AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೂರು ಕೋಟಿ ಗಳಿಸುವ ಸಿಂಪಲ್ ಐಡಿಯಾ; 25 ವರ್ಷದ ಯುವಜನರಿಗೆ ಉದ್ಯಮಿ ಕಿವಿಮಾತು

Anupam Mittal advice to youngsters: ಷೇರು, ಚಿನ್ನ, ಮನೆ, ಇವುಗಳ ಮೇಲೆ ಹಣ ಹೂಡಿಕೆ ಮಾಡುವುದು ಯಾವತ್ತೂ ತಪ್ಪಲ್ಲ ಎನ್ನುತ್ತಾರೆ ಉದ್ಯಮಿ ಅನುಪಮ್ ಮಿಟ್ಟಲ್. ಹೂಡಿಕೆಯ ಕಾಂಪೌಂಡಿಂಗ್ ಗುಣ ತಿಳಿದಿರಬೇಕು. ದೀರ್ಘಾವಧಿ ಹೂಡಿಕೆಯಿಂದ ಲಾಭ ಹೆಚ್ಚು. ಒಂದು ಸ್ವಂತ ಮನೆ ಹೊಂದಿರುವುದು ಬಹಳ ಮುಖ್ಯ ಎಂದು ಅನುಪಮ್ ಮಿತ್ತಲ್ ಹೇಳುತ್ತಾರೆ.

ನೂರು ಕೋಟಿ ಗಳಿಸುವ ಸಿಂಪಲ್ ಐಡಿಯಾ; 25 ವರ್ಷದ ಯುವಜನರಿಗೆ ಉದ್ಯಮಿ ಕಿವಿಮಾತು
ಅನುಪಮ್ ಮಿಟ್ಟಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 14, 2025 | 1:14 PM

Share

ನವದೆಹಲಿ, ಅಕ್ಟೋಬರ್ 14: ಬಹಳ ಜನರಿಗೆ ಒಂದು ಕೋಟಿ ರೂ ಸಂಪಾದಿಸುವುದೇ ಜೀವನದ ಪರಮ ಗುರಿಯಾಗಿರುತ್ತದೆ. ನೂರು ಕೋಟಿ ರೂ ಗಳಿಸುವ ಕನಸಂತೂ ದೂರದ ಮಾತೇ ಆಗಿರಬಹುದು. ಅದರಲ್ಲೂ ಸಂಬಳಕ್ಕೆ ಕೆಲಸ ಮಾಡುವವರಂತೂ ಕನಸು ಕೂಡ ಕಾಣುವುದಿಲ್ಲ. ಆದರೆ, ಯಾರು ಬೇಕಾದರೂ ಕೋಟಿಗಟ್ಟಲೆ ಹಣ ಸಂಪಾದಿಸಬಹುದು, ಬಿಲಿಯನೇರ್​ಗಳಾಗಬಹುದು. ಹಾಗಂತ, ಶಾದಿ ಡಾಟ್ ಕಾಮ್ ಸಂಸ್ಥಾಪಕ ಹಾಗೂ ಉದ್ಯಮಿ ಅನುಪಮ್ ಮಿಟ್ಟಲ್ (Anupam Mittal) ಹೇಳುತ್ತಾರೆ. 30 ವರ್ಷದೊಳಗಿನ ವಯಸ್ಸಿನ ಯುವಜನರಿಗೆ ಮಿಟ್ಟಲ್ ಅದ್ಭುತ ಟಿಪ್ಸ್ ಕೊಡುತ್ತಾರೆ.

ಹಣದ ಕಾಂಪೌಂಡಿಂಗ್ ಗುಣ ಗ್ರಹಿಸಬೇಕು: ಮಿಟ್ಟಲ್

ಹಣದ ಕಾಂಪೌಂಡಿಂಗ್ ಗುಣದ (money compounding effect) ಬಗ್ಗೆ ಇವತ್ತಿನ ಹುಡುಗರಿಗೆ ಅರ್ಥವಾಗುತ್ತಿಲ್ಲ. ಮನುಷ್ಯನ ಮಿದುಳು ಕೂಡ ಇದನ್ನು ಸರಿಯಾಗಿ ಗ್ರಹಿಸುವುದಿಲ್ಲ. ಹೀಗಾಗಿ, ಬಹಳ ಬೇಗ ಶ್ರೀಮಂತರಾಗುವ ಸ್ಕೀಮ್​ಗಳ ಬಲೆಗೆ ಜನರು ಬೀಳುತ್ತಾರೆ. ಶ್ರೀಮಂತಿಕೆ ಸಂಪಾದಿಸಬೇಕಾದರೆ ಕಾಂಪೌಂಡಿಂಗ್ ಎಷ್ಟು ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅನುಪಮ್ ಮಿಟ್ಟಲ್ ಹೇಳುತ್ತಾರೆ.

ಇದನ್ನೂ ಓದಿ: ಮನೆಗೆಲಸದವಳ ಬಳಿ 60 ಲಕ್ಷ ರೂ ಫ್ಲಾಟ್, ಎರಡಂತಸ್ತಿನ ಮನೆ, ಅಂಗಡಿ; ಮಾಲೀಕರು ಶಾಕ್

ದೀರ್ಘಾವಧಿ ಹೂಡಿಕೆ ಮುಖ್ಯ: ಮಿಟ್ಟಲ್

ಭಾರತದ ಷೇರು ಮಾರುಕಟ್ಟೆಯಲ್ಲೇ ನೀವು 20 ವರ್ಷ ನಿರಂತರವಾಗಿ ಎಸ್​ಐಪಿ ಮೂಲಕ ಹೂಡಿಕೆ ಮಾಡಿದರೆ ಹೇರಳ ಸಂಪತ್ತು ಪಡೆಯಬಹುದು. 100 ಕೋಟಿ ರೂ ಬಳಸಿ ನಿಮ್ಮ ಜೀವಿತಾವಧಿಯಲ್ಲೇ ಬಿಲಿಯನೇರ್ ಆಗಬಹುದು. ಯಾವ ಷೇರುಗಳಲ್ಲಿ ಹೂಡಿಕೆ ಮಾಡಬೇಕು ಎಂದು ತಲೆಕೆಡಿಸಿಕೊಳ್ಳುವುದು ಬೇಡ. 30 ವರ್ಷ ಇಂಡೆಕ್ಸ್ ಅನ್ನು ಖರೀದಿಸುತ್ತಾ ಹೋದರೆ ಸಾಕು. ಕಾಂಪೌಂಡಿಂಗ್​ನಿಂದಾಗಿ ನಿಮ್ಮ ಹೂಡಿಕೆ ಬೆಳೆಯುತ್ತಾ ಹೋಗುತ್ತದೆ ಎಂದು ಶಾರ್ಕ್ ಟ್ಯಾಂಕ್ ರಿಯಾಲಿಟಿ ಶೋದಲ್ಲಿ ಹೂಡಿಕೆದಾರರಾಗಿ ಕಾಣಿಸುವ ಅನುಪಮ್ ಮಿಟ್ಟಲ್ ತಿಳಿಸುತ್ತಾರೆ.

ಚಿನ್ನ, ಬೆಳ್ಳಿ ಮೇಲೆ ಹೂಡಿಕೆ ಮಾಡಬಹುದಾ?

ಚಿನ್ನ ಮತ್ತು ಬೆಳ್ಳಿ ಮೇಲೆ ಹೂಡಿಕೆ ಮಾಡಬಹುದಾ ಎನ್ನುವ ಬಗ್ಗೆ ಅನುಪಮ್ ಮಿಟ್​ಟಲ್ ಹೀಗೆ ಪ್ರತಿಕ್ರಿಯಿಸಿದ್ದಾರೆ: ‘ಚಿನ್ನ ಖರೀದಿಸಿ ಎಂದು ಹಿಂದೆ ದೊಡ್ಡವರು ಹೇಳುತ್ತಿದ್ದರು. ಚಿನ್ನದಿಂದ ಯಾವ ಕಾಂಪೌಂಡಿಂಗ್ ಆಗೋದಿಲ್ಲ ಅಂತ ಹೇಳುತ್ತಿದ್ದೆ. ಆದರೆ, ಈಗ ನೋಡಿದರೆ ಚಿನ್ನದ ಬೆಲೆ 3-4 ಪಟ್ಟು ಬೆಳೆದಿದೆ. ಚಿನ್ನದ ಮೇಲೆ ಹೂಡಿಕೆ ಮಾಡಬೇಡಿ ಎಂದು ಈಗ ಹೇಗೆ ಹೇಳಲು ಸಾಧ್ಯ?’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ತಿಂಗಳಿಗೆ 10,000 ರೂ ಹೂಡಿಕೆಯಲ್ಲಿ 10 ವರ್ಷದಲ್ಲಿ ಒಂದು ಕೋಟಿ ಸಾಧ್ಯವಾ?

ಒಂದು ಮನೆ ಬೇಕೇ ಬೇಕು…

ಮನೆ ಖರೀದಿಸಲು ಮಾಡುವ ಹೂಡಿಕೆಗಿಂತ ಬಾಡಿಗೆ ಕಟ್ಟಿಕೊಂಡು ಹೋಗುವುದೇ ಲೇಸು ಎಂದು ಈಗೀಗ ಸೋಷಿಯಲ್ ಮೀಡಿಯಾದಲ್ಲಿ ಇನ್​ಫ್ಲುಯನ್ಸರ್​ಗಳು ಹೇಳುತ್ತಿರುತ್ತಾರೆ. ಇದು ತಪ್ಪು ಕಲ್ಪನೆ ಎಂಬುದು ಮಿಟ್ಟಲ್ ಅನಿಸಿಕೆ.

‘ಹಣ ಇದ್ದರೆ ಚಿನ್ನ ಖರೀದಿಸು, ಮನೆ ಖರೀದಿಸು ಎಂದು ಹಿರಿಯರು ಕಿವಿಮಾತು ಹೇಳುತ್ತಿರುತ್ತಾರೆ. ತಲೆ ಮೇಲೆ ಒಂದು ಸೂರಂತೂ ಬೇಕೇ ಬೇಕು. ಸ್ವಂತ ಮನೆ ಇದ್ದರೆ ನೀವು ದೊಡ್ಡ ರಿಸ್ಕ್ ತೆಗೆದುಕೊಳ್ಳಬಹುದು’ ಎಂದು ಶಾದಿ ಡಾಟ್ ಕಾಂ ಸಂಸ್ಥಾಪಕರು ಹೇಳಿದ್ದಾರೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಮ್ಮ‌ ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್ ನಿರ್ಮಾಣ, ಮೀನುಗಾರರ ಮಾದರಿ ಹೆಜ್ಜೆ
ತಮ್ಮ‌ ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್ ನಿರ್ಮಾಣ, ಮೀನುಗಾರರ ಮಾದರಿ ಹೆಜ್ಜೆ
ಸಿಖ್ಖರನ್ನು ಕೊಂದ ಕುಟುಂಬದ ಕುಡಿಯೊಂದಿಗೆ ಕೈಕುಲುಕುವುದಿಲ್ಲ;ರವನೀತ್ ಬಿಟ್ಟು
ಸಿಖ್ಖರನ್ನು ಕೊಂದ ಕುಟುಂಬದ ಕುಡಿಯೊಂದಿಗೆ ಕೈಕುಲುಕುವುದಿಲ್ಲ;ರವನೀತ್ ಬಿಟ್ಟು
ಮನಸೋ ಇಚ್ಛೆ ಲೈಸೆನ್ಸ್: ಅಬಕಾರಿ ಇಲಾಖೆಯ ಮತ್ತಷ್ಟು ಕಳ್ಳಾಟ ಬಯಲು
ಮನಸೋ ಇಚ್ಛೆ ಲೈಸೆನ್ಸ್: ಅಬಕಾರಿ ಇಲಾಖೆಯ ಮತ್ತಷ್ಟು ಕಳ್ಳಾಟ ಬಯಲು
ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ
ಬೆಳಗಾವಿ: ಸಿಗರೇಟ್ ಹಣ ಕೇಳಿದ್ದಕ್ಕೆ ಬಿತ್ತು ಪಾನ್ ಶಾಪ್ ಮಾಲೀಕನ ಹೆಣ
ಲವ್​​ ಹೆಸರಲ್ಲಿ ಮೋಸ ಮಾಡಿದವನ ಕಾಮುಕತೆ ಬಿಚ್ಚಿಟ್ಟ ಸಂತ್ರಸ್ತೆ
ಲವ್​​ ಹೆಸರಲ್ಲಿ ಮೋಸ ಮಾಡಿದವನ ಕಾಮುಕತೆ ಬಿಚ್ಚಿಟ್ಟ ಸಂತ್ರಸ್ತೆ
ಬಿಎಂಟಿಸಿ ಬಸ್ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲೂ UPI ಸ್ಕ್ಯಾನರ್ ಸ್ಕ್ಯಾಮ್
ಬಿಎಂಟಿಸಿ ಬಸ್ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲೂ UPI ಸ್ಕ್ಯಾನರ್ ಸ್ಕ್ಯಾಮ್
ಲಕ್ಕುಂಡಿಯ ಜೈನ ಬಸದಿಗಳಲ್ಲೂ ನಿಧಿ ಇದ್ಯಾ? ಸರ್ಪಗಳು ಕಾವಲು ಕಾಯ್ತಿದ್ಯಾ?
ಲಕ್ಕುಂಡಿಯ ಜೈನ ಬಸದಿಗಳಲ್ಲೂ ನಿಧಿ ಇದ್ಯಾ? ಸರ್ಪಗಳು ಕಾವಲು ಕಾಯ್ತಿದ್ಯಾ?
ಸದನದಲ್ಲಿ ವೈಯಕ್ತಿಕವಾಗಿ ಬೈದಾಡಿಕೊಂಡ ಶಾಸಕ ಶರಣು ಸಲಗಾರ್- ಶಿವಲಿಂಗೇಗೌಡ
ಸದನದಲ್ಲಿ ವೈಯಕ್ತಿಕವಾಗಿ ಬೈದಾಡಿಕೊಂಡ ಶಾಸಕ ಶರಣು ಸಲಗಾರ್- ಶಿವಲಿಂಗೇಗೌಡ
Video: ಬಾಲಕಿಯನ್ನು ಗೂಳಿಯ ದಾಳಿಯಿಂದ ಕಾಪಾಡಿದ ಜನ
Video: ಬಾಲಕಿಯನ್ನು ಗೂಳಿಯ ದಾಳಿಯಿಂದ ಕಾಪಾಡಿದ ಜನ
ಅಮೆರಿಕದ ವ್ಯಾಪಾರ ಒಪ್ಪಂದವು ಕೃಷಿ ವಲಯವನ್ನು ರಕ್ಷಿಸುತ್ತೆ: ಪಿಯೂಷ್ ಗೋಯಲ್
ಅಮೆರಿಕದ ವ್ಯಾಪಾರ ಒಪ್ಪಂದವು ಕೃಷಿ ವಲಯವನ್ನು ರಕ್ಷಿಸುತ್ತೆ: ಪಿಯೂಷ್ ಗೋಯಲ್