ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ: ಠೇವಣಿಗೆ ಇನ್ಷೂರೆನ್ಸ್ ಗ್ಯಾರಂಟಿ; 5 ಲಕ್ಷ ರೂ ಮಿತಿ ಹೆಚ್ಚಿಸಲು ಕೇಂದ್ರ ಯೋಜನೆ

Insurance guarantee for bank money: ಬ್ಯಾಂಕ್​ನ ಗ್ರಾಹಕರ ಅಕೌಂಟ್​ನಲ್ಲಿ ಐದು ಲಕ್ಷ ರೂವರೆಗಿನ ಹಣಕ್ಕೆ ಇನ್ಷೂರೆನ್ಸ್ ಗ್ಯಾರಂಟಿ ಇದೆ. ಬ್ಯಾಂಕ್ ದಿವಾಳಿ ಎದ್ದರೆ ಮೂರು ತಿಂಗಳೊಳಗೆ ಅಷ್ಟು ಹಣ ರೀಇಂಬುರ್ಸ್ ಆಗುತ್ತದೆ. ಆರ್​ಬಿಐನ ಅಂಗಸಂಸ್ಥೆಯಾದ ಡೆಪಾಸಿಟ್ ಇನ್ಷೂರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ ಸಂಸ್ಥೆ ಈ ಇನ್ಷೂರೆನ್ಸ್ ನೀಡುತ್ತದೆ. ಡೆಪಾಸಿಟ್ ಇನ್ಷೂರೆನ್ಸ್ ಮಿತಿಯನ್ನು 5 ಲಕ್ಷ ರೂಗಿಂತ ಹೆಚ್ಚಿನ ಮೊತ್ತಕ್ಕೆ ಏರಿಸಲು ಸರ್ಕಾರ ಯೋಜಿಸುತ್ತಿದೆ.

ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ: ಠೇವಣಿಗೆ ಇನ್ಷೂರೆನ್ಸ್ ಗ್ಯಾರಂಟಿ; 5 ಲಕ್ಷ ರೂ ಮಿತಿ ಹೆಚ್ಚಿಸಲು ಕೇಂದ್ರ ಯೋಜನೆ
ಆರ್​ಬಿಐ

Updated on: Feb 17, 2025 | 4:49 PM

ನವದೆಹಲಿ, ಫೆಬ್ರುವರಿ 17: ಒಂದು ಬ್ಯಾಂಕ್ ಖಾತೆಯಲ್ಲಿ ಐದು ಲಕ್ಷ ರೂವರೆಗಿನ ನಿಮ್ಮ ಹಣಕ್ಕೆ ಇನ್ಷೂರೆನ್ಸ್ ಖಾತ್ರಿ ಸಿಗುತ್ತದೆ. ಡಿಐಸಿಜಿಸಿ ಸಂಸ್ಥೆ ಈ ವಿಮಾ ಸೇವೆ ನೀಡುತ್ತದೆ. ಅಕಸ್ಮಾತ್ ಆಗಿ ಬ್ಯಾಂಕ್ ದಿವಾಳಿ ಎದ್ದಾಗ ಖಾತೆದಾರರ ಹಣದ ಸುರಕ್ಷತೆಗೆ ಇದು ಸಹಾಯವಾಗುತ್ತದೆ. ಇದೀಗ ಈ ಇನ್ಷೂರೆನ್ಸ್ ಮೊತ್ತವನ್ನು ಹೆಚ್ಚಿಸಲು ಸರ್ಕಾರ ಆಲೋಚಿಸುತ್ತಿದೆ.

ಡೆಪಾಸಿಟ್ ಇನ್ಷೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ (ಡಿಐಸಿಜಿಸಿ) ಸಂಸ್ಥೆಯು ಆರ್​ಬಿಐ ಅಡಿ ಬರುತ್ತದೆ. ಬ್ಯಾಂಕ್ ದಿವಾಳಿ ಇದ್ದಾಗ ಸಣ್ಣ ಠೇವಣಿದಾರರ ಹಿತ ರಕ್ಷಣೆಯ ಹೊಣೆಗಾರಿಕೆ ಈ ಸಂಸ್ಥೆಗೆ ಇರುತ್ತದೆ. ಬ್ಯಾಂಕ್​ನಲ್ಲಿ ಗ್ರಾಹಕರ ಸೇವಿಂಗ್ಸ್ ಅಕೌಂಟ್, ಎಫ್​ಡಿ, ಆರ್​ಡಿ, ಕರೆಂಟ್ ಅಕೌಂಟ್​ಗಳಲ್ಲಿರುವ ಗರಿಷ್ಠ 5 ಲಕ್ಷ ರೂವರೆಗಿನ ಹಣಕ್ಕೆ ಇದು ಇನ್ಷೂರೆನ್ಸ್ ಖಾತ್ರಿ ಒದಗಿಸುತ್ತದೆ. ಭಾರತದಲ್ಲಿರುವ ಎಲ್ಲಾ ಕಮರ್ಷಿಯಲ್ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಡಿಐಸಿಜಿಸಿ ವಿಮಾ ವ್ಯಾಪ್ತಿಗೆ ಬರುತ್ತವೆ.

ಇದನ್ನೂ ಓದಿ: ಎನ್​ಪಿಎಸ್ ವಾತ್ಸಲ್ಯ; ಮಕ್ಕಳ ಹಣಕಾಸು ಭದ್ರತೆಗೆ ಒಳ್ಳೆಯ ಸ್ಕೀಮ್; ಈ ಯೋಜನೆಯ ವಿವರ

ಈ ಬ್ಯಾಂಕುಗಳು ದಿವಾಳಿ ಎದ್ದಾಗ ಠೇವಣಿದಾರರ ಐದು ಲಕ್ಷ ರೂವರೆಗಿನ ಹಣವನ್ನು ಬಡ್ಡಿ ಸಮೇತವಾಗಿ ಮೂರು ತಿಂಗಳೊಳಗೆ ಇದು ಮರಳಿಸುತ್ತದೆ.

2021ರಲ್ಲಿ ಡೆಪಾಸಿಟ್ ಇನ್ಷೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್​ನ ತಿದ್ದುಪಡಿ ಕಾಯ್ದೆ ತರಲಾಯಿತು. ಅಲ್ಲಿಯವರೆಗೆ, ಯಾವುದೇ ಬ್ಯಾಂಕ್ ದಿವಾಳಿ ಎದ್ದಾಗ ಜನರ ಹಣ ಮರಳುವ ಖಾತ್ರಿ ಇರಲಿಲ್ಲ. ಠೇವಣಿ ಮರಳಿ ಪಡೆಯಲು ಕೆಲ ವರ್ಷಗಳೇ ಆಗುತ್ತಿದ್ದವು. 2021ರಲ್ಲಿ ತಿದ್ದುಪಡಿ ಕಾಯ್ದೆ ಮಾಡಿದಾಗ, ಐದು ಲಕ್ಷ ರೂವರೆಗಿನ ಠೇವಣಿ ಹಣವನ್ನು 90 ದಿನದೊಳಗೆ ಮರಳಿಸಬೇಕೆಂದು ನಿಯಮ ಮಾಡಲಾಯಿತು.

ಇದನ್ನೂ ಓದಿ: EPF rate: ಆರ್​ಬಿಐ ದರ ಕಡಿಮೆಗೊಳಿಸಿದ್ದರಿಂದ ಇಪಿಎಫ್​ಒ ಬಡ್ಡಿಯೂ ಕಡಿಮೆ ಆಗುತ್ತಾ? ಈ ವರ್ಷಕ್ಕೆ ಎಷ್ಟಿರಬಹುದು ಬಡ್ಡಿದರ? ಇಲ್ಲಿದೆ ಡೀಟೇಲ್ಸ್

ಡಿಐಸಿಜಿಸಿ ಸಂಸ್ಥೆ ಪ್ರತೀ ಖಾತೆಗೂ ಐದು ಲಕ್ಷ ರೂವರೆಗಿನ ಹಣಕ್ಕೆ ಮಾತ್ರ ಇನ್ಷೂರೆನ್ಸ್ ಖಾತ್ರಿ ನೀಡುತ್ತದೆ. ಅದಕ್ಕೂ ಮೇಲ್ಪಟ್ಟ ಹಣ ಇದ್ದರೆ ಆ ಹೆಚ್ಚುವರಿ ಹಣಕ್ಕೆ ಖಾತ್ರಿ ಇರುವುದಿಲ್ಲ. ಬ್ಯಾಂಕ್​ನ ದಿವಾಳಿ ಪ್ರಕ್ರಿಯೆ ಮುಗಿದು ಹಣ ಬಂದಿದ್ದರೆ ಠೇವಣಿದಾರರಿಗೆ ಅದು ವರ್ಗಾವಣೆ ಆಗುತ್ತದೆ. ಆದರೆ, ಅದು ಖಾತ್ರಿ ಇರುವುದಿಲ್ಲ. ಐದು ಲಕ್ಷ ರೂ ಡೆಪಾಸಿಟ್​ಗೆ ಮಾತ್ರವೇ ಗ್ಯಾರಂಟಿ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us