AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ವಾಂಟ್​ನಿಂದ ಭಾರತದ ಮೊದಲ ಈಕ್ವಿಟಿ ಲಾಂಗ್-ಶಾರ್ಟ್ ಎಸ್​ಐಎಫ್; ಮ್ಯುಚುವಲ್ ಫಂಡ್​ಗಿಂತ ಇದು ಲಾಭದಾಯಕವಾ?

Quant MF launches India’s first equity long-short SIF: ಕ್ವಾಂಟ್ ಮ್ಯುಚುವಲ್ ಫಂಡ್​ನಿಂದ ಕ್ಯುಎಸ್​ಐಎಫ್ ಈಕ್ವಿಟಿ ಲಾಂಗ್-ಶಾರ್ಟ್ ಫಂಡ್​ನ ಎನ್​ಎಫ್​ಒ ಆಫರ್ ಮಾಡಿದೆ. ಈ ಕೆಟಗರಿಯಲ್ಲಿ ಭಾರತದಲ್ಲಿ ಇದು ಮೊದಲ ಎಸ್​ಐಎಫ್ ಆಗಿದೆ. ಮ್ಯೂಚುವಲ್ ಫಂಡ್ ಹಾಗೂ ಪಿಎಂಎಸ್ ಅಂಶಗಳನ್ನು ಹೊಂದಿರುವ ಎಸ್​ಐಎಫ್, ಹೆಚ್ಚು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಹೆಚ್ಚು ರಿಟರ್ನ್ಸ್ ತರಬಲ್ಲುದು.

ಕ್ವಾಂಟ್​ನಿಂದ ಭಾರತದ ಮೊದಲ ಈಕ್ವಿಟಿ ಲಾಂಗ್-ಶಾರ್ಟ್ ಎಸ್​ಐಎಫ್; ಮ್ಯುಚುವಲ್ ಫಂಡ್​ಗಿಂತ ಇದು ಲಾಭದಾಯಕವಾ?
ಹೂಡಿಕೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 19, 2025 | 1:28 PM

Share

ನವದೆಹಲಿ, ಸೆಪ್ಟೆಂಬರ್ 19: ಕ್ವಾಂಟ್ ಮ್ಯುಚುವಲ್ ಫಂಡ್ ಸಂಸ್ಥೆ (Mutual Fund) ಭಾರತದ ಮೊದಲ ಈಕ್ವಿಟಿ ಲಾಂಗ್-ಶಾರ್ಟ್ ಸ್ಪೆಷಲೈಸ್ಡ್ ಇನ್ವೆಸ್ಟ್​ಮೆಂಟ್ ಫಂಡ್ ಅನ್ನು (Specialized Investment Fund) ಆರಂಭಿಸಿದೆ. ಕ್ಯುಎಸ್​ಐಎಫ್ ಈಕ್ವಿಟಿ ಲಾಂಗ್-ಶಾರ್ಟ್ ಫಂಡ್ (QSIF Equity Long-short Fund) ಎಂದು ಹೆಸರಿಲಾಗಿರುವ ಈ ಫಂಡ್​ನ ಎನ್​ಎಫ್​ಒ ಆಫರ್ ಅಕ್ಟೋಬರ್ 1ರವರೆಗೂ ಇದೆ. ಅಲಾಟ್ಮೆಂಟ್ ಆದ ಐದು ಕಾರ್ಯದಿನಗಳೊಳಗೆ ಈ ಫಂಡ್​ನ ಯುನಿಟ್​ಗಳು ಮಾರಾಟ ಮತ್ತು ಮರುಖರೀದಿಗೆ (repurchase) ಲಭ್ಯ ಇರುತ್ತವೆ.

ಸಂದೀಪ್ ಟಂಡನ್, ಲೋಕೇಶ್ ಗರ್ಗ್, ಸಮೀರ್ ಕಾಟೆ, ಅಂಕಿತ್ ಪಾಂಡೆ ಮತ್ತು ಸಂಜೀವ್ ಶರ್ಮಾ ಅವರಿರುವ ತಂಡವು ಈ ಫಂಡ್ ಅನ್ನು ನಿರ್ವಹಿಸುತ್ತದೆ.

ಕ್ವಾಂಟ್​ನ ಈ ಹೊಸ ಫಂಡ್ ಶೇ. 65ಕ್ಕಿಂತ ಹೆಚ್ಚಿನ ಹಣವನ್ನು ಈಕ್ವಿಟಿಗಳಲ್ಲಿ ಇರಿಸುತ್ತದೆ. ಇದರ ಜೊತೆಗೆ ಡಿರೈವೇಟಿವ್, ಹೆಡ್ಜಿಂಗ್, ಬಾಂಡ್, ಟ್ರೆಷರಿ ಬಿಲ್ ಇತ್ಯಾದಿಗಳಲ್ಲಿ ನಿರ್ದಿಷ್ಟ ತಂತ್ರಾತ್ಮವಾಗಿ ಹೂಡಿಕೆ ಮಾಡುತ್ತದೆ. ನಿಫ್ಟಿ500 ಟೋಟಲ್ ರಿಟರ್ನ್ ಇಂಡೆಕ್ಸ್ ಇದರ ಬೆಂಚ್ ಮಾರ್ಕ್ ಆಗಿದೆ.

ಇದನ್ನೂ ಓದಿ: Income Tax Refund Delay: ಇನ್ನೂ ರೀಫಂಡ್ ಬಂದಿಲ್ಲವಾ? ಏನು ಕಾರಣ? ಬಡ್ಡಿ ಸಮೇತ ಸಿಗುತ್ತಾ ಹಣ?

ಏನಿದು ಎಸ್​ಐಎಫ್, ಅಥವಾ ಸ್ಪೆಷಲೈಸ್ಡ್ ಇನ್ವೆಸ್ಟ್​ಮೆಂಟ್ ಫಂಡ್?

ಇದು ಮ್ಯುಚುವಲ್ ಫಂಡ್ ಮತ್ತು ಪಿಎಂಎಸ್ (ಪೋರ್ಟ್​ಫೋಲಿಯೋ ಮ್ಯಾನೇಜ್ಮೆಂಟ್ ಸರ್ವಿಸಸ್) ಅಂಶಗಳನ್ನು ಹೊಂದಿರುವ ಒಂದು ರೀತಿಯ ಫಂಡ್. ಹೆಚ್ಚು ರಿಸ್ಕ್ ತೆಗೆದುಕೊಂಡು ಹೆಚ್ಚು ರಿಟರ್ನ್ ಬಯಸುವ ಹೂಡಿಕೆದಾರರಿಗೆ ಸೂಕ್ತವಾದುದು.

ಮ್ಯುಚುವಲ್ ಫಂಡ್​ಗಳು ವಿವಿಧ ನಿಯಮಗಳಿಗೆ ಕಟ್ಟುಬಿದ್ದಿರುತ್ತವೆ. ಇಂತಿಷ್ಟ ಪ್ರಮಾಣದಲ್ಲಿ ಈಕ್ವಿಟಿ, ಡೆಟ್ ಇತ್ಯಾದಿಯಲ್ಲಿ ಹೂಡಿಕೆ ಮಾಡಬೇಕು ಎಂಬ ಪೂರ್ವನಮೂದಿತ ನಿಯಮಗಳಿರುತ್ತವೆ. ಆ ಕಟ್ಟುಪಾಡುಗಳಲ್ಲೇ ಫಂಡ್​ಗಳು ಹೂಡಿಕೆ ಮಾಡುತ್ತಿರುತ್ತವೆ.

ಇದಕ್ಕೆ ವ್ಯತಿರಿಕ್ತವಾಗಿ, ಪಿಎಂಎಸ್​ಗಳು ಮುಕ್ತವಾಗಿ ಕೆಲಸ ಮಾಡುತ್ತವೆ. ಎಲ್ಲೆಲ್ಲಿ ಹೂಡಿಕೆ ಮಾಡಲಾಗುತ್ತದೆ ಎಂಬುದನ್ನು ಇವು ಬಹಿರಂಗಪಡಿಸಬೇಕಿಲ್ಲ. ಇದರಲ್ಲಿ ಕನಿಷ್ಠ ಹೂಡಿಕೆಯೇ 50 ಲಕ್ಷ ರೂ ಇರುತ್ತದೆ. ಶ್ರೀಮಂತರು ಮತ್ತು ಮೇಲ್ಮಧ್ಯಮ ವರ್ಗದವರಿಗೆ ಇದು ಬಹುತೇಕ ಸೀಮಿತವಾಗಿದೆ.

ಇದನ್ನೂ ಓದಿ: ಇಪಿಎಫ್​ಒನಲ್ಲಿ ಹೊಸ ಫೀಚರ್ಸ್; ಪಾಸ್​ಬುಕ್ ಲೈಟ್, ಟ್ರಾನ್ಸ್ಫರ್ ಸರ್ಟಿಫಿಕೇಟ್, ತ್ವರಿತ ಅನುಮೋದನೆ

ಆದರೆ, ಎಸ್​ಐಎಫ್ ಅಥವಾ ಸ್ಪೆಷಲೈಸ್ಡ್ ಇನ್ವೆಸ್ಟ್​ಮೆಂಟ್ ಫಂಡ್​ಗಳಲ್ಲಿ ಕನಿಷ್ಠ ಹೂಡಿಕೆ 10 ಲಕ್ಷ ರೂ ಮಾತ್ರವೇ. ಇದು ಬಹುತೇಕ ಪಿಎಂಎಸ್ ರೀತಿಯ ಸ್ವಾತಂತ್ರ್ಯ ಹೊಂದಿರುತ್ತದೆ. ಕನಿಷ್ಠ ಹೂಡಿಕೆಯು ಕಡಿಮೆ ಇರುವುದರಿಂದ ಹೆಚ್ಚು ಜನರನ್ನು ಇದು ಆಕರ್ಷಿಸಬಲ್ಲುದು. ಫ್ಯೂಚರ್ಸ್ ಮತ್ತು ಆಪ್ಷನ್ಸ್ ಟ್ರೇಡಿಂಗ್​ನಲ್ಲೂ ಪಾಲ್ಗೊಂಡು ಒಂದಷ್ಟು ರಿಸ್ಕ್ ಮ್ಯಾನೇಜ್ಮೆಂಟ್ ಮಾಡುವ ಪ್ರಯತ್ನ ಇದೆ.

ಪಿಎಂಎಸ್​ನಲ್ಲಿ ಹೂಡಿಕೆದಾರರು ಇಷ್ಟಬಂದಂತೆ ಹೂಡಿಕೆ ಹಿಂಪಡೆಯಲು ಆಗುವುದಿಲ್ಲ. ನಿರ್ದಿಷ್ಟ ಲಾಕಿನ್ ಪೀರಿಯಡ್ ಇರುತ್ತದೆ. ಎಸ್​ಐಎಫ್​ನಲ್ಲಿ ಹೂಡಿಕೆದಾರರಿಗೆ ಆ ಸ್ವಾತಂತ್ರ್ಯ ಇರುತ್ತದೆ. ಹೀಗಾಗಿ, ಮುಂಬರುವ ದಿನಗಲ್ಲಿ ಎಸ್​ಐಎಫ್​ಗಳ ಜನಪ್ರಿಯತೆ ಹೆಚ್ಚಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ಗಿಲ್ಲಿ ಹಾಡಿಗೆ ಧ್ರುವಂತ್ ಅಪಸ್ವರ: ಉಗುರಲ್ಲೇ ಕೊಲ್ಲುವೆ ಎಂದ ಗಿಲ್ಲಿ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್