AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Patanjali Shares: ಬೋನಸ್ ಷೇರು ನೀಡಲು ನಿರ್ಧಾರ; ಝರ್ರನೆ ಏರಿದ ಪತಂಜಲಿ ಷೇರುಬೆಲೆ

Patanjali Foods share price rises: ಪತಂಜಲಿ ಫೂಡ್ಸ್ ಷೇರುಬೆಲೆ ಇವತ್ತು ಮಂಗಳವಾರ 1,673 ರೂನಿಂದ 1,739 ರೂಗೆ ಏರಿದೆ. ಜುಲೈ 17ರಂದು ಬೋರ್ಡ್ ಮೀಟಿಂಗ್​ನಲ್ಲಿ ಬೋನಸ್ ಷೇರು ಬಿಡುಗಡೆ ಘೋಷಿಸಲಾಗುತ್ತದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಇದು ನಡೆದಿದೆ. ಬೋನಸ್ ಷೇರು ವಿತರಣೆ ನಿರ್ಧಾರದ ಬಳಿಕ ಪತಂಜಲಿ ಫೂಡ್ಸ್ ಷೇರಿಗೆ ಬೇಡಿಕೆ ಹೆಚ್ಚಾಗಿದೆ.

Patanjali Shares: ಬೋನಸ್ ಷೇರು ನೀಡಲು ನಿರ್ಧಾರ; ಝರ್ರನೆ ಏರಿದ ಪತಂಜಲಿ ಷೇರುಬೆಲೆ
ಪತಂಜಲಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 15, 2025 | 7:41 PM

Share

ನವದೆಹಲಿ, ಜುಲೈ 15: ಬಾಬಾ ರಾಮದೇವ್ ನೇತೃತ್ವದ ಪತಂಜಲಿ ಫೂಡ್ಸ್ ಸಂಸ್ಥೆಯ ಷೇರುಬೆಲೆ (Patanjali Foods share price) ಇವತ್ತು ಮಂಗಳವಾರ ಸಖತ್ತಾಗಿ ಏರಿದೆ. ಸೋಮವಾರ ದಿನಾಂತ್ಯದಲ್ಲಿ 1,673.70 ರೂ ಇದ್ದ ಅದರ ಷೇರುಬೆಲೆ ಇವತ್ತು 65 ರೂ ಹೆಚ್ಚಳ (ಶೇ. 3.90) ಆಗಿ 1,739 ರೂ ಮುಟ್ಟಿದೆ. ಇವತ್ತು ಒಂದು ಹಂತದಲ್ಲಿ ಬೆಲೆ 1,746 ರೂವರೆಗೂ ಹೋಗಿತ್ತು. ಅದರ ಮಾರುಕಟ್ಟೆ ಸಂಪತ್ತು ಕೂಡ 6,316 ಕೋಟಿ ರೂಗೆ ಹಿಗ್ಗಿದೆ.

ಬೋನಸ್ ಷೇರು ವಿತರಿಸುವುದಾಗಿ ಘೋಷಣೆ

ಪತಂಜಲಿ ಫೂಡ್ಸ್ ಕಂಪನಿಯ ಬೋರ್ಡ್ ಮೀಟಿಂಗ್ ಜುಲೈ 17, ಗುರುವಾರದಂದು ಇದೆ. ಅಂದು ಬೋನ್ ಷೇರುಗಳನ್ನು ವಿತರಿಸುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಅದರ ಬೆನ್ನಲ್ಲೇ ಪತಂಜಲಿ ಷೇರುಗಳಿಗೆ ಭರ್ಜರಿ ಡಿಮ್ಯಾಂಡ್ ಸಿಕ್ಕಿದೆ. ಕಂಪನಿಯಿಂದ ಬೋನಸ್ ಷೇರುಗಳ ವಿತರಣೆ ಆಗುತ್ತಿರುವುದು ಇದೇ ಮೊದಲು.

ಇದನ್ನೂ ಓದಿ: ಷೇರುಮಾರುಕಟ್ಟೆ ಮೇಲೆ ಬಾಂಬ್ ಬೆದರಿಕೆ; ‘ಕಾಮ್ರೇಡ್ ಪಿಣರಾಯಿ ವಿಜಯನ್’ ಹೆಸರಿಂದ ಬಂದ ಇಮೇಲ್

ಬೋನಸ್ ಷೇರುಗಳಿಂದ ಏನು ಪ್ರಯೋಜನ?

ಮಾರುಕಟ್ಟೆಯಲ್ಲಿ ಕಂಪನಿಯ ಷೇರುಗಳ ಹರಿವು ಹೆಚ್ಚಲು ಮತ್ತು ಮಾರುಕಟ್ಟೆ ಬಂಡವಾಳವನ್ನು ಹಿಗ್ಗಿಸಲು ಬೋನಸ್ ಷೇರುಗಳನ್ನು ವಿತರಿಸಲಾಗುತ್ತದೆ. ಎಫ್​ಎಂಸಿಜಿ ಮಾರುಕಟ್ಟೆಯಲ್ಲಿ ಪತಂಜಲಿ ಸಂಸ್ಥೆ ಹಂತ ಹಂತವಾಗಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುತ್ತಿದ್ದು, ಬೋನಸ್ ಷೇರುಗಳ ಮೂಲಕ ಸ್ಟಾಕ್ ಮಾರ್ಕೆಟ್​ನಲ್ಲೂ ಕಂಪನಿ ಛಾಪು ಮೂಡಿಸುತ್ತಿದೆ.

ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ಪತಂಜಲಿ ಆಯುರ್ವೇದ ಸಂಸ್ಥೆ ರುಚಿ ಸೋಯಾ ಸಂಸ್ಥೆಯನ್ನು ಖರೀದಿಸಿತು. 2022ರ ಜೂನ್​​ನಲ್ಲಿ ರುಚಿ ಸೋಯಾವನ್ನು ಪತಂಜಲಿ ಫೂಡ್ಸ್ ಎಂದು ಹೆಸರು ಬದಲಿಸಿತು.

ಇದನ್ನೂ ಓದಿ: ಎಫ್​ಎಂಸಿಜಿ ಮಾರುಕಟ್ಟೆಯ ಕಿಂಗ್ ಮಾತ್ರವಲ್ಲ, ಇತರ ಕ್ಷೇತ್ರಗಳಲ್ಲೂ ಮಿಂಚುತ್ತಿದೆ ಪತಂಜಲಿ

ಪತಂಜಲಿ ಫೂಡ್ಸ್ 2022ರಿಂದಲೂ ತನ್ನ ಷೇರುದಾರರಿಗೆ ಡಿವಿಡೆಂಡ್ ನೀಡುತ್ತಾ ಬಂದಿದೆ. 2022ರ ಸೆಪ್ಟೆಂಬರ್, 2023ರ ಸೆಪ್ಟೆಂಬರ್​​ನಲ್ಲಿ ಲಾಭಾಂಶವನ್ನು ಪ್ರಕಟಿಸಿತ್ತು. 2024ರಲ್ಲಿ ಪ್ರತಿ ಶೇರಿಗೆ 6 ರೂ ಡಿವಿಡೆಂಡ್ ಕೊಟ್ಟಿತು. 2024ರ ನವೆಂಬರ್​​ನಲ್ಲಿ 8 ರೂ ಮಧ್ಯಂತರ ಡಿವಿಡೆಂಡ್ ಪ್ರಕಟಿಸಿತು. ಈಗ 2025ರಲ್ಲೂ ಅದು ಡಿವಿಡೆಂಡ್ ಪ್ರಕಟಿಸುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ