AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಎಸ್​ಟಿ ದರ ಕಡಿತ: ಬಿಸ್ಕತ್​ನಿಂದ ಹಿಡಿದು ತುಪ್ಪದವರೆಗೆ, ಪತಂಜಲಿಯ ವಿವಿಧ ಉತ್ಪನ್ನಗಳ ಬೆಲೆ ಇಳಿಕೆ

Patanjali reduces its products prices: ಸೆಪ್ಟೆಂಬರ್ 22ರಿಂದ ಹೆಚ್ಚಿನ ಸರಕುಗಳಿಗೆ ಜಿಎಸ್​ಟಿ ಇಳಿಸಲಾಗಿದೆ. ಪತಂಜಲಿ ಸಂಸ್ಥೆ ಕೂಡ ಈ ಬೆಲೆ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿದೆ. ಅದರ ಹಲವು ಉತ್ಪನ್ನಗಳ ಬೆಲೆ ಇಳಿಕೆ ಮಾಡಲಾಗಿದೆ. ದಂತ ಕಾಂತಿ, ಕೇಶ್ ಕಾಂತಿ, ತುಪ್ಪ, ಬಿಸ್ಕತ್, ಜ್ಯೂಸ್ ಇತ್ಯಾದಿ ಹಲವು ಪತಂಜಲಿ ಸರಕುಗಳ ಬೆಲೆ ಕಡಿಮೆಗೊಂಡಿದೆ.

ಜಿಎಸ್​ಟಿ ದರ ಕಡಿತ: ಬಿಸ್ಕತ್​ನಿಂದ ಹಿಡಿದು ತುಪ್ಪದವರೆಗೆ, ಪತಂಜಲಿಯ ವಿವಿಧ ಉತ್ಪನ್ನಗಳ ಬೆಲೆ ಇಳಿಕೆ
ಪತಂಜಲಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 22, 2025 | 4:26 PM

Share

ನವದೆಹಲಿ, ಸೆಪ್ಟೆಂಬರ್ 22: ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ನೇತೃತ್ವದ ಪತಂಜಲಿಗೆ (Patanjali) ಸೇರಿದ ವಿವಿಧ ಉತ್ಪನ್ನಗಳ ಬೆಲೆ ಇಂದಿನಿಂದ ಕಡಿಮೆಗೊಂಡಿವೆ. ಜಿಎಸ್​ಟಿ ದರ ಇಳಿಕೆಯ ಪರಿಣಾಮವಾಗಿ ಪತಂಜಲಿಯ ಎಲ್ಲಾ ಉತ್ಪನ್ನಗಳ ಬೆಲೆಯನ್ನು ಕಡಿಮೆಗೊಳಿಸಲಾಗಿದೆ. ಆಹಾರವಸ್ತುಗಳು, ಪರ್ಸನಲ್ ಕೇರ್ ವಸ್ತುಗಳು, ಆಯುರ್ವೇದ ಉತ್ಪನ್ನಗಳು ಮೊದಲಾದವುಗಳ ಬೆಲೆ ತಗ್ಗಿದೆ. ಇಂದು ಸೆಪ್ಟೆಂಬರ್ 22ರಿಂದ ಹೊಸ ಬೆಲೆಗಳು ಜಾರಿಗೆ ಬರಲಿವೆ.

ಪತಂಜಲಿ ನೂಟ್ರೆಲಾ ಸೋಯಾ ಉತ್ಪನ್ನಗಳು

  • ನೂಟ್ರೆಲಾ ಚಂಕ್ಸ್, 1 ಕಿಲೋ ಪ್ಯಾಕ್: 210 ರೂನಿಂದ 190 ರೂಗೆ ಇಳಿಕೆ
  • ನೂಟ್ರೆಲಾ ಚಂಕ್ಸ್, 200 ಗ್ರಾಂ ಪ್ಯಾಕ್: 50 ರೂನಿಂದ 47 ರೂಗೆ ಇಳಿಕೆ
  • ಸೋಯುಮ್ ಚಂಕ್ಸ್, 1 ಕಿಲೋ ಪ್ಯಾಕ್: 150 ರೂನಿಂದ 140 ರೂಗೆ ಇಳಿಕೆ
  • ಸೋಯುಮ್ 200 ಗ್ರಾಮ್ ಪ್ಯಾಕ್: 60 ರೂನಿಂದ 57 ರೂಗೆ ಇಳಿಕೆ

45 ಗ್ರಾಮ್ ಮತ್ತು 80 ಗ್ರಾಮ್​ಗಳ ಟ್ರಯಲ್ ಪ್ಯಾಕ್​ಗಳ ಬೆಲೆಯಲ್ಲಿ ವ್ಯತ್ಯಯವಾಗಿಲ್ಲ. ಆದರೆ, ಪ್ಯಾಕ್​ನ ತೂಕ ಹೆಚ್ಚಿಸಲಾಗಿದೆ.

ಇದನ್ನೂ ಓದಿ: ದಿವ್ಯ ಕಾಯಕಲ್ಪ ತೈಲದ ಪ್ರಯೋಜನ, ಬಳಕೆ ವಿಧಾನ, ಮುನ್ನೆಚ್ಚರಿಕೆ ಕ್ರಮ ತಿಳಿಯಿರಿ

ಪತಂಜಲಿ ಬಿಸ್ಕತ್ ಮತ್ತು ಕುಕೀಸ್ ಪರಿಷ್ಕೃತ ಬೆಲೆ

  • ದೂದ್ ಬಿಸ್ಕತ್ 35 ಗ್ರಾಮ್: 5 ರೂನಿಂದ 4.50 ರೂಗೆ ಇಳಿಕೆ
  • ದೂಧ್ ಬಿಸ್ಕತ್ 70 ಗ್ರಾಮ್: 10 ರೂನಿಂದ 9 ರೂಗೆ ಇಳಿಕೆ
  • ಕ್ರಂಚಿ ಕೋಕೋನಟ್ ಕುಕೀಸ್, 40 ಗ್ರಾಮ್: 5 ರೂನಿಂದ 4.50 ರೂಗೆ ಇಳಿಕೆ
  • ಆರೋಗ್ಯ ಬಿಸ್ಕತ್ 75 ಗ್ರಾಮ್: 10 ರೂನಿಂದ 9 ರೂಗೆ ಇಳಿಕೆ
  • ಕ್ರೀಮ್​ಫೀಸ್ಟ್ ಚಾಕೋ ಬಿಸ್ಕತ್ 35 ಗ್ರಾಮ್: 5 ರೂನಿಂದ 4.50 ರೂಗೆ ಇಳಿಕೆ
  • ಬಟರ್ ಕುಕೀಸ್ 35 ಗ್ರಾಮ್: 5 ರೂನಿಂದ 4.50 ರೂಗೆ ಇಳಿಕೆ
  • ಮಾರೀ ಬಿಸ್ಕತ್ 225 ಗ್ರಾಮ್: 30 ರೂನಿಂದ 27 ರೂಗೆ ಇಳಿಕೆ
  • ಮಾರೀ ಬಿಸ್ಕತ್ 70 ಗ್ರಾಮ್: 10 ರೂನಿಂದ 9 ರೂಗೆ ಇಳಿಕೆ
  • ನಾರಿಯಲ್ ಬಿಸ್ಕತ್, 68 ಗ್ರಾಮ್: 10 ರೂನಿಂದ 9 ರೂಗೆ ಇಳಿಕೆ.

ಪತಂಜಲಿ ನೂಡಲ್ಸ್ ಪರಿಷ್ಕೃತ ದರ

  • ಪತಂಜಲಿ ಟ್ವಿಸ್ಟಿ ಟೇಸ್ಟಿ ನೂಡಲ್ಸ್, 50 ಗ್ರಾಮ್: 10 ರೂನಿಂದ 9.35 ರೂಗೆ ಇಳಿಕೆ
  • ಆಟ್ಟಾ ನೂಡಲ್ಸ್ ಚಟ್​ಪಟ, 60 ಗ್ರಾಮ್: 12 ರೂನಿಂದ 11.25 ರೂಗೆ ಇಳಿಕೆ

ಪತಂಜಲಿ ದಂತ್ ಕಾಂತಿ ಓರಲ್ ಕೇರ್

  • ದಂತ ಕಾಂತಿ ನ್ಯಾಚುರಲ್ ಟೂತ್​ಪೇಸ್ಟ್ 200 ಗ್ರಾಮ್: 120 ರೂನಿಂದ 106 ರೂಗೆ ಇಳಿಕೆ
  • ದಂತಕಾಂತಿ ಡಿ.ಸಿ. ಅಡ್ವಾನ್ಸ್ 100 ಗ್ರಾಮ್: 90 ರೂನಿಂದ 80 ರೂಗೆ ಇಳಿಕೆ
  • ದಂತ ಕಾಂತಿ ಮೆಡಿಕೇಟೆಡ್ ಓರಲ್ ಜಲ್ 100 ಗ್ರಾಮ್: 45 ರೂನಿಂದ 40 ರೂಗೆ ಇಳಿಕೆ

ಪತಂಜಲಿ ಕೇಶ್ ಕಾಂತಿ ಪರಿಷ್ಕೃತ ಬೆಲೆ

  • ಕೇಶ್ ಕಾಂತಿ ಆಮ್ಲ ಹೇರ್ ಆಯಿಲ್ 100 ಎಂಎಲ್: 48 ರೂನಿಂದ 42 ರೂಗೆ ಇಳಿಕೆ
  • ಕೇಶ್ ಕಾಂತಿ ಹೇರ್ ಕ್ಲೀನ್ಸರ್: 120 ರೂನಿಂದ 106 ರೂಗೆ ಇಳಿಕೆ
  • ಕೇಶ್ ಕಾಂತಿ ಹೇರ್ ಕ್ಲೀನ್ಸರ್ ನ್ಯಾಚುರಲ್ 180 ಎಂಎಲ್: 100 ರೂನಿಂದ 89 ರೂಗೆ ಇಳಿಕೆ

ಇದನ್ನೂ ಓದಿ: ಅಮೆರಿಕಕ್ಕೆ ಹೋಗಲು ಎಚ್​1ಬಿ ಸೇರಿ ಹಲವು ವಿಧದ ವೀಸಾಗಳು; ಇಲ್ಲಿದೆ ಸಂಪೂರ್ಣ ಮಾಹಿತಿ

ಪತಂಜಲಿ ಹೆಲ್ತ್ ಮತ್ತು ವೆಲ್ನೆಸ್ ಉತ್ಪನ್ನಗಳ ಪರಿಷ್ಕೃತ ದರ

  • ಆಮ್ಲಾ ಜ್ಯೂಸ್ ಒಂದು ಲೀಟರ್: 150 ರೂನಿಂದ 140 ರೂಗೆ ಇಳಿಕೆ
  • ಗಿಲೋಯ್ ಜ್ಯೂಸ್ 500 ಎಂಎಲ್: 90 ರೂನಿಂದ 84 ರೂಗೆ ಇಳಿಕೆ
  • ಕರೇಲ ಜಾಮುನ್ ಜ್ಯೂಸ್ 500 ಎಂಎಲ್: 150 ರೂನಿಂದ 140 ರೂಗೆ ಇಳಿಕೆ
  • ಬಾದಾಮ್ ಪಾಕ್ 500 ಗ್ರಾಮ್: 275 ರೂನಿಂದ 257 ರೂಗೆ ಇಳಿಕೆ
  • ವಿಶೇಷ ಚ್ಯವನಪ್ರಾಶ್ 1 ಕಿಲೋ: 360 ರೂನಿಂದ 337 ರೂಗೆ ಇಳಿಕೆ

ಪತಂಜಲಿ ತುಪ್ಪದ ಪರಿಷ್ಕೃತ ಬೆಲೆಗಳು

  • ಹಸುವಿನ ತುಪ್ಪ 900 ಎಂಎಲ್: 780 ರೂನಿಂದ 731 ರೂಗೆ ಇಳಿಕೆ
  • ಹಸುವಿನ ತುಪ್ಪ 450 ಎಂಎಲ್: 420 ರೂನಿಂದ 393 ರೂಗೆ ಇಳಿಕೆ
  • ಪತಂಜಲಿ ಬಾಡಿ ಕ್ಲೀನ್ಸರ್​ಗಳ ಪರಿಷ್ಕೃತ ಬೆಲೆ
  • ನೀಮ್ ಕಾಂತಿ ಬಾಡಿ ಕ್ಲೀನ್ಸರ್ 75 ಗ್ರಾಮ್: 25 ರೂನಿಂದ 22 ರೂಗೆ ಇಳಿಕೆ.
  • ಆಲೋವೆರಾ, ನೀಮ್, ಹಲ್ದಿ ಬಾಡಿ ಕ್ಲೀನ್ಸರ್ಸ್ 45 ಗ್ರಾಮ್: 10 ರೂನಿಂದ 9 ರೂಗೆ ಇಳಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:26 pm, Mon, 22 September 25

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ