
ದೇಶದ ಅತಿದೊಡ್ಡ ಆಯುರ್ವೇದ FMCG ಕಂಪನಿಯಾದ ಪತಂಜಲಿ (Patanjali) ಸಾಕಷ್ಟು ಉದ್ಯೋಗಸೃಷ್ಟಿ, ತಳಮಟ್ಟದಲ್ಲಿ ಹೆಚ್ಚಿನ ರೀಟೇಲ್ ವ್ಯಾಪಾರ, ಸೋರ್ಸಿಂಗ್ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಬಲಪಡಿಸುತ್ತಿದ್ದು, ಆ ಮೂಲಕ ದೇಶದ ಆರ್ಥಿಕತೆ ಬಲಪಡಿಸಲು ಮಹತ್ವದ ಕೊಡುಗೆ ನೀಡುತ್ತಿದೆ. 2006 ರಲ್ಲಿ ಪ್ರಾರಂಭವಾದ ಪತಂಜಲಿ, ಸಾಂಪ್ರದಾಯಿಕ ಸಪ್ಲೈ ಚೈನ್ ಮತ್ತು ಆಧುನಿಕ ರೀಟೇಲ್ ವ್ಯಾಪಾರದ ಸ್ವರೂಪಗಳನ್ನು ಬಳಸಿಕೊಳ್ಳುವ ಮೂಲಕ ಉದ್ಯೋಗ, ಕೃಷಿ ಮತ್ತು ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು ಮಹತ್ವದ ಕೊಡುಗೆ ನೀಡಿದೆ ಎಂದು ಹೇಳಿಕೊಂಡಿದೆ.
ಕಂಪನಿಯ ಪ್ರಕಾರ, ಗ್ರಾಮೀಣ ಆರ್ಥಿಕತೆಯನ್ನು ಉನ್ನತೀಕರಿಸಲು ಇದು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ತೈಲಗಳು, ಧಾನ್ಯಗಳು ಮತ್ತು ಗಿಡಮೂಲಿಕೆಗಳು ಸೇರಿದಂತೆ ಅದರ ಕಚ್ಚಾ ವಸ್ತುಗಳ ಬಹುಪಾಲು ಭಾಗವನ್ನು ನೇರವಾಗಿ ಸ್ಥಳೀಯ ರೈತರಿಂದ ಪಡೆಯಲಾಗುತ್ತದೆ. ಈ ವಿಧಾನವು ರೈತರ ಆದಾಯವನ್ನು ಹೆಚ್ಚಿಸುವುದಲ್ಲದೆ, ಗ್ರಾಮೀಣ ಭಾರತದಲ್ಲಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳನ್ನು (MSME) ಬೆಂಬಲಿಸಿದೆ ಎಂದು ಕಂಪನಿ ಹೇಳಿಕೊಂಡಿದೆ.
ಕಂಪನಿಯು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (NSDC) ಮತ್ತು ಭಾರತೀಯ ಕೃಷಿ ಕೌಶಲ್ಯ ಮಂಡಳಿಯೊಂದಿಗೆ (ASCI) ಪಾಲುದಾರಿಕೆ ಹೊಂದಿದ್ದು, ರೈತರಿಗೆ ಸಾವಯವ ಕೃಷಿ ವಿಧಾನಗಳು ಮತ್ತು ಆಧುನಿಕ ಕೃಷಿ ತಂತ್ರಗಳಲ್ಲಿ ತರಬೇತಿ ನೀಡುವ ‘ಕಿಸಾನ್ ಸಮೃದ್ಧಿ ಕಾರ್ಯಕ್ರಮ’ವನ್ನು ಪ್ರಾರಂಭಿಸಿದೆ. ಈ ಉಪಕ್ರಮವು ಗ್ರಾಮೀಣ ಭಾರತದಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುತ್ತಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಪತಂಜಲಿ ಫೂಡ್ಸ್ನಿಂದ 2:1 ಬೋನಸ್ ಷೇರು ವಿತರಣೆಗೆ ನಿರ್ಧಾರ; ಯಾರಿಗೇನು ಲಾಭ?
ಯಮುನಾ ಎಕ್ಸ್ಪ್ರೆಸ್ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (YEIDA) ಪ್ರದೇಶದಲ್ಲಿ ಮೆಗಾ ಫೂಡ್ ಅಂಡ್ ಹರ್ಬಲ್ ಪಾರ್ಕ್ ಸ್ಥಾಪಿಸುವುದು ಕಂಪನಿಯ ಇತ್ತೀಚಿನ ಅತಿದೊಡ್ಡ ಯೋಜನೆಗಳಲ್ಲಿ ಒಂದಾಗಿದೆ. ಇದರಲ್ಲಿ 500 ಕೋಟಿ ರೂ. ಬಿಸ್ಕತ್ತು ಉತ್ಪಾದನಾ ಘಟಕ, 600 ಕೋಟಿ ರೂ. ಹಾಲು ಸಂಸ್ಕರಣಾ ಘಟಕ ಮತ್ತು 200 ಕೋಟಿ ರೂ. ಹರ್ಬಲ್ ಫಾರ್ಮ್ ಸೇರಿವೆ. ಈ ಸೌಲಭ್ಯಗಳು ಸ್ಥಳೀಯ ನಿವಾಸಿಗಳಿಗೆ ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಇದು ಗ್ರಾಮೀಣ ಉದ್ಯೋಗ ಮಾರುಕಟ್ಟೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಕಂಪನಿಯು ತನ್ನ ಉತ್ಪನ್ನಗಳ ವ್ಯಾಪ್ತಿಯನ್ನು ವಿಸ್ತರಿಸಲು ಭಾರತದಾದ್ಯಂತ ಸಾವಿರಾರು ಫ್ರಾಂಚೈಸಿಗಳು ಮತ್ತು ಮೆಗಾ ಸ್ಟೋರ್ಗಳನ್ನು ತೆರೆದಿದೆ. ಈ ಮಳಿಗೆಗಳು ನಗರ ಪ್ರದೇಶಗಳಲ್ಲಿ ಚಿಲ್ಲರೆ ವ್ಯಾಪಾರವನ್ನು ಹೆಚ್ಚಿಸಿವೆ ಮತ್ತು ಸ್ಥಳೀಯ ವ್ಯಾಪಾರಿಗಳಿಗೆ ಹೊಸ ಆದಾಯದ ಅವಕಾಶಗಳನ್ನು ಸೃಷ್ಟಿಸಿವೆ ಎಂದು ಕಂಪನಿ ಹೇಳಿದೆ. ಉದಾಹರಣೆಗೆ, ಮೆಗಾ ಸ್ಟೋರ್ ಸ್ಥಾಪಿಸಲು 1 ಕೋಟಿ ರೂ. ಹೂಡಿಕೆ ಮತ್ತು ಕನಿಷ್ಠ 2,000 ಚದರ ಅಡಿ ಸ್ಥಳಾವಕಾಶದ ಅಗತ್ಯವಿದೆ. ಇದು ಮಹತ್ವಾಕಾಂಕ್ಷೆಯ ನಗರ ಉದ್ಯಮಿಗಳಿಗೆ ಬಲವಾದ ವ್ಯಾಪಾರ ಅವಕಾಶವನ್ನು ಒದಗಿಸುತ್ತದೆ. ಸುಮಾರು 4,350 ಕೋಟಿ ರೂ. ಮೌಲ್ಯದ ರುಚಿ ಸೋಯಾವನ್ನು ಸ್ವಾಧೀನಪಡಿಸಿಕೊಳ್ಳುವುದರಿಂದ ಖಾದ್ಯ ತೈಲ ಮತ್ತು ಆಹಾರ ಕ್ಷೇತ್ರದಲ್ಲಿ ನೆಲೆ ಕಂಡುಕೊಂಡಿದೆ.
ಇದನ್ನೂ ಓದಿ: ತೂಕ ನಿರ್ವಹಣೆಗೆ ಆಯುರ್ವೇದ: ಬಾಬಾ ರಾಮದೇವ್ ಅವರ ಯೋಗ ಮತ್ತು ಆಹಾರ ಕ್ರಮಗಳು
ತನ್ನ ಡಿಸ್ಟ್ರಿಬ್ಯುಶನ್ ಮತ್ತು ಮಾರ್ಕೆಟಿಂಗ್ ಶೈಲಿಯಿಂದಾಗಿ ಭಾರತದಾದ್ಯಂತ ವ್ಯಾಪಾರ ವಹಿವಾಟು ವಿಸ್ತರಿಸಲು ಸಾಧ್ಯವಾಗಿರುವುದನ್ನು ಪತಂಜಲಿ ಕಂಪನಿ ಗುರುತಿಸಿದೆ. ಸಾಂಪ್ರದಾಯಿಕ ಸಣ್ಣ ಅಂಗಡಿಗಳು ಮತ್ತು ಆನ್ಲೈನ್ ಪ್ಲಾಟ್ಫಾರ್ಮ್ಗಳನ್ನು ಬಳಸಿಕೊಳ್ಳುವ ಮೂಲಕ, ಇದು ವಿಸ್ತೃತ ಗ್ರಾಹಕ ನೆಲೆ ತಲುಪಲು ಸಾಧ್ಯವಾಗಿದೆ. ಇದು ಉತ್ಪನ್ನಗಳ ಮಾರಾಟ ಹೆಚ್ಚಿಸುವುದಲ್ಲದೆ, ಸಣ್ಣ ರೀಟೇಲ್ ವ್ಯಾಪಾರಿಗಳಿಗೆ ಆರ್ಥಿಕ ಪ್ರಯೋಜನಗಳನ್ನು ತಂದಿದೆ ಎಂದು ಕಂಪನಿ ಹೇಳಿದೆ. ನಮ್ಮ ಉತ್ಪನ್ನಗಳನ್ನು ಕೈಗೆಟುಕುವಂತೆ ಮಾಡುವುದರಿಂದ ಮಧ್ಯಮ ಮತ್ತು ಕಡಿಮೆ ಆದಾಯದ ಗುಂಪಿನ ಗ್ರಾಹಕರನ್ನು ತಲುಪಲು ನಮಗೆ ಸಹಾಯವಾಗಿದೆ. ಇದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಳಕೆ ಹೆಚ್ಚಳಕ್ಕೆ ಕಾರಣವಾಗಿದೆ. ನಾವೀನ್ಯತೆ ಮತ್ತು ಕಾರ್ಯತಂತ್ರದ ಹೂಡಿಕೆಗಳ ಮೂಲಕ ಕಂಪನಿಯು ತನ್ನ ಸ್ಥಾನವನ್ನು ಬಲಪಡಿಸಿದೆ ಎಂದು ಕಂಪನಿಯು ಹೇಳಿದೆ. ಸ್ವಾವಲಂಬಿ ಭಾರತೀಯ ಆರ್ಥಿಕತೆಯನ್ನು ನಿರ್ಮಿಸುವ ಮತ್ತು ಗ್ರಾಮೀಣ-ನಗರ ಅಂತರವನ್ನು ಕಡಿಮೆ ಮಾಡುವತ್ತ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ