ಎನ್​ಪಿಎಸ್ ಖಾತೆಗೆ ಲಾಗಿನ್ ಆಗಲು ಡಬಲ್ ಸೆಕ್ಯೂರಿಟಿ; ನ್ಯಾಷನಲ್ ಪೆನ್ಷನ್ ಸ್ಕೀಮ್ ಯಾರು ತೆರೆಯಬಹುದು, ಏನಿದರ ಲಾಭ

National Pension System: ನ್ಯಾಷನಲ್ ಪೆನ್ಷನ್ ಸ್ಕೀಮ್​ನ ಖಾತೆಗೆ ಲಾಗಿನ್ ಆಗಲು ಯೂಸರ್ ಐಡಿ ಪಾಸ್​ವರ್ಡ್ ಜೊತೆಗೆ ಆಧಾರ್ ಮೂಲಕ ದೃಢೀಕರಣ ಕೂಡ ನೀಡುವ ಒಂದು ಡಬಲ್ ಲೇಯರ್ ಸೆಕ್ಯೂರಿಟಿ ವ್ಯವಸ್ಥೆಯನ್ನು ಪಿಎಫ್​ಆರ್​ಡಿಎ ರೂಪಿಸಿದೆ. 2024ರ ಏಪ್ರಿಲ್ 1ರಿಂದ ಈ ಹೊಸ ಕ್ರಮ ಜಾರಿಗೆ ಬರುತ್ತದೆ. ನ್ಯಾಷನಲ್ ಪೆನ್ಷನ್ ಸ್ಕೀಮ್ ಅಥವಾ ಎನ್​ಪಿಎಸ್ ನಿವೃತ್ತಿ ನಂತರದ ಭದ್ರತೆಗೆಂದು ಸರ್ಕಾರ ರೂಪಿಸಿರುವ ಸ್ಕೀಮ್. ಇದರಲ್ಲಿ 18ರಿಂದ 70 ವರ್ಷದೊಳಗಿನ ಯಾವುದೇ ವ್ಯಕ್ತಿಗಳು ಹೂಡಿಕೆ ಮಾಡಬಹುದು.

ಎನ್​ಪಿಎಸ್ ಖಾತೆಗೆ ಲಾಗಿನ್ ಆಗಲು ಡಬಲ್ ಸೆಕ್ಯೂರಿಟಿ; ನ್ಯಾಷನಲ್ ಪೆನ್ಷನ್ ಸ್ಕೀಮ್ ಯಾರು ತೆರೆಯಬಹುದು, ಏನಿದರ ಲಾಭ
ಎನ್​ಪಿಎಸ್
Follow us
|

Updated on: Mar 27, 2024 | 5:36 PM

ನ್ಯಾಷನಲ್ ಪೆನ್ಷನ್ ಸಿಸ್ಟಮ್​ನ ಖಾತೆಗೆ ಹೆಚ್ಚು ಭದ್ರತೆ ಕೊಡಲು ಪೆನ್ಷನ್ ಫಂಡ್ ಪ್ರಾಧಿಕಾರವಾದ ಪಿಎಫ್​ಆರ್​ಡಿಎ ಕ್ರಮ ಕೈಗೊಂಡಿದೆ. ಎನ್​ಪಿಎಸ್ ಅಕೌಂಟ್​ಗೆ ಲಾಗಿನ್ ಆಗಲು ಪಾಸ್​ವರ್ಡ್ ಜೊತೆಗೆ ಆಧಾರ್ ದೃಢೀಕರಣದ (Aadhaar authentication) ಅವಶ್ಯಕತೆಯೂ ಇರಲಿದೆ. ಈ ಡಬಲ್ ಸೆಕ್ಯೂರಿಟಿ (2-factor authentication) ವ್ಯವಸ್ಥೆ ಏಪ್ರಿಲ್ 1ರಿಂದ ಜಾರಿಗೆ ಬರುತ್ತದೆ. ಎನ್​ಪಿಎಸ್​ನ ಸಿಆರ್​ಎ ಸಿಸ್ಟಂಗೆ ಲಾಗಿನ್ ಆಗುವ ಬಳಕೆದಾರರು ಎರಡು ಎಳೆಯ ಭದ್ರತಾ ವ್ಯವಸ್ಥೆ ದಾಟಬೇಕಾಗುತ್ತದೆ. ಪಿಎಫ್​ಆರ್​​ಡಿಎ ಮಾರ್ಚ್ 15ರಂದು ಹೊರಡಿಸಿದ ಸುತ್ತೋಲೆಯಲ್ಲಿ ಇದನ್ನು ತಿಳಿಸಲಾಗಿದೆ.

ಎನ್​ಪಿಎಸ್​ನ ಸಿಆರ್​ಎ ಸಿಸ್ಟಂಗೆ ಅಕ್ರಮವಾಗಿ ಪ್ರವೇಶ ಮಾಡುವ ಸಾಧ್ಯತೆಯನ್ನು ತಪ್ಪಿಸಲು ಈ ಡಬಲ್ ಸೆಕ್ಯೂರಿಟಿ ಎಳೆಯನ್ನು ರೂಪಿಸಲಾಗಿದೆ. ಇದರಿಂದ ಎನ್​ಪಿಎಸ್ ವಹಿವಾಟುಗಳು ಹೆಚ್ಚು ಸುರಕ್ಷಿತವಾಗಿರುತ್ತವೆ. ಎನ್​ಪಿಎಸ್ ಖಾತೆಗೆ ಲಾಗಿನ್ ಆಗುವ ಬಳಕೆದಾರರು ಪಾಸ್​ವರ್ಡ್ ಜೊತೆಗೆ ತಮ್ಮ ಆಧಾರ್​ಗೆ ಬರುವ ಒಟಿಪಿಯನ್ನೂ ಹಾಕಿ ಲಾಗಿನ್ ಆಗಬೇಕಾಗುತ್ತದೆ.

ಇದನ್ನೂ ಓದಿ: ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಗೆ ಬಡ್ಡಿ ಶೇ. 7.4; ಅಧಿಕ ಬಡ್ಡಿ ಜೊತೆಗೆ ತೆರಿಗೆ ಲಾಭವೂ ಇದೆ ಎಂಐಎಸ್​ನಲ್ಲಿ

ಏಪ್ರಿಲ್ 1ರಿಂದ ಎನ್​ಪಿಎಸ್​ನ ಸಿಆರ್​ಎಗೆ ಲಾಗಿನ್ ಆಗುವ ಕ್ರಮ

  • ಮೊದಲಿಗೆ ಎನ್​ಪಿಎಸ್​ನ ವೆಬ್​ಸೈಟ್​ಗೆ ಹೋಗಿ; ಅದರ ವಿಳಾಸ: enps.nsdl.com/eNPS/NationalPensionSystem.html
  • ಇಲ್ಲಿ PRAIN / IPIN ಟ್ಯಾಬ್ ಕ್ಲಿಕ್ ಮಾಡಿ.
  • ತೆರೆದುಕೊಳ್ಳುವ ಹೊಸ ವಿಂಡೋದಲ್ಲಿ ನಿಮ್ಮ ಯೂಸರ್ ಐಡಿ ಮತ್ತು ಪಾಸ್ವರ್ಡ್ ನಮೂದಿಸಿ
  • ಕ್ಯಾಪ್ಚಾ ಹಾಕಿರಿ
  • ಆಧಾರ್ ದೃಢೀಕರಣ ಕೇಳಲಾಗುತ್ತದೆ.
  • ಆಧಾರ್​ಗೆ ನೊಂದಾಯಿತವಾಗಿರುವ ಮೊಬೈಲ್ ನಂಬರ್​ಗೆ ಬಂದಿರುವ ಒಟಿಪಿಯನ್ನು ಇಲ್ಲಿ ಹಾಕಿ.
  • ಈಗ ನಿಮ್ಮ ಎನ್​ಪಿಎಸ್ ಖಾತೆ ತೆರೆಯುತ್ತದೆ.

ಇದು 2024ರ ಏಪ್ರಿಲ್ 1ರಿಂದ ಜಾರಿಗೆ ಬರುತ್ತದೆ. ಈಗ ಯೂಸರ್ ಐಡಿ ಮತ್ತು ಪಾಸ್ವರ್ಡ್ ಹಾಕಿ ಲಾಗಿನ್ ಆಗಬಹುದು.

ಏನಿದು ನ್ಯಾಷನಲ್ ಪೆನ್ಷನ್ ಸ್ಕೀಮ್ ಯೋಜನೆ?

ಇದು ಪ್ರಾವಿಡೆಂಟ್ ಫಂಡ್ ರೀತಿ ನಿವೃತ್ತಿ ಕಾಲದ ಭದ್ರತೆಗೆಂದು ಇರುವ ಯೋಜನೆ. ಯಾರು ಬೇಕಾದರೂ ನ್ಯಾಷನಲ್ ಪೆನ್ಷನ್ ಸ್ಕೀಮ್ ಪಡೆಯಬಹುದು. ಮೊದಲಿಗೆ ಇದು ಸರ್ಕಾರಿ ನೌಕರರಿಗೆ ಸೀಮಿತವಾಗಿತ್ತು. ಈಗ ಎಲ್ಲರಿಗೂ ಇದು ಲಭ್ಯ ಇದೆ. 18ರಿಂದ 70 ವರ್ಷದೊಳಗಿನ ಭಾರತೀಯ ಪ್ರಜೆಗಳು ಎನ್​ಪಿಎಸ್ ಅಕೌಂಟ್ ತೆರೆಯಬಹುದು.

  • ಆನ್​ಲೈನ್​ನಲ್ಲೇ ಎನ್​ಪಿಎಸ್ ಖಾತೆ ತೆರೆಯಬಹುದಾಗಿದೆ. ವಿಳಾಸ: enps.nsdl.com/eNPS/NationalPensionSystem.html
  • ಇಲ್ಲಿ ಹೋದರೆ ನ್ಯಾಷನಲ್ ಪೆನ್ಷನ್ ಸ್ಕೀಮ್ ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು.
  • ಇಲ್ಲಿ ನಿಮ್ಮ ಪ್ಯಾನ್ ನಂಬರ್, ಮೊಬೈಲ್ ನಂಬರ್, ಜನ್ಮದಿನಾಂಕ ನಮೂದಿಸಿ ಸಲ್ಲಿಸಬೇಕು.
  • ಬಳಿಕ ನಿಮ್ಮ ಆಧಾರ್ ನಂಬರ್ ಹಾಕಬೇಕು.
  • ಆಧಾರ್​ನಲ್ಲಿ ನೊಂದಾಯಿತವಾದ ಮೊಬೈಲ್ ನಂಬರ್​ಗೆ ಬರುವ ಒಟಿಪಿಯನ್ನು ಹಾಕಿದರೆ ಪಿಆರ್​ಎನ್ ಅಥವಾ ಪ್ರಾಣ್ ಐಡಿ ನಿಮಗೆ ಸಿಗುತ್ತದೆ.
  • ಇದನ್ನು ಬಳಸಿ ನೀವು ಎನ್​ಪಿಎಸ್ ಖಾತೆ ತೆರೆಯಬಹುದು.

ಇದನ್ನೂ ಓದಿ: ಇಪಿಎಫ್​ನಿಂದ ಟ್ರಿಪಲ್ ತೆರಿಗೆ ಲಾಭಗಳು; ಉತ್ತಮ ಭವಿಷ್ಯಕ್ಕೆ ಆಧಾರವಾಗಬಲ್ಲುದು ಪಿಎಫ್

ಎನ್​ಪಿಎಸ್​ನ ಅನುಕೂಲತೆಗಳು

ಎನ್​ಪಿಎಸ್ ಈಕ್ವಿಟಿ ಫಂಡ್​ಗಳಿಗೆ ಲಿಂಕ್ ಆಗಿರುತ್ತವೆ. ಅಂದರೆ ನಿಮ್ಮ ಹಣ ಷೇರುಮಾರುಕಟ್ಟೆಯ ಗತಿಗೆ ತಕ್ಕಂತೆ ಬೆಳೆಯುತ್ತದೆ. ಟಾಟಾ, ಐಸಿಐಸಿಐ, ಯುಪಿಐ ಇತ್ಯಾದಿ ಹಲವಾರು ಪೆನ್ಷನ್ ಫಂಡ್ ಮ್ಯಾನೇಜರ್​ಗಳಿದ್ದು ನಿಮ್ಮ ಹಣವನ್ನು ನಿರ್ವಹಿಸುತ್ತವೆ. ಕೆಲ ಫಂಡ್​ಗಳು ಒಂದು ವರ್ಷದಲ್ಲಿ ಶೇ. 30ಕ್ಕಿಂತಲೂ ಹೆಚ್ಚು ಆದಾಯ ತಂದಿವೆ. ನೀವು ಇಚ್ಛಿಸಿದಲ್ಲಿ ನಿಮ್ಮ ಹಣವನ್ನು ಬೇರೆ ಪೆನ್ಷನ್ ಫಂಡ್ ಮ್ಯಾನೇಜರ್​ಗೆ ವರ್ಗಾಯಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ