AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಅರಾಕಲ್, ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಲೇ ಆಫ್ ಭೀತಿ; 3,000ಕ್ಕೂ ಹೆಚ್ಚು ಮಂದಿಗೆ ಹೋಗುತ್ತಾ ಕೆಲಸ?

Oracle, Microsoft employees in India facing job loss fear: ಜಾಗತಿಕ ತಂತ್ರಜ್ಞಾನ ಸಂಸ್ಥೆಗಳು ಉದ್ಯೋಗಕಡಿತದ ಕಾರ್ಯ ಮುಂದುವರಿಸುತ್ತಿರುವಂತಿದೆ. ವರದಿಗಳ ಪ್ರಕಾರ, ಮೈಕ್ರೋಸಾಫ್ಟ್ ಮತ್ತು ಅರಾಕಲ್ ಸಂಸ್ಥೆಗಳು ಲೇ ಆಫ್ ಕ್ರಮ ತೆಗೆದುಕೊಳ್ಳುತ್ತಿವೆ. ಒರಾಕಲ್ ಭಾರತದಲ್ಲಿ 3,000 ಮಂದಿಯನ್ನು ಕೆಲಸದಿಂದ ತೆಗೆಯಬಹುದು ಎನ್ನಲಾಗಿದೆ. ಮೈಕ್ರೋಸಾಫ್ಟ್ ಭಾರತದಲ್ಲಿ 500 ಉದ್ಯೋಗಿಗಳನ್ನು ಪಿಐಪಿಯಲ್ಲಿ ಇಟ್ಟಿದೆ.

ಭಾರತದಲ್ಲಿ ಅರಾಕಲ್, ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಲೇ ಆಫ್ ಭೀತಿ; 3,000ಕ್ಕೂ ಹೆಚ್ಚು ಮಂದಿಗೆ ಹೋಗುತ್ತಾ ಕೆಲಸ?
ಅರಾಕಲ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 01, 2026 | 12:06 PM

Share

ನವದೆಹಲಿ, ಸೆಪ್ಟೆಂಬರ್ 1: ಜಾಗತಿಕ ಟೆಕ್ ದೈತ್ಯ ಸಂಸ್ಥೆಗಳು ಲೇ ಆಫ್ ದಿಕ್ಕಿನಲ್ಲಿ ಮುಂದುವರಿದಂತಿವೆ. ಅರಾಕಲ್ ಮತ್ತು ಮೈಕ್ರೋಸಾಫ್ಟ್ ಸಂಸ್ಥೆಗಳು ಸಾಕಷ್ಟು ಉದ್ಯೋಗಗಳಿಗೆ ಕತ್ತರಿ ಹಾಕುತ್ತಿವೆ ಎನ್ನುವಂತಹ ವರದಿ ಇದೆ. ಬಹಳಷ್ಟು ಭಾರತೀಯರು ಕೆಲಸ ಕಳೆದುಕೊಳ್ಳುವ ಭೀತಿ ಇದೆ. ವರದಿಗಳ ಪ್ರಕಾರ, ಭಾರತದಲ್ಲಿ ಅರಾಕಲ್ ಸಂಸ್ಥೆ (Oracle) ಸುಮಾರು 3,000 ಉದ್ಯೋಗಿಗಳನ್ನು ಲೇ ಆಫ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನೊಂದೆಡೆ, ಮೈಕ್ರೋಸಾಫ್ಟ್ (Microsoft) ಸಂಸ್ಥೆ ಭಾರತದಲ್ಲಿ ತನ್ನ 500 ಉದ್ಯೋಗಿಗಳನ್ನು ಪಿಐಪಿ ನೋಟೀಸ್​ನಲ್ಲಿ ಇಟ್ಟಿರುವುದು ತಿಳಿದುಬಂದಿದೆ. ಈ ಎರಡು ಸುದ್ದಿಗಳು ಭಾರತದಲ್ಲಿ ಟೆಕ್ಕಿಗಳನ್ನು ಭಯಭೀತಗೊಳಿಸಿವೆ.

ಅರಾಕಲ್‌ನಲ್ಲಿ ಮತ್ತೆ ಪಿಂಕ್ ಸ್ಲಿಪ್ ಭೀತಿ

ಅರಾಕಲ್ (Oracle) ಸಂಸ್ಥೆಯು ತನ್ನ ಎರಡನೇ ತ್ರೈಮಾಸಿಕದ ಆರಂಭವಾದ ಸೆಪ್ಟೆಂಬರ್ 1 ರಿಂದ ಹೊಸ ಹಂತದ ಉದ್ಯೋಗ ಕಡಿತಕ್ಕೆ ಸಜ್ಜಾಗಿದೆ. ಕಂಪನಿಯು ಭಾರತದಲ್ಲಿ ಸುಮಾರು 2,000 ದಿಂದ 3,000 ಉದ್ಯೋಗಗಳನ್ನು ಕಡಿತಗೊಳಿಸುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಎಕನಾಮಿಕ್ ಟೈಮ್ಸ್, ಬ್ಯುಸಿನೆಸ್ ಇನ್​ಸೈಡರ್ ಪತ್ರಿಕೆಗಳಲ್ಲಿ ಈ ಹಿಂದೆ ಬಂದ ವರದಿಗಳು ತಮ್ಮ ಕೆಲ ಮೂಲಗಳನ್ನು ಉಲ್ಲೇಖಿಸಿ ಲೇ ಆಫ್ ಸಂಭಾವ್ಯತೆಯನ್ನು ತಿಳಿಸಿದ್ದವು. ಎರಡನೇ ತ್ರೈಮಾಸಿಕ ಶುರುವಾಗುವಷ್ಟರಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿಮೆಗೊಳಿಸುವ ಗುರಿಯನ್ನು ಅರಾಕಲ್ ಮ್ಯಾನೇಜ್ಮೆಂಟ್ ಇಟ್ಟುಕೊಂಡಿತ್ತು ಎಂದು ವರದಿಗಳು ಹೇಳಿದ್ದವು. ಹೀಗಾಗಿ, ಸೆಪ್ಟೆಂಬರ್ 1 ಆಗಿರುವ ಇವತ್ತು ಅರಾಕಲ್​ನ ಟಾರ್ಗೆಟೆಡ್ ಉದ್ಯೋಗಿಗಳಿಗೆ ಲೇ ಆಫ್ ನೋಟೀಸ್ ಬಂದಿರಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: ಆಪಲ್ ಸಿಇಒ ಸ್ಥಾನಕ್ಕೆ ಟಿಮ್ ಕುಕ್ ವಿದಾಯ; ಸೆ. 1ರಿಂದ ಜಾನ್ ಟರ್ನಸ್ ಕೈಗೆ ಚುಕ್ಕಾಣಿ

‘ಬೆಳಗಿನ 6 ಗಂಟೆಯ ಇಮೇಲ್’ ಆತಂಕ

ಈ ಹಿಂದಿನ ಹಂತದ ಲೇ-ಆಫ್‌ಗಳಲ್ಲಿ ಉದ್ಯೋಗಿಗಳಿಗೆ ಯಾವುದೇ ಮುನ್ಸೂಚನೆ ನೀಡದೆ ಬೆಳಿಗ್ಗೆ 6 ಗಂಟೆಗೆ ಇಮೇಲ್ ಕಳುಹಿಸಿ ತಕ್ಷಣವೇ ಸಿಸ್ಟಮ್ ಆಕ್ಸೆಸ್ ರದ್ದುಗೊಳಿಸಲಾಗಿತ್ತು. ಅದೇ ಮಾದರಿಯ ಇಮೇಲ್ ಮತ್ತೆ ಬರಬಹುದು ಎಂಬ ಆತಂಕದಲ್ಲಿ ಉದ್ಯೋಗಿಗಳಿದ್ದಾರೆ. ಭಾರತದಲ್ಲಿ ಸದ್ಯ ಅರಾಕಲ್​ನ 30,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. 3,000 ಮಂದಿಗೆ ಕೆಲಸ ಹೋದರೆ ಶೇ. 10 ಲೇ ಆಫ್ ಮಾಡಿದಂತಾಗುತ್ತದೆ.

ಎಐ (AI) ಹೂಡಿಕೆಗಾಗಿ ಉದ್ಯೋಗ ಕಡಿತ

ಕಳೆದ ಒಂದು ವರ್ಷದಲ್ಲಿ ಅರಾಕಲ್ ಸುಮಾರು 21,000 ಉದ್ಯೋಗಗಳನ್ನು ಕಡಿತಗೊಳಿಸಿದೆ. ಕೃತಕ ಬುದ್ಧಿಮತ್ತೆ (AI) ಮತ್ತು ಕ್ಲೌಡ್ ಡಾಟಾ ಸೆಂಟರ್‌ಗಳ ಮೂಲಸೌಕರ್ಯಕ್ಕೆ ಬಿಲಿಯನ್‌ಗಟ್ಟಲೆ ಡಾಲರ್ ಹೂಡಿಕೆ ಮಾಡಲು ವೆಚ್ಚ ನಿರ್ವಹಣೆಯ ಭಾಗವಾಗಿ ಸಂಸ್ಥೆ ಈ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ಯುದ್ಧ, ತೈಲ ಬಿಕ್ಕಟ್ಟಿನ ಸ್ಥಿತಿಯಲ್ಲೂ ಭಾರತದ ಆರ್ಥಿಕತೆ ಶೇ. 7.8 ಬೆಳೆಯಲು ಸಾಧ್ಯವಾಗಿದ್ದು ಹೇಗೆ?

ಮೈಕ್ರೋಸಾಫ್ಟ್‌ನಲ್ಲಿ PIP ಕ್ರಮ: ಉದ್ಯೋಗಿಗಳಿಗೆ ಭೀತಿ

ಮತ್ತೊಂದೆಡೆ, ಮೈಕ್ರೋಸಾಫ್ಟ್ (Microsoft) ಸಂಸ್ಥೆಯು ಭಾರತದಲ್ಲಿನ ತನ್ನ ಒಟ್ಟು ಸಿಬ್ಬಂದಿಯ ಪೈಕಿ ಸುಮಾರು ಶೇ. 2 ರಷ್ಟು, ಅಂದರೆ 400 ರಿಂದ 500 ಉದ್ಯೋಗಿಗಳನ್ನು ‘ಪರ್ಫಾರ್ಮೆನ್ಸ್ ಇಂಪ್ರೂವ್‌ಮೆಂಟ್ ಪ್ಲಾನ್’ (PIP) ವ್ಯಾಪ್ತಿಗೆ ತಂದಿದೆ. ಇದು ನೇರ ಲೇ-ಆಫ್ ಅಲ್ಲದಿದ್ದರೂ, ಮುಂದೆ ಉದ್ಯೋಗ ನಷ್ಟಕ್ಕೆ ಕಾರಣವಾಗಬಹುದು ಎಂಬ ಆತಂಕ ಸಿಬ್ಬಂದಿಯಲ್ಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಹಾರ್ಮುಜ್​ನಲ್ಲಿ ಶಾಂತಿ, ಉಕ್ರೇನ್ ಯುದ್ಧ ಅಂತ್ಯಕ್ಕೆ ಕರೆ
ಹಾರ್ಮುಜ್​ನಲ್ಲಿ ಶಾಂತಿ, ಉಕ್ರೇನ್ ಯುದ್ಧ ಅಂತ್ಯಕ್ಕೆ ಕರೆ
ಸಿಕ್ಸ್​ ಪ್ಯಾಕ್​, ಟ್ಯಾಟು, ಶೋಕಿ ಜೀವನ: ಈತ ಯಾರೋ ಸೆಲೆಬ್ರಿಟಿ ಅಲ್ಲ, PDO
ಸಿಕ್ಸ್​ ಪ್ಯಾಕ್​, ಟ್ಯಾಟು, ಶೋಕಿ ಜೀವನ: ಈತ ಯಾರೋ ಸೆಲೆಬ್ರಿಟಿ ಅಲ್ಲ, PDO
‘ಟಾಕ್ಸಿಕ್’ನಿಂದ ಅರ್ಧಕ್ಕೆ ಹೊರಬಂದೆ’; ಬಿಗ್ ಬಾಸ್ ಮಾಜಿ ಸ್ಪರ್ಧಿಯ ಹೇಳಿಕೆ
‘ಟಾಕ್ಸಿಕ್’ನಿಂದ ಅರ್ಧಕ್ಕೆ ಹೊರಬಂದೆ’; ಬಿಗ್ ಬಾಸ್ ಮಾಜಿ ಸ್ಪರ್ಧಿಯ ಹೇಳಿಕೆ
ದಾವಣಗೆರೆ ಬಂದ್: ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ, ಬಸ್ ಸಂಚಾರಕ್ಕೆ ತಡೆ
ದಾವಣಗೆರೆ ಬಂದ್: ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ, ಬಸ್ ಸಂಚಾರಕ್ಕೆ ತಡೆ
ಸಿಐಡಿ ಮುಂದೆ ತಪ್ಪೊಪ್ಪಿಕೊಂಡ 6 ಅಭ್ಯರ್ಥಿಗಳು!
ಸಿಐಡಿ ಮುಂದೆ ತಪ್ಪೊಪ್ಪಿಕೊಂಡ 6 ಅಭ್ಯರ್ಥಿಗಳು!
ಇಂದಿನಿಂದ ಲಿಂಗಸುಗೂರಿನಿಂದ ‘ಬಳ್ಳಾರಿ ಚಲೋ’ ಹೆಸರಲ್ಲಿ ಬಿಜೆಪಿ ಪಾದಯಾತ್ರೆ
ಇಂದಿನಿಂದ ಲಿಂಗಸುಗೂರಿನಿಂದ ‘ಬಳ್ಳಾರಿ ಚಲೋ’ ಹೆಸರಲ್ಲಿ ಬಿಜೆಪಿ ಪಾದಯಾತ್ರೆ
ಸೆಪ್ಟೆಂಬರ್ 1, 2026: ದ್ವಾದಶ ರಾಶಿಗಳ ಮೇಲೆ ಗ್ರಹಗಳ ಪ್ರಭಾವ, ದಿನ ಭವಿಷ್ಯ
ಸೆಪ್ಟೆಂಬರ್ 1, 2026: ದ್ವಾದಶ ರಾಶಿಗಳ ಮೇಲೆ ಗ್ರಹಗಳ ಪ್ರಭಾವ, ದಿನ ಭವಿಷ್ಯ
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?