AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರು ಇನ್ಷೂರೆನ್ಸ್: ಅಪಘಾತವಾದ ಬಳಿಕ ನೀವು ಮೊದಲು ಮಾಡಬೇಕಾದ ಕೆಲಸ ಇದು…

Car Insurance tips: ಭಾರತದಲ್ಲಿ ದಿನಂಪ್ರತಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ನೂರಾರು ಜನರು ಬಲಿಯಾಗುತ್ತಿರುತ್ತಾರೆ. ಕಾರು ಇನ್ಷೂರೆನ್ಸ್ ಮಾಡಿಸಿದ್ದರೂ, ಅಪಘಾತವಾದಾಗ ಕೆಲ ಅಂಶಗಳನ್ನು ಮರೆತುಬಿಟ್ಟರೆ ಇನ್ಷೂರೆನ್ಸ್ ಕ್ಲೇಮ್ ಮಾಡುವುದು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಅಪಘಾತವಾದಾಗ ಮೊದಲು ಏನು ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ...

ಕಾರು ಇನ್ಷೂರೆನ್ಸ್: ಅಪಘಾತವಾದ ಬಳಿಕ ನೀವು ಮೊದಲು ಮಾಡಬೇಕಾದ ಕೆಲಸ ಇದು...
ವಾಹನ ವಿಮೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 09, 2025 | 3:02 PM

Share

ವಾಹನಗಳ ಸಂಚಾರ ದಿನೇ ದಿನೇ ಹೆಚ್ಚಾಗುತ್ತಿದೆ. ಅಂತೆಯೇ, ಅಪಘಾತಗಳ ಪ್ರಮಾಣವೂ ಹೆಚ್ಚುತ್ತಿದೆ. ಅತಿಹೆಚ್ಚು ರಸ್ತೆ ಅಪಘಾತಗಳಾಗುತ್ತಿರುವ ದೇಶಗಳಲ್ಲಿ ಭಾರತವೂ ಇದೆ. ಇಲ್ಲಿ ಪ್ರತೀ ದಿನ 400-500 ಜನರು ರಸ್ತೆ ಅಪಘಾತಗಳಿಗೆ ಬಲಿಯಾಗುತ್ತಲೇ ಇರುತ್ತಾರೆ. ಹೆಚ್ಚಿನ ಅಪಘಾತಗಳಲ್ಲಿ ಕಾರುಗಳು ಭಾಗಿಯಾಗಿರುತ್ತವೆ. ಐಷಾರಾಮಿ ಕಾರು ಖರೀದಿಸುವ ಜನರು, ಸರಿಯಾದ ಇನ್ಷೂರೆನ್ಸ್ ಪಡೆಯಲು ಮೀನಮೇಷ ಎಣಿಸುತ್ತಾರೆ. ನಾಮಕಾವಸ್ತೆಗೆಂದು ಕನಿಷ್ಠ ಪ್ರೀಮಿಯಮ್ ಇರುವ ಯಾವುದೋ ಒಂದು ವಿಮೆ (car insurance) ಪಡೆದು ಸುಮ್ಮನಾಗುವುದುಂಟು. ಹೆಲ್ತ್ ಇನ್ಷೂರೆನ್ಸ್ ಮಹತ್ವ ನಾವು ಆಸ್ಪತ್ರೆಗೆ ದಾಖಲಾದಾಗ ಹೇಗೆ ಗೊತ್ತಾಗುತ್ತದೋ, ವಾಹನ ಇನ್ಷೂರೆನ್ಸ್ ಎಷ್ಟು ಮಹತ್ವದ್ದೆಂಬುದು ಅಪಘಾತದ ಬಳಿಕ ಮನವರಿಕೆ ಆಗುತ್ತದೆ.

ಕಾರು ಅಪಘಾತವಾದಾಗ ಮೊದಲು ಏನು ಮಾಡಬೇಕು?

ಕಾರು ಅಪಘಾತವಾದಾಗ, ಕಾರಿನಲ್ಲಿದ್ದವರ ಸುರಕ್ಷತೆ ಕಡೆಗೆ ಮೊದಲು ಗಮನಹರಿಸಬೇಕು. ಗಾಯಗೊಂಡಿದ್ದರೆ ಮೊದಲು ಚಿಕಿತ್ಸೆ ಪಡೆಯುವಂತಾಗಬೇಕು.

ಇದಾದ ಬಳಿಕ ಮಾಡಬೇಕಾದ ಕೆಲಸ ಎಂದರೆ ಇನ್ಷೂರೆನ್ಸ್ ಕಂಪನಿಗೆ ಅಪಘಾತದ ಮಾಹಿತಿ ತಿಳಿಸಬೇಕು. ಅಪಘಾತವಾಗಿ 24 ಗಂಟೆಯೊಳಗೆ ಈ ಕೆಲಸ ಮಾಡುವುದನ್ನು ಖಾತ್ರಿಪಡಿಸಿಕೊಳ್ಳಿ. ಇದರಿಂದ ಹಣ ಕ್ಲೇಮ್ ಮಾಡುವ ದಾರಿ ಸುಗಮಗೊಳ್ಳುತ್ತದೆ. ನೀವು ತಡವಾಗಿ ಮಾಹಿತಿ ನೀಡಿದರೆ ಕ್ಲೇಮ್ ತಿರಸ್ಕೃತಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಇದನ್ನೂ ಓದಿ
Image
ಗೃಹಸಾಲದರ ಶೇ. 7.35ರಿಂದ ಶುರು
Image
ಚಿಕ್ಕ ವಯಸ್ಸಿನಲ್ಲಿ ಆಗುವ ಹಣಕಾಸು ತಪ್ಪುಗಳು
Image
ಸ್ಮಾಲ್ ಸೇವಿಂಗ್ಸ್ ಸ್ಕೀಮ್; ಬಡ್ಡಿದರದಲ್ಲಿ ಇಳಿಕೆ ಇಲ್ಲ
Image
ಕಾರಿಗೆ ಮಳೆ ನೀರು ತುಂಬಿದಾಗ ಮಾಡಬೇಕಾದ ಕ್ರಮಗಳು...

ಇದನ್ನೂ ಓದಿ: ಗೃಹಸಾಲ, ಬಹಳ ಕಡಿಮೆ ಆಗಿದೆ ಬಡ್ಡಿದರ; ಶೇ. 7.35ರಿಂದ ಇಂಟರೆಸ್ಟ್ ರೇಟ್ ಶುರು

ಅಪಘಾತವಾದಾಗ ಎಫ್​ಐಆರ್ ದಾಖಲಿಸುವುದು ಮುಖ್ಯ

ಅಪಘಾತವಾದಾಗ, ಅದರಲ್ಲೂ ಥರ್ಡ್ ಪಾರ್ಟಿ ಡ್ಯಾಮೇಜ್ ಆದಾಗ, ಅಂದರೆ ಕಾರ್ ಅಪಘಾತದಲ್ಲಿ ಬೇರೆಯ ವ್ಯಕ್ತಿಗಳಿಗೆ ಗಾಯವಾದರೆ ಅಥವಾ ಸಾವಾದರೆ, ಸಮೀಪದ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್ ಮೂಲಕ ಪ್ರಕರಣ ದಾಖಲಿಸಬೇಕು.

ಹಲವು ಅಪಘಾತ ಪ್ರಕರಣಗಳಲ್ಲಿ ವಿಮಾ ಕಂಪನಿಗಳು ಪೊಲೀಸ್ ಎಫ್​​ಐಆರ್ ಪ್ರತಿಯನ್ನು ಕೇಳುತ್ತವೆ. ನೀವು ಕ್ಲೇಮ್​​ಗೆ ಅರ್ಜಿ ಸಲ್ಲಿಸುವಾಗ ಅಗತ್ಯ ದಾಖಲೆಗಳಾದ ಎಫ್​​ಐಆರ್, ಡ್ರೈವಿಂಗ್ ಲೈಸೆನ್ಸ್, ಪಾಲಿಸಿಯ ಕಾಪಿ, ಆರ್​ಸಿ (ವಾಹನ ದಾಖಲೆ) ಇತ್ಯಾದಿಯನ್ನು ಸಲ್ಲಿಸಬೇಕು. ಆಗ ಸುಗಮವಾಗಿ ನಿಮ್ಮ ಕ್ಲೇಮ್​​ಗೆ ಅನುಮೋದನೆ ಸಿಕ್ಕುತ್ತದೆ.

ಸರಿಯಾದ ಪಾಲಿಸಿ ಹೊಂದಿರಬೇಕು…

ವಾಹನ ಇನ್ಷೂರೆನ್ಸ್ ವಿಷಯಕ್ಕೆ ಬಂದಾಗ ಜನರು ನಾಮಕಾವಸ್ತೆಗೆಂದು ಪಾಲಿಸಿ ಖರೀದಿಸುವುದುಂಟು. ಸಮಗ್ರ ಪಾಲಿಸಿ ಪಡೆಯುವುದರ ಬದಲು ಕನಿಷ್ಠ ಥರ್ಡ್ ಪಾರ್ಟಿ ಪ್ಲಾನ್​ಗಳನ್ನು ಪಡೆಯುವವರು ಹೆಚ್ಚು ಜನರಿದ್ದಾರೆ. ಇದು ತಪ್ಪು. ಥರ್ಡ್ ಪಾರ್ಟಿ ಇನ್ಷೂರೆನ್ಸ್ ಪ್ಲಾನ್​​​ಗಳಲ್ಲಿ ನಿಮ್ಮ ವಾಹನದ ಅಪಘಾತದಲ್ಲಿ ಬೇರೆಯವರಿಗೆ ಹಾನಿಯಾದರೆ, ಅವರಿಗೆ ಪರಿಹಾರ ಸಿಗುತ್ತದೆ.

ಇದನ್ನೂ ಓದಿ: 20-35 ವರ್ಷ ವಯಸ್ಸಿನಲ್ಲಿ ಜನರು ಮಾಡುವ ಪ್ರಮುಖ ಹಣಕಾಸು ತಪ್ಪುಗಳಿವು…

ಕಾಂಪ್ರಹೆನ್ಸಿವ್ ಪಾಲಿಸಿಯಲ್ಲಿ ನಿಮಗೂ ಹಾಗೂ ಥರ್ಡ್ ಪಾರ್ಟಿ ಇಬ್ಬರಿಗೂ ಇನ್ಷೂರೆನ್ಸ್ ಕವರೇಜ್ ಇರುತ್ತದೆ. ನಿಮ್ಮ ವಾಹನಕ್ಕೆ ಹಾನಿಯಾದರೆ ನಿರ್ದಿಷ್ಟ ಮೊತ್ತದ ಪರಿಹಾರ ಸಿಗುತ್ತದೆ. ನೀವು ಪಾಲಸಿ ಪಡೆಯುವಾಗ ಅದರಲ್ಲಿ ಯಾವೆಲ್ಲಾ ಅಂಶಗಳನ್ನು ಪರಿಗಣಿಸಲಾಗಿದೆ ಎಂಬುದನ್ನು ವಿವರಿಸಲಾಗಿರುತ್ತದೆ. ನೀವು ಎಷ್ಟು ಹಣಕ್ಕೆ ಕ್ಲೇಮ್ ಮಾಡಬಹುದು ಎಂಬುದು ನಿಮಗೆ ತಿಳಿಯುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ