AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೋನ್​ನಿಂದ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಕ್ಯಾಷ್ ವಿತ್​ಡ್ರಾ ಮಾಡಿ; ಸರ್ಕಾರದಿಂದ ಹೊಸ ಪ್ರಯತ್ನ

Cash withdrawal by scanning QR code: ಯುಪಿಐ ಸಕ್ರಿಯ ಎಟಿಎಂಗಳಲ್ಲಿ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ 2,000 ರೂಗಳವರೆಗೆ ಕ್ಯಾಷ್ ಪಡೆಯುವ ಸೌಲಭ್ಯ ಇದೆ. ಆದರೆ, ಈಗ ದೇಶಾದ್ಯಂತ ಇರುವ 20 ಲಕ್ಷ ಬ್ಯಾಂಕ್ ಉಪಘಟಕಗಳಲ್ಲಿ ಯುಪಿಐ ಮೂಲಕ ಕ್ಯಾಷ್ ವಿತ್​​ಡ್ರಾ ಮಾಡುವ ಕಾಲ ಬರುತ್ತಿದೆ. ಯುಪಿಐ ರೂಪಿಸಿದ ಎನ್​ಪಿಸಿಐನಿಂದ ಇಂಥದ್ದೊಂದು ಪ್ರಸ್ತಾವ ಆರ್​ಬಿಐಗೆ ಸಲ್ಲಿಕೆಯಾಗಿದೆ.

ಫೋನ್​ನಿಂದ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಕ್ಯಾಷ್ ವಿತ್​ಡ್ರಾ ಮಾಡಿ; ಸರ್ಕಾರದಿಂದ ಹೊಸ ಪ್ರಯತ್ನ
ಯುಪಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 15, 2025 | 5:57 PM

Share

ನವದೆಹಲಿ, ಸೆಪ್ಟೆಂಬರ 15: ಭಾರತದಲ್ಲಿ ಡಿಜಿಟಲ್ ಪಾವತಿ ಸ್ವರೂಪ ಬದಲಾಗುತ್ತಲೇ ಇದೆ. ಯುಪಿಐ ಪಾವತಿ (UPI payment) ವ್ಯವಸ್ಥೆಯಲ್ಲಿ ಸುಧಾರಣೆಗಳು ಹಾಗೂ ಅದರ ಬಳಕೆ ವ್ಯಾಪ್ತಿ ಹೆಚ್ಚುತ್ತಲೇ ಇರುತ್ತದೆ. ಆನ್​ಲೈನ್​ನಲ್ಲಿ ಹಣ ಪಾವತಿ ಮಾಡಲು ಯುಪಿಐ ಬಳಕೆ ಆಗುತ್ತಿದೆ. ಇದೀಗ ಯುಪಿಐ ಆಫ್ಲೈನ್ ಟ್ರಾನ್ಸಾಕ್ಷನ್​ಗೂ ಬಳಕೆಯಾಗಲಿದೆ. ಬ್ಯಾಂಕುಗಳಲ್ಲಿ ಯುಪಿಐ ಆ್ಯಪ್​ನಿಂದ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಕ್ಯಾಷ್ ವಿತ್​ಡ್ರಾ ಮಾಡುವ ಸೌಲಭ್ಯ ಒದಗಿಸುವ ಚಿಂತನೆ ನಡೆದಿದೆ.

ಮೊಬೈಲ್ ಫೋನ್​ಗಳಿಂದ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಕ್ಯಾಷ್ ಪಡೆಯುವ ಸೌಲಭ್ಯ ನಿರ್ಮಿಸಲು ಅನುವು ಮಾಡಿಕೊಡಬೇಕೆಂದು ಎನ್​ಪಿಸಿಐ ಆರ್​ಬಿಐ ಬಳಿ ಮನವಿ ಮಾಡಿದೆ ಎಂದು ವರದಿಯೊಂದರಲ್ಲಿ ಹೇಳಲಾಗಿದೆ. ಬಹಳಷ್ಟು ವ್ಯಾಪಕವಾಗಿರುವ ಬ್ಯಾಂಕುಗಳ ಉಪಘಟಕಗಳಲ್ಲಿ ಈ ಸೌಲಭ್ಯ ನಿರ್ಮಿಸಲು ಯೋಜಿಸಲಾಗಿದೆ.

ಇದನ್ನೂ ಓದಿ: ತಿಂಗಳಿಗೆ 1 ಲಕ್ಷ ರೂ ಆದಾಯ ಪಡೆಯಲು ಎಷ್ಟು ಹೂಡಿಕೆ ಅಗತ್ಯ?

ಗ್ರಾಮೀಣ ಹಾಗೂ ದೂರ ಪ್ರದೇಶಗಳಲ್ಲಿ ಇಂಥ ಬ್ಯಾಂಕ್ ಘಟಕಗಳು ಅಥವಾ ಬ್ಯುಸಿನೆಸ್ ಕರೆಸ್ಪಾಂಡೆಂಟ್​ಗಳು ಅಸ್ತಿತ್ವದಲ್ಲಿವೆ. ಒಂದು ಅಂದಾಜು ಪ್ರಕಾರ 20 ಲಕ್ಷ ಬಿಸಿಗಳು ದೇಶಾದ್ಯಂತ ಇವೆ. ಇವೆಲ್ಲದರಲ್ಲೂ ಯುಪಿಐ ಕ್ಯಾಷ್ ವಿತ್​ಡ್ರಾಯಲ್ ಸೌಲಭ್ಯ ಅಳವಡಿಕೆಯಾದರೆ ಕೋಟ್ಯಂತರ ಜನರಿಗೆ ಅನುಕೂಲವಾಗಲಿದೆ.

ಸದ್ಯ ದೇಶದ ಕೆಲವೇ ಕೆಲವು ಆಯ್ದ ಎಟಿಎಂಗಳಲ್ಲಿ ಯುಪಿಐ ಕ್ಯಾಷ್ ವಿತ್​ಡ್ರಾಯಲ್ ಸೌಲಭ್ಯ ಇದೆ. ಇದು ಬಿಟ್ಟರೆ ಆಧಾರ್ ಫಿಂಗರ್ ಪ್ರಿಂಟ್ ಮೂಲಕ ಹಣ ವಿತ್​ಡ್ರಾ ಮಾಡುವ ಅವಕಾಶ ಇದೆ. ಆದರೆ, ಇವೆರಡೂ ವ್ಯವಸ್ಥೆಯಲ್ಲಿ ಮಿತಿ ಇದೆ. ಯುಪಿಐ ಎನೇಬಲ್ ಆದ ಎಟಿಎಂಗಳಲ್ಲಿ ನೀವು ನಗರಗಳಲ್ಲಿ 1,000 ರೂವರೆಗೆ ವಿತ್​ಡ್ರಾ ಮಾಡಬಹುದು. ಗ್ರಾಮೀಣ ಭಾಗಗಳಲ್ಲಿ 2,000 ರೂ ವಿತ್​ಡ್ರಾ ಮಾಡಬಹುದು. ಬಯೋಮೆಟ್ರಿಕ್ ಅಥೆಂಟಿಕೇಶನ್ ಕೆಲವೊಮ್ಮೆ ಕೆಲಸ ಮಾಡದೇ ಹೋಗಬಹುದು.

ಇದನ್ನೂ ಓದಿ: ಗೋಲ್ಡ್ ಇಟಿಎಫ್​ಗಳ ಮೇಲೆ ಹಣದ ಹೊಳೆ; ಭರಪೂರ ಲಾಭ ತರುವ ಇದರ ಮೇಲೆ ಹೂಡಿಕೆ ಹೇಗೆ?

ಸದ್ಯ ಎನ್​ಪಿಸಿಐ ಮಾಡಿರುವ ಪ್ರಸ್ತಾವದ ಪ್ರಕಾರ, ಬ್ಯಾಂಕುಗಳ ಉಪಘಟಕಗಳಲ್ಲಿ ಇರುವ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ, ಒಮ್ಮೆಗೆ 10,000 ರೂ ವಿತ್​ಡ್ರಾ ಮಾಡಲು ಅವಕಾಶ ಕೊಡಬೇಕು. ಒಂದು ಟ್ರಾನ್ಸಾಕ್ಷನ್​ನಿಂದ ಮತ್ತೊಂದು ಟ್ರಾನ್ಸಾಕ್ಷನ್​ಗೆ 30 ನಿಮಿಷ ಅಂತರ ಇರಬೇಕು ಎನ್ನುವ ಪ್ರಸ್ತಾವ ಇದೆ.

ಎಟಿಎಂ ಕಾರ್ಡ್ ಮರೆತಿರುವವರು, ಅಥವಾ ಕಾರ್ಡ್ ಇಲ್ಲದೇ ಇರುವವರು, ಮತ್ತು ಸಮೀಪದಲ್ಲಿ ಎಟಿಎಂಗಳು ಇಲ್ಲದಿರುವವರಿಗೆ ಈ ಕ್ಯುಆರ್ ಕೋಡ್ ಸಿಸ್ಟಂ ಉಪಯುಕ್ತ ಎನಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ