Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಬ್ಬದ ಸೀಸನ್, ಭರ್ಜರಿ ಡಿಸ್ಕೌಂಟ್ ಆಫರ್ಸ್; ಕ್ರೆಡಿಟ್ ಕಾರ್ಡ್​ನಿಂದ ಲಾಭ ಮಾಡುವ ಟ್ರಿಕ್ಸ್ ತಿಳಿಯಿರಿ

Credit card tips: ಕ್ರೆಡಿಟ್ ಕಾರ್ಡ್ ಅನ್ನು ಜಾಣತನದಿಂದ ಉಪಯೋಗಿಸಿದರೆ ಬಹಳಷ್ಟು ಲಾಭ ಮಾಡಬಹುದು. ಹಬ್ಬದ ಸೀಸನ್ ಇತ್ಯಾದಿ ಸಂದರ್ಭದಲ್ಲಿ ಬಹಳಷ್ಟು ಕಡೆ ಡಿಸ್ಕೌಂಟ್ ಆಫರ್ ಕಾಣಬಹುದು. ಕ್ರೆಡಿಟ್ ಕಾರ್ಡ್​ ಬಳಸಿ ಹಣ ಪಾವತಿಸಿದಾಗ ಕೆಲವೆಡೆ ಡಿಸ್ಕೌಂಟ್ ನೀಡಲಾಗುತ್ತದೆ. ಇದನ್ನು ನೀವು ಹೇಗೆ ಉಪಯೋಗಿಸಬಹುದು ಎನ್ನುವ ಟಿಪ್ಸ್ ಇಲ್ಲಿದೆ.

ಹಬ್ಬದ ಸೀಸನ್, ಭರ್ಜರಿ ಡಿಸ್ಕೌಂಟ್ ಆಫರ್ಸ್; ಕ್ರೆಡಿಟ್ ಕಾರ್ಡ್​ನಿಂದ ಲಾಭ ಮಾಡುವ ಟ್ರಿಕ್ಸ್ ತಿಳಿಯಿರಿ
ಕ್ರೆಡಿಟ್ ಕಾರ್ಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 09, 2024 | 5:27 PM

ಬೆಂಗಳೂರು, ಅಕ್ಟೋಬರ್ 9: ಕ್ರೆಡಿಟ್ ಕಾರ್ಡ್​ನಿಂದ ಸಾಲದ ವರ್ತುಲಕ್ಕೆ ಸಿಲುಕಿ ನಲುಗಿ ಹೋದವರಿದ್ದಾರೆ. ಹಾಗೆಯೇ, ಅದನ್ನು ಸಮರ್ಪಕವಾಗಿ ಉಪಯೋಗಿಸಿ ಸಾಕಷ್ಟು ಲಾಭ ಕಂಡವರೂ ಇದ್ದಾರೆ. ಕ್ರೆಡಿಟ್ ಕಾರ್ಡ್ ಬಳಕೆ ಒಂದು ರೀತಿಯ ಹಣಕಾಸು ಕಲೆ. ಯಾವ ರೀತಿಯ ಕ್ರೆಡಿಟ್ ಕಾರ್ಡ್ ಬೇಕು ಎಂದು ಆಯ್ಕೆ ಮಾಡಿಕೊಳ್ಳುವುದೂ ತಿಳಿದಿರಬೇಕು. ಈಗ ಹಬ್ಬದ ಸೀಸನ್ ಚಾಲನೆಯಲ್ಲಿದ್ದು ಸಾಕಷ್ಟು ಆಫ್​ಲೈನ್ ಮತ್ತು ಆನ್​ಲೈನ್ ಮಳಿಗೆಗಳಲ್ಲಿ ಡಿಸ್ಕೌಂಟ್ ಸೇಲ್ಸ್ ಇವೆ. ನಿರ್ದಿಷ್ಟ ಕ್ರೆಡಿಟ್ ಕಾರ್ಡ್​ಗಳಿಂದಲೂ ಡಿಸ್ಕೌಂಟ್, ರಿವಾರ್ಡ್ ಇತ್ಯಾದಿ ಸಿಗುತ್ತವೆ.

ನೀವು ಯಾವುದಕ್ಕೆ ಹೆಚ್ಚು ಶಾಪಿಂಗ್ ಮಾಡುತ್ತೀರಿ ಎಂಬುದರ ಆಧಾರದ ಮೇಲೆ ಅದಕ್ಕೆ ತಕ್ಕಂತಹ ಕ್ರೆಡಿಟ್ ಕಾರ್ಡ್ ಪಡೆಯುವುದು ಜಾಣತನ. ನೀವು ಥಿಯೇಟರ್​ನಲ್ಲಿ ಸಿನಿಮಾ ನೋಡುವುದು ಹೆಚ್ಚಿದ್ದರೆ, ಎಚ್​ಡಿಎಫ್​ಸಿ ಬ್ಯಾಂಕ್ ಡೈನರ್ಸ್ ಕ್ಲಬ್ ಪ್ರಿವಿಲೀಜ್ ಕಾರ್ಡ್, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೀಗೆ ಡಿಸ್ಕೌಂಟ್ ಕೊಡುವ ಕಾರ್ಡ್​ಗಳಲ್ಲಿ ಒಂದನ್ನು ಆಯ್ದುಕೊಳ್ಳಬಹುದು.

ಹೋಟೆಲ್​ನಲ್ಲಿ ಊಟಕ್ಕೆ ಹೆಚ್ಚು ವ್ಯಯಿಸುತ್ತಿದ್ದರೆ ಡೈನಿಂಗ್ ಕ್ರೆಡಿಟ್ ಕಾರ್ಡ್​ಗಳನ್ನು ಹುಡುಕಬಹುದು. ಬಟ್ಟೆ ಬರೆ ಶೂ ಚಪ್ಪಲಿ ಶಾಪಿಂಗ್​ಗೆ ಹೆಚ್ಚು ಡಿಸ್ಕೌಂಟ್ ಕೊಡುವ ಕಾರ್ಡ್​ಗಳಿವೆ. ಪೆಟ್ರೋಲ್​ಗೆ ಕೆಲ ಕಾರ್ಡ್​ಗಳು ಡಿಸ್ಕೌಂಟ್ ಕೊಡುತ್ತವೆ. ರೈಲ್ವೆ, ವಿಮಾನ ಟಿಕೆಟ್ ಬುಕಿಂಗ್​ಗೆ ಡಿಸ್ಕೌಂಟ್ ಕೊಡುವ ಕಾರ್ಡ್ ಇದೆ. ನಿಮಗೆ ಸೂಕ್ತವೆನಿಸುವ ಕಾರ್ಡ್ ಅಥವಾ ಕಾರ್ಡ್​ಗಳನ್ನು ಆಯ್ದುಕೊಳ್ಳಬೇಕು.

ಇಂಥ ಕಾರ್ಡ್​ಗಳಿಂದ ನೀವು ಶಾಪಿಂಗ್ ಮಾಡಿದಾಗ ಶೇ. 1ರಿಂದ 10ರಷ್ಟು ರಿಯಾಯಿತಿ ಪಡೆಯಬಹುದು. ಕೆಲವೊಮ್ಮೆ ಶೇ. 15ರಷ್ಟು ರಿಯಾಯಿತಿ ಸಿಗಬಹುದು. ಕೆಲ ಶಾಪಿಂಗ್​ನಲ್ಲಿ ನಿರ್ದಿಷ್ಟ ಕ್ರೆಡಿಟ್ ಕಾರ್ಡ್​ಗಳಿಗೆ ಡಿಸ್ಕೌಂಟ್ ಸಿಗುತ್ತದೆ.

ಇದನ್ನೂ ಓದಿ: ಡಿಸೆಂಬರ್​ನಲ್ಲಿ ಬಡ್ಡಿ ಇಳಿಕೆ ಸಾಧ್ಯತೆ; ಈಗಲೇ ಎಫ್​ಡಿ ಇಡಲು ತ್ವರೆ ಮಾಡಿ

ಆದರೆ, ಎಚ್ಚರ ವಹಿಸಬೇಕಾದ ಸಂಗತಿ ಎಂದರೆ, ರಿಯಾಯಿತಿ ಅಥವಾ ರಿವಾರ್ಡ್ ಸಿಗುತ್ತದೆಂದು ಕ್ರೆಡಿಟ್ ಕಾರ್ಡ್ ಅನ್ನು ಮಿತಿಮೀರಿ ಬಳಸುವ ತಪ್ಪು ಮಾಡಬಾರದು. ಇಲ್ಲವಾದರೆ ಅನಗತ್ಯ ವೆಚ್ಚ ಕಾಣಬೇಕಾಗುತ್ತದೆ. ಅದರ ಪರಿಣಾಮವಾಗಿ ಸಾಲದ ವಿಷ ವರ್ತುಲಕ್ಕೂ ಸಿಲುಕಬೇಕಾಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್