Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI Sarvottam Scheme: ಪಿಪಿಎಫ್, ಎನ್​ಎಸ್​ಸಿ ಇತ್ಯಾದಿಗಿಂತ ಎಸ್​ಬಿಐನ ಈ ಸ್ಕೀಮ್​ನಲ್ಲಿ ರಿಟರ್ನ್ಸ್ ಹೆಚ್ಚು

Senior Citizen's Get Good Offer From SBI: ಎಸ್​ಬಿಐನ ಸರ್ವೋತ್ತಮ್ ಸ್ಕೀಮ್​ನಲ್ಲಿ ಹಿರಿಯ ನಾಗರಿಕರು 2 ವರ್ಷ ಕಾಲ ಇರಿಸಲಾಗುವ 15 ಲಕ್ಷ ರೂ ಮೊತ್ತದ ನಿಶ್ಚಿತ ಠೇವಣಿಗಳಿಗೆ ವಾರ್ಷಿಕವಾಗಿ ಗರಿಷ್ಠ ಶೇ. 7.9ರಷ್ಟು ಬಡ್ಡಿ ಪಡೆಯಬಹುದು. ಪಿಪಿಎಫ್, ಎನ್​ಎಸ್​ಸಿ, ಕೆವಿಸಿಗಳಿಗಿಂತ ಇದರಲ್ಲಿ ಹೆಚ್ಚು ರಿಟರ್ಸ್ ಸಿಗುತ್ತದೆ.

SBI Sarvottam Scheme: ಪಿಪಿಎಫ್, ಎನ್​ಎಸ್​ಸಿ ಇತ್ಯಾದಿಗಿಂತ ಎಸ್​ಬಿಐನ ಈ ಸ್ಕೀಮ್​ನಲ್ಲಿ ರಿಟರ್ನ್ಸ್ ಹೆಚ್ಚು
ಎಸ್​ಬಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 01, 2023 | 2:20 PM

ಎವರಿ ಮನಿ ಸೇವ್ಡ್ ಈಸ್ ಎವರಿ ಮನಿ ಅರ್ನ್ಡ್ ಎಂಬ ನಾಣ್ನುಡಿ ಇಂಗ್ಲೀಷ್​ನಲ್ಲಿ ಇದೆ. ನೀವು ಉಳಿಸಿದ ಪ್ರತಿಯೊಂದು ಹಣವು, ಅಷ್ಟೇ ಗಳಿಕೆಗೆ ಸಮ ಎಂದರ್ಥ. ನಾವು ಉಳಿಸಿದ ಹಣಕ್ಕೆ ಒಳ್ಳೆಯ ಬಡ್ಡಿ ಸಿಕ್ಕರೆ ಇನ್ನಷ್ಟು ಹಣ ಉಳಿತಾಯಕ್ಕೆ (Savings) ಪ್ರೇರಣೆ ಸಿಗುವುದು ಹೌದು. ಈಗ ಆರ್​ಬಿಐ ರೆಪೋ ದರ ಏರಿಸಿದ ಬಳಿಕ ಹಲವು ಬ್ಯಾಂಕುಗಳು ಗ್ರಾಹಕರ ಉಳಿತಾಯ ಹಣಕ್ಕೆ ಹೆಚ್ಚಿನ ಬಡ್ಡಿ ಕೊಡುತ್ತಿವೆ. ಈ ಹಿನ್ನೆಲೆಯಲ್ಲಿ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿಗಳು (Fixed Deposits) ಮತ್ತೆ ಜನಪ್ರಿಯತೆ ಮತ್ತು ಬೇಡಿಕೆ ಪಡೆದುಕೊಂಡಿವೆ. ಬ್ಯಾಂಕುಗಳು ಪೈಪೋಟಿಯ ಮೇಲೆ ಬಡ್ಡಿ ದರಗಳ ಆಫರ್ ಮಾಡುತ್ತಿವೆ. ಇಂಥ ಸಂದರ್ಭದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸರ್ವೋತ್ತಮ್ ಯೋಜನೆ (SBI Sarvottam Scheme) ಆಕರ್ಷಕ ಎನಿಸಿದೆ.

ಎಸ್​ಬಿಐನಲ್ಲಿ 15 ಲಕ್ಷ ರೂಗೂ ಹೆಚ್ಚು ಮೊತ್ತದ ನಿಶ್ಚಿತ ಠೇವಣಿಗೆ ಅತಿಹೆಚ್ಚು ಬಡ್ಡಿ ಸಿಗುತ್ತದೆ. ಸರ್ವೋತ್ತಮ್ ಸ್ಕೀಮ್ ಎಂದು ಕರೆಯಲಾಗುವ ಯೋಜನೆಯಲ್ಲಿ ಹಿರಿಯ ನಾಗರಿಕರು 2 ವರ್ಷ ಕಾಲ ಇರಿಸಲಾಗುವ 15 ಲಕ್ಷ ರೂ ಮೊತ್ತದ ನಿಶ್ಚಿತ ಠೇವಣಿಗಳಿಗೆ ವಾರ್ಷಿಕವಾಗಿ ಗರಿಷ್ಠ ಶೇ. 7.9ರಷ್ಟು ಬಡ್ಡಿ ಪಡೆಯಬಹುದು. ಇದೇ ಯೋಜನೆಯಲ್ಲಿ ಇತರರಿಗೆ ಸಿಗುವ ಬಡ್ಡಿ ಶೇ. 7.4 ಇದೆ.

ಸರ್ವೋತ್ತಮ್ ಸ್ಕೀಮ್​ನಲ್ಲಿ ಹಿರಿಯ ನಾಗರಿಕರು 2 ವರ್ಷದ ಬದಲು 1 ವರ್ಷಕ್ಕೆ ಈ 15 ಲಕ್ಷ ರೂ ಠೇವಣಿ ಇರಿಸಿದರೆ ಶೇ. 7.6ರಷ್ಟು ಬಡ್ಡಿ ಪಡೆಯಬಹುದು. ಇತರರು ಶೇ. 7.1ರಷ್ಟು ಬಡ್ಡಿ ಪಡೆಯಬಹುದು. ಫೆಬ್ರುವರಿ 17ರಿಂದ ಈ ಹೊಸ ಬಡ್ಡಿದರಗಳು ಅನ್ವಯ ಆಗುತ್ತಿವೆ.

ಹಿರಿಯ ನಾಗರಿಕರು 2 ವರ್ಷದ ಅವಧಿಗೆ 15 ಲಕ್ಷ ರೂಗಳ ಠೇವಣಿ ಇರಿಸಿದರೆ ವಾರ್ಷಿಕ ಬಡ್ಡಿ ಶೇ. 7.9 ಸಿಗುತ್ತದಾದರೂ ಒಂದು ವರ್ಷದಲ್ಲಿ ಠೇವಣಿಯು ಶೇ. 8.14ರಷ್ಟು ಬೆಳೆಯುತ್ತದೆ.

ಇದನ್ನೂ ಓದಿMutual Fund: ಈ ಮ್ಯೂಚುವಲ್ ಫಂಡ್​​ನಲ್ಲಿ ದಿನಕ್ಕೆ 50 ರೂ. ಹೂಡಿಕೆ ಮಾಡಿ, 30 ಲಕ್ಷ ಗಳಿಸಿ!

ಆದರೆ, ಇತರೆಲ್ಲೆಡೆ ಇರುವಂತೆ ಎಸ್​ಬಿಐನಲ್ಲೂ ಇನ್ನೂ ದೊಡ್ಡ ಮೊತ್ತದ ಠೇವಣಿಗಳಿಗೆ ಹೆಚ್ಚು ಬಡ್ಡಿ ಸಿಗುವುದಿಲ್ಲ. 2ರಿಂದ 5 ಕೋಟಿ ರೂವರೆಗಿನ ಠೇವಣಿಗಳಿಗೆ ಎಸ್​ಬಿಐ ಒಂದು ವರ್ಷಕ್ಕೆ ಶೇ. 7.55 ಬಡ್ಡಿ ನೀಡುತ್ತದೆ. ಎರಡು ವರ್ಷಕ್ಕಾದರೆ ಬಡ್ಡಿ ಇನ್ನೂ ತುಸು ಕಡಿಮೆ ಇರುತ್ತದೆ.

ಸರ್ವೋತ್ತಮ್ ಸ್ಕೀಮ್ ಅಲ್ಲದೇ ಎಸ್​ಬಿಐನ ಸಾಮಾನ್ಯ ಠೇವಣಿಗಳಲ್ಲೂ ಹಿರಿಯ ನಾಗರಿಕರಿಗೆ ಉತ್ತಮ ಬಡ್ಡಿ ಆಫರ್ ಇದೆ. 2ರಿಂದ 3 ವರ್ಷ ಅವಧಿಯ ಠೇವಣಿಗಳಿಗೆ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ. ಅಮೃತ್ ಕಳಶ್ ಸ್ಕೀಮ್ ಅಡಿಯಲ್ಲಿ 400 ದಿನಗಳ ಕಾಲ (ಸುಮಾರು 13 ತಿಂಗಳು) ಠೇವಣಿ ಇರಿಸಿದರೆ ಶೇ. 7.6 ಬಡ್ಡಿ ಬರುತ್ತದೆ.

ಇತರ ಉಳಿತಾಯ ಯೋಜನೆಗಳಿಂದೆಷ್ಟು ರಿಟರ್ನ್ಸ್?

ಬ್ಯಾಂಕುಗಳಲ್ಲದೇ ಬೇರೆಡೆಯೂ ಹಲವು ಉಳಿತಾಯ ಯೋಜನೆಗಳುಂಟು. ಪಿಪಿಎಫ್, ಪೋಸ್ಟ್ ಆಫೀಸ್, ಎನ್​ಎಸ್​ಸಿ, ಕೆವಿಸಿ ಇತ್ಯಾದಿ ಜನಪ್ರಿಯ ಹೂಡಿಕೆ ಮಾರ್ಗಗಳಿವೆ. ಪಿಪಿಎಫ್​ನಲ್ಲಿ ನೀವು ಒಂದು ವರ್ಷಕ್ಕೆ ಗರಿಷ್ಠ 1.5 ಲಕ್ಷ ರೂ ಹೂಡಿಕೆ ಮಾಡಬಹುದು. ಇಲ್ಲಿ ವಾರ್ಷಿಕವಾಗಿ ಶೇ. 7.1ರಷ್ಟು ಬಡ್ಡಿ ಸಿಗುತ್ತದೆ. ಇದರ ಜೊತೆಗೆ ತೆರಿಗೆ ರಿಯಾಯಿತಿಯೂ ಇದೆ.

ಅಂಚೆ ಕಚೇರಿಯಲ್ಲಿ 5 ವರ್ಷದ ಠೇವಣಿಗಳಿಗೆ ವಾರ್ಷಿಕ ಬಡ್ಡಿ ಶೇ. 7 ಇದೆ. 1 ವರ್ಷ ಮತ್ತು 2 ವರ್ಷದ ಠೇವಣಿಗಳಿಗೆ ಶೇ. 6.6 ಮತ್ತು ಶೇ. 6.8 ಬಡ್ಡಿ ಸಿಗುತ್ತದೆ. ಇದರಡಿಯಲ್ಲೇ ಇರುವ ಮಾಸಿಕ ಆದಾಯ ಯೋಜನೆಯಿಂದ ಶೇ. 7.1ರಷ್ಟು ಬಡ್ಡಿ ಸಿಗುತ್ತದೆ.

ಇನ್ನು, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್​ಎಸ್​ಸಿ) ಯೋಜನೆಯಲ್ಲಿ ಇರಿಸುವ ಠೇವಣಿಗಳಿಗೆ ಶೇ. 7ರಷ್ಟು ಬಡ್ಡಿ ಸಿಕ್ಕರೆ, ಕಿಸಾನ್ ವಿಕಾಸ್ ಪತ್ರ ಶೇ. 7.2ರಷ್ಟು ಬಡ್ಡಿ ಕೊಡುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:20 pm, Wed, 1 March 23

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ