AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC Plans: ಸಂಬಳ ಪಡೆಯುವವರಿಗೆ ಸೂಕ್ತವಾಗುವ ಉತ್ತಮ ಎಲ್​ಐಸಿ ಪ್ಲಾನ್​ಗಳಿವು…

LIC plans suitable for salaried persons: ಭಾರತದ ಅತಿದೊಡ್ಡ ಇನ್ಷೂರೆನ್ಸ್ ಸಂಸ್ಥೆಯಾದ ಎಲ್​ಐಸಿ ಹಲವು ಅಗತ್ಯಗಳಿಗೆ ತಕ್ಕಂತಹ ವಿಮಾ ಪ್ಲಾನ್​​ಗಳನ್ನು ಹೊಂದಿದೆ. ಎಲ್​ಐಸಿ ಟೆಕ್ ಟರ್ಮ್ ಪ್ಲಾನ್, ಎಲ್​ಐಸಿ ಜೀವನ್ ಲಾಭ್, ಎಲ್​ಐಸಿ ಜೀವನ್ ಉಮಂಗ್ ಪ್ಲಾನ್​ಗಳಿಗೆ. ನೂರು ವರ್ಷ ಇನ್ಷೂರೆನ್ಸ್ ಕವರೇಜ್ ನೀಡುವ ಪ್ಲಾನ್​ಗಳಿವೆ.

LIC Plans: ಸಂಬಳ ಪಡೆಯುವವರಿಗೆ ಸೂಕ್ತವಾಗುವ ಉತ್ತಮ ಎಲ್​ಐಸಿ ಪ್ಲಾನ್​ಗಳಿವು...
ಎಲ್​​ಐಸಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 09, 2025 | 7:19 PM

Share

ಲೈಫ್ ಇನ್ಷೂರೆನ್ಸ್ ಕಾರ್ಪೊರೇಷನ್ ಅಥವಾ ಭಾರತೀಯ ಜೀವ ವಿಮಾ ನಿಗಮ (LIC) ಭಾರತದ ಅತಿದೊಡ್ಡ ಲಫ್ ಇನ್ಷೂರೆನ್ಸ್ ಕಂಪನಿ ಎನಿಸಿದೆ. ನಾನಾ ತರಹದ ಇನ್ಷೂರೆನ್ಸ್ ಪ್ಲಾನ್​​ಗಳನ್ನು ಇದು ಆಫರ್ ಮಾಡುತ್ತದೆ. ಎಲ್ಲಾ ರೀತಿಯ ಅಗತ್ಯಗಳಿಗೂ ಸೂಕ್ತವೆನಿಸುವ ಪ್ಲಾನ್​​ಗಳಿವೆ. ಅಪಘಾತ, ಅನಾರೋಗ್ಯ ಯಾವಾಗ ಬೇಕಾದರೂ ವಕ್ಕರಿಸಬಹುದು ಎನ್ನುವಂತಹ ಕಾಲಘಟ್ಟದಲ್ಲಿ ನಾವಿರುವ ಹಿನ್ನೆಲೆಯಲ್ಲಿ ನಮ್ಮನ್ನು ನಂಬಿಕೊಂಡಿರುವ ಕುಟುಂಬ ಸದಸ್ಯರಿಗೆ ಆಧಾರವಾಗಬಲ್ಲ ಇನ್ಷೂರೆನ್ಸ್ ಹಿಂದೆಂದಿಗಿಂತಲೂ ಹೆಚ್ಚು ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಲ್​​ಐಸಿಯ ಅಸಂಖ್ಯ ಇನ್ಷೂರೆನ್ಸ್ ಪ್ಲಾನ್​​ಗಳ ಪೈಕಿ ಸಂಬಳದಾರರಿಗೆ ಸೂಕ್ತವೆನಿಸುವ ಕೆಲ ಇನ್ಷೂರೆನ್ಸ್ ಪಾಲಿಸಿ ಬಗ್ಗೆ ಮಾಹಿತಿ ಇಲ್ಲಿದೆ.

ಎಲ್​​ಐಸಿ ಟೆಕ್ ಟರ್ಮ್ ಪ್ಲಾನ್

ಹೆಚ್ಚು ರಿಸ್ಕ್ ತೆಗೆದುಕೊಂಡು ಹೆಚ್ಚು ರಿಟರ್ನ್ ಗಳಿಸಲು ಇಚ್ಛಿಸುವಂತಹವರಿಗೆ ಟೆಕ್ ಟರ್ಮ್ ಪ್ಲಾನ್ ಸೂಕ್ತವಾಗಿದೆ. ಇದನ್ನು ಆನ್​ಲೈನ್​​ನಲ್ಲೇ ಖರೀದಿಸಬುದು. ಆಫ್​ಲೈನ್​​ಗಿಂತ ಆನ್​ಲೈನ್​ನಲ್ಲೇ ಪ್ರೀಮಿಯಮ್ ಕಡಿಮೆ ಇರುತ್ತದೆ. ಹೆಚ್ಚು ಪ್ರೀಮಿಯಮ್ ಪಾವತಿಸಿ ಅಂತಿಮ ಮೊತ್ತವನ್ನು ದ್ವಿಗುಣಗೊಳಿಸಿಕೊಳ್ಳುವ ಆಯ್ಕೆಯೂ ಇದೆ.

ಇದನ್ನೂ ಓದಿ: ಕಾರು ಇನ್ಷೂರೆನ್ಸ್: ಅಪಘಾತವಾದ ಬಳಿಕ ನೀವು ಮೊದಲು ಮಾಡಬೇಕಾದ ಕೆಲಸ ಇದು…

ಇದನ್ನೂ ಓದಿ
Image
ಇನ್ಷೂರೆನ್ಸ್ ಟಿಪ್ಸ್; ಅಪಘಾತವಾದಾಗ ಏನೇನು ಮಾಡಬೇಕು?
Image
ಜಿಯೋಬ್ಲ್ಯಾಕ್​ರಾಕ್: ಚೊಚ್ಚಲ ಎನ್​ಎಫ್​ಒಗೆ 17,800 ಕೋಟಿ ರೂ ಹೂಡಿಕೆ
Image
ಮ್ಯುಚುವಲ್ ಫಂಡ್ ಎನ್​​ಎವಿ ಮೌಲ್ಯ ಬದಲಾಗೋದು ಹೇಗೆ?
Image
ಹೇಗಿರಬೇಕು ಹೂಡಿಕೆ? ಅಗತ್ಯಕ್ಕೆ ತಕ್ಕಂತೆ ಹೂಡಿಕೆ ಮಾಡಲು ಕಲಿಯಿರಿ

ಸಾವು ಸಂಭವಿಸಿದಾಗ ನಾಮಿನಿಗಳಿಗೆ ಹೇಗೆ ಹಣ ವಿತರಣೆ ಆಗಬೇಕು ಎಂದು ಆಯ್ದುಕೊಳ್ಳಬಹುದು. ಲಂಪ್ಸಮ್ ಆಗಿ ಪಡೆಯಬಹುದು, ಅಥವಾ 5, 10 ಅಥವಾ 15 ವರ್ಷಗಳಿಗೆ ಕಂತು ಕಂತುಗಳಾಗಿ ಹಣ ಸಿಗುವಂತೆ ಮಾಡಬಹುದು. ಈ ಪಾಲಿಸಿಯಲ್ಲಿ ಆಕ್ಸಿಡೆಂಟ್ ರೈಡರ್ ಅನ್ನು ಹೆಚ್ಚುವರಿಯಾಗಿ ಪಡೆಯಬಹುದು.

ಎಲ್​​ಐಸಿ ಜೀವನ್ ಲಾಭ್

ಈ ಪಾಲಿಸಿ ಮೆಚ್ಯೂರಿಟಿ ಆದಾಗ ಲಂಪ್ಸಮ್ ಹಣವು ಪಾಲಿಸಿದಾರರಿಗೆ ಸಿಗುತ್ತದೆ. ಒಂದು ವೇಳೆ ಮೆಚ್ಯೂರಿಟಿ ಆಗುವ ಮುನ್ನವೇ ಪಾಲಿಸಿದಾರ ಮೃತಪಟ್ಟರೆ ಅವರ ಕುಟುಂಬದವರಿಗೆ ಪರಿಹಾರ ನೀಡಲಾಗುತ್ತದೆ. ಈ ಪಾಲಿಸಿಯ ಇನ್ನೊಂದು ವಿಶೇಷತೆ ಎಂದರೆ, ಎಲ್​ಐಸಿ ಸಂಸ್ಥೆ ಗಳಿಸುವ ಲಾಭದ ಆಧಾರದ ಮೇಲೆ ಬೋನಸ್ ಸಿಗುತ್ತದೆ. ಪ್ರೀಮಿಯಮ್ ಪಾವತಿ ಮೇಲೆ ಟ್ಯಾಕ್ಸ್ ರಿಬೇಟ್ ಕೂಡ ಸಿಗುತ್ತದೆ.

ಎಲ್​ಐಸಿ ಜೀವನ್ ಉಮಂಗ್ ಯೋಜನೆ

ಇದು 100 ವರ್ಷ ವಯಸ್ಸಿನವರೆಗೆ ಕವರೇಜ್ ನೀಡುವ ಅಪರೂಪದ ಇನ್ಷೂರೆನ್ಸ್ ಪ್ಲಾನ್. ಪ್ರೀಮಿಯಮ್ ಪಾವತಿ ಅವಧಿ ಮುಗಿದ ಬಳಿಕ ಈ ಪಾಲಿಸಿ ಮೆಚ್ಯೂರ್ ಆಗುವವರೆಗೂ ಪಾಲಿಸಿದಾರರಿಗೆ ವಾರ್ಷಿಕವಾಗಿ ಹಣ ಸಿಗುತ್ತಾ ಹೋಗುತ್ತದೆ. ಖಾತ್ರಿ ಮೊತ್ತದ ಶೇ. 8ರಷ್ಟು ಹಣವನ್ನು ಪ್ರತೀ ವರ್ಷ ನೀಡಲಾಗುತ್ತದೆ. ಜೊತೆಗೆ, ರಿವರ್ಶನರಿ ಬೋನಸ್ ಕೂಡ ಸಿಗುತ್ತಿರುತ್ತದೆ.

ಇದನ್ನೂ ಓದಿ: ಗೃಹಸಾಲ, ಬಹಳ ಕಡಿಮೆ ಆಗಿದೆ ಬಡ್ಡಿದರ; ಶೇ. 7.35ರಿಂದ ಇಂಟರೆಸ್ಟ್ ರೇಟ್ ಶುರು

ಎಲ್​ಐಸಿ ಜೀವನ್ ಅಮರ್ ಪಾಲಿಸಿ

ಇದರಲ್ಲಿ ಪಾಲಿಸಿ ಮೆಚ್ಯೂರ್ ಆದ ಬಳಿಕ ಪಾಲಿಸಿದಾರ ಸತ್ತರೆ ಕುಟುಂಬದವರಿಗೆ ಪರಿಹಾರ ಸಿಗುತ್ತದೆ. ಜೀವನ್ ಅಮರ್ ಸ್ಕೀಮ್​​ನಲ್ಲಿ ಮಹಿಳಾ ಸಂಬಳದಾರರಿಗೆ ಶೇ. 10ರಿಂದ 20ರಷ್ಟು ರಿಯಾಯಿತಿ ಸಿಗುತ್ತದೆ. ಖಾತ್ರಿ ಮೊತ್ತ ಹೆಚ್ಚಿದಂತೆ ಪ್ರೀಮಿಯಮ್​​ನಲ್ಲೂ ರಿಯಾಯಿತಿ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ಪ್ರಕಾಶ್ ರಾಜ್ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ
ಪ್ರಕಾಶ್ ರಾಜ್ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ
ವಿಜಯ್ ನೋಡಲು ಟಿವಿಕೆ ಬಾವುಟ ಹಿಡಿದು ಕಾಯುತ್ತಿರುವ ಫ್ಯಾನ್ಸ್
ವಿಜಯ್ ನೋಡಲು ಟಿವಿಕೆ ಬಾವುಟ ಹಿಡಿದು ಕಾಯುತ್ತಿರುವ ಫ್ಯಾನ್ಸ್
ಮಾವಿನಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರು ಸಾವು
ಮಾವಿನಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರು ಸಾವು
ರಾಜ್ಯಸಭೆಗೆ ಅವಿರೋಧ ಆಯ್ಕೆ: ಪ್ರಮಾಣಪತ್ರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ
ರಾಜ್ಯಸಭೆಗೆ ಅವಿರೋಧ ಆಯ್ಕೆ: ಪ್ರಮಾಣಪತ್ರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ
ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್​ಗೆ ಅದ್ದೂರಿ ಸ್ವಾಗ
ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್​ಗೆ ಅದ್ದೂರಿ ಸ್ವಾಗ
ಖಾಸಗಿ ಜೆಟ್​​ನಲ್ಲಿ ಕುಟುಂಬದ ಜೊತೆ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್
ಖಾಸಗಿ ಜೆಟ್​​ನಲ್ಲಿ ಕುಟುಂಬದ ಜೊತೆ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್
ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆಶಿ
ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆಶಿ
ಪ್ರಕಾಶ್ ರಾಜ್ ವಿರುದ್ಧ ಚಿನ್ನಯ್ಯ ಆರೋಪಕ್ಕೆ ಗೃಹ ಸಚಿವರು ಹೇಳಿದ್ದೇನು ನೋಡಿ
ಪ್ರಕಾಶ್ ರಾಜ್ ವಿರುದ್ಧ ಚಿನ್ನಯ್ಯ ಆರೋಪಕ್ಕೆ ಗೃಹ ಸಚಿವರು ಹೇಳಿದ್ದೇನು ನೋಡಿ