ್ನು ಶೇ. 8.85ರಿಂದ ಶೇ. 8.95ಕ್ಕೆ ಏರಿಸಲಾಗಿದೆ
  • ಮೂರು ತಿಂಗಳ ಸಾಲದ ಅವಧಿಯ ಎಂಸಿಎಲ್​ಆರ್ ದರವನ್ನು ಶೇ. 8.3ರಿಂದ ಶೇ. 8.4ಕ್ಕೆ ಹೆಚ್ಚಿಸಿದೆ.
  • ಆರು ತಿಂಗಳ ಸಾಲದ ಅವಧಿಯ ಎಂಸಿಎಲ್​ಆರ್ ದರವನ್ನು ಶೇ. 8.65ರಿಂದ ಶೇ. 8.75ಕ್ಕೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ: ಎರಡು ವರ್ಷದಲ್ಲಿ ಪಿಎಫ್ ಎಕ್ಸೆಂಪ್ಷನ್ ಬಿಟ್ಟುಕೊಟ್ಟ 27 ಸಂಸ್ಥೆಗಳು; ಇಪಿಎಫ್​ಒ ವ್ಯಾಪ್ತಿಗೆ ಸೇರ್ಪಡೆಯಾದ 30,000 ಉದ್ಯೋಗಿಗಳು

ಏನಿದು ಎಂಸಿಎಲ್​ಆರ್ ದರ?

ಎಂಸಿಎಲ್​ಆರ್ ಎಂದರೆ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್. ಆರ್​ಬಿಐ ಸಾಮಾನ್ಯವಾಗಿ ಇದನ್ನು ನಿಗದಿ ಮಾಡುತ್ತದೆ. ಇದು ಒಂದು ಬ್ಯಾಂಕ್ ಸಾಲ ನೀಡುವಾಗ ಇರಿಸಬೇಕಾದ ಕನಿಷ್ಠ ಬಡ್ಡಿದರ. ಇದಕ್ಕಿಂತ ಕಡಿಮೆ ದರಕ್ಕೆ ಬ್ಯಾಂಕ್ ಸಾಲ ಕೊಡುವಂತಿಲ್ಲ.

ಬ್ಯಾಂಕುಗಳೂ ಕೂಡ ಎಂಸಿಎಲ್​ಆರ್ ದರಗಳನ್ನು ಏರಿಸಬಹುದು. ಒಂದು ಬ್ಯಾಂಕ್ ತನ್ನ ಗ್ರಾಹಕರಿಗೆ ಸಾಲ ನೀಡಬೇಕೆಂದರೆ ಹಣ ಬೇಕು. ಎಫ್​ಡಿ ಇತ್ಯಾದಿ ಠೇವಣಿ ಮೂಲಕ ಅದು ಸಾರ್ವಜನಿಕವಾಗಿ ಹಣ ಸಂಗ್ರಹಿಸುತ್ತದೆ. ಕೆಲವೊಮ್ಮೆ ಅದು ಆರ್​ಬಿಐನಿಂದಲೂ ಅಥವಾ ಬೇರೆ ಮಾರುಕಟ್ಟೆಯಿಂದಲೋ ಫಂಡಿಂಗ್ ಪಡೆಯಬಹುದು. ಇದಕ್ಕೆ ಅದು ವ್ಯಯಿಸುವ ದರವೇ ಎಂಸಿಎಲ್​ಆರ್ ಆಗುತ್ತದೆ.

ಇದನ್ನೂ ಓದಿ: ಬಜೆಟ್​ನಲ್ಲಿ ಪಿಎಂ ಕಿಸಾನ್ ಯೋಜನೆಯ 6,000 ರೂ ಮೊತ್ತ ಹೆಚ್ಚಳ ಆಗುತ್ತಾ?

ಬ್ಯಾಂಕ್ ನಿಗದಿಪಡಿಸಿದ ಎಂಸಿಎಲ್​ಆರ್ ದರ ಅಥವಾ ಬೆಂಚ್​ಮಾರ್ಕ್ ದರದ ಆಧಾರದ ಮೇಲೆ ಸಾಲಗಳಿಗೆ ಬಡ್ಡಿದರ ನಿಗದಿ ಮಾಡಲಾಗುತ್ತದೆ. ಹೀಗಾಗಿ, ಎಂಸಿಎಲ್​ಆರ್ ದರ ಹೆಚ್ಚಾದರೆ, ಗೃಹ ಸಾಲದಿಂದ ಹಿಡಿದು ವೈಯಕ್ತಿಕ ಸಾಲದವರೆಗೆ ಎಲ್ಲಾ ಸಾಲಗಳಿಗೂ ಬಡ್ಡಿದರ ಹೆಚ್ಚುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ