AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಲೆ ಏರಿಕೆ, ಹಣ ಮೌಲ್ಯ ಕುಸಿತ ಪರಿಗಣಿಸಿ ರಿಟೈರ್ಮೆಮೆಂಟ್​​ಗೆ ಎಷ್ಟು ಹಣ ಬೇಕಾಗಬಹುದು? ಇಲ್ಲಿದೆ ಲೆಕ್ಕಾಚಾರ ಉಪಾಯ

Calculating retirement corpus: ನಿವೃತ್ತಿಗೆ ಇವತ್ತಿನಿಂದಲೇ ನೀವು ಯೋಜಿಸುವುದು ಒಳ್ಳೆಯದು. ತಜ್ಞರ ಲೆಕ್ಕಾಚಾರದ ಪ್ರಕಾರ ನೀವು 60ನೇ ವಯಸ್ಸಿನಲ್ಲಿ ನಿವೃತ್ತರಾದಾಗ ಅಂದಿನ ನಿಮ್ಮ ವಾರ್ಷಿಕ ಖರ್ಚಿನ 33 ಪಟ್ಟು ಹಣವು ನಿಮ್ಮ ಬಳಿ ಇರಬೇಕು. ಇವತ್ತು ನಿಮ್ಮ ಜೀವನ ನಿರ್ವಹಣೆಗೆ ಎಷ್ಟು ಖರ್ಚಾಗುತ್ತಿದೆಯೋ ಅದಕ್ಕೆ ಹಣದುಬ್ಬರದ ಮೌಲ್ಯವನ್ನು ಸೇರಿಸಿದರೆ ಒಂದು ಸ್ಪಷ್ಟ ಚಿತ್ರಣ ಸಿಗುತ್ತದೆ. ಈ ಬಗ್ಗೆ ಈ ಲೇಖನದಲ್ಲಿ ಉದಾಹರಣೆ ಸಮೇತ ವಿವರಗಳಿವೆ.

ಬೆಲೆ ಏರಿಕೆ, ಹಣ ಮೌಲ್ಯ ಕುಸಿತ ಪರಿಗಣಿಸಿ ರಿಟೈರ್ಮೆಮೆಂಟ್​​ಗೆ ಎಷ್ಟು ಹಣ ಬೇಕಾಗಬಹುದು? ಇಲ್ಲಿದೆ ಲೆಕ್ಕಾಚಾರ ಉಪಾಯ
ರಿಟೈರ್ಮೆಂಟ್ ಪ್ಲಾನಿಂಗ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 12, 2024 | 6:48 PM

Share

ಇವತ್ತಿನ ದಿನವನ್ನು ಆನಂದದಿಂದ ಕಳೆಯಬೇಕೆನ್ನುವುದು ಸಾಮಾನ್ಯವಾಗಿ ಮನುಷ್ಯನ ಆಲೋಚನೆ. ಭವಿಷ್ಯದ ಯಾರಿಗೆ ಏನು ಬೇಕಾದರೂ ಆಗಬಹುದು, ಅದಕ್ಕಾಗಿ ಇವತ್ತಿನ ಸುಖ ತಿರಸ್ಕರಿಸುವುದೇಕೆ ಎನ್ನುವ ಧೋರಣೆ ಸಹಜವಾದುದು. ಆದರೆ, ಭವಿಷ್ಯದ ಬಗ್ಗೆ ಆಲೋಚನೆ ಇಲ್ಲದೇ ಹೋದರೆ ಅವ್ಯವಸ್ಥಿತವಾಗಿ ಬೆಳೆದ ಮಹಾನಗರಿಗಳು ಗೋಜಲದ ಗೂಡಾದಂತೆ ಆಗಬಹುದು ನಮ್ಮ ಬದುಕು. ರಿಟೈರ್ಮೆಂಟ್​ಗೆ (Retirement) ಈಗಲೇ ಯೋಜಿಸುವುದು ಉತ್ತಮ. ಯೋಜಿಸದೇ ಹೋದರೂ ಕೊನೆಯ ಪಕ್ಷ ನಿವೃತ್ತಿ ಬಳಿಕ ನಮಗೆ ಕನಿಷ್ಠವೆನಿಸುವ ಎಷ್ಟು ಮೊತ್ತವು ವೆಚ್ಚಕ್ಕೆ ಬೇಕಾಗಬಹುದು ಎನ್ನುವ ಲೆಕ್ಕಾಚಾರವನ್ನಂತೂ ನಾವು ಮಾಡುವುದು ಒಳಿತು.

ಇವತ್ತು ಹಣ ಏನಿದೆ, ಅದರ ಮೌಲ್ಯ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಾ ಹೋಗುತ್ತದೆ. ಅದು ಹಣದುಬ್ಬರದ ಪರಿಣಾಮ. ಭಾರತದಲ್ಲಿ ಹಣದುಬ್ಬರ ಕನಿಷ್ಠ ಶೇಕಡಾ ನಾಲ್ಕಂತೂ ಇದ್ದೇ ಇರುತ್ತದೆ. ಕಳೆದ ಕೆಲ ದಶಕಗಳ ಅಂಕಿ ಅಂಶ ಪರಿಗಣಿಸಿದರೆ ಹಣದುಬ್ಬರ ಶೇ. 5ರಿಂದ 7ರ ದರದಲ್ಲಿ ಮುಂದುವರಿಯಬಹುದು. ಇವತ್ತು ಒಂದು ಲಕ್ಷ ರೂ ಹಣಕ್ಕೆ ಇರುವ ಮೌಲ್ಯ 20 ವರ್ಷದ ಬಳಿಕ ಅಷ್ಟೇ ಇರುವುದಿಲ್ಲ. ಆವತ್ತಿನ 3 ಲಕ್ಷ ರೂ ಹಣ ಇವತ್ತಿನ ಒಂದು ಲಕ್ಷಕ್ಕೆ ಸಮವಾಗಿರಬಹುದು. ರಿಟೈರ್ಮೆಂಟ್ ಪ್ಲಾನಿಂಗ್ ಮಾಡುವಾಗ ಈ ಲೆಕ್ಕಾಚಾರ ಬಹಳ ಮುಖ್ಯ.

ಇದನ್ನೂ ಓದಿ: ರಿಟೈರ್ಮೆಂಟ್ ಪ್ಲಾನಿಂಗ್: ಈ ಮೂರು ವಿಧದ ಹಣಕಾಸು ವ್ಯವಸ್ಥೆ ನಿಮ್ಮದಿರಲಿ

ನಿವೃತ್ತಿ ಬಳಿಕ ನಿಮ್ಮ ಬದುಕು ನಿರ್ವಹಣೆಗೆ ಎಷ್ಟು ಬೇಕಾಗಬುದು, ಲೆಕ್ಕ ಹಾಕಿ….

ಈಗ ನಿಮ್ಮ ವಯಸ್ಸು 30 ಎಂದಿಟ್ಟುಕೊಳ್ಳೋಣ. ಇನ್ನು 30 ವರ್ಷ ಕಾಲ ದುಡಿದು ನಿವೃತ್ತಿ ಹೊಂದಬಹುದು. ಸಾಲಕ್ಕೆ ಕಟ್ಟುವ ಹಣ, ಹೂಡಿಕೆ ಹಣ ಹೊರತುಪಡಿಸಿ ಬಾಡಿಗೆ, ದಿನಸಿ, ಔಷಧಿ ನಿಮ್ಮ ಜೀವನ ನಿರ್ವಹಣೆಗೆ ಎಷ್ಟು ಹಣ ವೆಚ್ಚವಾಗುತ್ತದೆ? ಇವತ್ತಿನ ದಿನದಲ್ಲಿ ತಿಂಗಳಿಗೆ 30,000 ರೂ ಆಗಬಹುದು ಎಂದಿಟ್ಟುಕೊಳ್ಳಿ. ತುರ್ತು ವೆಚ್ಚ, ಹೆಚ್ಚು ಆರಾಮದಾಯಕ ಜೀವನ ಬೇಕು ಎಂದರೆ ಇವೆಲ್ಲವನ್ನೂ ಸೇರಿ ತಿಂಗಳಿಗೆ 40,000 ರೂ ಬೇಕಾಗುತ್ತದೆ ಎಂದಿಟ್ಟುಕೊಳ್ಳಿ. ಅಂದರೆ ವರ್ಷಕ್ಕೆ 4,80,000 ರೂ ಅಥವಾ ಐದು ಲಕ್ಷ ರೂ ಎಂದೇ ಇಟ್ಟುಕೊಳ್ಳಿ. ನಿಮಗೆ ಈಗ ಜೀವನ ವೆಚ್ಚಕ್ಕೆ ವರ್ಷಕ್ಕೆ ಐದು ಲಕ್ಷ ರೂ ಬೇಕಾಗುತ್ತದೆ.

ಇವತ್ತು ನಿಮ್ಮ ವಯಸ್ಸು 35 ವರ್ಷ ಆಗಿದ್ದು ನೀವು ಇನ್ನು 25 ವರ್ಷ ಮಾತ್ರ ದುಡಿದು ನಿವೃತ್ತಿ ಹೊಂದಬಹುದು ಎಂದಿಟ್ಟುಕೊಳ್ಳಿ. ಹಣದುಬ್ಬರ ಶೇ. 6ರಷ್ಟು ಬೆಳೆದರೆ ಇವತ್ತಿನ ಐದು ಲಕ್ಷ ರೂ ಹಣದ ಮೌಲ್ಯ 25 ವರ್ಷದ ಬಳಿಕ 22.16 ಲಕ್ಷ ರೂಗೆ ಕುಸಿಯುತ್ತದೆ.

ನಿವೃತ್ತಿ ಬಳಿಕ ಎಷ್ಟು ಹಣ ನಿಮ್ಮ ಬಳಿ ಇರಬೇಕು ಎನ್ನುವುದಕ್ಕೆ ತಜ್ಞರ ಬಳಿ ಒಂದು ಲೆಕ್ಕಾಚಾರ ಇದೆ. ಅವರ ಪ್ರಕಾರ ನಿವೃತ್ತಿ ನಿಧಿಯು ನಿಮ್ಮ ವಾರ್ಷಿಕ ವೆಚ್ಚದ 33 ಪಟ್ಟು ಹಣವನ್ನು ಹೊಂದಿರಬೇಕು. 25 ವರ್ಷದ ಬಳಿಕ ನಿಮಗೆ ಖರ್ಚಿಗೆ ವರ್ಷಕ್ಕೆ 22.16 ಲಕ್ಷ ರೂ ಬೇಕಾಗುತ್ತದೆ ಎಂದಿಟ್ಟುಕೊಂಡರೆ ನಿವೃತ್ತಿ ನಿಧಿಯಲ್ಲಿ ಏಳರಿಂದ ಎಂಟು ಕೋಟಿ ರೂ (22.16 X 33 = 7.32) ಬೇಕಾಗುತ್ತದೆ.

ಇದನ್ನೂ ಓದಿ: ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ 15x15x15 ಸೂತ್ರದಿಂದ ಬೇಗ ಕೋಟಿ ಸಂಪಾದಿಸಿ

ಮುಂದಿನ 25 ವರ್ಷದಲ್ಲಿ ಎಂಟು ಕೋಟಿ ರೂ ಗುರಿ ಇಟ್ಟುಕೊಂಡು ಹಣ ಬೆಳೆಸುವ ಕಾರ್ಯವನ್ನು ಈಗಿನಿಂದಲೇ ನೀವು ಮಾಡಬೇಕಾಗುತ್ತದೆ. ವರ್ಷಕ್ಕೆ ಶೇ. 10ರಷ್ಟು ಆದಾಯ ತರುವ ಯಾವುದಾದರೂ ಹೂಡಿಕೆಗಳಲ್ಲಿ ನೀವು ತಿಂಗಳಿಗೆ 55,000 ರೂ ತೊಡಗಿಸಿದರೆ 25 ವರ್ಷದಲ್ಲಿ 7.35 ಕೋಟಿ ರೂ ಹಣ ಕೂಡಿ ಹಾಕಬಹುದು.

ಇದರ ಜೊತೆಗೆ ಸಾಧ್ಯವಾದರೆ ಸ್ವಂತ ಮನೆ ಹೊಂದಲು, ಇತರ ಆದಾಯ ಮೂಲ ಸೃಷ್ಟಿಸಲೂ ಪ್ರಯತ್ನಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ