AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Onion Discount Sale: ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಕಡಿಮೆ ಬೆಲೆಗೆ ಸರ್ಕಾರದಿಂದ ಈರುಳ್ಳಿ ಮಾರಾಟ

Onion Price Latest News: ಕಳೆದ ವಾರ ಕಿಲೋಗೆ 30 ರೂ ಇದ್ದ ಈರುಳ್ಳಿ ಬೆಲೆ ಇದೀಗ 90 ರೂವರೆಗೂ ಹೋಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತನ್ನಲ್ಲಿರುವ ದಾಸ್ತಾನು ಬಳಸಿಕೊಂಡು ಈರುಳ್ಳಿಯನ್ನು ಕಡಿಮೆ ಬೆಲೆಗೆ ಮಾರತೊಡಗಿದೆ. ವರದಿ ಪ್ರಕಾರ ಸರ್ಕಾರ ದೇಶಾದ್ಯಂತ 170 ನಗರಗಳಲ್ಲಿ ಈರುಳ್ಳಿ ಅಂಗಡಿಗಳನ್ನು ತೆರೆದಿದೆ. ಇಲ್ಲಿ ಕಿಲೋಗೆ 25 ರೂನಂತೆ ಈರುಳ್ಳಿಯನ್ನು ಮಾರಲಾಗುತ್ತಿದೆ.

Onion Discount Sale: ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಕಡಿಮೆ ಬೆಲೆಗೆ ಸರ್ಕಾರದಿಂದ ಈರುಳ್ಳಿ ಮಾರಾಟ
ಈರುಳ್ಳಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 02, 2023 | 12:38 PM

ನವದೆಹಲಿ, ನವೆಂಬರ್ 2: ಈರುಳ್ಳಿ ಬೆಲೆ (onion rates) ದೇಶಾದ್ಯಂತ ಏರುತ್ತಿದೆ. ಕಳೆದ ಒಂದು ವಾರದಲ್ಲಿ ಬೆಲೆ ಎರಡು ಪಟ್ಟು ಹೆಚ್ಚಾಗಿದೆ. ಕೆಲವೆಡೆ ಈರುಳ್ಳಿ ಬೆಲೆ ನೂರು ರೂ ಸಮೀಪಕ್ಕೆ ಹೋಗಿದೆ. ಕಳೆದ ವಾರ ಕಿಲೋಗೆ 30 ರೂ ಇದ್ದ ಈರುಳ್ಳಿ ಬೆಲೆ ಇದೀಗ 90 ರೂವರೆಗೂ ಹೋಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ತನ್ನಲ್ಲಿರುವ ದಾಸ್ತಾನು ಬಳಸಿಕೊಂಡು ಈರುಳ್ಳಿಯನ್ನು ಕಡಿಮೆ ಬೆಲೆಗೆ ಮಾರತೊಡಗಿದೆ. ವರದಿ ಪ್ರಕಾರ ಸರ್ಕಾರ ದೇಶಾದ್ಯಂತ 170 ನಗರಗಳಲ್ಲಿ ಈರುಳ್ಳಿ ಅಂಗಡಿಗಳನ್ನು ತೆರೆದಿದೆ. ಇಲ್ಲಿ ಕಿಲೋಗೆ 25 ರೂನಂತೆ ಈರುಳ್ಳಿಯನ್ನು ಮಾರಲಾಗುತ್ತಿದೆ. ಬೆಂಗಳೂರಿನಲ್ಲೂ ಹಲವೆಡೆ ಸರ್ಕಾರ ಈರುಳ್ಳಿ ಅಂಗಡಿಗಳನ್ನು ತೆರೆದು ರಿಯಾಯಿತಿ ದರದಲ್ಲಿ ಮಾರುತ್ತಿದೆ.

ಎರಡು ತಿಂಗಳ ಹಿಂದೆ ಟೊಮೆಟೋ ಬೆಲೆ ಹೆಚ್ಚಾದಾಗ ಸರ್ಕಾರ ತನ್ನಲ್ಲಿರುವ ಟೊಮೆಟೋ ದಾಸ್ತಾನು ಬಳಸಿ ಮೊಬೈಲ್ ವ್ಯಾನುಗಳ ಮೂಲಕ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿತ್ತು. ಈಗ ಈರುಳ್ಳಿಯನ್ನೂ ಮೊಬೈಲ್ ವ್ಯಾನ್​ಗಳ ಮೂಲಕ ಮಾರಾಟ ಮಾಡುತ್ತಿದೆ. ಬೆಂಗಳೂರು ಸೇರಿದಂತೆ ವಿವಿಧ ನಗರ ಮತ್ತು ಪಟ್ಟಣಗಳಲ್ಲಿ ಈ ಮೊಬೈಲ್ ವ್ಯಾನ್​ಗಳು ಈರುಳ್ಳಿ ಹೊತ್ತು ಸಾಗಲಿವೆ. ದೆಹಲಿ ಎನ್​ಸಿಆರ್ ಪ್ರದೇಶದಲ್ಲಿ ಅತಿಹೆಚ್ಚು, ಅಂದರೆ 71 ಈರುಳ್ಳಿ ವ್ಯಾನ್​ಗಳು ಓಡಾಡಲಿವೆ. ಬೆಂಗಳೂರು, ಹೈದರಾಬಾದ್, ಜೈಪುರ, ಲುಧಿಯಾನ, ವಾರಾಣಸಿ, ರೋಹ್ತಕ್, ಶ್ರೀನಗರ್, ಭೋಪಾಲ್, ಇಂದೋರ್, ಭುಬನೇಶ್ವರ್ ಮೊದಲಾದ ನಗರಗಳಲ್ಲಿ ಈ ಮೊಬೈಲ್ ವ್ಯಾನ್​ಗಳಲ್ಲಿ ಸರ್ಕಾರ ಈರುಳ್ಳಿ ಮಾರುತ್ತಿದೆ.

ಇದನ್ನೂ ಓದಿ: US Interest Rates: ಅಮೆರಿಕದಲ್ಲಿ ಬಡ್ಡಿದರ ಯಥಾಸ್ಥಿತಿ; ಭಾರತೀಯ ಮಾರುಕಟ್ಟೆ ಮೇಲೇನು ಪರಿಣಾಮ?

ಬಹಳ ಸಾಮಾನ್ಯವಾಗಿ ಬಳಕೆ ಮಾಡುವ ತರಕಾರಿಗಳಲ್ಲಿ ಈರುಳ್ಳಿಯೂ ಒಂದು. ಇದರ ಬೆಲೆ ಏರಿಕೆಯಾದರೆ ಹಣದುಬ್ಬರವೂ ಏರುತ್ತದೆ. ಹೀಗಾಗಿ, ಈರುಳ್ಳಿ ಬೆಲೆ ನಿಯಂತ್ರಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಈರುಳ್ಳಿಯ ಕನಿಷ್ಠ ರಫ್ತು ಬೆಲೆ ನಿಗದಿ ಮಾಡಿರುವುದೂ ಒಂದು ಕ್ರಮ. ಹಾಗೆಯೇ, ಸರ್ಕಾರ ಈರುಳ್ಳಿ ದಾಸ್ತಾನು ಹೆಚ್ಚು ಮಾಡಿದೆ. 2 ಲಕ್ಷ ಟನ್​ಗಳಷ್ಟು ಹೆಚ್ಚುವರಿಯಾಗಿ ಈರುಳ್ಳಿಯನ್ನು ಸರ್ಕಾರ ಖರೀದಿಸಿದೆ. ಇದರೊಂದಿಗೆ ಸರ್ಕಾರದ ಬಳಿ ಇರುವ ಈರುಳ್ಳಿ ಸಂಗ್ರಹ 7 ಲಕ್ಷ ಟನ್ ಆಗಿದೆ. ಈ ಸಂಗ್ರಹದಿಂದ ಎಲ್ಲೆಡೆ ರಿಯಾಯಿತಿ ದರದಲ್ಲಿ ಈರುಳ್ಳಿಯನ್ನು ಮಾರುತ್ತಿದೆ.

ಇದರ ಜೊತೆಗೆ, ಈರುಳ್ಳಿಗೆ ಕನಿಷ್ಠ ರಫ್ತು ಬೆಲೆ ನಿಗದಿ ಮಾಡಿರುವುದರಿಂದ ಈರುಳ್ಳಿ ರಫ್ತನ್ನು ನಿರ್ಬಂಧಿಸಿದಂತಾಗಿ, ದೇಶೀಯವಾಗಿ ಅದರ ಲಭ್ಯತೆ ಹೆಚ್ಚುತ್ತದೆ. ಈ ಮೂಲಕ ಬೆಲೆ ನಿಯಂತ್ರಣ ಸಾಧ್ಯವಾಗುತ್ತದೆ.

ಇದನ್ನೂ ಓದಿ: ಇದಕ್ಕಿಂತ ಕಡಿಮೆಗೆ ಸಿಕ್ಕರೆ ಎರಡು ಪಟ್ಟು ಹಣ ರೀಫಂಡ್; ಪೇಟಿಎಂನಲ್ಲಿ ಪ್ರೈಸ್ ಗ್ಯಾರಂಟಿ ಆಫರ್

ಊಹಾಪೋಹದಿಂದ ಈರುಳ್ಳಿ ಬೆಲೆ ಏರಿಕೆ?

ಈ ಬಾರಿಯ ಸೀಸನ್​ನಲ್ಲಿ ಈರುಳ್ಳಿ ಇಳುವರಿ ಕುಂಠಿತಗೊಂಡು ಕೊರತೆ ಸೃಷ್ಟಿಯಾಗಬಹುದು ಎಂಬ ಭೀತಿಯಲ್ಲಿ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಕೈಮೀರಿ ಏರುತ್ತಿದೆ ಎಂದು ಸರ್ಕಾರೀ ಮೂಲಗಳು ಹೇಳುತ್ತಿವೆ. ದೇಶದಲ್ಲಿ ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಈರುಳ್ಳಿ ಬೆಳೆಯಲಾಗುತ್ತದೆ. ಶೇ. 30ರಷ್ಟು ಈರುಳ್ಳಿ ಮಹಾರಾಷ್ಟ್ರದಿಂದಲೇ ಸಿಗುತ್ತದೆ. ದೇಶದ ಒಟ್ಟಾರೆ ಈರುಳ್ಳಿ ಉತ್ಪಾದನೆಯಲ್ಲಿ ಶೇ. 60ಕ್ಕಿಂತ ಹೆಚ್ಚಿನ ಭಾಗವು ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್ ಈ ಮೂರು ರಾಜ್ಯಗಳಿಂದಲೇ ಇದೆ. ಮೂಲಗಳ ಪ್ರಕಾರ ಮಹಾರಾಷ್ಟ್ರದಲ್ಲಿ ಈ ಬಾರಿಯ ಹಿಂಗಾರು ಸೀಸನ್​ನ ಈರುಳ್ಳಿ ಇಳುವರಿಯಲ್ಲಿ ಹೆಚ್ಚೇನೂ ವ್ಯತ್ಯಯವಾಗಿಲ್ಲ. ಹಾಗಿದ್ದೂ ಬೆಲೆ ಏರಿಕೆ ಆಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಆತಂಕಕ್ಕೊಳಗಾಗುವ ಅಗತ್ಯವಿಲ್ಲ, ಅದರೆ ಜನ ಎಚ್ಚರವಹಿಸುವ ಜರೂರತ್ತಿದೆ
ಲೋಕಕ್ಕೆ ಜಲ ವಾಯು ಗಂಡಾಂತರ, ಯುದ್ಧ ಭೀತಿ: ಕೋಡಿ ಶ್ರೀ ಸ್ಫೋಟಕ ಭವಿಷ್ಯ
ಲೋಕಕ್ಕೆ ಜಲ ವಾಯು ಗಂಡಾಂತರ, ಯುದ್ಧ ಭೀತಿ: ಕೋಡಿ ಶ್ರೀ ಸ್ಫೋಟಕ ಭವಿಷ್ಯ
ದಕ್ಷಿಣದ ನಳಂದ ವಿಶ್ವವಿದ್ಯಾಲಯ ಸ್ಥಾಪಿಸಲು ಒಂದೆಕರೆ ಜಮೀನು ನೀಡುವೆ: ಸುರೇಶ್
ದಕ್ಷಿಣದ ನಳಂದ ವಿಶ್ವವಿದ್ಯಾಲಯ ಸ್ಥಾಪಿಸಲು ಒಂದೆಕರೆ ಜಮೀನು ನೀಡುವೆ: ಸುರೇಶ್