AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೋನ್​ನಿಂದ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಕ್ಯಾಷ್ ವಿತ್​ಡ್ರಾ ಮಾಡಿ; ಸರ್ಕಾರದಿಂದ ಹೊಸ ಪ್ರಯತ್ನ

Cash withdrawal by scanning QR code: ಯುಪಿಐ ಸಕ್ರಿಯ ಎಟಿಎಂಗಳಲ್ಲಿ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ 2,000 ರೂಗಳವರೆಗೆ ಕ್ಯಾಷ್ ಪಡೆಯುವ ಸೌಲಭ್ಯ ಇದೆ. ಆದರೆ, ಈಗ ದೇಶಾದ್ಯಂತ ಇರುವ 20 ಲಕ್ಷ ಬ್ಯಾಂಕ್ ಉಪಘಟಕಗಳಲ್ಲಿ ಯುಪಿಐ ಮೂಲಕ ಕ್ಯಾಷ್ ವಿತ್​​ಡ್ರಾ ಮಾಡುವ ಕಾಲ ಬರುತ್ತಿದೆ. ಯುಪಿಐ ರೂಪಿಸಿದ ಎನ್​ಪಿಸಿಐನಿಂದ ಇಂಥದ್ದೊಂದು ಪ್ರಸ್ತಾವ ಆರ್​ಬಿಐಗೆ ಸಲ್ಲಿಕೆಯಾಗಿದೆ.

ಫೋನ್​ನಿಂದ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಕ್ಯಾಷ್ ವಿತ್​ಡ್ರಾ ಮಾಡಿ; ಸರ್ಕಾರದಿಂದ ಹೊಸ ಪ್ರಯತ್ನ
ಯುಪಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 15, 2025 | 5:57 PM

Share

ನವದೆಹಲಿ, ಸೆಪ್ಟೆಂಬರ 15: ಭಾರತದಲ್ಲಿ ಡಿಜಿಟಲ್ ಪಾವತಿ ಸ್ವರೂಪ ಬದಲಾಗುತ್ತಲೇ ಇದೆ. ಯುಪಿಐ ಪಾವತಿ (UPI payment) ವ್ಯವಸ್ಥೆಯಲ್ಲಿ ಸುಧಾರಣೆಗಳು ಹಾಗೂ ಅದರ ಬಳಕೆ ವ್ಯಾಪ್ತಿ ಹೆಚ್ಚುತ್ತಲೇ ಇರುತ್ತದೆ. ಆನ್​ಲೈನ್​ನಲ್ಲಿ ಹಣ ಪಾವತಿ ಮಾಡಲು ಯುಪಿಐ ಬಳಕೆ ಆಗುತ್ತಿದೆ. ಇದೀಗ ಯುಪಿಐ ಆಫ್ಲೈನ್ ಟ್ರಾನ್ಸಾಕ್ಷನ್​ಗೂ ಬಳಕೆಯಾಗಲಿದೆ. ಬ್ಯಾಂಕುಗಳಲ್ಲಿ ಯುಪಿಐ ಆ್ಯಪ್​ನಿಂದ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಕ್ಯಾಷ್ ವಿತ್​ಡ್ರಾ ಮಾಡುವ ಸೌಲಭ್ಯ ಒದಗಿಸುವ ಚಿಂತನೆ ನಡೆದಿದೆ.

ಮೊಬೈಲ್ ಫೋನ್​ಗಳಿಂದ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಕ್ಯಾಷ್ ಪಡೆಯುವ ಸೌಲಭ್ಯ ನಿರ್ಮಿಸಲು ಅನುವು ಮಾಡಿಕೊಡಬೇಕೆಂದು ಎನ್​ಪಿಸಿಐ ಆರ್​ಬಿಐ ಬಳಿ ಮನವಿ ಮಾಡಿದೆ ಎಂದು ವರದಿಯೊಂದರಲ್ಲಿ ಹೇಳಲಾಗಿದೆ. ಬಹಳಷ್ಟು ವ್ಯಾಪಕವಾಗಿರುವ ಬ್ಯಾಂಕುಗಳ ಉಪಘಟಕಗಳಲ್ಲಿ ಈ ಸೌಲಭ್ಯ ನಿರ್ಮಿಸಲು ಯೋಜಿಸಲಾಗಿದೆ.

ಇದನ್ನೂ ಓದಿ: ತಿಂಗಳಿಗೆ 1 ಲಕ್ಷ ರೂ ಆದಾಯ ಪಡೆಯಲು ಎಷ್ಟು ಹೂಡಿಕೆ ಅಗತ್ಯ?

ಗ್ರಾಮೀಣ ಹಾಗೂ ದೂರ ಪ್ರದೇಶಗಳಲ್ಲಿ ಇಂಥ ಬ್ಯಾಂಕ್ ಘಟಕಗಳು ಅಥವಾ ಬ್ಯುಸಿನೆಸ್ ಕರೆಸ್ಪಾಂಡೆಂಟ್​ಗಳು ಅಸ್ತಿತ್ವದಲ್ಲಿವೆ. ಒಂದು ಅಂದಾಜು ಪ್ರಕಾರ 20 ಲಕ್ಷ ಬಿಸಿಗಳು ದೇಶಾದ್ಯಂತ ಇವೆ. ಇವೆಲ್ಲದರಲ್ಲೂ ಯುಪಿಐ ಕ್ಯಾಷ್ ವಿತ್​ಡ್ರಾಯಲ್ ಸೌಲಭ್ಯ ಅಳವಡಿಕೆಯಾದರೆ ಕೋಟ್ಯಂತರ ಜನರಿಗೆ ಅನುಕೂಲವಾಗಲಿದೆ.

ಸದ್ಯ ದೇಶದ ಕೆಲವೇ ಕೆಲವು ಆಯ್ದ ಎಟಿಎಂಗಳಲ್ಲಿ ಯುಪಿಐ ಕ್ಯಾಷ್ ವಿತ್​ಡ್ರಾಯಲ್ ಸೌಲಭ್ಯ ಇದೆ. ಇದು ಬಿಟ್ಟರೆ ಆಧಾರ್ ಫಿಂಗರ್ ಪ್ರಿಂಟ್ ಮೂಲಕ ಹಣ ವಿತ್​ಡ್ರಾ ಮಾಡುವ ಅವಕಾಶ ಇದೆ. ಆದರೆ, ಇವೆರಡೂ ವ್ಯವಸ್ಥೆಯಲ್ಲಿ ಮಿತಿ ಇದೆ. ಯುಪಿಐ ಎನೇಬಲ್ ಆದ ಎಟಿಎಂಗಳಲ್ಲಿ ನೀವು ನಗರಗಳಲ್ಲಿ 1,000 ರೂವರೆಗೆ ವಿತ್​ಡ್ರಾ ಮಾಡಬಹುದು. ಗ್ರಾಮೀಣ ಭಾಗಗಳಲ್ಲಿ 2,000 ರೂ ವಿತ್​ಡ್ರಾ ಮಾಡಬಹುದು. ಬಯೋಮೆಟ್ರಿಕ್ ಅಥೆಂಟಿಕೇಶನ್ ಕೆಲವೊಮ್ಮೆ ಕೆಲಸ ಮಾಡದೇ ಹೋಗಬಹುದು.

ಇದನ್ನೂ ಓದಿ: ಗೋಲ್ಡ್ ಇಟಿಎಫ್​ಗಳ ಮೇಲೆ ಹಣದ ಹೊಳೆ; ಭರಪೂರ ಲಾಭ ತರುವ ಇದರ ಮೇಲೆ ಹೂಡಿಕೆ ಹೇಗೆ?

ಸದ್ಯ ಎನ್​ಪಿಸಿಐ ಮಾಡಿರುವ ಪ್ರಸ್ತಾವದ ಪ್ರಕಾರ, ಬ್ಯಾಂಕುಗಳ ಉಪಘಟಕಗಳಲ್ಲಿ ಇರುವ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ, ಒಮ್ಮೆಗೆ 10,000 ರೂ ವಿತ್​ಡ್ರಾ ಮಾಡಲು ಅವಕಾಶ ಕೊಡಬೇಕು. ಒಂದು ಟ್ರಾನ್ಸಾಕ್ಷನ್​ನಿಂದ ಮತ್ತೊಂದು ಟ್ರಾನ್ಸಾಕ್ಷನ್​ಗೆ 30 ನಿಮಿಷ ಅಂತರ ಇರಬೇಕು ಎನ್ನುವ ಪ್ರಸ್ತಾವ ಇದೆ.

ಎಟಿಎಂ ಕಾರ್ಡ್ ಮರೆತಿರುವವರು, ಅಥವಾ ಕಾರ್ಡ್ ಇಲ್ಲದೇ ಇರುವವರು, ಮತ್ತು ಸಮೀಪದಲ್ಲಿ ಎಟಿಎಂಗಳು ಇಲ್ಲದಿರುವವರಿಗೆ ಈ ಕ್ಯುಆರ್ ಕೋಡ್ ಸಿಸ್ಟಂ ಉಪಯುಕ್ತ ಎನಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
ಕರ್ನಾಟಕದಲ್ಲಿ ಕೆಜಿ ಈರುಳ್ಳಿ ದರ ಶೀಘ್ರವೇ 100 ರೂಪಾಯಿ?
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಕೇಸ್​ಗೆ ಟ್ವಿಸ್ಟ್
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಬಾಗಲಕೋಟೆ ಶ್ರೀ ಬನಶಂಕರಿ ದೇವಾಲಯದ ಮಹತ್ವ ಮತ್ತು ಐತಿಹಾಸಿಕ ಹಿನ್ನೆಲೆ
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗಳಿಗೆ ಬೀಗ?
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗಳಿಗೆ ಬೀಗ?
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ
ಎಬಿವಿಪಿ ಪ್ರತಿಭಟನೆ ವೇಳೆ ಮಾಧ್ಯಮದವರ ಮೇಲೆ ಪೊಲೀಸರ ದರ್ಪ
ಎಬಿವಿಪಿ ಪ್ರತಿಭಟನೆ ವೇಳೆ ಮಾಧ್ಯಮದವರ ಮೇಲೆ ಪೊಲೀಸರ ದರ್ಪ
ರಸ್ತೆ ಮಧ್ಯೆ ಕಬ್ಬಿನ ಲಾರಿ ಅಡ್ಡಗಟ್ಟಿದ 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು!
ರಸ್ತೆ ಮಧ್ಯೆ ಕಬ್ಬಿನ ಲಾರಿ ಅಡ್ಡಗಟ್ಟಿದ 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು!
PSI ಮೇಲೆ ಶಾಸಕ ಸುರೇಶ್‌ಗೌಡ ಪುತ್ರಿ ಕಪಾಳಮೋಕ್ಷ ಪ್ರಕರಣ; ವೀಡಿಯೋ ವೈರಲ್
PSI ಮೇಲೆ ಶಾಸಕ ಸುರೇಶ್‌ಗೌಡ ಪುತ್ರಿ ಕಪಾಳಮೋಕ್ಷ ಪ್ರಕರಣ; ವೀಡಿಯೋ ವೈರಲ್