AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Patanjali Foods: ಪತಂಜಲಿ ಫೂಡ್ಸ್​ನಿಂದ 2:1 ಬೋನಸ್ ಷೇರು ವಿತರಣೆಗೆ ನಿರ್ಧಾರ; ಯಾರಿಗೇನು ಲಾಭ?

Patanjali Foods board approves for 2:1 bonus share: ಪತಂಜಲಿ ಫೂಡ್ಸ್ ನಿರ್ದೇಶಕರ ಮಂಡಳಿಯು 2:1 ಬೋನಸ್ ಷೇರು ವಿತರಣೆಗೆ ಅನುಮೋದನೆ ನೀಡಿದೆ. ಪ್ರತೀ ಷೇರಿಗೆ ಎರಡು ಬೋನಸ್ ಷೇರುಗಳನ್ನು ನೀಡಲಾಗುತ್ತದೆ. ಆದರೆ, ಪ್ರತೀ ಷೇರಿನ ಫೇಸ್ ವ್ಯಾಲ್ಯೂ 2 ರೂನಲ್ಲೇ ಮುಂದುವರಿಯಲಿದೆ. ಈ ಕ್ರಮದಿಂದ ಪತಂಜಲಿ ಫೂಡ್ಸ್​ನ ಷೇರು ಪ್ರಮಾಣ 108 ಕೋಟಿ ದಾಟಲಿದೆ. ಷೇರ್ ಕ್ಯಾಪಿಟಲ್ ಪ್ರಮಾಣ ಹೆಚ್ಚಾಗಲಿದೆ.

Patanjali Foods: ಪತಂಜಲಿ ಫೂಡ್ಸ್​ನಿಂದ 2:1 ಬೋನಸ್ ಷೇರು ವಿತರಣೆಗೆ ನಿರ್ಧಾರ; ಯಾರಿಗೇನು ಲಾಭ?
ಷೇರು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 17, 2025 | 4:02 PM

Share

ನವದೆಹಲಿ, ಜುಲೈ 17: ಬಾಬಾ ರಾಮದೇವ್ ನೇತೃತ್ವದ ಪತಂಜಲಿ ಫೂಡ್ಸ್ ಸಂಸ್ಥೆ (Patanjali Foods) ನಿರೀಕ್ಷೆಯಂತೆ ತನ್ನ ಮಂಡಳಿ ಸಭೆಯಲ್ಲಿ ಬೋನಸ್ ಷೇರು (Bonus Shares) ವಿತರಿಸುವ ಕ್ರಮಕ್ಕೆ ಅನುಮೋದನೆ ನೀಡಿದೆ. 2:1 ಅನುಪಾತದಲ್ಲಿ ಬೋನಸ್ ಷೇರು ವಿತರಣೆಗೆ ಶಿಫಾರಸು ಮಾಡಲಾಗಿದೆ. ಬೋನಸ್ ಷೇರು ಕ್ರಮ ಜಾರಿಯಾದಾಗ 2 ರೂ ಮುಖಬೆಲೆಯ ಪ್ರತೀ ಷೇರಿಗೂ 2 ರೂ ಮುಖಬೆಲೆ ಎರಡು ಹೆಚ್ಚುವರಿ ಷೇರುಗಳನ್ನು ನೀಡಲಾಗುತ್ತದೆ. ಆದರೆ, ವಿತರಣೆ ದಿನಾಂಕ ಅಥವಾ ರೆಕಾರ್ಡ್ ಡೇಟ್ ಯಾವಾಗ ಎಂದು ತಿಳಿಸಲಾಗಿಲ್ಲ. ಈ ವಿಷಯವನ್ನು ಸಂಸ್ಥೆಯ ಇವತ್ತು ತನ್ನ ಎಕ್ಸ್​ಚೇಂಜ್ ಫೈಲಿಂಗ್​​ನಲ್ಲಿ ತಿಳಿಸಿದೆ.

ನೀವು 50 ಪತಂಜಲಿ ಫುಡ್ಸ್ ಷೇರುಗಳನ್ನು ಹೊಂದಿದ್ದರೆ, ನಿಮಗೆ 100 ಷೇರು ಹೆಚ್ಚುವರಿಯಾಗಿ ಸಿಗುತ್ತದೆ. ನಿಮ್ಮ ಪತಂಜಲಿ ಷೇರುಗಳ ಪ್ರಮಾಣ 150ಕ್ಕೆ ಏರುತ್ತದೆ. ಪತಂಜಲಿ ಫೂಡ್ಸ್​ನ ನಿರ್ದೇಶಕರ ಮಂಡಳಿಯಿಂದ ಅನುಮೋದನೆಯಾಗಿರುವ ಬೋನಸ್ ಷೇರು ಕ್ರಮವು ಷೇರುದಾರರಿಂದ ಅನುಮೋದನೆಗೊಂಡ ಬಳಿಕ ಜಾರಿಯಾಗುತ್ತದೆ.

ಇದನ್ನೂ ಓದಿ: ಎಫ್​ಎಂಸಿಜಿ ಮಾರುಕಟ್ಟೆಯ ಕಿಂಗ್ ಮಾತ್ರವಲ್ಲ, ಇತರ ಕ್ಷೇತ್ರಗಳಲ್ಲೂ ಮಿಂಚುತ್ತಿದೆ ಪತಂಜಲಿ

ಇದನ್ನೂ ಓದಿ
Image
ಪತಂಜಲಿ ಎಫ್​ಎಂಸಿಜಿ ಕ್ಷೇತ್ರದ ಬ್ರ್ಯಾಂಡ್ ಮಾತ್ರವೇ ಅಲ್ಲ...
Image
ಖಾದ್ಯ ಎಣ್ಣೆ ಬೆಲೆ ಇಳಿಸಲಿದೆ ಪತಂಜಲಿಯ ಈ ನಡೆ
Image
ಹೂಡಿಕೆದಾರರಿಗೆ ಉತ್ತಮ ಲಾಭ ತಂದ ಪತಂಜಲಿ ಫುಡ್ಸ್ ಷೇರು
Image
ಹೋಲ್​​ಸೇಲ್ ಮಾರುಕಟ್ಟೆಯಲ್ಲೂ ಪತಂಜಲಿ ಸದ್ದು

ಪತಂಜಲಿ ಫೂಡ್ಸ್ ಸಂಸ್ಥೆಯಲ್ಲಿ ಸದ್ಯ ಇರುವ ಷೇರುಗಳ ಸಂಖ್ಯೆ 36,06,31,414 (36 ಕೋಟಿ) ಇದೆ. ಬೋನಸ್ ಸ್ಕೀಮ್ ಅಡಿಯಲ್ಲಿ ಅದು 72,50,12,628 (72.50 ಕೋಟಿ) ಹೊಸ ಈಕ್ವಿಟಿ ಷೇರುಗಳನ್ನು ವಿತರಿಸಲಿದೆ. ಅದಾದ ಬಳಿಕ ಒಟ್ಟು ಷೇರು ಸಂಖ್ಯೆ 108.75 ಕೋಟಿಗೆ ಏರಲಿದೆ. ಒಂದು ಷೇರಿನ ಫೇಸ್ ವ್ಯಾಲ್ಯೂ 2 ರೂ ಎಂದಿಟ್ಟುಕೊಂಡರೆ ಬೋನಸ್ ಷೇರುಗಳ ವಿತರಣೆ ಬಳಿಕ ಕಂಪನಿಯ ಷೇರು ಬಂಡವಾಳ 145 ಕೋಟಿ ರೂನಿಂದ 217.50 ಕೋಟಿ ರೂಗೆ ಏರಲಿದೆ.

ಪತಂಜಲಿ ಫೂಡ್ಸ್ ಕಂಪನಿ ಪ್ರತೀ ಷೇರಿಗೆ ಎರಡು ಹೆಚ್ಚುವರಿ ಷೇರು ನೀಡಿದರೂ ಅದರ ಒಟ್ಟಾರೆ ಮಾರುಕಟ್ಟೆ ಬಂಡವಾಳದಲ್ಲಿ ಏರಿಕೆ ಆಗುವುದಿಲ್ಲ. ಪ್ರತೀ ಷೇರಿನ ಮೌಲ್ಯವನ್ನು ಹೆಚ್ಚುವರಿ ಷೇರುಗಳಿಗೆ ಅನುಗುಣವಾಗಿ ತಗ್ಗಿಸಲಾಗುತ್ತದೆ. ಒಂದು ಷೇರಿಗೆ 1,900 ರೂ ಬೆಲೆ ಇತ್ತೆಂದರೆ, ಎರಡು ಬೋನಸ್ ಷೇರು ಸೇರಿ, ಮೂರು ಷೇರುಗಳ ಒಟ್ಟು ಮೌಲ್ಯ 1,900 ರೂ ಮಾತ್ರವೇ ಇರುತ್ತದೆ. ಒಂದು ಷೇರಿನ ಮೌಲ್ಯ 633.33 ರೂ ಆಗಬಹುದು.

ಇದನ್ನೂ ಓದಿ: ಭಾರತದಲ್ಲಿ ಖಾದ್ಯ ಎಣ್ಣೆ ಬೆಲೆ ಇಳಿಕೆಗೆ, ಸ್ವಾವಲಂಬನೆಗೆ ಪತಂಜಲಿ ಮಾಸ್ಟರ್ ಪ್ಲಾನ್; ಮಲೇಷ್ಯನ್ ಕಂಪನಿ ಜೊತೆ ಡೀಲ್

ಆದರೆ, ಗಮನಿಸಬೇಕಾದ ಸಂಗತಿ ಎಂದರೆ ಪತಂಜಲಿ ಫೂಡ್ಸ್ ಸಂಸ್ಥೆ ಬೋನಸ್ ಷೇರು ವಿತರಿಸಿದರೂ ಫೇಸ್ ವ್ಯಾಲ್ಯೂವನ್ನು ತಗ್ಗಿಸಲಾಗಿಲ್ಲ. 2 ರೂ ಫೇಸ್ ವ್ಯಾಲ್ಯೂ ಮುಂದುವರಿಯುತ್ತದೆ. ಇದು ಪತಂಜಲಿ ಸಂಸ್ಥೆಯ ಆರ್ಥಿಕ ಆರೋಗ್ಯವನ್ನು ಮತ್ತು ಆತ್ಮವಿಶ್ವಾಸವನ್ನು ಸೂಚಿಸುತ್ತದೆ.

ಬೋನಸ್ ಷೇರು ವಿತರಣೆ ಮಾಡಲು ಯೋಚಿಸಲಾಗುತ್ತಿದೆ ಎನ್ನುವ ಸುದ್ದಿ ಹೊರ ಬಂದ ಬೆನ್ನಲ್ಲೇ ಕಳೆದ ಒಂದು ವಾರದಿಂದ ಪತಂಜಲಿ ಫೂಡ್ಸ್ ಷೇರುಬೆಲೆ ಸತತವಾಗಿ ಏರುತ್ತಿದೆ. ಇವತ್ತೂ ಕೂಡ ಶೇ. 2ರಷ್ಟು ಏರಿಕೆ ಆಗಿದೆ. ಗುರುವಾರ ಟ್ರೇಡಿಂಗ್ ಅಂತ್ಯದಲ್ಲಿ ಅದರ ಬೆಲೆ 1891 ರೂ ಮುಟ್ಟಿತ್ತು. ಒಂದು ಹಂತದಲ್ಲಿ ಇವತ್ತು ಬೆಲೆ 1,913 ರುವರೆಗೂ ಹೋಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!