AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿವೃತ್ತಿಗೆ ಮುನ್ನ ಇಪಿಎಫ್ ಹಣ ಹಿಂಪಡೆದರೆ ಏನು ಸಮಸ್ಯೆ? ಯಾವ ಕ್ರಮ ಜರುಗುವ ಸಾಧ್ಯತೆ?

EPF premature withdrawals: ಉದ್ಯೋಗಿಗಳ ಭವಿಷ್ಯದ ಭದ್ರತೆಗೆಂದು ಇಪಿಎಫ್ ಸ್ಕೀಮ್ ರೂಪಿಸಲಾಗಿದೆ. ನಿವೃತ್ತಿ ನಂತರ ಹಣ ಸಿಗಲೆಂದು ಇಪಿಎಫ್ ಸ್ಕೀಮ್ ಇದೆ. ಮಧ್ಯದಲ್ಲಿ ನಿರುದ್ಯೋಗ, ಮದುವೆ, ಅನಾರೋಗ್ಯ ಇತ್ಯಾದಿ ತುರ್ತು ಅಗತ್ಯಗಳಿಗೆ ವೆಚ್ಚಕ್ಕೆಂದು ವಿತ್​ಡ್ರಾ ಮಾಡಲು ಅವಕಾಶ ಇದೆ. ಆದರೆ, ಸುಳ್ಳು ಕಾರಣ ನೀಡಿ ಹಣ ವಿತ್​ಡ್ರಾ ಮಾಡಿದರೆ ನಿಮ್ಮ ಮೇಲೆ ಕ್ರಮ ಜರುಗಬಹುದು.

ನಿವೃತ್ತಿಗೆ ಮುನ್ನ ಇಪಿಎಫ್ ಹಣ ಹಿಂಪಡೆದರೆ ಏನು ಸಮಸ್ಯೆ? ಯಾವ ಕ್ರಮ ಜರುಗುವ ಸಾಧ್ಯತೆ?
ಇಪಿಎಫ್​ಒ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 28, 2025 | 4:01 PM

Share

ಖಾಸಗಿ ಉದ್ಯೋಗಿಗಳಿಗೆ ನಿವೃತ್ತಿ ನಂತರ ಪಿಂಚಣಿ ಇರೋದಿಲ್ಲ. ಅಂಥವರ ನಿವೃತ್ತಿ ಬದುಕಿಗೆ ಸಹಾಯವಾಗಲೆಂದು ಸರ್ಕಾರದ ವತಿಯಿಂದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇಪಿಎಫ್ ಸ್ಕೀಮ್ (EPFO) ನಡೆಸುತ್ತದೆ. ಈಗ ಇಪಿಎಫ್ ಹಣವನ್ನು ನಿವೃತ್ತಿಗೆ ಮುನ್ನವೇ ಬಹಳಷ್ಟು ಜನರು ವಿತ್​ಡ್ರಾ ಮಾಡುತ್ತಿದ್ದಾರೆ. ಆನ್​ಲೈನ್​ನಲ್ಲಿ ವಿತ್​ಡ್ರಾ ಮಾಡಬಹುದಾದಷ್ಟು ಸರಳಗೊಂಡಿರುವ ಪ್ರಕ್ರಿಯೆಯನ್ನು ದುರುಪಯೋಗಿಸಿಕೊಳ್ಳುವವರ ಸಂಖ್ಯೆ ಬಹಳಷ್ಟಿದೆ. ಆದರೆ, ಇಪಿಎಫ್ ಕಾನೂನುಗಳು ಬೇರೆಯೇ ಇವೆ. ಅವುಗಳ ಬಗ್ಗೆ ತಿಳಿದಿರುವುದು ಉತ್ತಮ.

ಇಪಿಎಫ್​ನಲ್ಲಿ ನಿವೃತ್ತಿಗೆ ಮುನ್ನ ಹಣವನ್ನು ಅಡ್ವಾನ್ಸ್ ರೂಪದಲ್ಲಿ ಪಡೆಯುವ ಅವಕಾಶ ಕೊಡಲಾಗಿದೆ. ತುರ್ತು ವೆಚ್ಚಕ್ಕೋ ಅಥವಾ ಮುಖ್ಯ ಕಾರಣಗಳಿಗೋ ಹಣ ವಿತ್​ಡ್ರಾ ಮಾಡಲೆಂದು ಈ ವ್ಯವಸ್ಥೆ ಮಾಡಲಾಗಿದೆ. ಆದರೆ, ಬಹಳಷ್ಟು ಜನರು ಇಪಿಎಫ್ ಅಡ್ವಾನ್ಸ್ ಪಡೆಯುವಾಗ ನೀಡುವ ಕಾರಣ ಬೇರೆ, ಅದನ್ನು ವಿನಿಯೋಗಿಸುವುದೇ ಬೇರೆಯದಕ್ಕೆ. ಈ ರೀತಿ ಆದರೆ ಅದು ಇಪಿಎಫ್​ಒ ನಿಯಮದ ಉಲ್ಲಂಘನೆಯಾಗಿರುತ್ತದೆ. ಇಪಿಎಫ್​ಒ ನಿಮಗೆ ದಂಡ ವಿಧಿಸಬಹುದು, ಹಾಗೂ ಹಣವನ್ನು ವಾಪಸ್ ಪಡೆಯಬಹುದು. ಈ ಸಂಬಂಧ ಇಪಿಎಫ್​ಒ ಸಂಸ್ಥೆ ಇತ್ತೀಚೆಗೆ ಒಂದು ಎಚ್ಚರಿಕೆಯನ್ನೂ ನೀಡಿತ್ತು.

ಇದನ್ನೂ ಓದಿ: 45ನೇ ವಯಸ್ಸಿಗೆ 4.7 ಕೋಟಿ ರೂ; ಬ್ಯುಸಿನೆಸ್ ಇಲ್ಲ, ಷೇರು ಇಲ್ಲ, ಆದರೂ ಸಂಪಾದಿಸಿದ್ದು ಹೇಗೆ?

ಇಪಿಎಫ್ ಹಣ ಯಾವ್ಯಾವ ಕಾರಣಗಳಿಗೆ ವಿತ್​ಡ್ರಾ ಸಾಧ್ಯ?

  • 58 ವರ್ಷ ವಯಸ್ಸಿಗೆ ನಿವೃತ್ತಿಯಾದ ನಂತರ ಪೂರ್ಣ ಹಣವನ್ನು ಹಿಂಪಡೆಯಬಹುದು.
  • ಸತತ ಎರಡು ತಿಂಗಳು ನಿರುದ್ಯೋಗಿಯಾಗಿದ್ದರೆ ಪೂರ್ಣ ಇಪಿಎಫ್ ಹಣ ಹಿಂಪಡೆಯಬಹುದು.
  • ಕನಿಷ್ಠ ಒಂದು ತಿಂಗಳು ನಿರುದ್ಯೋಗಿಯಾಗಿದ್ದರೆ ಶೇ. 75ರಷ್ಟು ಪಿಎಫ್ ಹಣವನ್ನು ಹಿಂಪಡೆಯಲು ಅವಕಾಶ ಇರುತ್ತದೆ.
  • 54 ವರ್ಷ ವಯಸ್ಸು ದಾಟಿದ ಬಳಿಕ ಶೇ. 90ರಷ್ಟು ಪಿಎಫ್ ಹಣ ವಿತ್​ಡ್ರಾ ಮಾಡಬಹುದು.

ಇಪಿಎಫ್ ಅಡ್ವಾನ್ಸ್ ಪಡೆಯಲು ಇರುವ ಐದು ಕಾರಣಗಳು

  1. ಖಾತೆದಾರ, ಅವರ ಸಂಗಾತಿ ಅಥವಾ ಅವಲಂಬಿತರು ಯಾರಿಗಾದರೂ ವೈದ್ಯಕೀಯ ಚಿಕಿತ್ಸೆ ಅಗತ್ಯ ಇದ್ದಾಗ.
  2. ಗೃಹಸಾಲ ಮರುಪಾವತಿ, ಆಸ್ತಿ ಖರೀದಿ, ಮನೆ ನಿರ್ಮಾಣ.
  3. ಮನೆ ನವೀಕರಣ
  4. ಉನ್ನತ ಶಿಕ್ಷಣ
  5. ವೈವಾಹಿಕ ವೆಚ್ಚ

ಐದು ವರ್ಷ ಸೇವಾವಧಿ ಮುಗಿಯುವುದರೊಳಗೆ ಇಪಿಎಫ್ ವಿತ್​ಡ್ರಾ ಮಾಡಿದರೆ?

ಇಪಿಎಫ್ ಖಾತೆದಾರ ವೃತ್ತಿಜೀವನ ಆರಂಭಿಸಿ ಐದು ವರ್ಷ ಮುಗಿಯುವುದರೊಳಗೆ ಇಪಿಎಫ್ ಹಣವನ್ನು ಹಿಂಪಡೆದರೆ ಟಿಡಿಎಸ್ ಕಡಿತ ಆಗುತ್ತದೆ.

ಇದನ್ನೂ ಓದಿ: ಜಾಗತಿಕ ಸಾಲ 21 ಟ್ರಿಲಿಯನ್ ಡಾಲರ್ ಏರಿಕೆ; ಎಲ್ಲಾ ದೇಶಗಳ ಸಾಲ ಸೇರಿಸಿದರೆ ಎಷ್ಟಾಗುತ್ತೆ ಗೊತ್ತಾ?

ಸುಳ್ಳು ಕಾರಣ ನೀಡಿ ವಿತ್​ಡ್ರಾ ಮಾಡಿದರೆ?

ಸುಳ್ಳು ಕಾರಣ ನೀಡಿ ಇಪಿಎಫ್ ಹಣ ವಿತ್​ಡ್ರಾ ಮಾಡುವುದು ತಪ್ಪು. ಇಪಿಎಫ್​ಒ ಸಂಸ್ಥೆ ನಿಮ್ಮ ಮೇಲೆ ಕ್ರಮ ಜರುಗಿಸಬಹುದು. ಇಪಿಎಫ್​ಒಗೆ ಅನುಮಾನ ಬಂದರೆ ನಿಮ್ಮ ವೆಚ್ಚ ಎಲ್ಲಿಗೆ ಹೋಯಿತು ಎಂದು ವಿಚಾರಿಸಬಹುದು. ಬೇರೆ ಕಾರಣಕ್ಕೆ ವೆಚ್ಚ ಮಾಡಿದಲ್ಲಿ ಆ ಹಣವನ್ನು ಹಿಂಪಡೆಯುವ ಅಧಿಕಾರ ಇಪಿಎಫ್​ಒಗೆ ಇರುತ್ತದೆ. ಜೊತೆಗೆ ದಂಡ ಹಾಗೂ ಬಡ್ಡಿಯನ್ನೂ ವಸೂಲಿ ಮಾಡಲಾಗುತ್ತದೆ. ಅಥವಾ ಮುಂದಿನ ಮೂರು ವರ್ಷಗಳವರೆಗೆ ಅವರು ಯಾವುದೇ ಕಾರಣಕ್ಕೂ ವಿತ್​ಡ್ರಾ ಮಾಡಲು ಅವಕಾಶ ನೀಡಲಾಗುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?