AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಧಾರ್ ಅಪ್​ಡೇಟ್​ನಿಂದ ಹಿಡಿದು ನಿಷ್ಕ್ರಿಯ ಯುಪಿಐ ಐಡಿವರೆಗೂ ಡಿಸೆಂಬರ್ 31ಕ್ಕೆ ಡೆಡ್​ಲೈನ್ ಇರುವ ಕಾರ್ಯಗಳಿವು

Financial Tasks December 31st Deadline: ಡಿಸೆಂಬರ್ 31ಕ್ಕೆ ಡೆಡ್​ಲೈನ್ ಇರುವ ಕೆಲ ಪ್ರಮುಖ ಹಣಕಾಸು ಕಾರ್ಯಗಳಿವೆ. ಉಚಿತವಾಗಿ ಆಧಾರ್ ಅಪ್​ಡೇಟ್ ಮಾಡಲು ಡಿಸೆಂಬರ್ 31ವರೆಗೂ ಅವಕಾಶ ಇದೆ. ಬ್ಯಾಂಕುಗಳು ತಮ್ಮ ಗ್ರಾಹಕರೊಂದಿಗೆ ಲಾಕರ್ ಅಗ್ರಿಮೆಂಟ್ ನವೀಕರಿಸಲು ಮೊದಲ ಹಂತದ ಯೋಜನೆಗೆ ಡೆಡ್​ಲೈನ್ ಈ ತಿಂಗಳ ಕೊನೆ. ಎಸ್​ಬಿಐನ ಅಮೃತ್ ಕಳಶ್ ಸೇರಿದಂತೆ ಕೆಲ ಸ್ಪೆಷಲ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್​ಗಳಿಗೆ ಡಿಸೆಂಬರ್ 31, ಕೊನೆಯ ದಿನವಾಗಿದೆ.

ಆಧಾರ್ ಅಪ್​ಡೇಟ್​ನಿಂದ ಹಿಡಿದು ನಿಷ್ಕ್ರಿಯ ಯುಪಿಐ ಐಡಿವರೆಗೂ ಡಿಸೆಂಬರ್ 31ಕ್ಕೆ ಡೆಡ್​ಲೈನ್ ಇರುವ ಕಾರ್ಯಗಳಿವು
ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 21, 2023 | 3:42 PM

2023ರ ವರ್ಷ ಮುಗಿದು ಹೊಸ ವರ್ಷ ಬರಲು ಕೆಲವೇ ದಿನಗಳಿವೆ. ಹೊಸ ವರ್ಷದ ಸಂಭ್ರಮ ಮತ್ತು ರಜೆಗಳ ತರಾತುರಿಯಲ್ಲಿ ಕೆಲವಿಷ್ಟು ಡೆಡ್​ಲೈನ್​ಗಳು ಮರೆತುಹೋಗಬಹುದು. ಡಿಸೆಂಬರ್ 31ಕ್ಕೆ ಗಡುವು (December 31st Deadline) ಇರುವ ಸಂಗತಿಗಳಿವೆ. ಆಧಾರ್ ಅಪ್​ಡೇಟ್ ಮಾಡುವುದರಿಂದ ಹಿಡಿದು ಡೀಮ್ಯಾಟ್ ಅಕೌಂಟ್​​ಗಳಿಗೆ ನಾಮಿನೇಶನ್ ಹೆಸರಿಸುವವರೆಗೂ ವಿವಿಧ ಕಾರ್ಯಗಳಿಗೆ ಡೆಡ್​ಲೈನ್ ಡಿಸೆಂಬರ್ 31 ಆಗಿದೆ.

ಆಧಾರ್ ಅಪ್​ಡೇಟ್ ಮಾಡಲು ಡೆಡ್​ಲೈನ್

ಆಧಾರ್ ಕಾರ್ಡ್ ಅನ್ನು ಆನ್​​ಲೈನ್​ನಲ್ಲಿ ಶುಲ್ಕರಹಿತವಾಗಿ ಉಚಿತವಾಗಿ ಅಪ್​ಡೇಟ್ ಮಾಡಲು ಸರ್ಕಾರ ಅವಕಾಶ ನೀಡಿದೆ. ಈ ಸೌಲಭ್ಯ 2023ರ ಡಿಸೆಂಬರ್ 31ರವರೆಗೆ ಮಾತ್ರ ಇರುವುದು. ಆಧಾರ್​ನಲ್ಲಿ ನಿಮ್ಮ ವಿಳಾಸ, ಫೋನ್ ನಂಬರ್, ಇಮೇಲ್ ವಿಳಾಸ ಇತ್ಯಾದಿಯನ್ನು ನೀವು ಉಚಿತವಾಗಿ ಬದಲಾಯಿಸಬಹುದು. ಡಿಸೆಂಬರ್ 31ರ ಬಳಿಕವೂ ಇವುಗಳನ್ನು ಅಪ್​ಡೇಟ್ ಮಾಡಬಹುದಾದರೂ ನಿರ್ದಿಷ್ಟ ಶುಲ್ಕ ಪಾವತಿಸಬೇಕಾಗುತ್ತದೆ.

ಬ್ಯಾಂಕ್ ಲಾಕರ್ ಅಗ್ರೀಮೆಂಟ್ ನವೀಕರಣ

ಬ್ಯಾಂಕುಗಳು ತಮ್ಮಲ್ಲಿ ಲಾಕರ್ ಸರ್ವಿಸ್ ಪಡೆದಿರುವ ಗ್ರಾಹಕರೊಂದಿಗೆ ಒಪ್ಪಂದ ನವೀಕರಣ ಮಾಡಬೇಕಿದೆ. ಹಂತ ಹಂತವಾಗಿ ಇದನ್ನು ಮಾಡಲು ಆರ್​ಬಿಐ ಸೂಚಿಸಿದೆ. ಮೊದಲ ಹಂತದ ಡೆಡ್​ಲೈನ್ ಆಗಿ ಡಿಸೆಂಬರ್ 31 ಅನ್ನು ಫಿಕ್ಸ್ ಮಾಡಲಾಗಿದೆ.

ಇದನ್ನೂ ಓದಿ: Kisan Vikas Patra: ಕಿಸಾನ್ ವಿಕಾಸ್ ಪತ್ರ ಸ್ಕೀಮ್; ನಿಮ್ಮ ಹಣ 10 ವರ್ಷದೊಳಗೆ ಡಬಲ್ ಆಗುತ್ತೆ; ಕೆವಿಪಿ ಪಡೆಯುವುದು ಹೇಗೆ?

ಡಿಮ್ಯಾಟ್ ಅಕೌಂಟ್​ಗಳಿಗೆ ನಾಮಿನೇಶನ್ ಸಲ್ಲಿಸಬೇಕು

ಡಿಮ್ಯಾಟ್ ಖಾತೆಗಳಿಗೆ ನಾಮಿನೇಶನ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿ ಸೆಬಿ ಡಿಸೆಂಬರ್ 31 ಅನ್ನು ಡೆಡ್​ಲೈನ್ ಆಗಿ ನಿಗದಿ ಮಾಡಿದೆ.

ವಿಶೇಷ ಫಿಕ್ಸೆಡ್ ಡೆಪಾಸಿಟ್ ಯೋಜನೆಗಳು ಕೊನೆ

ಕೆಲ ಬ್ಯಾಂಕುಗಳ ವಿಶೇಷ ಠೇವಣಿ ಯೋಜನೆಗಳು ಡಿಸೆಂಬರ್ 31ಕ್ಕೆ ಕೊನೆಗೊಳ್ಳುತ್ತವೆ. ಎಸ್​ಬಿಐನ ಅಮೃತ್ ಕಳಶ್ ಎಫ್​ಡಿ, ಇಂಡಿಯನ್ ಬ್ಯಾಂಕ್​ನ ಇಂಡ್ ಸೂಪರ್ 400 ಮತ್ತು ಇಂಡ್ ಸೂಪರ್ 300 ಡೇಸ್ ಇತ್ಯಾದಿ ಎಫ್​ಡಿ ಸ್ಕೀಮ್​ಗಳು ಇವೆ. ಈ ವಿಶೇಷ ಠೇವಣಿ ಯೋಜನೆಗಳು ಮಾಮೂಲಿಗಿಂತ ತುಸು ಹೆಚ್ಚು ಬಡ್ಡಿ ಕೊಡುತ್ತವೆ.

ಸಕ್ರಿಯವಿಲ್ಲದ ಯುಪಿಐ ಐಡಿಗಳು ಬಂದ್ ಆಗುತ್ತವೆ

ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬಳಕೆಯಲ್ಲಿ ಇಲ್ಲದ ಯುಪಿಐ ಐಡಿಯನ್ನು ನಿಷ್ಕ್ರಿಯಗೊಳಿಸಬೇಕೆಂದು ನಿಯಮ ಮಾಡಲಾಗಿದೆ. ಅದರಂತೆ ಡಿಸೆಂಬರ್ 31ರ ಬಳಿಕ ಇಂಥ ಯುಪಿಐ ಐಡಿಗಳು ಬಂದ್ ಆಗುತ್ತವೆ. ಅವುಗಳನ್ನು ಬಳಸಲು ಆಗುವುದಿಲ್ಲ. ನಿಮ್ಮಲ್ಲಿ ಅಂಥ ಯುಪಿಐ ಐಡಿ ಇದ್ದರೆ ಅದರಿಂದ ವಹಿವಾಟು ನಡೆಸುವ ಮೂಲಕ ಮರುಚಾಲನೆಗೊಳಿಸಿ.

ಇದನ್ನೂ ಓದಿ: How to: ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಕ್ರಮಗಳೇನು? ಹೂಡಿಕೆ ಮಾಡುವ ಮುನ್ನ ತಿಳಿದಿರಬೇಕಾದ ವಿಚಾರಗಳಿವು…

ಅಪ್​ಡೇಟೆಡ್ ಐಟಿಆರ್ ಸಲ್ಲಿಸಲು ಡೆಡ್​ಲೈನ್

ಆದಾಯ ತೆರಿಗೆ ರಿಟರ್ನ್ ಸಲ್ಲಿಸದೇ ಇರುವವರಿಗೆ ಡಿಸೆಂಬರ್ 31ರವರೆಗೆ ಕಾಲಾವಕಾಶ ಇದೆ. ಲೇಟ್ ಫೀ ಪಾವತಿಸಿ ರಿಟರ್ನ್ ಫೈಲ್ ಮಾಡಬಹುದು. ಡಿಸೆಂಬರ್ 31ರ ಬಳಿಕ ಸಲ್ಲಿಕೆ ಮಾಡಬಹುದಾದರೂ ದೊಡ್ಡ ಮೊತ್ತದ ದಂಡ ಪಾವತಿಸಬೇಕಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ
ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ
10 ಜನರ ಡೆತ್​ ಆಡಿಟ್ ಬಹಿರಂಗ: ಈಗಿರುವ ಕೊವಿಡ್ ಸೌಮ್ಯ ಸ್ವಭಾವದ್ದು: ಸಚಿವ
10 ಜನರ ಡೆತ್​ ಆಡಿಟ್ ಬಹಿರಂಗ: ಈಗಿರುವ ಕೊವಿಡ್ ಸೌಮ್ಯ ಸ್ವಭಾವದ್ದು: ಸಚಿವ
ಕಾರ್ತಿಕ್ ಮಹೇಶ್​ಗೆ ನಾನು ಜೋಡಿ ಅಲ್ಲ: ಗಾಸಿಪ್​ಗಳಿಗೆ ತೆರೆ ಎಳೆದ ನಮ್ರತಾ
ಕಾರ್ತಿಕ್ ಮಹೇಶ್​ಗೆ ನಾನು ಜೋಡಿ ಅಲ್ಲ: ಗಾಸಿಪ್​ಗಳಿಗೆ ತೆರೆ ಎಳೆದ ನಮ್ರತಾ
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ
ಬೆಂಗಳೂರು ನಗರದಲ್ಲೂ ನಿನ್ನೆ ರಾತ್ರಿ ಮತ್ತು ಇವತ್ತು ಭಾರೀ ಮಳೆ
ಬೆಂಗಳೂರು ನಗರದಲ್ಲೂ ನಿನ್ನೆ ರಾತ್ರಿ ಮತ್ತು ಇವತ್ತು ಭಾರೀ ಮಳೆ
ಹಿತಕರವಲ್ಲದ ವಿಷಯಗಳಿಗೆ ಸುದ್ದಿಯಾಗುವ ಪ್ರತಿಭಾವಂತ ಗಾಯಕಿ ಮಂಗ್ಲಿ
ಹಿತಕರವಲ್ಲದ ವಿಷಯಗಳಿಗೆ ಸುದ್ದಿಯಾಗುವ ಪ್ರತಿಭಾವಂತ ಗಾಯಕಿ ಮಂಗ್ಲಿ
‘ದೂರ ತೀರ ಯಾನ’ಕ್ಕೆ ನಟ ನವೀನ್ ಶಂಕರ್ ಶುಭ ಹಾರೈಕೆ
‘ದೂರ ತೀರ ಯಾನ’ಕ್ಕೆ ನಟ ನವೀನ್ ಶಂಕರ್ ಶುಭ ಹಾರೈಕೆ
ಹೈಕಮಾಂಡ್-ಸರ್ಕಾರ ಮರುಸಮೀಕ್ಷೆಯ ನಾಟಕ ಮಾಡುತ್ತಿವೆ: ಶ್ರೀರಾಮುಲು
ಹೈಕಮಾಂಡ್-ಸರ್ಕಾರ ಮರುಸಮೀಕ್ಷೆಯ ನಾಟಕ ಮಾಡುತ್ತಿವೆ: ಶ್ರೀರಾಮುಲು
RCB ಟೀಮ್ ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? ಡಿಸಿಎಂ ಹೇಳಿದ್ದಿಷ್ಟು..!
RCB ಟೀಮ್ ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? ಡಿಸಿಎಂ ಹೇಳಿದ್ದಿಷ್ಟು..!
ರಾಜಕೀಯ ವೈಷಮ್ಯ ಮರೆತು ಒಂದಾದ ಬಿಎಸ್​ ವೈ-ಈಶ್ವರಪ್ಪ, ವಿಡಿಯೋ ನೋಡಿ
ರಾಜಕೀಯ ವೈಷಮ್ಯ ಮರೆತು ಒಂದಾದ ಬಿಎಸ್​ ವೈ-ಈಶ್ವರಪ್ಪ, ವಿಡಿಯೋ ನೋಡಿ